ಬೆಂಗಳೂರು, (ಸೆ.09); ಕೌಟುಂಬಿಕ ವಿಚಾರಕ್ಕೆ ನಡೆದ ಜಗಳದ ವೇಳೆ ಬಾಮೈದನೇ ಬಾವನಿಗೆ ಚಾಕುವಿನಿಂದ ಇರಿದು ಕೊಲೆಗೈದಿ ರುವ ಘಟನೆ ಬ್ಯಾಟರಾಯನಪುರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಹೊಸಗುಡ್ಡದ ಹಳ್ಳಿ ನಿವಾಸಿ 45 ವರ್ಷದ ವೆಂಕಟಚಲಾಪತಿ ಕೊಲೆಯಾದ ದುರ್ದೈವಿ.
ಭಾನುವಾರ ರಾತ್ರಿ 9ರ ಸುಮಾರಿಗೆ ಘಟನೆ ನಡೆದಿದೆ. ಆರೋಪಿ ವಿಶ್ವನಾಥನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.
ಕೊಲೆಯಾದ ವೆಂಕಟಾಚಲಪತಿ ಟಿ.ಆರ್.ಮಿಲ್ ನಿವಾಸಿ. ಇನ್ನು ಮತ್ತೊಂದೆಡೆ ಆರೋಪಿ ವಿಶ್ವನಾಥ್ನನ್ನು ಮಾತಾಡಿಸಲು ಮನೆಗೆ ಬಂದಿದ್ದ ಸಹೋದರಿಯ ಮೇಲೂ ವಿಶ್ವನಾಥ್ ದರ್ಪ ಮೆರೆದಿದ್ದಾನೆ.
ಸಹೋದರಿಗೂ ಥಳಿಸಿ ಮನೆಯಿಂದ ಹೊರದಬ್ಬಿದ್ದಾನೆ. ಇದನ್ನು ಪ್ರಶ್ನಿಸಲು ವಿಶ್ವನಾಥ್ ಮನೆಗೆ ವೆಂಕಟಾಚಲಪತಿ ಬಂದಾಗ ಚಾಕುವಿನಿಂದ ಹಲ್ಲೆ ನಡೆಸಿ 10ಕ್ಕೂ ಹೆಚ್ಚು ಬಾರಿ ಇರಿದು ಕೊಲೆ ಮಾಡಿದ್ದಾನೆ.
ಕೊಲೆಗೈದ ನಂತರ ಮನೆ ಹೊರಗೆ ಚಾಕು ಹಿಡಿದು ಓಡಾಡುತ್ತ ಪಕ್ಕದ ಮನೆಯವರಿಗೆ ನಮ್ಮ ಬಾವನನ್ನು ಕೊಂದಿದ್ದೇನೆ ಎಂದು ಕಿರುಚಾಡಿದ್ದಾನೆ. ಈ ವಿಷಯ ಕಿವಿಗೆ ಬೀಳುತ್ತಿದ್ದಂತೆ ಕೂಡಲೇ ಸ್ಥಳೀಯರು ಬ್ಯಾಟರಾಯನಪುರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪೊಲೀಸರು ಸ್ಥಳಕ್ಕೆ ಆಗಮಿಸಿ ಆರೋಪಿ ವಿಶ್ವನಾಥ್ನನ್ನು ಬಂಧಿಸಿದ್ದಾರೆ. ವೆಂಕಟಾಚಲಪತಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....
Latest News
health
crime
crime
others
others
others
others
others
others
others
others
others
politics
politics
crime
crime
politics
others
politics
others
crime
others
crime
others
others
crime
others
others
others
art