ಕಳ್ಳತನಕ್ಕೆ ಬಂದು ರೈತರಿಗೆ ಸಿಕ್ಕಿಬಿದ್ದ ಮಹಿಳೆ.. ಪೊಲೀಸರ ವಶಕ್ಕೆ: ನಾಲ್ವರು ಪರಾರಿ..!
ಕಳ್ಳತನಕ್ಕೆ ಬಂದು ರೈತರಿಗೆ ಸಿಕ್ಕಿಬಿದ್ದ ಮಹಿಳೆ.. ಪೊಲೀಸರ ವಶಕ್ಕೆ: ನಾಲ್ವರು ಪರಾರಿ..!

ದೊಡ್ಡಬಳ್ಳಾಪುರ, (ಮೇ.06); ಜಮೀನಿನಲ್ಲಿ ಅಳವಡಿಸಿದ್ದ ಸ್ಟಾರ್ಟರ್ ಹಾಗೂ ಕೇಬಲ್ ಕಳ್ಳತನ ಮಾಡಲು ಬಂದಿದ್ದರೆನ್ನಲಾದ ಮಹಿಳೆಯನ್ನು ರೈತರು ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ತಾಲೂಕಿನ ಹೊಸಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಕಲ್ಲುಕುಂಟೆ ಬಳಿ ನಡೆದಿದೆ.

ಭಾನುವಾರ ರಾತ್ರಿ ಸುಮಾರು 10 ಗಂಟೆ ವೇಳೆಗೆ ಕಲ್ಲುಕುಂಟೆ ಹೊರವಲಯದಲ್ಲಿನ ಜಮೀನಿಗೆ ಮೂವರು ಪುರುಷರು, ಇಬ್ಬರು ಮಹಿಳೆಯರು ಬಂದಿದ್ದು, ಜಮೀನಿನಲ್ಲಿ ಅಳವಡಿಸಲಾಗಿದ್ದ, ಸ್ಟಾರ್ಟರ್ ಹಾಗೂ ಕೇಬಲ್ ಕಳ್ಳತನ ಮಾಡಲು ಯತ್ನಿಸಿದ್ದಾರೆ ಎನ್ನಲಾಗಿದೆ.

ಇದನ್ನು ಕಂಡ ಅದೇ ದಾರಿಯಲ್ಲಿ ಬಂದ ವಾಹನ ಸವಾರ ಗ್ರಾಮಸ್ಥರಿಗೆ ವಿಷಯ ತಿಳಿಸಿದ್ದು, ಗ್ರಾಮಸ್ಥರು ಒಟ್ಟುಗೂಡಿ ಸ್ಥಳಕ್ಕೆ ತೆರಳಿದ್ದಾರೆ.

ಈ ವೇಳೆ ಕಳ್ಳತನ ನಡೆಸುತ್ತಿದ್ದರೆನ್ನಲಾದ ಆರೋಪಿಗಳು ಓಟಕಿತ್ತಿದ್ದು, ನಾಲ್ಕು ಮಂದಿ ಪರಾರಿಯಾದ ಓರ್ವ ಮಹಿಳೆ ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದಿದ್ದಾಳೆ.

ಈ ಕುರಿತು ಹೊಸಹಳ್ಳಿ ಪೊಲೀಸರಿಗೆ ಗ್ರಾಮಸ್ಥರು ತಿಳಿಸಿದ್ದು, ಸ್ಥಳಕ್ಕೆ ಬಂದ ಪೊಲೀಸರು ಬಿಹಾರ ಮೂಲದವರು ಎನ್ನಲಾಗುತ್ತಿರುವ ಸುಮಾರು 35ರಿಂದ40 ವರ್ಷದ ಒಳಗಿನೆ ಮಹಿಳೆಯನ್ನು ವಶಕ್ಕೆ ಪಡೆದಿದ್ದಾರೆ.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....

Latest News

HL

crime

HL

crime

HL

politics

HL

sports

HL

others

HL

politics

HL

sports

HL

others

HL

literature

HL

sports

HL

literature

HL

sports

HL

agriculture

HL

crime

HL

politics

HL

politics

HL

politics

HL

crime

HL

politics

HL

health

HL

education

HL

education

HL

crime

HL

politics

HL

crime

HL

crime

HL

others

HL

politics

HL

crime

HL

others