ಹರಿತಲೇಖನಿ ದಿನಕ್ಕೊಂದು ಕಥೆ: ಪಂಚಕನ್ಯೆಯರಲ್ಲಿ ದ್ರೌಪದಿ..!!
ಹರಿತಲೇಖನಿ ದಿನಕ್ಕೊಂದು ಕಥೆ: ಪಂಚಕನ್ಯೆಯರಲ್ಲಿ ದ್ರೌಪದಿ..!!

ಹಿಂದೂ ಧರ್ಮದ ಶ್ರೇಷ್ಠ ಮಹಾಕಾವ್ಯ ಮಹಾಭಾರತ. ಕೌರವ ಮತ್ತು ಪಾಂಡವರ ನಡುವೆ ನಡೆದ ಕುರುಕ್ಷೇತ್ರ ಯುದ್ಧದ ಫಲಿತಾಂಶವನ್ನು ಇದು ವಿಸ್ತಾರವಾಗಿ ವಿವರಿಸುತ್ತದೆ. ಮಹಾಭಾರತದಲ್ಲಿ ನಾವು ಕೇಳುವ ಕೆಲವು ಪಾತ್ರಗಳು ಇಂದಿಗೂ ನಿಗೂಢ.

ಅಂತಹ ಪಾತ್ರಗಳಲ್ಲಿ ಒಂದು ದ್ರೌಪದಿಯ ಪಾತ್ರ. ಮಹಾಭಾರತದ ವೀರ ರಾಜಕುಮಾರಿ ದ್ರೌಪದಿ ಪಾಂಚಾಲ ರಾಜ ದ್ರುಪದನ ಮಗಳು, ಈಕೆಗೆ 5 ಜನಸಹೋದರರು, 5 ಜನ ಪತಿಯಂದಿರು ಮತ್ತು 5 ಜನ ಮಕ್ಕಳು.

5 ಕನ್ಯೆಯರು ಎಂದು ಕರೆಯಲ್ಪಡುವ ಪಂಚಕನ್ಯೆಯರಲ್ಲಿ ದ್ರೌಪದಿ ಕೂಡ ಒಬ್ಬಳಾಗಿದ್ದಾಳೆ. ಅವಳು ಪ್ರತಿ ಜನ್ಮದ ಅಂತ್ಯದಲ್ಲೂ ಅಗ್ನಿ ಪ್ರವೇಶವನ್ನು ಮಾಡಿದವಳು. ಅಗ್ನಿಯನ್ನು ಪ್ರವೇಶಿಸುವ ಮೂಲಕ ಜೀವನಕ್ಕೆ ಅಂತ್ಯವನ್ನು ಹಾಡಿದವಳು. 

ಪಾಂಡವರಿಗೆ ದ್ರೌಪದಿಯನ್ನು ಹೊರತುಪಡಿಸಿ, ಬೇರೆ ಪತ್ನಿಯರು ಇದ್ದರು. ಆದರೆ ಅವರು ಪಾಂಡವರೊಂದಿಗೆ ಇರುತ್ತಿರಲಿಲ್ಲ. ತಮ್ಮ ಹೆತ್ತವರೊಂದಿಗೆ ಇರುತ್ತಿದ್ದರು. 4 ವರ್ಷಗಳಿಗೊಮ್ಮೆ ಪಾಂಡವರು ತಮ್ಮ ಪತ್ನಿಯನ್ನು ಭೇಟಿಯಾಗಲು ಹೋಗುತ್ತಿದ್ದರು. ದ್ರೌಪದಿಗೆ ಎಷ್ಟೇ ವಯಸ್ಸಾದರೂ ಕೂಡ ಆಕೆ ಕನ್ಯೆಯಂತೆಯೇ ಇರುತ್ತಿದ್ದಳು.

ಮಹಾಭಾರತದ ಪ್ರಮುಖ ಪಾತ್ರಗಳಲ್ಲಿ ಒಂದಾದ ದ್ರೌಪದಿಯು ಅನೇಕ ಹೆಸರುಗಳನ್ನು ಹೊಂದಿದ್ದಾಳೆ. ಅವಳಿಗಿರುವ ಪ್ರತಿಯೊಂದು ಹೆಸರು ಆಕೆಯ ಗುಣವನ್ನು ವಿವರಿಸುತ್ತದೆ.

ದ್ರೌಪದಿ - ದ್ರುಪದ ರಾಜನ ಮಗಳು

ಪಾಂಚಾಲಿ - ಪಾಂಚಾಲ ರಾಜ್ಯದ ರಾಜಕುಮಾರಿ

ಯಜ್ಞಸೇನಿ - ಯಜ್ಞದ ಬೆಂಕಿಯಿಂದ ಜನಿಸಿದವಳು

ಸೈರಂಧ್ರಿ - ಪರಿಣಿತ ಸೇವಕಿ

ನಿತ್ಯಾಯುವಾಣಿ - ಎಂದಿಗೂ ವಯಸ್ಸಾಗದ ಶಕ್ತಿಯನ್ನು ಹೊಂದಿದವಳು

ಮಾಲಿನಿ - ಹೂಮಾಲೆ ಕಟ್ಟುವವಳು

ಕೃಷ್ಣೆ - ಅವಳ ಕಪ್ಪು ಮೈಬಣ್ಣದ ಸಂಕೇತ

ಸೇಡಿನಿಂದ ಜನಿಸಿದವಳು ದ್ರೌಪದಿಯೆಂದು ಹೇಳಲಾಗುತ್ತದೆ. ಪಾಂಚಾಲ ರಾಜ್ಯದ ರಾಜನಾದ ದ್ರುಪದನನ್ನು ದ್ರೋಣರ ಪರವಾಗಿ ಅರ್ಜುನನು ಸೋಲಿಸಿ ಆತನಿಂದ ಅರ್ಧ ರಾಜ್ಯವನ್ನು ಪಡೆದುಕೊಳ್ಳುತ್ತಾನೆ. 

ಇದರಿಂದ ಕೋಪಗೊಂಡ ದ್ರುಪದನು ಅರ್ಜುನನಿಗಿಂತ ತಾನು ಶಕ್ತಿಶಾಲಿಯಾಗಬೇಕೆಂದು ಯಜ್ಞವನ್ನು ಮಾಡುತ್ತಾನೆ. ಆ ಯಜ್ಞದಲ್ಲಿ ಜನಿಸಿದ ಮಗುವೇ ಈ ದ್ರೌಪದಿ. ದ್ರೌಪದಿ ಕಪ್ಪು ಮೈಬಣ್ಣದೊಂದಿಗೆ ಯಜ್ಞದಿಂದ ಹೊರಬರುತ್ತಾಳೆ. ದ್ರುಪದನ ಮಗ ಧೃಷ್ಟದ್ಯುಮ್ನನ ನಂತರ ದ್ರೌಪದಿಯು ದ್ರುಪದನಿಗೆ ಸಿಗುತ್ತಾಳೆ. 

ಈಕೆ ಯಜ್ಞದಿಂದ ಹೊರಹೊಮ್ಮುವಾಗ ಮುಂದೆ ಭವಿಷ್ಯದಲ್ಲಿ ದೊಡ್ಡ ಬದಲಾವಣೆಯನ್ನೇ ತರುತ್ತಾಳೆಂದು ಸ್ವರ್ಗೀಯ ಧ್ವನಿ ಹೇಳುತ್ತದೆ. ದ್ರೌಪದಿಯು ಯಜ್ಞದಿಂದ ಬಂದ ಅನಗತ್ಯ ಮಗುವಾಗಿದ್ದು, ಈಕೆಯ ತಂದೆ - ತಾಯಿ ಯಾರೆಂಬುದು ತಿಳಿದಿಲ್ಲ. ಈಕೆ ವಯಸ್ಕ ಹುಡುಗಿಯಂತೇ ಅಗ್ನಿಯಿಂದ ಹೊರಹೊಮ್ಮಿದವಳೇ ಹೊರತು, ಶಿಶುವಿನಂತಲ್ಲ.

ದ್ರೌಪದಿ ಅತ್ಯಂತ ಧೈರ್ಯಶಾಲಿ ಮತ್ತು ಕಪ್ಪಾಗಿದ್ದರೂ ಅಸಾಧಾರಣ ಸುಂದರಿಯಾಗಿದ್ದಳು. ರಾಜ ದ್ರುಪದ ತನ್ನ ಮಗಳಿಗೆ ವಿವಾಹ ಮಾಡಲು ಸ್ವಯಂವರವನ್ನು ಏರ್ಪಡಿಸುತ್ತಾನೆ. ಸ್ವಯಂವರದಲ್ಲಿ ಪಾಂಡವ ರಾಜಕುಮಾರ ಅರ್ಜುನನೂ ಇದ್ದನು. 

ತನ್ನ ಸಹೋದರರಾದ ಯುಧಿಷ್ಠಿರ ಮತ್ತು ಭೀಮನೊಂದಿಗೆ ಬ್ರಾಹ್ಮಣ ವೇಷವನ್ನು ಧರಿಸಿ ಸ್ವಯಂವರದಲ್ಲಿ ಹಾಜರಿದ್ದರು. ರಾಜ ದ್ರುಪದ ಸ್ವಯಂವರಕ್ಕೆ ಆಗಮಿಸಿದ್ದ ರಾಜರುಗಳಿಗೆ ಷರತ್ತನ್ನು ನೀಡುತ್ತಾನೆ. ಅದೇನೆಂದರೆ ನೀರಿನಲ್ಲಿ ಮೀನಿನ ಪ್ರತಿಬಿಂಬವನ್ನು ಕಂಡು, ಚಲಿಸುವ ಮೀನಿನ ಕಣ್ಣಿಗೆ ಬಾಣವನ್ನು ಹೊಡೆಯಬೇಕಿತ್ತು.

ಈ ಕಲೆ ಕಣ್ಣನನ್ನು ಹೊರತುಪಡಿಸಿ ಅರ್ಜುನನಿಗೆ ಮಾತ್ರ ತಿಳಿದಿತ್ತು. ದ್ರೌಪದಿ ಈಗಾಗಲೇ ಕರ್ಣ ರಥ ಓಡಿಸುವವನ ಮಗನೆಂದು ನಿರಾಕರಿಸಿದ್ದಳು. ಆದ್ದರಿಂದ ಸ್ವಯಂವರದಲ್ಲಿ ಅರ್ಜುನನು ಗೆದ್ದು ದ್ರೌಪದಿಯನ್ನು ವಿವಾಹವಾಗುತ್ತಾನೆ. ನಂತರ ದ್ರೌಪದಿಯನ್ನು ಕರೆದುಕೊಂಡು ಅರ್ಜುನ, ಯುಧಿಷ್ಠಿರ ಮತ್ತು ಭೀಮನು ಕುಂತಿಯಿದ್ದ ಸ್ಥಳಕ್ಕೆ ಬರುತ್ತಾರೆ.

ಅರ್ಜುನ ಕುಂತಿಗೆ ತಾಯಿ ನಿಮಗೊಂದು ಭಿಕ್ಷೆಯನ್ನು ತಂದಿದ್ದೇನೆಂದು ಹೇಳುತ್ತಾನೆ. ಆಗ ಕುಂತಿ ಅದೇನೆಂಬೂದನ್ನು ನೋಡದೇ ಆ ವಸ್ತುವನ್ನು ನೀವು 5 ಜನ ಸಹೋದರರು ಸಮನಾಗಿ ಹಂಚಿಕೊಳ್ಳಿ ಎನ್ನುತ್ತಾಳೆ. ಆಗ ಪಾಂಡವರು ತಾಯಿಯ ಮಾತನ್ನು ದಿಕ್ಕರಿಸದೇ ದ್ರೌಪದಿಯನ್ನು ವಿವಾಹವಾಗುತ್ತಾರೆ.

ದ್ರೌಪದಿಗೆ 5 ಮದುವೆಯಾಗುವುದು ಆಕೆಯ ಹಣೆಬರಹವಾಗಿತ್ತೇ ಹೊರತು ಕುಂತಿಯ ತಪ್ಪಾಗಿರಲಿಲ್ಲ. ದ್ರೌಪದಿ ತಾನು 5 ಜನ ಪಾಂಡವರನ್ನು ವಿವಾಹವಾಗುವ ಮುನ್ನ ಒಂದು ಷರತ್ತನ್ನು ನೀಡುತ್ತಾಳೆ. 

ಅದೇನೆಂದರೆ ಪಾಂಡವರು ಇಂದ್ರಪ್ರಸ್ಥಕ್ಕೆ ಇತರೆ ಪತ್ನಿಯರನ್ನು ತರಲು ಹಕ್ಕಿಲ್ಲ, ನೀವು 5 ಜನ ಪಾಂಡವ ಸಹೋದರರು ನನ್ನನ್ನು ಹೊರತು ಪಡಿಸಿ ಬೇರಾವುದೇ ಮಹಿಳೆಯನ್ನು ಇಷ್ಟಪಡುವಂತಿಲ್ಲವೆಂದು ಹಾಗೂ ತನ್ನ ಕೋಣೆಗೆ ಬರುವಾಗ ಕೇವಲ ಒಬ್ಬರು ಮಾತ್ರ ಬರಬೇಕೆಂದು ಷರತ್ತನ್ನು ನೀಡಿದಳು.

ತನ್ನಿಂದಲೇ ತನ್ನ ಮಕ್ಕಳ ಬಾಳು ಹಾಳಾಯಿತೆಂದು ಕುಂತಿ ಚಿಂತೆಗೆ ಒಳಗಾಗುತ್ತಾಳೆ. ಆಗ ಕೃಷ್ಣನು ಪ್ರತ್ಯಕ್ಷನಾಗಿ ಆಕೆಗೆ ಸಮಾಧಾನ ಮಾಡುತ್ತಾನೆ. ಕೃಷ್ಣನು ದ್ರೌಪದಿಯು ಹಿಂದಿನ ಜನ್ಮದಲ್ಲಿ ಪಡೆದ ಶಿವನಿಂದ ಪಡೆದ ವರದ ಬಗ್ಗೆ ತಿಳಿಸುತ್ತಾನೆ.

ದ್ರೌಪದಿ ತನ್ನ ಹಿಂದಿನ ಜನ್ಮದಲ್ಲಿ ಶಿವನನ್ನು ಕಠಿಣವಾಗಿ ಧ್ಯಾನಿಸಿ, ಆತನಲ್ಲಿ ತನಗೆ ಸದಾಚಾರ, ಅತ್ಯುತ್ತಮ ಬಿಲ್ಲುಗಾರ, ಅತ್ಯಂತ ಶಕ್ತಿಶಾಲಿ, ಸುಂದರ ಮತ್ತು ತಾಳ್ಮೆಯುಳ್ಳ ಪತಿಯನ್ನು ಕರುಣಿಸು ಎಂದು ವರವನ್ನು ಬೇಡಿದ್ದಳು. ಆದರೆ ಶಿವನು ಈ ಎಲ್ಲಾ ಗುಣಗಳನ್ನು ಒಬ್ಬನಲ್ಲಿ ಕಾಣಲು ಸಾಧ್ಯವಿಲ್ಲ. ಬದಲಾಗಿ, ನಿನಗೆ ಈ 5 ಗುಣವುಳ್ಳ 5 ಗಂಡಂದಿರು ಸಿಗಲೆಂದು ಆಶೀರ್ವಾದಿಸಿದ್ದಾನೆ. ಅದರ ಫಲವೇ ಹೀಗೆಲ್ಲಾ ಆಗಲು ಕಾರಣವೆಂದು ಕುಂತಿಗೆ ತಿಳಿ ಹೇಳುತ್ತಾನೆ.

ಒಂದು ದಿನ ಯುಧಿಷ್ಠಿರನು ದ್ರೌಪದಿಯ ಕೋಣೆಯ ಹೊರಗೆ ತನ್ನ ಪಾದರಕ್ಷೆಯನ್ನು ಬಿಟ್ಟು ದ್ರೌಪದಿಯ ಕೋಣೆಗೆ ಹೋಗುತ್ತಾನೆ. ಆಗ ನಾಯಿಯೊಂದು ದ್ರೌಪದಿಯ ಕೋಣೆಯ ಹೊರಗಿದ್ದ ಯುಧಿಷ್ಠಿರನ ಪಾದುಕೆಗಳನ್ನು ಕಚ್ಚಿಕೊಂಡು ಹೋಗುತ್ತದೆ. ಅದೇ ಸಮಯಕ್ಕೆ ಸರಿಯಾಗಿ ಅರ್ಜುನನು ಕೂಡ ದ್ರೌಪದಿಯನ್ನು ನೋಡಲು ಬರುತ್ತಾನೆ. 

ದ್ರೌಪದಿಯ ಕೋಣೆಯ ಹೊರಗೆ ಯಾವುದೇ ಪಾದರಕ್ಷೆಗಳು ಇಲ್ಲದಿರುವುದನ್ನು ಕಂಡು ಕೋಣೆಯಲ್ಲಿ ಯಾರು ಇಲ್ಲವೆಂದು ತಪ್ಪಾಗಿ ಭಾವಿಸಿ ಕೋಣೆಯನ್ನು ಪ್ರವೇಶಿಸುತ್ತಾನೆ. ಇದರಿಂದ ಮುಜುಗರಕ್ಕೊಳಗಾದ ದ್ರೌಪದಿಯು ಶ್ವಾನ ಕುಲವನ್ನು ಕುರಿತು ನೀವು ಸಾರ್ವಜನಿಕ ಸ್ಥಳದಲ್ಲೇ ದೈಹಿಕ ಸಂಪರ್ಕ ಹೊಂದುವಂತಾಗಲಿ. ಇದರಿಂದ ಇಡೀ ಸಮಾಜವೇ ನಿಮ್ಮನ್ನು ಧೂಷಿಸಬೇಕೆಂದು ಶಾಪವನ್ನು ನೀಡುತ್ತಾಳೆ.

ದಕ್ಷಿಣ ಭಾರತದಲ್ಲಿ ದ್ರೌಪದಿಯನ್ನು ಕಾಳಿಯ ಅವತಾರವೆಂದು ನಂಬುತ್ತಾರೆ. ಎಲ್ಲಾ ದುಷ್ಟ ರಾಜರನ್ನು ಸಂಹರಿಸಲು ಅವಳು ಕೃಷ್ಣನಿಗೆ ಸಹಾಯ ನೀಡಲೆಂದೇ ಜನಿಸಿದವಳು. ಆದ್ದರಿಂದ ಅವರಿಬ್ಬರನ್ನು ಸಹೋದರ - ಸಹೋದರಿಯೆಂದು ಪರಿಗಣಿಸಲಾಗುತ್ತದೆ.

ಶ್ರೀಕೃಷ್ಣನ ಮರಣದ ನಂತರ, ಪಾಂಡವರು ಮತ್ತು ದ್ರೌಪದಿ ಪ್ರಪಂಚದ ಮೇಲಿನ ಆಸಕ್ತಿಯನ್ನು ಕಳೆದುಕೊಳ್ಳುತ್ತಾರೆ. ಆಗ ಪಾಂಡವರು ಮತ್ತು ದ್ರೌಪದಿ ಸ್ವರ್ಗವನ್ನು ಸೇರಲು ನಾಯಿಯೊಂದಿಗೆ ಸ್ವರ್ಗದತ್ತ ಪ್ರಯಾಣಿಸುತ್ತಾರೆ. ಹಿಮಾಲಯದತ್ತ ಪ್ರಯಾಣಿಸುವಾಗ ಅವರಿಗೆ ಸುಮೇರು ಪರ್ವತ ಎದುರಾಗುತ್ತದೆ.

ಸುಮೇರು ಪರ್ವತವನ್ನು ದಾಟುವಾಗ ದ್ರೌಪದಿ ಪರ್ವತದಿಂದ ಕೆಳಗೆ ಬಿದ್ದು ಮರಣ ಹೊಂದುತ್ತಾಳೆ. ಆಗ ಭೀಮನು ಯುಧಿಷ್ಠಿರನ ಬಳಿ ದ್ರೌಪದಿ ಯಾಕೆ ನಮಗಿಂತ ಮೊದಲು ಸತ್ತಳು..? ನಮ್ಮೊಂದಿಗೆ ಸ್ವರ್ಗಕ್ಕೆ ಬರಲು ಯಾಕೆ ಸಾಧ್ಯವಾಗಲಿಲ್ಲ..? ಎಂದು ಪ್ರಶ್ನಿಸುತ್ತಾನೆ.

ಆಗ ಯುಧಿಷ್ಟಿರನು ದ್ರೌಪದಿ ನಮ್ಮೆಲ್ಲರಿಗಿಂತ ಹೆಚ್ಚಾಗಿ ಅರ್ಜುನನ್ನು ಪ್ರೀತಿಸುತ್ತಿದ್ದಳು. ನಮ್ಮ ಪ್ರೀತಿಗೆ ಮೋಸ ಮಾಡಿದಳು. ಆದ್ದರಿಂದ ಆಕೆಗೆ ಸ್ವರ್ಗಕ್ಕೆ ಬರಲು ಸಾಧ್ಯವಾಗಲಿಲ್ಲವೆಂದು ಉತ್ತರಿಸುತ್ತಾನೆ.

ಕೃಪೆ: ಸಾಮಾಜಿಕ ಜಾಲತಾಣ

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....

Latest News

HL

economy

HL

crime

HL

others

HL

others

HL

others

HL

others

HL

others

HL

politics

HL

others

HL

sports

HL

others

HL

others

HL

education

HL

politics

HL

economy

HL

politics

HL

sports

HL

others

HL

economy

HL

others

HL

others

HL

crime

HL

education

HL

others

HL

politics

HL

crime

HL

education

HL

others

HL

economy

HL

others