ಕುಸ್ತಿಪಟು ಪುನಿಯಾಗೆ ಜೀವಬೆದರಿಕೆ..!: ಕಾಂಗ್ರೆಸ್ ತೊರೆಯುವಂತೆ ವಾರ್ನಿಂಗ್
ಕುಸ್ತಿಪಟು ಪುನಿಯಾಗೆ ಜೀವಬೆದರಿಕೆ..!: ಕಾಂಗ್ರೆಸ್ ತೊರೆಯುವಂತೆ ವಾರ್ನಿಂಗ್

ಚಂಡೀಗಢ, (ಸೆ.09); ಹರಿಯಾಣ ವಿಧಾನಸಭಾ ಚುನಾವಣೆ ಹೊಸ್ತಿಲಲ್ಲೇ ಕಾಂಗ್ರೆಸ್ ಸೇರಿದ ಕುಸ್ತಿಪಟು ಬಜರಂಗ್ ಪುನಿಯಾಗೆ ವಾಟ್ಸಪ್ ಮೂಲಕ ದೇಶವಿದೇಶದಿಂದ ಕೊಲೆಬೆದರಿಕೆಗಳು ಬರುತ್ತಿವೆ.

ಕರೆ ಮಾಡಿದವರು ಕಾಂಗ್ರೆಸ್ ತೊರೆಯದಿದ್ದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಪುನಿಯಾ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದು ತನಿಖೆ ನಡೆಯುತ್ತಿದೆ.

ವಿನೇಶ್ ಪೊಗಟ್ ಹಾಗೂ ಬಜರಂಗ ಪುನಿಯಾ ಕಾಂಗ್ರೆಸ್‌ಗೆ ಸೇರ್ಪಡೆಯಾದ ನಂತರ ಪೊಗಟ್‌ಗೆ ಜೂಲಾನ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್ ನೀಡಲಾಗಿದೆ. ಆದರೆ ಪುನಿಯಾ ಅವರನ್ನು ಅಖಿಲ ಭಾರತ ಕಿಸಾನ್ ಕಾಂಗ್ರೆಸ್‌ನ ಕಾರ್ಯಾಧ್ಯಕ್ಷರನ್ನಾಗಿ ಮಾಡಲಾಗಿದೆ.

ನಾವು ಪ್ರತಿಭಟನೆ ಮಾಡುವಾಗ ಬಿಜೆಪಿ ಹೊರತುಪಡಿಸಿ ಉಳಿದೆಲ್ಲಾ ಪಕ್ಷಗಳು ನಮಗೆ ಬೆಂಬಲ ನೀಡಿದವು. ಆದರೆ ನಾವು ಕುಸ್ತಿ ಮಾಡಲು ಸಾಧ್ಯವಿಲ್ಲ ಎಂಬಂತೆ ಬಿಜೆಪಿ ಐಟಿ ಸೆಲ್ ಬಿಂಬಿಸಲು ಪ್ರಯತ್ನಿಸಿದೆ ಎಂದು ಪೊಗಟ್ ಹೇಳಿದ್ದಾರೆ.

ಇದೇ ವೇಳೆ ಪೊಗಟ್ ಬಗ್ಗೆ ಇಡಿ ದೇಶವೇ ಬೇಸರ ವ್ಯಕ್ತಪಡಿಸಿದಾಗ ಬಿಜೆಪಿಯ ಐಟಿ ಸೆಲ್ ಸಂಭ್ರಮಿಸಿತ್ತು ಎಂದು ಬಜರಂಗ್‌ ಪುನಿಯಾ ದೂಷಿಸಿದ್ದರು.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....

Latest News

HL

health

HL

crime

HL

crime

HL

others

HL

others

HL

others

HL

others

HL

others

HL

others

HL

others

HL

others

HL

others

HL

politics

HL

politics

HL

crime

HL

crime

HL

politics

HL

others

HL

politics

HL

others

HL

crime

HL

others

HL

crime

HL

others

HL

others

HL

crime

HL

others

HL

others

HL

others

HL

art