ಸದನದಲ್ಲಿ ರಾಹುಲ್ ವಾಗ್ದಾಳಿಗೆ ಬಿಜೆಪಿ ತತ್ತರ; ಕಾಂಗ್ರೆಸ್ ಕಚೇರಿಗೆ ಕಲ್ಲು..!
ಸದನದಲ್ಲಿ ರಾಹುಲ್ ವಾಗ್ದಾಳಿಗೆ ಬಿಜೆಪಿ ತತ್ತರ; ಕಾಂಗ್ರೆಸ್ ಕಚೇರಿಗೆ ಕಲ್ಲು..!

ದೆಹಲಿ, (ಜುಲೈ.02); 18ನೇ ಲೋಕಸಭೆಯ ಪ್ರತಿಪಕ್ಷ ನಾಯಕನಾಗಿ ಆಯ್ಕೆಯಾದ ಬಳಿಕ ಸೋಮವಾರ ಸದನದಲ್ಲಿ ಸುದೀರ್ಘವಾಗಿ ಮಾತನಾಡಿದ ರಾಹುಲ್ ಗಾಂಧಿ, ಸರಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು. 

ರಾಹುಲ್ ಅವರ ಹಿಂದೂ ಎಂದುಕೊಳ್ಳುವವರು ನಡೆಸುವ ಹಿಂಸಾಚಾರ ಹೇಳಿಕೆ, ಈಶ್ವರನ ಫೋಟೋ ಪ್ರದರ್ಶನ, ನೀಟ್ ಚರ್ಚೆ ಇವೆಲ್ಲವೂ ಭಾರೀ ಗದ್ದಲವನ್ನೇ ಸೃಷ್ಟಿಸಿತ್ತು. 

ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ವಿರುದ್ಧ ವಾಕ್ಸಮರಕ್ಕೆ ಸಜ್ಜಾಗಿಯೇ ಬಂದಿದ್ದ ರಾಹುಲ್ ಗಾಂಧಿ, ಹಲವು ವಿಚಾರಗಳನ್ನು ಪ್ರಸ್ತಾಪಿಸಿ ಆಡಳಿತ ಪಕ್ಷವನ್ನು ತಬ್ಬಿಬ್ಬು ಗೊಳಿಸಿದರು. ನೀಟ್ ಕುರಿತ ಪ್ರಸ್ತಾಪ ಕೋಲಾ ಹಲಕ್ಕೆ ಕಾರಣವಾಗಿ ದಿನದ ಮಟ್ಟಿಗೆ ಸದನವನ್ನು ಮುಂದೂಡಲಾಯಿತು.

ಹಿಂದೆ ಚುನಾವಣೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾಧ್ಯಮ ಸಂದರ್ಶನದಲ್ಲಿ ಮಾತನಾಡುತ್ತಾ ತಾವು ದೇವರ ಇಚ್ಛೆಯ ಮೇರೆಗೆ ಭೂಮಿಗೆ ಬಂದಿರುವುದಾಗಿ ಹೇಳಿ ಸುದ್ದಿಯಾಗಿದ್ದರು. ಇದೇ ವಿಚಾರವನ್ನು ಪ್ರಸ್ತಾಪಿಸಿದ ರಾಹುಲ್, "ಮೋದಿ ಸಾಮಾನ್ಯ ವ್ಯಕ್ತಿಯಲ್ಲ. ದೇವರ ಆದೇಶದ ಮೇರೆಗೆ ಕೆಲಸ ಮಾಡುವವರು. ಅವರ ಆತ್ಮದ ಜತೆ ಪರಮಾತ್ಮ ಸಂವಹನ ನಡೆಸುತ್ತಾನೆ. ಪರಮಾತ್ಮನ ಸೂಚ ನೆಯ ಮೇರೆಗೆ ಅವರು ನೋಟು ಅಮಾನೀಕರ ಣದಂತಹ ಮಹತ್ವದ ನಿರ್ಧಾರವನ್ನು ದಿಢೀ‌ರ್ ಅಂತ ಘೋಷಿಸುತ್ತಾರೆ. ದೇವರ ಆದೇಶದ ಮೇರೆಗೆ ಬಡವರ ಬದಲಿಗೆ ಅಂಬಾನಿ, ಅದಾನಿಯಂತಹ ಉದ್ಯಮಿಗಳ ಏಳಿಗೆಗೆ ಶ್ರಮಿಸುತ್ತಿದ್ದಾರೆ'' ಎಂದು ಕುಟುಕಿದರು.

ರಾಹುಲ್ ಗಾಂಧಿ ಮಾತಿನ ಪ್ರಮುಖ ಅಸ್ತ್ರಗಳು ಈ ರೀತಿಯಲ್ಲಿವೆ:

ಹಿಂದೂಗಳಲ್ಲಿ ಕೆಲವರು ಸಮಾಜ ದಲ್ಲಿ ಹಿಂಸಾಚಾರ, ದ್ವೇಷ ಹರಡುವ ಗುತ್ತಿಗೆ ತೆಗೆದುಕೊಂಡಿದ್ದಾರೆ. 

ಹಿಂದೂ ಧರ್ಮ, ಮಹಾಪುರುಷರು, ತ್ರಿಶೂಲ ಹಿಡಿದಿರುವ ಮಹಾಶಿವನೂ ಅಹಿಂಸೆಯನ್ನೇ ಹೇಳುತ್ತಾನೆ. ಆದರೆ ದಿನದ 24 ಗಂಟೆ ಹಿಂದೂಗಳೆಂದು ಹೇಳುತ್ತಾ ತಿರುಗಾಡುವವರು ಹಿಂಸೆ, ಶತ್ರುತ್ವ ಪ್ರಚೋದಿಸುತ್ತಾರೆ.

ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ, ಆರ್‌ಎಸ್‌ಎಸ್ ಸಂಘ ಮಾತ್ರವೇ ಹಿಂದೂ ಸಮುದಾಯವಲ್ಲ.

'ನೀಟ್' ಪರೀಕ್ಷಾ ಕ್ರಮವೇ ಸರಿಯಿಲ್ಲ: ಸಿರಿವಂತರ ಮಕ್ಕಳಿಗಾಗಿ ರೂಪಿಸಿದ ವ್ಯಾಪಾರಿ ಪದ್ಧತಿಯಂತೆ.

అಗ್ನಿವೀರ್ ಯೋಜನೆ ಋಣಾತ್ಮಕ; ಯುವಕರನ್ನು ಬಳಸಿಕೊಂಡು ಎಸೆಯುವ ರೀತಿಯ ಯೋಜನೆ.

ಮೋದಿ ಸಾಮಾನ್ಯರಲ್ಲ, ದೇವರ ಆದೇಶದಂತೆ ಕೆಲಸ ಮಾಡುವವರು. ಆತ್ಮ, ಪರಮಾತ್ಮನ ಜೊತೆ ಸಂವಹನೆ ನಡೆಸುತ್ತಾರೆ. ಪರಮಾತ್ಮನ ಸೂಚನೆ ಮೇರೆಗೆ ಮೋದಿ ನೋಟು ಅಮಾನೀಕರಣದಂತಹ ಮಹತ್ವದ ನಿರ್ಧಾರ ಪ್ರಕಟಿಸುತ್ತಾರೆ.

ಪ್ರಧಾನಿ ಮೋದಿ ಆದೇಶದ ಮೇರೆಗೆ ನನ್ನ ಮೇಲೆ ದಾಳಿ ನಡೆದಿದೆ. ನನ್ನ ವಿರುದ್ದ 20ಕ್ಕೂ ಹೆಚ್ಚು ಪ್ರಕರಣ ದಾಖಲಾಗಿವೆ.

ಮೋದಿ ಸೂಚನೆ ಮೇರೆಗೇ ಸಂಸದನಾಗಿದ್ದ ನನಗೆ ನೀಡಿದ್ದ ಮನೆ ಕಿತ್ತುಕೊಳ್ಳಲಾಯಿತು. ಇ.ಡಿ 55 ಗಂಟೆ ವಿಚಾರಣೆ ನಡೆಸಿತು.

ಅಯೋಧ್ಯೆಯಲ್ಲಿ ರಾಮ ಮಂದಿರದ ಉದ್ಘಾಟನೆಯ ದಿನ ಅದಾನಿ, ಅಂಬಾನಿಯವರನ್ನು ಆಮಂತ್ರಿಸಲಾಗಿತ್ತು. ಆದರೆ, ಅಲ್ಲಿನ ಸ್ಥಳೀಯ ಜನರನ್ನು ದೂರ ವಿಡಲಾಗಿತ್ತು. ಆದರೆ, ಲೋಕ ಸಭಾ ಚುನಾವಣೆಯಲ್ಲಿ ಅಲ್ಲಿನ ಮತದಾರರು ಬಿಜೆಪಿಗೆ ಸೂಕ್ತ ಪಾಠ ಕಲಿಸಿದ್ದಾರೆ ಎಂದು ರಾಹುಲ್‌ ವಾಗ್ದಾಳಿ ನಡೆಸಿದರು.

ಈ ವಾಗ್ದಾಳಿ ಬಿಜೆಪಿ ವಲಯದಲ್ಲಿ ಬಿರುಗಾಳಿ ತನ್ನ ಸೃಷ್ಟಿಸಿದ್ದು, ಸ್ವತಃ ಪ್ರಧಾನಿ ಅವರೇ ರಾಹುಲ್ ಭಾಷಣವನ್ನು ತಿರುಚಲು ಪ್ರಯತ್ನಿಸಿ ಮುಖಭಂಗಕ್ಕೀಡಾದರು. ಅಮಿತ್ ಶಾ. ರಾಜ್ ನಾಥ್ ಸಿಂಗ್ ಸೇರಿದಂತೆ ಅನೇಕರು ರಾಹುಲ್ ಭಾಷಣದ ವೇಳೆ ಆಕ್ಷೇಪ ವ್ಯಕ್ತಪಡಿಸಿದರು.

ಇದರ ಬೆನ್ನಲ್ಲೆ ಪ್ರತಿಪಕ್ಷ ನಾಯಕ ಹಾಗೂ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹಿಂದುಗಳ ವಿರುದ್ಧ ನೀಡಿದ ಹೇಳಿಕೆ ಖಂಡಿಸಿ ಹಿಂದೂಪರ ಸಂಘಟನೆಗಳ ಹೆಸರು ದುರ್ಬಳಕೆ ಮಾಡಿಕೊಂಡ ಬಿಜೆಪಿಯ ಕೆಲ ಕಾರ್ಯಕರ್ತರು ಗುಜರಾತ್ ರಾಜಧಾನಿ ಅಹಮದಾಬಾದ್ ನ ಕಾಂಗ್ರೆಸ್ ಕಚೇರಿಯ ಮೇಲೆ ಕಲ್ಲುತೂರಾಟ ನಡೆಸಿದ್ದಾರೆ.

ಸೋಮವಾರ ರಾತ್ರಿ ಭಜರಂಗದಳ, ವಿಶ್ವ ಹಿಂದೂ ಪರಿಷತ್ ಮತ್ತು ಬಿಜೆಪಿ ಕಾರ್ಯಕರ್ತರ ಹೆಸರಲ್ಲಿ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಕಚೇರಿಯ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ ಎಂದು ಕಾಂಗ್ರೆಸ್ ವಕ್ತಾರ ಹೆಮಾಂಗ್ ರಾವಲ್ ಆರೋಪಿಸಿದ್ದಾರೆ.

ಅಹಮದಾಬಾದ್ ಪೊಲೀಸರು ಕಲ್ಲು ತೂರಾಟ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಆದರೆ ಇದುವರೆಗೆ ಯಾರನ್ನೂ ಬಂಧಿಸಲಾಗಿಲ್ಲ.

ಮತ್ತೊಂದೆಡೆ  ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಬಿಜೆಪಿ ಹಾಗೂ ಆರ್​ಎಸ್​ಎಸ್​ ಬಗ್ಗೆ ಮಾತುಗಳನ್ನಾಡಿರುವ ಕಾರಣ ಅವರ ಭಾಷಣವನ್ನು ಕಲಾಪದಿಂದ ತೆಗೆಯುವಂತೆ ಸ್ಪೀಕರ್ ಓಂ ಬಿರ್ಲಾ ಸೂಚನೆ ನೀಡಿದ್ದಾರೆ. ಲೋಕಸಭೆ ಸಚಿವಾಲಯದ ಪತ್ರಿಕಾ ಮತ್ತು ಸಾರ್ವಜನಿಕ ಸಂಪರ್ಕ ಶಾಖೆಯ ಜಂಟಿ ನಿರ್ದೇಶಕ ಬೈಕುಂಠನಾಥ ಮಹಾಪಾತ್ರ ಅವರು ಪತ್ರವೊಂದನ್ನು ಹೊರಡಿಸಿ ಈ ಕುರಿತು ಮಾಹಿತಿ ನೀಡಿದ್ದಾರೆ.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....

Latest News

HL

politics

HL

others

HL

politics

HL

economy

HL

politics

HL

art

HL

politics

HL

politics

HL

crime

HL

health

HL

crime

HL

others

HL

crime

HL

others

HL

others

HL

others

HL

sports

HL

others

HL

others

HL

others

HL

crime

HL

others

HL

politics

HL

politics

HL

sports

HL

politics

HL

crime

HL

health

HL

politics

HL

politics