ಜನರ ಮನ ಸೆಳೆದ ಧರ್ಮರಾಯಸ್ವಾಮಿ ಒನಕೆ ಕರಗ: ಸಮತೋಲನದ ನೃತ್ಯ
ಜನರ ಮನ ಸೆಳೆದ ಧರ್ಮರಾಯಸ್ವಾಮಿ ಒನಕೆ ಕರಗ: ಸಮತೋಲನದ ನೃತ್ಯ

ಚಿಕ್ಕಬಳ್ಳಾಪುರ, (ಮೇ.14): ನಗರದ ಜಾಲಾರಿ ಗಂಗಮಾಂಭ ದೇವಾಲಯದ ಶ್ರೀ ಧರ್ಮರಾಯರ ಕರಗ ಮಹೋತ್ಸವದ ಸೇವಾ ಸಮಿತಿ 62ನೇ ವರ್ಷದ ಶ್ರೀ ಧರ್ಮರಾಯರ ಹೂವಿನ ಕರಗ ಮಹೋತ್ಸವದ ಅಂಗವಾಗಿ ನಗರದ ಭುವನೇಶ್ವರಿ ವೃತ್ತದಲ್ಲಿ  ಕರಗದ ಕೊನೆಯ ದಿನದ ಅಂತಿಮ ಕಾರ್ಯಕ್ರಮವಾದ  ವಸಂತೋತ್ಸವ (ಒನಕೆ) ಕರಗ ಸೋಮವಾರ ಅದ್ದೂರಿಯಾಗಿ ನಡೆಯಿತು.

ಮೇಲೂರಿನ ಕರಗದ ಪೂಜಾರಿ ಕೆ.ಧರ್ಮೇಂದ್ರ ಅವರು ಸುಮಾರು 6 ಅಡಿ ಉದ್ದದ ಒನಕೆಯ ಮೇಲೆ ಅರಿಶಿಣ ನೀರು ತುಂಬಿಟ್ಟ ತಾಮ್ರದ ಪಾತ್ರೆ ಇಟ್ಟುಕೊಂಡು ತಮಟೆಯ ವಾದನಕ್ಕೆ ತಕ್ಕಂತೆ ಆಕರ್ಷಕ ನೃತ್ಯ ಮಾಡುವ ಮೂಲಕ ನೆರದಿದ್ದ ಜನರಲ್ಲಿ ಮೆಚ್ಚುಗೆಗೆ ಪಾತ್ರರಾದರು.

ಧರ್ಮೇಂದ್ರ ಅವರ ತಲೆ ಮೇಲೆ ನಿಂತ ಒನಕೆ ಸಮತೋಲನ ಕಳೆದುಕೊಳ್ಳದಂತೆ ಚಾಕಚಾಕ್ಯತೆಯಿಂದ ತಮಟೆ ವಾದ್ಯಕ್ಕೆ ಅನುಗುಣವಾಗಿ ಗೆಜ್ಜೆಯ ಕಾಲಿನ ತಾಳದೊಂದಿಗೆ ಲಯಬದ್ಧವಾಗಿ ಎರಡೂ ಕೈಗಳನ್ನು ಬಿಟ್ಟು ಕುಣಿದು ನೆರಿದಿದ್ದವರಲ್ಲಿ ವಿಸ್ಮಯ ಮೂಡಿಸಿದರು. ಸುಮಾರು ಅರ್ಧ ಗಂಟೆ ಹೆಚ್ಚು ಕಾಲ ಕುಣಿದ ಬಾಲಾಜಿ ಅವರ ನೃತ್ಯವನ್ನು ಸುತ್ತಮುತ್ತಲಿನ ರಸ್ತೆ ಬದಿ, ಕಟ್ಟಡದ ಮೇಲೆ ನಿಂತು ಜನರು ವೀಕ್ಷಿಸಿದರು. ಬಹುತೇಕರು ನೃತ್ಯದ ದೃಶ್ಯವನ್ನು ಮೊಬೈಲ್‌ಗಳಲ್ಲಿ ಸೆರೆಹಿಡಿದರು.

ತಮಟೆಯ ನೀನಾದಕ್ಕೆ ಅಲ್ಲಿ ನೆರೆದಿದ್ದವರಲ್ಲಿ ಕ್ಷಣ ಕ್ಷಣಕ್ಕೂ ಕುತೂಹಲ ಹೆಚ್ಚಿತ್ತಲ್ಲದೆ ಒನಕೆಯ ಕಡೆಯೇ ಎಲ್ಲರ ಗಮನ. ಆಗಾಗ ಬಂದು ಹೋದ ಮಳೆಯ ಸಿಂಚನದಂತೆ  ಪೂಜಾರಿ ಹೊತ್ತ ಒನಕೆ ಕರಗದಿಂದ ಹನಿ ಹೊರಬೀಳುತಿತ್ತು ಮಾತ್ರವಲ್ಲ ಒನಕೆ ಕರಗ ಪ್ರದರ್ಶನ ನೋಡುಗರ ಮೈರೋಮಾಂಚನಗೊಳಿಸಿತು.

ಕಳೆದ 8 ದಿನಗಳಿಂದ ನಗರದಲ್ಲಿ ಶ್ರೀ ಧರ್ಮರಾಯಸ್ವಾಮಿ ಹೂವಿನ ಕರಗ ಮಹೋತ್ಸವದ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಭಕ್ತಿಭಾವದಿಂದ ಚಿಕ್ಕಬಳ್ಳಾಪುರ ನಗರ ಸೇರಿದಂತೆ ಗ್ರಾಮೀಣ ಪ್ರದೇಶ ಹಾಗೂ ಕೋಲಾರ ಮತ್ತು ಬೆಂಗಳೂರು ಗ್ರಾಮಂತರ ಜಿಲ್ಲೆಗಳಿಂದಲೂ  ಚಿಕ್ಕಬಳ್ಳಾಪುರದ ಹೆಸರಾಂತ ಈ ಕರಗ  ವೀಕ್ಷಿಸಲು ಆಗಮಿಸಿ ಸಾಕ್ಷಿಯಾಗಿದ್ದರು. ಅದರಂತೆ ಶನಿವಾರ ರಾತ್ರಿ ಇಡೀ ಮತ್ತು ಮರುದಿನವಾದ ಭಾನುವಾರ ರಾತ್ರಿಯವರೆವಿಗೂ ಸುಮಾರು 28 ಗಂಟೆಗಳಿಗೂ ಹೆಚ್ಚು ಕಾಲ ಹೂವಿನ ಕರಗವನ್ನು ಕರಗದ ಪೂಜಾರಿ ಕೆ.ಧರ್ಮೇಂದ್ರ ಹೊತ್ತಿದ್ದರು. 

ಇದರ ಭಾಗವಾಗಿ ಕಡೆಯ ದಿನವಾದ ಸೋಮವಾರ ಕರಗದ ಪೂಜಾರಿ ಕೆ ಧರ್ಮೇಂದ್ರ ಹಾಗೂ ಅವರ ಸಹಚರರು ಒನಕೆ ಕರಗ ಹೊತ್ತು ವಿವಿಧ ಭಂಗಿಗಳಲ್ಲಿ ನೃತ್ಯ ಪ್ರದರ್ಶಿಸುವ ಮೂಲಕ ಶ್ರೀ ಜಲಾರಿ ಗಂಗಮಾಂಭ ದೇವಾಲಯದ ಧರ್ಮರಾಯಸ್ವಾಮಿ ಹೂವಿನ ಕರಗಕ್ಕೆ ಕಳೆ ತಂದುಕೊಟ್ಟರು.

ಕರಗ ಉತ್ಸವಕ್ಕೆ ತೆರೆ: ಜಿಲ್ಲಾ ಕೇಂದ್ರದಲ್ಲಿ ಪ್ರತಿ ವರ್ಷ ಭಕ್ತಿಭಾವದಿಂದ ನಡೆಸುವ ಜಾಲಾರಿ ಗಂಗಮ್ಮದೇವಿಯ  ಧರ್ಮರಾಯಸ್ವಾಮಿಯ 62 ನೇ ವರ್ಷದ ಹೂವಿನ ಕರಗ ಮಹೋತ್ಸವ ಸೋಮವಾರ ಅಪರೂಪದ ಒನಕೆ ಕರಗ ನೃತ್ಯ ಪ್ರದರ್ಶನದೊಂದಿಗೆ ಸಂಪನ್ನಗೊಂಡಿತು. ಕಡೆಯ ದಿನದಂದು ದೇವರಿಗೆ ವಿಶೇಷ ಪೂಜೆ ಮತ್ತಿತರ ಧಾರ್ಮಿಕ ಕೈಂಕಾರ್ಯಗಳನ್ನು ಭಕ್ತಾದಿಗಳಿಂದ ನೆರವೇರಿತು.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....

Latest News

HL

economy

HL

economy

HL

crime

HL

others

HL

others

HL

others

HL

others

HL

others

HL

politics

HL

others

HL

sports

HL

others

HL

others

HL

education

HL

politics

HL

economy

HL

politics

HL

sports

HL

others

HL

economy

HL

others

HL

others

HL

crime

HL

education

HL

others

HL

politics

HL

crime

HL

education

HL

others

HL

economy