ಕೋಲಾರ, (ಮೇ.03); ಬೇಸಿಗೆಯ ಬೇಗೆಯ ಕಾರಣ ಕೃಷಿ ಹೊಂಡದಲ್ಲಿ ಈಜಲು ತೆರಳಿದ್ದ ಯುವಕನೋರ್ವ ನೀರಲ್ಲಿ ಮುಳುಗಿ ಸಾವನಪ್ಪಿರುವ ಘಟನೆ ಕೋಲಾರ ತಾಲೂಕಿನ ನಾಗನಾಳ ಗ್ರಾಮದಲ್ಲಿ ಸಂಭವಿಸಿದೆ.
ಮೈಸೂರಿನ ರಾಘವೇಂದ್ರನಗರ ಬಡಾವಣೆ ನಿವಾಸಿ ಗೌತಮ್ ಗೌಡ (26 ವರ್ಷ) ಮೃತ ಯುವಕ ಎಂದು ಗುರುತಿಸಲಾಗಿದ್ದು, ತಮ್ಮ ತಂದೆಯ ಊರಾದ ವೇಮಗಲ್ ಸಮೀಪದ ನಾಗನಾಳ ಗ್ರಾಮಕ್ಕೆ ಆಗಮಿಸಿದ್ದ ಎನ್ನಲಾಗಿದೆ.
ಕುಟುಂಬದವರೊಂದಿಗೆ ಕೃಷಿ ಹೊಂಡದಲ್ಲಿ ಈಜಲು ತೆರಳಿದ್ದ ವೇಳೆ ಆಕಸ್ಮಿಕವಾಗಿ ಮುಳುಗಿ ಯುವಕ ಸಾವನಪ್ಪಿದ್ದಾನೆ. ಇದಕ್ಕೂ ಮುನೇಗೌಡ ಕೃಷಿ ಹೊಂಡದಲ್ಲಿ ನೀರಿನಲ್ಲಿ ಈಜಾಡುವ ವಿಡಿಯೋ ಸೆರೆ ಹಿಡಿಯುವಂತೆ ತಂಗಿಗೆ ಹೇಳಿದ್ದಾನೆ..
ಅಂತೆಯೇ ಅಣ್ಣ ನೀರಲ್ಲಿ ಈಜಾಡುವ ವಿಡಿಯೋವನ್ನು ತಂಗಿ ಸೆರೆ ಹಿಡಿದಿದ್ದು, ಪಾಪ ಅಣ್ಣ ನೀರಲ್ಲಿ ಮುಳುಗಿ ಸಾವನಪ್ಪುತ್ತಿದ್ದರು ತಿಳಿಯದ ತಂಗಿ... ಅಲ್ಲೇ ಇದ್ದಾನೆ, ಅಲ್ಲೇ ಇದ್ದಾನೆ ಎಂದು ಮಾತಾಡಿರುವುದು ವಿಡಿಯೋದಲ್ಲಿ ಕೇಳಿಸುತ್ತದೆ.
ಬುಧವಾರ ಸಂಜೆ 4:00 ಸಮಯದಲ್ಲಿ ಘಟನೆ ನಡೆದಿದೆ ಎನ್ನಲಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಯುವಕ ನೀರಿನಲ್ಲಿ ಮುಳುಗುತ್ತಿರುವ ವಿಡಿಯೋ ವೈರಲ್ ಆಗಿದೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....<!--
-->Latest News
others
politics
crime
others
others
others
politics
crime
politics
politics
crime
politics
crime
crime
literature
crime
crime
politics
literature
politics
others
literature
crime
crime
politics
politics
politics
politics
education
crime