ಮರ್ಯಾದೆಗೆ ಅಂಜಿ ಮಗು ಮಾರಿದ ತಾಯಿ..!
ಮರ್ಯಾದೆಗೆ ಅಂಜಿ ಮಗು ಮಾರಿದ ತಾಯಿ..!

ಹಾವೇರಿ, (ಜುಲೈ.02): ಮಗು ಅಕ್ರಮ ಹಸ್ತಾಂತರ ಹಾಗೂ ಮಾರಾಟಕ್ಕೆ ಸಂಬಂಧಪಟ್ಟಂತೆ ಜಿಲ್ಲೆಯ ಠಾಣೆಯಲ್ಲಿ ದಾಖಲಾದ ಪ್ರಕರಣದ ತನಿಖೆ ನಡೆಸಿರುವ ಪೊಲೀಸರು, ಅಕ್ರಮ ಸಂಬಂಧದಿಂದ ಜನಿಸಿದ್ದ ಮಗುವನ್ನು ಮರ್ಯಾದೆಗೆ ಅಂಜಿ ತಾಯಿಯೇ ಮಾರಿದ್ದರು ಎಂಬುದನ್ನು ಪತ್ತೆ ಮಾಡಿದ್ದಾರೆ.

ದಾವಣಗೆರೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಟಿ.ಎನ್. ಕವಿತಾ ಅವರು ನೀಡಿದ್ದ ದೂರಿನಡಿ ದಾಖಲಾದ ಪ್ರಕರಣದಲ್ಲಿ ಆರೋಪಿಗಳನ್ನು ಠಾಣೆಗೆ ಕರೆಸಿದ್ದ ಪೊಲೀಸರು, ಹೇಳಿಕೆ ಪಡೆದಿದ್ದಾರೆ.

ತಮ್ಮದೇ ಮಗುವನ್ನು ಬೇರೆಯವರ ಮಗುವೆಂದು ಹೇಳಿ ಅಕ್ರಮವಾಗಿ ಹಸ್ತಾಂತರಿಸಿದ್ದ ತಾಯಿಯ ಜೀವನದ ಮಾತುಗಳನ್ನು ಕೇಳಿ ಪೊಲೀಸರೇ ಮರುಗುತ್ತಿದ್ದಾರೆ.

ಹೊರ ಜಿಲ್ಲೆಯ 30 ವರ್ಷ ವಯಸ್ಸಿನ ಮಹಿಳೆ, ಪತಿಯಿಂದ ದೂರವಾಗಿ ಹಾವೇರಿ ಜಿಲ್ಲೆಗೆ ಬಂದು ಮೆಣಸಿನಕಾಯಿ ಸ್ವಚ್ಛಗೊಳಿಸುವ ಕೆಲಸಕ್ಕೆ ಸೇರಿದ್ದರು. ವ್ಯಕ್ತಿಯೊಬ್ಬರ ಜೊತೆ ಸಲುಗೆ ಬೆಳೆದು, ಹೆಣ್ಣು ಮಗು ಜನಿಸಿತ್ತು.

ಪತಿಯಿಂದ ದೂರವಾದ ಮಹಿಳೆಗೆ ಮಗು ಹೇಗೆ ಎಂಬುದು ಸಮಾಜ ಪ್ರಶ್ನಿಸುತ್ತದೆ ಎಂದು ಮರ್ಯಾದೆಗೆ ಅಂಜಿದ್ದ ಮಹಿಳೆ, ಮಗುವನ್ನು ಬೇರೆಯವರಿಗೆ ಅಕ್ರಮವಾಗಿ ಹಸ್ತಾಂತರಿಸಿದ್ದರು.

ಮಾರಾಟದ ಸಂಶಯವಿದ್ದು, ಈ ಬಗ್ಗೆ ಸದ್ಯಕ್ಕೆ ಯಾವುದೇ ಪುರಾವೆ ಸಿಕ್ಕಿಲ್ಲ. ಅದೇ ಮಗುವನ್ನು ಜಿಲ್ಲಾ ರಕ್ಷಣಾಧಿಕಾರಿಗಳು ರಕ್ಷಣೆ ಮಾಡಿ, ಪುನರ್ವಸತಿ ಕಲ್ಪಿಸಿದ್ದಾರೆ. ಮಗು ಆರೋಗ್ಯವಾಗಿದೆ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....

Latest News

HL

health

HL

others

HL

politics

HL

crime

HL

crime

HL

politics

HL

crime

HL

crime

HL

others

HL

economy

HL

economy

HL

travel

HL

health

HL

others

HL

politics

HL

others

HL

health

HL

crime

HL

others

HL

others

HL

politics

HL

others

HL

others

HL

politics

HL

others

HL

crime

HL

others

HL

others

HL

politics

HL

politics