ದೊಡ್ಡಬಳ್ಳಾಪುರ; ಭೀಕರ ಅಪಘಾತ.. ತಮ್ಮನ ಸಾವು, ಅಕ್ಕನ ಸ್ಥಿತಿ ಗಂಭೀರ| ನೆರವಿಗೆ‌ ಮೊರೆ
ದೊಡ್ಡಬಳ್ಳಾಪುರ; ಭೀಕರ ಅಪಘಾತ.. ತಮ್ಮನ ಸಾವು, ಅಕ್ಕನ ಸ್ಥಿತಿ ಗಂಭೀರ| ನೆರವಿಗೆ‌ ಮೊರೆ

ದೊಡ್ಡಬಳ್ಳಾಪುರ, (ಏ.17): ತಾಲೂಕಿನಲ್ಲಿ ಪದೇ ಪದೇ ಅಪಘಾತಗಳಿಂದಾಗಿ ಸಾವು, ನೋವುಗಳ ಸಂಖ್ಯೆ ಹೆಚ್ಚುತ್ತಲೇ ಇದೆ.

ಇತ್ತೀಚೆಗಷ್ಟೇ ಮಧುರೆ ಕೆರೆ ಏರಿ ಬಳಿ ಪೊಲೀಸ್ ಇಲಾಖೆ ಹೆಡ್ ಕಾನ್ಸ್‌ಟೇಬಲ್, ತಪಸೀಹಳ್ಳಿ ಬಳಿ ನಡೆದ ಅಪಘಾತದಲ್ಲಿ ಗೃಹಿಣಿ ಸಾವನಪ್ಪಿರುವ ಬೆನ್ನಲ್ಲೆ. ಸೋಮವಾರ ರಾತ್ರಿ ಸಂಭವಿಸಿದ ಅಪಘಾತದಲ್ಲಿ ಯುವಕ ಸಾವನಪ್ಪಿ ಆತನ ಸಹೋದರಿ ತೀವ್ರವಾಗಿ ಗಾಯಗೊಂಡಿರುವ ಘಟನೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ದೊಡ್ಡಬಳ್ಳಾಪುರ ತಾಲೂಕಿನ ಗೌಡಹಳ್ಳಿ ಗ್ರಾಮದ ಗಂಗಾಧರ್ ಮಕ್ಕಳಾದ ಕಿರಣ್, ತನುಶ್ರೀ ಅನಾರೋಗ್ಯದ ಕಾರಣ ಸೋಮವಾರ ರಾತ್ರಿ ಗೌಡಹಳ್ಳಿ ಗ್ರಾಮದಿಂದ ದೊಡ್ಡಬಳ್ಳಾಪುರದ ಆಸ್ಪತ್ರೆಗೆ ತೆರಳಿದ್ದು, ಈ ವೇಳೆ ಚಿಕ್ಕ ತುಮಕೂರು ಬಳಿಯಿರುವ ತೋಟವೊಂದರ ಬಳಿ ಎದುರಾದ ಟ್ರಾಕ್ಟರ್ ಚಾಲಕನ ನಿರ್ಲಕ್ಷ್ಯದಿಂದಾಗಿ ಅಪಘಾತ ಸಂಭವಿಸಿದೆ ಎನ್ನಲಾಗಿದೆ.

ಘಟನೆಯಲ್ಲಿ ಕಿರಣ್ (21 ವರ್ಷ) ಸಾವನಪ್ಪಿದ್ದು, ತನುಶ್ರೀ ಗಂಭೀರವಾಗಿ ಗಾಯಗೊಂಡು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ವಿಪರ್ಯಾಸವೆಂದರೆ ಘಟನೆಯಲ್ಲಿ ಗಾಯಗೊಂಡ ತನುಶ್ರೀ ಅವರಿಗೆ ಮದುವೆ ನಿಶ್ಚಯವಾಗಿದ್ದು, ಲಗ್ನಪತ್ರಿಕೆ ಹಂಚಿಕೆ ಕಾರ್ಯ ಶೇ.76 ರಷ್ಟು ಮುಗಿದಿದೆ. 

ಈ ನಡುವೆ ಇಂತಹ ದುರ್ಘಟನೆ ಸಂಭವಿಸಿದೆ. ಅಲ್ಲದೆ ಗಂಭೀರವಾಗಿ ಗಾಯಗೊಂಡಿರುವ ತನುಶ್ರೀ ಚಿಕಿತ್ಸೆಗೆ ಸುಮಾರು 20 ಲಕ್ಷ ರೂಗಳಿಗೂ ಹೆಚ್ಚು ವೆಚ್ಚವಾಗುತ್ತದೆ ಎಂದು ಆಸ್ಪತ್ರೆಯವರು ತಿಳಿಸಿದ್ದು, ಬಡ ಕುಟುಂಬ ಹಣ ಹೊಂದಿಸಲಾಗದೆ ಪರದಾಡುವಂತಾಗಿದೆ.

ಈ ಚಿಂತಾಜನಕ ಸ್ಥಿತಿಯಲ್ಲಿರುವ ಕುಟುಂಬಕ್ಕೆ ನೆರವಾಗಲು ಇಚ್ಚಿಸುವ ದಾನಿಗಳು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿರುವ ತನುಶ್ರೀ ಅವರ ತಂದೆ ಗಂಗಾಧರ ಅವರಿಗೆ Phone pe ಮಾಡಲು ಈ ಸಂಖ್ಯೆ ಬಳಸಬಹುದಾಗಿದೆ 7760568618.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....

Latest News

HL

literature

HL

crime

HL

crime

HL

crime

HL

politics

HL

politics

HL

crime

HL

politics

HL

health

HL

literature

HL

politics

HL

politics

HL

health

HL

politics

HL

others

HL

politics

HL

crime

HL

politics

HL

crime

HL

literature

HL

crime

HL

education

HL

crime

HL

literature

HL

politics

HL

politics

HL

crime

HL

crime

HL

politics

HL

literature