ಮಂಗಳೂರು, (ಮೇ.05); ಅಶ್ಲೀಲ ಪೆನ್ ಡ್ರೈವ್ ಹಗರಣದಲ್ಲಿ ಪ್ರಮುಖ ಆರೋಪಿಯಾಗಿರುವ ಸಂಸದ ಪ್ರಜ್ವಲ್ ರೇವಣ್ಣ ಅವರು ಇಂದು ರಾಜ್ಯಕ್ಕೆ ಹಿಂದಿರುಗುವ ಸಾಧ್ಯತೆಗಳಿದ್ದು, ಅವರ ಬಂಧನಕ್ಕೆ ಪೊಲೀಸರು ಸಿದ್ಧತೆ ನಡೆಸಿದ್ದಾರೆ.
ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ಆರೋಪ ಪ್ರಕರಣದ ತನಿಖೆ ಚುರುಕುಗೊಂಡಿದೆ. ಪ್ರಜ್ವಲ್ ಬಂಧನಕ್ಕೆ ಸದ್ಯ ಲುಕ್ಔಟ್ ನೋಟಿಸ್ ಜಾರಿ ಮಾಡಲಾಗಿದೆ. ಹೀಗಾಗಿ ಇಂದು ಭಾರತಕ್ಕೆ ಪ್ರಜ್ವಲ್ ರೇವಣ್ಣ ಆಗಮನ ಸಾಧ್ಯತೆ ಇದೆ ಎನ್ನಲಾಗುತ್ತಿದ್ದು, ಯಾವುದೇ ಏರ್ಪೋರ್ಟ್ಗೆ ಬಂದರೂ ಅಲ್ಲೇ ಬಂಧನ ಪ್ರಕ್ರಿಯೆ ನಡೆಯಲಿದೆ.
ಮಂಗಳೂರು, ಕೊಚ್ಚಿ, ಗೋವಾ, ಬೆಂಗಳೂರು ವಿಮಾನ ನಿಲ್ದಾಣಕ್ಕೆ ಪ್ರಜ್ವಲ್ ಆಗಮಿಸಿದರು ಬಂಧಿಸಿ ಸ್ಥಳೀಯ ಠಾಣೆಗೆ ಪೊಲೀಸರು ಕರೆದೊಯ್ಯಲ್ಲಿದ್ದಾರೆ.
ಪ್ರಕರಣ ಹೊರಬಂದ ಕೂಡಲೇ ಅವರು ಮತದಾನ ನಡೆಸಿ ವಿದೇಶಕ್ಕೆ ತೆರಳಿದ್ದರು. ಎಸ್ಐಟಿ ತನಿಖೆ ನಡೆಸುತ್ತಿದ್ದು, ಇಲ್ಲಿ ಪೆನ್ ಡ್ರೈವ್ ಹಗರಣದ ವಿಚಾರಣೆಗೆ ಅವರು ಹಾಜರಾಗದ ಹಿನ್ನೆಲೆಯಲ್ಲಿ, ಅವರ ವಿರುದ್ಧ ಮೊದಲು ಲುಕ್ ಔಟ್ ನೋಟಿಸ್ ಜಾರಿಯಾಗಿದೆ.
ಪ್ರಜ್ವಲ್ ರೇವಣ್ಣನವರು ಜರ್ಮನಿಯಿಂದ ಯುಎಇಗೆ ಶಿಫ್ಟ್ ಆಗಿದ್ದಾರೆ. ಲುಕ್ ಔಟ್ ನೋಟಿಸ್ ಜಾರಿಯಾಗಿರುವ ಮೊದಲೇ ಅವರು ಯುಎಇಗೆ ಹೋಗಿದ್ದು, ದುಬೈನಿಂದಲೇ ಮಂಗಳೂರಿಗೆ ಆಗಮಿಸಲಿದ್ದಾರೆಂದು ಪೊಲೀಸ್ ಮೂಲಗಳು ಅಂದಾಜಿಸಿವೆ.
ಮೇ 5ರಂದು ದುಬೈನಿಂದ ಒಟ್ಟು ನಾಲ್ಕು ವಿಮಾನಗಳು ಮಂಗಳೂರಿಗೆ ಪ್ರಯಾಣ ಬೆಳೆಸಲಿವೆ. ಅವುಗಳಲ್ಲಿ ಯಾವುದಾದರೊಂದು ವಿಮಾನದಲ್ಲಿ ಪ್ರಜ್ವಲ್ ಅವರು ಆಗಮಿಸುವ ಸಾಧ್ಯತೆಗಳಿವೆ.
ದುಬೈನಿಂದ ಮಂಗಳೂರಿಗೆ ಇಂದು ನಾಲ್ಕು ವಿಮಾನಗಳು ಆಗಮಿಸಲಿದ್ದು, ಅವುಗಳಲ್ಲಿ ಎರಡು ಈಗಾಗಲೇ ಬಂದಿಳಿದಿವೆ. ಬೆಳಗ್ಗೆ 6.24 ಹಾಗೂ 7. 55ರ ಸುಮಾರಿಗೆ ಆ ವಿಮಾನ ಆಗಮಿಸಿವೆ. ಅವುಗಳಲ್ಲಿ ಪ್ರಜ್ವಲ್ ಆಗಮಿಸಿಲ್ಲ. ಆದರೆ, ಸಂಜೆ 6.15ಕ್ಕೆ ಮತ್ತೊಂದು ವಿಮಾನ ಬರಲಿದೆ. ಆನಂತರ, 6.40ಕ್ಕೆ ಮತ್ತೊಂದು ವಿಮಾನ ಬರಲಿದೆ.
ಸಂಜೆ ಬರುವ ವಿಮಾನಗಳಲ್ಲಿ ಪ್ರಜ್ವಲ್ ರೇವಣ್ಣ ಆಗಮಿಸುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....<!--
-->Latest News
politics
sports
others
literature
sports
literature
sports
agriculture
crime
politics
politics
politics
crime
politics
health
education
education
crime
politics
crime
crime
others
politics
crime
others
others
others
politics
crime
politics