ಯಲಹಂಕ, (ಮೇ.04); ಪೌರಾಣಿಕ ನಾಟಕ ಕುರುಕ್ಷೇತ್ರದಲ್ಲಿ ಶಕುನಿ ಪಾತ್ರ ನಿರ್ವಹಿಸುವ ವೇಳೆ ಕಲಾವಿದ ಓರ್ವರು ಕುಸಿದುಬಿದ್ದು ಸಾವನಪ್ಪಿರುವ ಘಟನೆ ತಾಲೂಕಿನ ಸಾತನೂರು ಗ್ರಾಮದಲ್ಲಿ ಸಂಭವಿಸಿದೆ.
ಮೃತರನ್ನು ನಿವೃತ್ತ ಉಪನ್ಯಾಸಕ, ಲೇಖಕ, ಕಲಾವಿದ, ಕೆಂಪೇಗೌಡ ಪುರಸ್ಕೃತ, ದೇವನಹಳ್ಳಿಯಲ್ಲಿ ನಡೆದ 28 ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಅರದೇಶಹಳ್ಳಿ ಮುನಿಕೆಂಪಣ್ಣ (72 ವರ್ಷ) ಎನ್ನಲಾಗಿದೆ.
ಅರದೇಶನಹಳ್ಳಿ ಗ್ರಾಮದ ಮುನಿಕೆಂಪಣ್ಣ ಅವರು ಯಲಹಂಕದಲ್ಲಿ ನೆಲೆಸಿದ್ದರು. ಕಳೆದ ರಾತ್ರಿ ಸಾತನೂರು ಗ್ರಾಮದಲ್ಲಿ ನಡೆದ ಕುರುಕ್ಷೇತ್ರ ಪೌರಾಣಿಕ ನಾಟಕದಲ್ಲಿ ಶಕುನಿ ಪಾತ್ರದಾರಿಯಾಗಿ ಅಭಿನಯ ನೀಡುತ್ತಿದ್ದ ವೇಳೆ, ವೇದಿಕೆಯಲ್ಲಿಯೇ ಕುಸಿದು ಬಿದ್ದು ಸಾವನಪ್ಪಿದ್ದಾರೆ.
ಮೃತರು ಮಡದಿ, ಇಬ್ಬರು ಪುತ್ರರನ್ನು ಅಗಲಿದ್ದು, ಇಂದು ಮಧ್ಯಾಹ್ನ 3 ಗಂಟೆ ಅಂತ್ಯಕ್ರಿಯೆ ಅರದೇಶನಹಳ್ಳಿಯಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....
Latest News
crime
others
politics
crime
others
others
others
politics
crime
politics
politics
crime
politics
crime
crime
literature
crime
crime
politics
literature
politics
others
literature
crime
crime
politics
politics
politics
politics
education