ಚಿಕ್ಕಬಳ್ಳಾಪುರ, (ಮೇ. 04): ವೇಗದೂತ ಕೆ ಎಸ್ ಆರ್ಟಿ ಸಿ ಬಸ್ ನಿಲುಗಡೆ ಇಲ್ಲದ ಸ್ಟಾಫ್ ನಲ್ಲಿ ನಿಲ್ಲಿಸಲಿಲ್ಲ ಎಂದು ಮುಂದಿನ ಗೇಟ್ನಲ್ಲಿ ಬಸ್ ಅಡ್ಡಗಟ್ಟಿ ಕಂಡಕ್ಟರ್ಮೇಲೆ ಹಲ್ಲೆ ಮಾಡಿ, ಇಟಿಎಂ ದ್ವಂಸಮಾಡಿದ ಘಟನೆ ತಾಲೂಕಿನ ನಾಯನಹಳ್ಳಿ ಬಳಿ ನಡೆದಿದೆ.
ಚಿಂತಾಮಣಿಯಿಂದ ಚಿಕ್ಕಬಳ್ಳಾಪುರಕ್ಕೆ ತೆರಳುತ್ತಿದ್ದ ವೇಗದೂತ ಬಸ್ನಲ್ಲಿ ತನ್ನ ಪತ್ನಿ ಪ್ರಯಾಣಿಸುತ್ತಿದ್ದು ಆಕೆ ಇಳಿಯಬೇಕಾದ ವರದಹಳ್ಳಿ ಗೇಟ್ ನಿಲ್ದಾಣದಲ್ಲಿ ಸ್ಟಾಪ್ ಕೊಟ್ಟಿಲ್ಲ ಅನ್ನೋ ಕಾರಣಕ್ಕೆ ಕೋಪಗೊಂಡ ವರದಹಳ್ಳಿ ಸುರೇಶ್ ಎಂಬುವರು ಮುಂದಿನ ಸ್ಟಾಪ್ಗೆ ಬೈಕ್ನಲ್ಲಿ ಆಗಮಿಸಿ ಬಸ್ ಕಂಡಕ್ಟರ್ಗಣೇಶ್ ಮೇಲೆ ಹಲ್ಲೆ ನಡೆಸಿದ್ದಾರೆ.
ಕಂಡೆಕ್ಟರ್ ಬಟ್ಟೆ ಹರಿದು ಹಾಕಿ ಆತನ ಕೈಯಲಿದ್ದ ಇಟಿಎಂ ಕಿತ್ತೆಸೆದು ರದ್ದಾಂತ ಮಾಡಿದ್ದಾನೆ. ಕಂಡಕ್ಟರ್ ಮೇಲೆ ಹಲ್ಲೆ ಮಾಡುತಿದ್ದ ಘಟನೆ ಖಂಡಿಸಿದ ಡ್ರೈವರ್ ನರಸಿಂಹಮೂರ್ತಿಯನ್ನು ಅವ್ಯಾಶ್ಚ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿದ್ದಾನೆ.
ಘಟನೆ ನಂತರ ಅದೆ ಬಸ್ಸಿನಲ್ಲಿ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ಬಂದ ಡ್ರೈವರು, ಕಂಡೆಕ್ಟರ್ ದೂರು ದಾಖಲಿಸಿದ್ದಾರೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....
Latest News
others
literature
sports
literature
sports
agriculture
crime
politics
politics
politics
crime
politics
health
education
education
crime
politics
crime
crime
others
politics
crime
others
others
others
politics
crime
politics
politics
crime