ಬೇರೆ ಮನೆ ಮಾಡಲು ಸೊಸೆಯ ಬೇಡಿಕೆ: ಅತ್ತೆ-ಮಾವ ಆತ್ಮಹತ್ಯೆ..!
ಬೇರೆ ಮನೆ ಮಾಡಲು ಸೊಸೆಯ ಬೇಡಿಕೆ: ಅತ್ತೆ-ಮಾವ ಆತ್ಮಹತ್ಯೆ..!

ಬೆಂಗಳೂರು, (ಜುಲೈ.03): ಕೌಟುಂಬಿಕ ಕಲಹದಿಂದ ಸೊಸೆಯೊಂದಿಗೆ ಮನಸ್ತಾಪ ಮಾಡಿಕೊಂಡಿದ್ದ ಅತ್ತೆ-ಮಾವ ಹಳೇ ಬೈಯಪ್ಪನಹಳ್ಳಿಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ಬೈಯಪ್ಪನಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಳೇ ಬೈಯಪ್ಪನಹಳ್ಳಿ ನಿವಾಸಿಗಳಾದ ಚಂದ್ರಶೇಖರ್ (54 ವರ್ಷ) ಮತ್ತು ಅವರ ಪತ್ನಿ ಶಾರದಮ್ಮ (46 ವರ್ಷ) ಆತ್ಮಹತ್ಯೆ ಮಾಡಿಕೊಂಡವರು. ಸೋಮವಾರ ಸಂಜೆ ಅವರು ಆತ್ಮಹತ್ಯೆ ಮಾಡಿಕೊಂಡಿದ್ದು, ಅಂದೇ ರಾತ್ರಿ ಕಿರಿಯ ಮಗ ಮನೆಗೆ ಬಂದಾಗ ವಿಷಯ ಬಹಿರಂಗವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಚಂದ್ರಶೇಖ‌ರ್ ಹಾಗೂ ಶಾರದಮ್ಮ ಅವರು ತಮ್ಮ ಹಿರಿಯ ಮಗ ಪ್ರಶಾಂತ್ ಹಾಗೂ ಕಿರಿಯ ಮಗನ ಜತೆ ನೆಲೆಸಿದ್ದರು. ಪ್ರಶಾಂತ್ ಕೆಲಸಕ್ಕೆ ಹೋಗುತ್ತಿರಲಿಲ್ಲ. ಕಿರಿಯ ಮಗ ಎಸ್ಸೆಸ್ಸೆಲ್ಸಿ ವ್ಯಾಸಂಗ ಮಾಡುತ್ತಿದ್ದಾರೆ. ಕೆಲವು ತಿಂಗಳ ಹಿಂದಷ್ಟೇ ಪ್ರಶಾಂತ್ ಅವರಿಗೆ ಮದುವೆ ಮಾಡಲಾಗಿತ್ತು. ಕೌಟುಂಬಿಕ ವಿಚಾರಕ್ಕೆ ಅತ್ತೆ-ಮಾವ ಹಾಗೂ ಸೊಸೆ ಮಧ್ಯೆ ಗಲಾಟೆ ನಡೆಯುತ್ತಿತ್ತು ಎನ್ನಲಾಗಿದೆ.

ಪ್ರಶಾಂತ್ ಮದ್ಯವ್ಯಸನಿ ಆಗಿದ್ದರು. ಅದರಿಂದ ಬೇಸರಗೊಂಡಿದ್ದ ಸೊಸೆ, ಮನೆಬಿಟ್ಟು ತವರುಮನೆ ಸೇರಿದ್ದರು. ಈ ಮಧ್ಯೆ ರಾಜಿ ಸಂಧಾನ ನಡೆಸಲಾಗಿತ್ತು. ಅವರು ಮನೆಗೆ ಬರಲು ಒಪ್ಪಿರಲಿಲ್ಲ. 

ಪತಿ ಬೇರೆ ಮನೆ ಮಾಡಿದರೆ ಮಾತ್ರ ಬರುವುದಾಗಿ ಷರತ್ತು ಹಾಕಿದ್ದರು. ಇದಕ್ಕೆ ಚಂದ್ರಶೇಖ‌ರ್ ಒಪ್ಪಿರಲಿಲ್ಲ. ಸೊಸೆ ಮನೆಗೆ ವಾಪಸ್ ಆಗದಿದ್ದರಿಂದ ಬೇಸರಗೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....

Latest News

HL

others

HL

politics

HL

economy

HL

politics

HL

art

HL

politics

HL

politics

HL

crime

HL

health

HL

crime

HL

others

HL

crime

HL

others

HL

others

HL

others

HL

sports

HL

others

HL

others

HL

others

HL

crime

HL

others

HL

politics

HL

politics

HL

sports

HL

politics

HL

crime

HL

health

HL

politics

HL

politics

HL

education