ನವದೆಹಲಿ, (ಜುಲೈ.05): ಬ್ರಿಟನ್ನಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ರಿಷಿ ಸುನಕ್ ನೇತೃತ್ವದ ಕನ್ಸರ್ವೇಟಿವ್ ಪಕ್ಷವು ಹೀನಾಯ ಸೋಲನ್ನು ಅನುಭವಿಸಿತು. ವಿರೋಧ ಪಕ್ಷ ಲೇಬರ್ ಪಾರ್ಟಿಗೆ ಜನರು ಅಧಿಕಾರ ನೀಡಿದ್ದಾರೆ.
ಯುಕೆ ಸಂಸತ್ತಿನ ಒಟ್ಟು 650 ಸ್ಥಾನಗಳಲ್ಲಿ, ಇದುವರೆಗೆ ಬಂದಿರುವ ಫಲಿತಾಂಶಗಳ ಪ್ರಕಾರ, ಲೇಬರ್ ಪಕ್ಷವು 410 ಸ್ಥಾನಗಳನ್ನು ಗೆದ್ದಿದೆ ಮತ್ತು ಕನ್ಸರ್ವೇಟಿವ್ ಪಕ್ಷವು ಕೇವಲ 132 ಸ್ಥಾನಗಳನ್ನು ಗೆದ್ದಿದೆ.
ಸೋಲನ್ನು ಒಪ್ಪಿಕೊಂಡ ಬ್ರಿಟನ್ ಪ್ರಧಾನಿ ರಿಷಿ ಸುನಕ್, ಜನರ ತೀರ್ಪನ್ನು ಒಪ್ಪಿಕೊಳ್ಳುವುದಾಗಿ ಘೋಷಿಸಿದರು. ತಮ್ಮ ಬೆಂಬಲಿಗರನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಸೋಲಿಗೆ ನೈತಿಕ ಹೊಣೆ ಹೊರುತ್ತೇನೆ ಎಂದಿದ್ದಾರೆ.
"ಇಂದು ಅಧಿಕಾರ ಶಾಂತಿಯುತವಾಗಿ ಪ್ರಜಾಸತ್ತಾತ್ಮಕವಾಗಿ ಎಲ್ಲಾ ಕಡೆ ಸದ್ಭಾವನೆಯೊಂದಿಗೆ ವಿನಿಮಯವಾಗುತ್ತಿದೆ. ಅದು ನಮ್ಮ ದೇಶದ ಸ್ಥಿರತೆ. ಇದು ಭವಿಷ್ಯದಲ್ಲಿ ನಮಗೆಲ್ಲರಿಗೂ ವಿಶ್ವಾಸವನ್ನು ನೀಡುವ ವಿಷಯವಾಗಿದೆ. ನನ್ನನ್ನು ಕ್ಷಮಿಸಿ, ಈ ಸೋಲಿಗೆ ನಾನೇ ಜವಾಬ್ದಾರನಾಗಿರುತ್ತೇನೆ ಎಂದು ಅವರು ಹೇಳಿದರು.
ಬ್ರಿಟನ್ನ ಮುಂದಿನ ಪ್ರಧಾನಿಯಾಗಿ ಲೇಬರ್ ಪಕ್ಷದ ನಾಯಕ ಕೀರ್ ಸ್ಟಾರ್ಮೇರ್ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಫಲಿತಾಂಶದ ಕುರಿತು ಮಾತನಾಡಿದ ಅವರು, 'ಇಡೀ ದೇಶ ಬದಲಾವಣೆಗೆ ಸಿದ್ಧವಾಗಿದೆ. ಬದಲಾವಣೆ ಇಲ್ಲಿಂದ ಪ್ರಾರಂಭವಾಗುತ್ತದೆ' ಎಂದರು. ಈ ಬದಲಾವಣೆ ದಶಕದ ಅವಧಿಯ ಜೀವನ ವೆಚ್ಚದ ಬಿಕ್ಕಟ್ಟನ್ನು ನಿವಾರಿಸುತ್ತದೆ ಎಂದು ಅವರು ಭರವಸೆ ನೀಡಿದರು. ಆದರೆ, ಇವುಗಳಿಂದ ಹೊರಬರುವುದು ಅವರು ಭರವಸೆ ನೀಡಿದಷ್ಟು ಸುಲಭವಲ್ಲ.
ಬ್ರಿಟನ್ನಲ್ಲಿ ಕಳೆದ 14 ವರ್ಷಗಳಿಂದ ಆಡಳಿತ ನಡೆಸುತ್ತಿದ್ದ ಕನ್ಸರ್ವೇಟಿವ್ ಪಕ್ಷ ಅಂತ್ಯಗೊಂಡಿದೆ. ಕಳೆದ ಚುನಾವಣೆಯಲ್ಲಿ 348 ಸ್ಥಾನ ಗಳಿಸಿದ್ದ ಪಕ್ಷ ಈ ಬಾರಿ 100ಕ್ಕಿಂತ ಕಡಿಮೆ ಸ್ಥಾನಕ್ಕೆ ಸೀಮಿತವಾಗಿದೆ.
2016 ರಿಂದ, ಐವರು ಪ್ರಧಾನಿಗಳ ಬದಲಾವಣೆ ಮತ್ತು ದೇಶದಲ್ಲಿ ಆರ್ಥಿಕ ಬಿಕ್ಕಟ್ಟು ಉಂಟಾಗಿತ್ತು. ಇದರಿಂದಾಗಿ ಜನರು ತುಂಬಾ ಬೇಸತ್ತಿದ್ದರು. ಇದು ಈ ಚುನಾವಣೆಯಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ. ಅಲ್ಲದೆ, ಆರು ತಿಂಗಳು ಅಧಿಕಾರಾವಧಿ ಇರುವಾಗಲೇ ಚುನಾವಣೆಗೆ ಹೋಗುವುದು ಕೂಡ ಆತುರದ ನಡೆ. ರಿಷಿ ಸುನಕ್ ಅವರ ನಿರ್ಧಾರಕ್ಕೆ ತಮ್ಮದೇ ಪಕ್ಷದ ನಾಯಕರು ಕೂಡ ಬೇಸರ ವ್ಯಕ್ತಪಡಿಸಿದ್ದಾರೆ.
ಅದೇ ಸಮಯದಲ್ಲಿ, ಸಮೀಕ್ಷೆಯಲ್ಲಿ ಕನ್ಸರ್ವೇಟಿವ್ ಪಕ್ಷವು 20 ಅಂಕಗಳಿಂದ ಹಿಂದುಳಿದಿತ್ತು ಎನ್ನುವುದು ಗಮನಾರ್ಹ. ದೇಶವನ್ನು ಆರ್ಥಿಕವಾಗಿ ಸದೃಢಗೊಳಿಸುತ್ತೇವೆ, ಸುಧಾರಣೆಗಳಿಂದ ಬಿಕ್ಕಟ್ಟಿನಿಂದ ಪಾರು ಮಾಡುತ್ತೇವೆ ಎಂದು ಪ್ರಧಾನಿ ಗದ್ದುಗೆ ಏರಿದ ರಿಷಿ ಸುನಕ್ ಅವರು ನೀಡಿದ ಭರವಸೆ ಉಳಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ.
ಎರಡು ವರ್ಷಗಳ ಹಿಂದೆ ಅವರು ಅಧಿಕಾರ ಸ್ವೀಕರಿಸಿದಾಗಿನಿಂದ ಇಂದಿನವರೆಗೂ ದೇಶದ ಪರಿಸ್ಥಿತಿಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸಾರ್ವಜನಿಕರು ಭಾವಿಸಿದ್ದರು. ಇದರ ಜೊತೆಯಲ್ಲಿ ಅವರ ಪತ್ನಿ ಅಕ್ಷರಮೂರ್ತಿಯ ಸಂಪತ್ತು ಗಳಿಕೆಯ ಮೇಲಿನ ಆರೋಪಗಳು ಸುನಕ್ಗೆ ಅವರಿಗೆ ಸಮಸ್ಯೆಯಾದವು. ಈ ವಿಚಾರವಾಗಿ ವಿರೋಧ ಪಕ್ಷಗಳು ಅವರ ವಿರುದ್ಧ ವಾಗ್ದಾಳಿ ನಡೆಸಿದ್ದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....
Latest News
others
health
others
politics
crime
crime
politics
crime
crime
others
economy
economy
travel
health
others
politics
others
health
crime
others
others
politics
others
others
politics
others
crime
others
others
politics