ಜಗದೀಶ್ ಶೆಟ್ಟರ್‌ಗೆ ಬಂಡಾಯದ ಬಿಸಿ..!; ಸವದಿ ಹೇಳಿದ್ ನಿಜವಾಗುತ್ತಾ..?
ಜಗದೀಶ್ ಶೆಟ್ಟರ್‌ಗೆ ಬಂಡಾಯದ ಬಿಸಿ..!; ಸವದಿ ಹೇಳಿದ್ ನಿಜವಾಗುತ್ತಾ..?

ಬೆಳಗಾವಿ, (ಮಾ.29): ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಮಹಾಂತೇಶ ವಕ್ಕುಂದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರ ವಿರುದ್ಧ ಸಿಡಿದೆದ್ದಿದ್ದು, ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ತಮಗೆ ಟಿಕೆಟ್ ಸಿಗದಿದ್ದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಅವರು, ಫೇಸ್‌ಬುಕ್‌ನಲ್ಲಿ ವಿಡಿಯೋ ಬಿಡುಗಡೆ ಮಾಡಿ, 'ಬೆಳಗಾವಿಯಲ್ಲಿ ಸಮರ್ಥ ನಾಯಕರಿದ್ದರೂ ಹೊರಗಿನವರಿಗೆ ಟಿಕೆಟ್‌ ನೀಡಲಾಗಿದೆ. ಇಂದು ಸಮಾನ ಮನಸ್ಕರ ಸಭೆ ಕರೆದು ಅಂತಿಮ ನಿರ್ಧಾರ ಪ್ರಕಟಿಸುತ್ತೇನೆ' ಎಂದು ಘೋಷಿಸಿದ್ದಾರೆ.

ಮೊನ್ನೆಯಷ್ಟೆ ಜಿಲ್ಲೆಯ ಹಿರಿಯ ನಾಯಕರು ಸಭೆ‌ ಸೇರಿ ಸ್ಥಳೀಯರಿಗೆ ಟಿಕೆಟ್ ನೀಡಬೇಕು ಎಂದು ನಿರ್ಧಾರ ಮಾಡಿ,‌ ರಾಜ್ಯದ ನಾಯಕರ‌ ಗಮನಕ್ಕೆ ತಂದಿದ್ದರು. ಏತನ್ಮಧ್ಯೆ, ಬಂಡಾಯ ಅಭ್ಯರ್ಥಿ ಸ್ಪರ್ಧೆ ಮಾತು ಜೋರಾಗಿದೆ. ಧಾರವಾಡದಿಂದ ರಾಜಕೀಯ ವಲಸೆಗೆ ಸಿದ್ಧರಾಗಿರುವ ಶೆಟ್ಟರ್‌ಗೆ ಇದು ನುಂಗಲಾದ ಬಿಸಿ ತುಪ್ಪವಾಗಿ ಪರಿಣಮಿಸಿದೆ. 

ಇತ್ತೀಚಿಗೆ ಕೈ ಶಾಸಕ ಲಕ್ಷ್ಮಣ ಸವದಿ ಅವರು, ಬೆಳಗಾವಿಯಲ್ಲಿ ಶೆಟ್ಟರ್ ಅವರನ್ನು ಬಲಿಕಾ ಬಕ್ರಾ ಮಾಡಲು ಬಿಜೆಪಿಯಲ್ಲಿ ತಯಾರಿ ನಡೆದಿದೆ ಎಂದಿದ್ದರು.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....

Latest News

HL

literature

HL

politics

HL

sports

HL

politics

HL

health

HL

politics

HL

politics

HL

others

HL

politics

HL

politics

HL

politics

HL

crime

HL

politics

HL

crime

HL

politics

HL

literature

HL

crime

HL

politics

HL

politics

HL

economy

HL

crime

HL

crime

HL

others

HL

politics

HL

health

HL

crime

HL

politics

HL

economy

HL

others

HL

literature