ಹರಿತಲೇಖನಿ ದಿನಕ್ಕೊಂದು ಕಥೆ: ಶಕುನಿ ಗುಣವಂತನೇ..? ಕೆಡುಕನೇ..?
ಹರಿತಲೇಖನಿ ದಿನಕ್ಕೊಂದು ಕಥೆ: ಶಕುನಿ ಗುಣವಂತನೇ..? ಕೆಡುಕನೇ..?

ಮಹಾಭಾರತದಲ್ಲಿನ ಅತ್ಯಂತ ಕುತೂಹಲಕಾರಿ ಪಾತ್ರಗಳಲ್ಲಿ 'ಶಕುನಿ' ಪಾತ್ರ ಕೂಡ ಒಂದು. ಇಂದಿಗೂ ಕೂಡ ಜನರು ಶಕುನಿಯನ್ನು ದೂಷಿಸುತ್ತಾರೆ.

ಸೇಡು ತೀರಿಸಿಕೊಳ್ಳುವ ಮನೋಭಾವದವರನ್ನು, ಮೋಸ ಮಾಡುವ ಮನೋಭಾವದವರನ್ನು, ಕುತಂತ್ರ ಬುದ್ಧಿಯುಳ್ಳವರನ್ನು ನೋಡಿದಾಗಲೆಲ್ಲಾ ಅವರನ್ನು ಆಡು ಮಾತಿನಲ್ಲಿ ಅವನೊಬ್ಬ ಶಕುನಿಯೆಂದು ಹೇಳುವುದುಂಟು.

ಹಾಗಾದರೆ ಮಹಾಭಾರತದಲ್ಲಿನ ಶಕುನಿ ಅಷ್ಟೊಂದು ಕೆಡುಕನೇ..? ಶಕುನಿ ಗುಣವಂತನೇ..? ಅಥವಾ ಕೆಟ್ಟವನೇ..? ಇಲ್ಲಿದೆ ಶಕುನಿಯ ಕುರಿತಿರುವ ಆಸಕ್ತಿದಾಯಕ ಸಂಗತಿಗಳು.

ಶಕುನಿಯು ಗಾಂಧಾರ ರಾಜ ಸುಬಲನ ಪುತ್ರನಾಗಿದ್ದನು. ರಾಜ ಸುಬಲನಿಗೆ 100 ಗಂಡು ಮಕ್ಕಳು ಮತ್ತು ಒಬ್ಬಳೇ ಪುತ್ರಿಯಿದ್ದಳು. ಶಕುನಿ ಗಾಂಧಾರ ಕುಲದ ಕೊನೆಯ ಮಗನಾಗಿದ್ದರೆ, ಗಾಂಧಾರಿಯು ಗಾಂಧಾರ ಕುಲದ ಏಕೈಕ ಮಗಳಾಗಿದ್ದಳು. ಶಕುನಿ ಸುಬಲ ರಾಜನ ಕೊನೆಯ ಮಗನಾಗಿದ್ದರೂ ಈತ ಉಳಿದೆಲ್ಲಾ ಸಹೋದರರಿಗಿಂತಲೂ ಅತ್ಯಂತ ಬುದ್ಧಿವಂತನಾಗಿದ್ದನು. ಈತ ಸುಬಲ ರಾಜನ ಕಿರಿಯ ಪುತ್ರನಾಗಿದ್ದರಿಂದ ಈತನನ್ನು ಸೌಬಲ ಎಂದು ಕರೆಯಲಾಗುತ್ತಿತ್ತು.

ಶಕುನಿಯು ಕೊನೆಯ ಮಗನಾಗಿದ್ದನು. ಈತ ಈಗಾಗಲೇ ಹೇಳಿರುವಂತೆ ಮಹಾನ್‌ ಬುದ್ಧಿವಂತನಾಗಿದ್ದ ಹಾಗೂ ಮಾಸ್ಟರ್‌ ಮೈಂಡ್‌ ಹೊಂದಿದವನಾಗಿದ್ದನು. ಸುಬಲ ರಾಜನ 100 ನೇ ಮಗನೇ ಈ ಶಕುನಿ. ಈತನ ಸೋದರಳಿಯರೆಂದರೆ 100 ಜನ ಕೌರವರು.

ಶಕುನಿಗೆ ಭೀಷ್ಮನನ್ನು ನೋಡಿದರೆ ಎಲ್ಲಿಲ್ಲದ ಕೋಪವಿತ್ತು. ಯಾವಾಗಲೂ ಕೂಡ ಶಕುನಿ ಭೀಷ್ಮನ ವಿರುದ್ಧ ಸಂಚು ಸಾರುತ್ತಿದ್ದ. ಇದಕ್ಕೆ ಮುಖ್ಯ ಕಾರಣವೇನು ಗೊತ್ತಾ..? ಭೀಷ್ಮನು ಶಕುನಿಯ ಸಹೋದರಿಯಾದ ಗಾಂಧಾರಿಯು ಅಂಧ ಅಥವಾ ಕುರುಡ ಧೃತರಾಷ್ಟ್ರನನ್ನು ವಿವಾಹವಾಗುತ್ತಾನೆ ಮಾಡುತ್ತಾನೆ. ಆದ್ದರಿಂದ ಶಕುನಿಗೆ ಭೀಷ್ಮನ ಮೇಲೆ ಅಗಾಧವಾದ ಕೋಪವಿತ್ತು. ಶಕುನಿಗೆ ಪಾಂಡವರ ಮೇಲೆ ಯಾವುದೇ ಕೋಪವಿರುವುದಿಲ್ಲ. ಆದರೆ ಭೀಷ್ಮ ಪಿತಾಮಹನ ಸಂಪೂರ್ಣ ಕುಟುಂಬವನ್ನು ನಾಶ ಮಾಡುವ ಸೇಡನ್ನು ಹೊಂದಿದ್ದನು.

ಶಕುನಿಯು ಹೆಚ್ಚಾಗಿ ಹಸ್ತಿನಾಪುರದಲ್ಲೇ ತನ್ನ ದಿನಗಳನ್ನು ಕಳೆದಿರುವುದರಿಂದ ಆತನು ತನ್ನ ಕುಟುಂಬಕ್ಕೆ ಅಷ್ಟೊಂದು ಒತ್ತು ನೀಡಿರಲಿಲ್ಲ. ಆದರೆ ಶಕುನಿಗೆ ಉಲುಕ ಮತ್ತು ವೃಕಾಸುರ ಎನ್ನುವ ಇಬ್ಬರು ಗಂಡು ಮಕ್ಕಳಿದ್ದರು ಎಂದು ಹೇಳಲಾಗುತ್ತದೆ.

ಶಕುನಿಯ ಮಗನಾದ ಉಲೂಕ್‌ ಅಥವಾ ಉಲುಕನು ಪಾಂಡವರು ತಮ್ಮ ಅಜ್ಞಾತವಾಸವನ್ನು ಕಳೆದು ಹಿಂದಿರುಗುವುದರೊಳಗೆ ತನ್ನ ತಂದೆಯಾದ ಶಕುನಿಯನ್ನು ಪುನಃ ಗಾಂಧಾರಕ್ಕೆ ಕರೆದೊಯ್ಯಲು ಬಯಸಿದ್ದನು. ಆದರೆ ಶಕುನಿಯು ಇದಕ್ಕೆ ಒಪ್ಪದೇ ತಾನು ಕುರುಕ್ಷೇತ್ರವನ್ನು ಇಲ್ಲಿಯೇ ಕುಳಿತು ನೋಡಬೇಕೆಂದು ಬಯಸಿ ಹಸ್ತಿನಾಪುರದಲ್ಲೇ ಉಳಿದುಕೊಳ್ಳುತ್ತಾನೆ.

ಪಗಡೆಯಾಟ ಅಥವಾ ಜೂಜಿನಾಟವು ಮಹಾಭಾರತದ ಹಲವು ಪ್ರಮುಖ ಅಧ್ಯಾಯಗಳಲ್ಲಿ ಇದು ಕೂಡ ಒಂದಾಗಿತ್ತು. ಮಹಾಭಾರತದಲ್ಲಿ ಶಕುನಿ ಮಾತ್ರವಲ್ಲದೆ, ಆತನು ಜೂಜಿನಾಟದಲ್ಲಿ ಬಳಸುತ್ತಿದ್ದ ಮಾಂತ್ರಿಕ ದಾಳಗಳು ಕೂಡ ಪ್ರಮುಖ ಪಾತ್ರವನ್ನು ನಿರ್ವಹಿಸಿದೆ. ಶಕುನಿ ಬಳಸುತ್ತಿದ್ದ ದಾಳವು ಆತನ ತಂದೆಯ ಮರಣದ ನಂತರ ಕಾಲಿನ ಹಿಂಭಾಗದ ಅಥವಾ ತೊಡೆಯ ಮೂಲೆಯಿಂದ ಮಾಡಲ್ಪಟ್ಟಿದೆ ಎಂಬ ಕಥೆಯಿದೆ. ಆದರೆ ವಾಸ್ತವದಲ್ಲಿ ಶಕುನಿಯ ದಾಳಗಳು ದಂತಗಳಿಂದ ಮಾಡಲ್ಪಟ್ಟಿದ್ದು, ಶಕುನಿಯು ಮಾಯಾವಾದಿಯಾಗಿದ್ದರಿಂದ ಈತನ ದಾಳಗಳು ಕೂಡ ಮಾಯದ ದಾಳಗಳು ಎಂದು ಹೇಳಲಾಗುತ್ತದೆ.

ವೇದವ್ಯಾಸರು ಯುದ್ಧದಲ್ಲಿ ಮೌನಿಯಾಗಿರಲು ಇಚ್ಛಿಸಿದವರು. ವಾಸ್ತವವಾಗಿ ದಾಳಗಳು ಮೂಳೆಯಿಂದ ಮಾಡಲ್ಪಟ್ಟಿದೆ ಎನ್ನುವುದಕ್ಕೆ ಯಾವುದೇ ಸುಳಿವು ಇಲ್ಲದಿರುವ ಕಾರಣ ಅದು ದಂತದಿಂದ ಮಾಡಲ್ಪಟ್ಟ ದಾಳವಾಗಿರಬಹುದೆಂದು ವೇದವ್ಯಾಸರು ಹೇಳುತ್ತಾರೆ. ಈ ದಾಳವನ್ನು ಉಪಯೋಗಿಸುವ ಕಲೆ ಕೇವಲ ಶಕುನಿಗೆ ಮಾತ್ರ ತಿಳಿದಿತ್ತೆಂದು ಕೂಡ ಅವರು ಹೇಳುತ್ತಾರೆ.

ಕೃಪೆ: ಸಾಮಾಜಿಕ ಜಾಲತಾಣ (ಲೇಖಕರ ಮಾಹಿತಿ ಲಭ್ಯವಾಗಿಲ್ಲ)

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....

Latest News

HL

others

HL

crime

HL

crime

HL

crime

HL

crime

HL

politics

HL

crime

HL

others

HL

crime

HL

others

HL

others

HL

crime

HL

others

HL

others

HL

others

HL

others

HL

crime

HL

education

HL

crime

HL

crime

HL

others

HL

crime

HL

education

HL

others

HL

others

HL

crime

HL

economy

HL

crime

HL

sports

HL

others