ಜೈಪುರ, (ಏ.28); ಮುಸ್ಲಿಮರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ನೀಡಿದ್ದ ಹೇಳಿಕೆಯನ್ನು ಟೀಕಿಸಿದ ಕಾರಣ ರಾಜಸ್ಥಾನ ಬಿಜೆಪಿಯಿಂದ ಉಚ್ಚಾಟಿತ ಮುಸ್ಲಿಂ ಮುಖಂಡರೊಬ್ಬರನ್ನು ಬಂಧನಕ್ಕೊಳಪಡಿಸಲಾಗಿದೆ.
ರಾಜಾಸ್ಥಾದ ಬಿಕನೇರ್ ಜಿಲ್ಲೆಯ ಮುಸ್ಲಿಂ ಮೋರ್ಚಾ ಅಧ್ಯಕ್ಷ ಉಸ್ಮಾನ್ ಘನಿ ಬಂಧಿತ ಮುಖಂಡ.
ಬನ್ಸ್ವಾರಾದಲ್ಲಿ ಪ್ರಧಾನಿ ಮೋದಿ ಭಾಷಣ ಮಾಡುತ್ತಾ ದೇಶದ ಆಸ್ತಿಯನ್ನು ಹೆಚ್ಚು ಮಕ್ಕಳಿರುವ ಸಮುದಾಯಕ್ಕೆ ಹಂಚುವುದಾಗಿ ಕಾಂಗ್ರೆಸ್ ಪಕ್ಷವು ಹೇಳಿದೆ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರೂ ಸಹ ಈ ದೇಶದ ಆಸ್ತಿಯಲ್ಲಿ ಮುಸ್ಲಿಮರಗೆ ಪ್ರಥಮ ಪ್ರಾಶಸ್ಯ ನೀಡುವುದಾಗಿ ಹೇಳಿದ್ದರೆಂದು ಪ್ರಧಾನಿ ಮೋದಿ ಆರೋಪಿಸಿದ್ದರು.
ಪ್ರಧಾನಿಯ ಈ ಹೇಳಿಕೆಗೆ ದೇಶಾದ್ಯಂತ ಸಾಕಷ್ಟು ಟೀಕೆ ವ್ಯಕ್ತವಾಗಿದ್ದು, ಉಸ್ಮಾನ್ ಘನಿಯವರೂ ಸಹ ತಮ್ಮ ಆಕ್ಷೇಪ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೆ ಅವರನ್ನು ಬಂಧಿಸಲಾಗಿದೆ.
ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಕಾನೂನು ಸುವ್ಯವಸ್ಥೆ ಹಾಗೂ ಶಾಂತಿಪಾಲನೆಗೆ ಭಂಗ ತರುತ್ತಿರುವ ಆರೋಪದ ಮೇಲೆ ಉಸ್ಮಾನ್ ಘನಿಯವರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಧ್ಯಮಗಳಿಗೆ ಹೇಳಿದ್ದಾರೆ.
ಘನಿ ಅವರು ಮೋದಿ ಹೇಳಿಕೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು, ಮುಸ್ಲಿಂ ಸಮುದಾಯ ಬಿಜೆಪಿ, ಮೋದಿ ಅವರನ್ನು ಬೆಂಬಲಿಸುತ್ತಿದೆ. ಆದರೆ ಈ ಹೆಳಿಕೆಯಿಂದ ಮತ ಯಾಚನೆಗೆ ತೆರಳಿದಾಗ ಪ್ರಶ್ನೆಗಳು ಉಂಟಾಗುತ್ತವೆ. ಈ ಕುರಿತು ಮೋದಿ ಅವರಿಗೆ ಮೇಲ್ ಮಾಡಿ ಗಮನಕ್ಕೆ ತರುವೆ, ಅವರ ಈ ಹೇಳಿಕೆಯಿಂದ ರಾಜಸ್ಥಾನದ 25 ಕ್ಷೇತ್ರಗಳಲ್ಲಿ ಬಿಜೆಪಿ 2-4 ಸೀಟು ಕಳೆದುಕೊಳ್ಳುತ್ತದೆ ಎಂದು ಘನಿ ಹೇಳಿಕೆ ನೀಡಿದ್ದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....
Latest News
literature
education
crime
politics
education
politics
crime
literature
politics
crime
crime
crime
crime
crime
crime
politics
literature
literature
literature
education
education
crime
politics
crime
health
agriculture
politics
literature
literature
literature