ಬೆಂಗಳೂರು, (ಏ.27): ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಕುಟುಂಬ ಸಮೇತ ನಿನ್ನೆ ಮಾಗಡಿಯ ಕೇತಗಾನಹಳ್ಳಿಗೆ ಹೋಗಿ ಸಖಿ (Pink booth) ಮತಗಟ್ಟೆಯಲ್ಲಿ ಮತ ಚಲಾವಣೆ ಮಾಡಿರುವುದನ್ನು ಕರ್ನಾಟಕದ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಪ್ರಶ್ನೆ ಮಾಡಿದೆ.
ಮಾಗಡಿ ವಿಧಾನಸಭಾ ಕ್ಷೇತ್ರ, ಬಿಡದಿ ಹೋಬಳಿಯ ಕೇತಗಾನಹಳ್ಳಿ ಬೂತ್ ನಲ್ಲಿ ಮಂಡ್ಯ ಕ್ಷೇತ್ರದ ಅಭ್ಯರ್ಥಿ ಹೆಚ್.ಡಿ ಕುಮಾರಸ್ವಾಮಿಯವರು ಕುಟುಂಬ ಸಮೇತ ಹೋಗಿ ಮತ ಚಲಾಯಿಸಿದ್ದಾರೆ,
ಇದು ಮಹಿಳೆಯರು ಮಾತ್ರ ಮತ ಚಲಾಯಿಸಬಹುದಾದ ಪಿಂಕ್ ಬೂತ್ ಆಗಿದ್ದು, ಇಲ್ಲಿ ಹೆಚ್.ಡಿ.ಕುಮಾರಸ್ವಾಮಿಯವರು ಹೇಗೆ ಮತ ಚಲಾಯಿಸಲು ಸಾಧ್ಯವಾಯಿತು?
ಮತದಾನದ ನಂತರ ಬೂತ್ ಒಳಗಡೆ ಕುಟುಂಬ ಸಮೇತ ಫೋಟೋ ತೆಗೆಸಿಕೊಂಡಿದ್ದಾರೆ. ಬೂತ್ ಅಧಿಕಾರಿ ನಿಯಮ ಮೀರಿ, ಕಾನೂನು ಉಲ್ಲಂಘಿಸಿ ಇವರಿಗೆ ಅವಕಾಶ ನೀಡಿದ್ದಾರೆ, Chief Electoral Officer Karnataka ಅವರು ಬೂತ್ ಅಧಿಕಾರಿಯ ವಿರುದ್ಧ ಕ್ರಮ ಜರುಗಿಸಿ ಕುಮಾರಸ್ವಾಮಿಯವರ ಮತವನ್ನು ಅಸಿಂಧು ಮಾಡಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದೆ.
ಇತ್ತ ಸಖಿ ಮತಗಟ್ಟೆಗಳು ಹೆಚ್ಚಾಗಿ ಮಹಿಳೆಯರಿಗೆ ಮೀಸಲಾಗಿದ್ದರೂ ಸಹ ಪುರುಷರು ಇಲ್ಲಿ ಮತದಾನ ಮಾಡಬಹುದಾಗಿದೆ ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....
Latest News
education
politics
crime
literature
politics
crime
crime
crime
crime
crime
crime
politics
literature
literature
literature
education
education
crime
politics
crime
health
agriculture
politics
literature
literature
literature
literature
politics
politics
crime