ಹುಬ್ಬಳ್ಳಿ, (ಏ.30): ರಾಜಕೀಯ ಲಾಭಕ್ಕಾಗಿ ಒಂದ್ ಹೆಣ್ಣು ಮಗು ಪೊಟೋ ಇಡ್ಕೋಂಡ್ ಹೋದ್ರು ಬಿಜೆಪಿಯವು. ಆದರೆ ಪ್ರಜ್ವಲ್ 600 ಜನ ಹುಡ್ಗೀರಿಗೆ ಸೀರೆ ಎಳೆದಿದ್ದಾನೆ, ಪಿನ್ ಚುಚ್ಚಿದ್ದಾನೆ, ಬೆತ್ತಲೆ ಮಾಡಿದ್ದಾನೆ, ವಿಡಿಯೋಗಳು ಬಂದಿವೆ ಆದರೂ ಜೋಶಿ, ಯಡಿಯೂರಪ್ಪ ಯಾಕೆ ಮಾತಾಡಿಲ್ಲ? ಅವರು ಹೆಣ್ಣುಮಕ್ಕಳು ಅಲ್ವೇನು..? ಮೋದಿ ಇದೇನಾ ಅಚ್ಚೇದಿನ್ ಎಂದು ಸಿಎಂ ಇಬ್ರಾಹಿಂ ಪ್ರಶ್ನಿಸಿದ್ದಾರೆ.
ಇಂದು ನಡೆಸಿದ ದಿಢೀರ್ ಸುದ್ದಿಗೋಷ್ಠಿಯಲ್ಲಿ ಮಾತಾನಾಡಿದ ಅವರು, ಪ್ರಜ್ವಲ್ರನ್ನ ಪಕ್ಷದಿಂದ ಹೊರಗಡೆ ಹಾಕುತ್ತೀವಿ ಎನ್ನುತ್ತಾರೆ. ಅವರು ಗರ್ಭಿಣಿ ಆದ ಮೇಲೆ ಹೊರಗಡೆ ಹಾಕಿದರೇನು, ಅವರ ಮಕ್ಕಳಿಗೆ ಪರಿಹಾರ ಕೊಡುವುದು ಯಾರು?, ನಾನು ಆವತ್ತೆ ದೇವೆಗೌಡರಿಗೆ ಹೇಳಿದ್ದೆ, ಇವತ್ತು ಅವನು ಜರ್ಮನ್ಗೆ ಹೋಗಿದ್ದಾನೆ. ಯಾವ ವಿಡಿಯೋ ಬರತ್ತೋ ,ಇನ್ನೆಲ್ಲಿ ಹೋಗ್ತಾನೋ ಗೊತ್ತಿಲ್ಲವೆಂದು.
ದೇಶದಲ್ಲಿ ಪ್ರಜಾಪ್ರಭುತ್ವ ಉಳಿವಿಗಾಗಿ ಬಿಜೆಪಿ ವಿರುದ್ಧ ಕೆಲಸ ಮಾಡ್ತಾ ಇದ್ದೇವೆ. ಈ ಬಿಜೆಪಿಯವರಿಗೆ ಅಭಿವೃದ್ಧಿ ಮಾಡಿ ಮತ ಕೇಳುವ ಯೋಗ್ಯತೆ ಇಲ್ಲವಾಗಿದೆ. ಹುಬ್ಬಳ್ಳಿಯಲ್ಲಿ ಒಂದು ಮಗು ಸಾವಿನ ಪ್ರಕರಣದ ಕಾರಣ ಫೋಟೊ ಹಿಡ್ಕೊಂಡ್ ರಾಜಕೀಯ ಮಾಡಿ, ಮತ ಕೇಳಬೇಕಾದ ಅನಿವಾರ್ಯತೆಗೆ ಬಿಜೆಪಿ ಬಂದಿದೆ. ಜೋಶಿ ಯಾವ ದುಸ್ಥಿತಿ ಬಂತು ನಿಮಗೆ.
ಅದೇ ಸಮಯದಲ್ಲಿ ಮುಸ್ಲಿಂ ಹೆಣ್ಣು ಮಗಳು ಹಿಂದು ಯುವಕನಿಂದ ಹತ್ಯೆ ಆದಳು. ಆಕೆಯ ಮನೆಗೆ ನಾವ್ ಹೋಗಿ ನಾಟಕ ಆಡಲಿಲ್ಲ. ಇಂತಹ ಪ್ರಕರಣಗಳಿಗೆ ಕಠಿಣ ಕಾನೂನು ತರಬೇಕೆಹೊರತು. ಪೊಟೋ ಇಟ್ಕೊಂಡ್ ರಾಜಕೀಯ ಲಾಭಕ್ಕಾಗಿ ಓಡಾಡೋದಲ್ಲ. ಮತ್ತೆ ಆಕೆ ಒಂದ್ ಹೆಣ್ ಮಗಳಿಗೆ ಬಿಜೆಪಿಯವರು ಅಷ್ಟೆಲ್ಲ ಮಾಡಿದರು.. ಪ್ರಜ್ವಲ್ ಮಾಡಿರೋದ್ 600 ಜನ ಹುಡ್ಗೀರಿಗೆ ಸೀರೆ ಎಳೆದಿದ್ದಾನೆ, ಪಿನ್ ಚುಚ್ಚಿದ್ದಾನೆ, ಬೆತ್ತಲೆ ಮಾಡಿದ್ದಾನೆ, ವಿಡಿಯೋಗಳು ಬಂದಿವೆ ಆದರೂ ಜೋಶಿ, ಯಡಿಯೂರಪ್ಪ ಯಾಕೆ ಮಾತಾಡಿಲ್ಲ? ಅವರು ಹೆಣ್ಣುಮಕ್ಕಳು ಅಲ್ವೇನು..? ಮೋದಿ ಇದೇನಾ ಅಚ್ಚೇದಿನ್ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಲೋಕಸಭೆ ಚುನಾವಣೆ ಬಳಿಕ ರಾಜ್ಯದಲ್ಲಿ ಮೂರನೇ ಶಕ್ತಿ ಹುಟ್ಟು ಹಾಕುತ್ತೇವೆ ಮುಂದೆ ಕರ್ನಾಟಕದಲ್ಲಿ ಮೂರನೇ ಶಕ್ತಿ ಹೊಸ ಪ್ರಾದೇಶಿಕ ಪಕ್ಷ ಅಧಿಕಾರಕ್ಕೆ ಬರುತ್ತದೆ. ಈ ಕುರಿತು ನಾನು ದಿಂಗಾಲೇಶ್ವರ ಸ್ವಾಮೀಜಿ ಜೊತೆ ಮೂರು ಗಂಟೆ ಮಾತಾಡಿದ್ದೇನೆ. ಎರಡು ತಿಂಗಳ ನಂತರ ಮಠಾಧಿಪದಿಗಳ ಸಭೆ ಕರೆದಿದ್ದು, ನಾನು ಸಭೆಯಲ್ಲಿ ಭಾಗವಹಿಸಿ ಮೂರನೇ ಶಕ್ತಿ ಹುಟ್ಟುಹಾಕಲಿದ್ದೇವೆ.
ಕುಮಾರಸ್ವಾಮಿಗೆ ನನ್ನ ಅಧ್ಯಕ್ಷ ಮಾಡಿದ್ದು ಗೊತ್ತಿಲ್ಲ, ತೆಗೆದಿದ್ದು ಗೊತ್ತಿಲ್ಲ. ಮುಸ್ಲಿಂ ರ ವೋಟ್ ತೆಗೆದುಕೊಂಡು ಎಂಎಲ್ಎ ಅದ್ರೂ ಆದರೆ ಬಿಜೆಪಿ ಸೋಲಿಸಲು ಓಟ್ ಮಾಡುದ್ರು.. ನನಗೆಲ್ ಕೊಟ್ರು ಮಾಡುದ್ರು ಅಂದ್ರು. ಜೆಡಿಎಸ್ 17 ಸೀಟ್ ಗೆದ್ದಿದ್ದೇ ನನ್ನಿಂದ. ಓಟರ್ ರೆಕಾರ್ಡ್ ತಗಿರಿ. ಚನ್ನಪಟ್ಟಣದಲ್ಲಿ ಒಕ್ಕಲಿಗರು ಓಟ್ ಕೊಡಲಿಲ್ಲ. ರಾಮನಗರದಲ್ಲಿ ನಲವತ್ತು ಸಾವಿರ ಒಕ್ಕಲಿಗರು ಮುಸ್ಲಿಂ ಅಭ್ಯರ್ಥಿಗೆ ಮತ ನೀಡಿದ್ದಾರೆ, ನಿಖಿಲ್ ಕುಮಾರಸ್ವಾಮಿಗೆ ಕೊಡಲಿಲ್ಲ ಸೋತ.
ಒಕ್ಕಲಿಗರು ಮುಸ್ಲಿಂ ಸಮುದಾಯಕ್ಕೆ ಕೊಡ್ತಾರೆ ಆದರೆ ನಿಖಿಲ್ ಕುಮಾರಸ್ವಾಮಿಗೆ ಕೊಡಲಿಲ್ಲ ಕಾರಣ ಕುಟುಂಬ ರಾಜಕಾರಣದಿಂದ ಬೇಸತ್ತಿರೋದು. ರಾಮನಗರದಲ್ಲಿ ಮಂಡ್ಯದಲ್ಲಿ ತೋರಿಸಿಕೊಟ್ಟಿದ್ದಾರೆ.
ಬಿಜೆಪಿಯವರ ದುರ್ಧೈವ ಇವಕ್ಕು ಗತಿ ಇಲ್ಲ, ಅವರಿಗೆ ಮತಿ ಇಲ್ಲ. ಬಸ್ಟಾಂಡಲ್ ಮೇಕಪ್ ನೋಡಿ ಹೋಗಿ ತಬ್ಕೊಂಡ್ಬಿಟ್ಟರು ಏನೋ ಸಿಗುತ್ತೆ ಅಂತ. ಆಮೇಲ್ ಗೊತ್ತಾಯ್ತು ಏನು ಇಲ್ಲ ಅಂತ ಹಾಸನ, ಮಂಡ್ಯದಲ್ಲಿ, ಕೋಲಾರದಲ್ಲಿ ಏನೂ ಸಿಗದೆ ಒದ್ದಾಡುತ್ತಿದ್ದಾವೆ ನೋಡಿದ್ ಬೇರೆ.. ಇಲ್ ಸಿಕ್ಕಿದ್ ಬೇರೆ ಅಂತ.
ಪ್ರಜ್ವಲ್ ರೇವಣ್ಣ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಸಬೇಕಿದೆ. ಇದರ ಯಾರ್ ಯಾರ್ ಭಾಗಿಯಾಗಿದ್ದಾರೆ, ಡಿಕೆ ಶಿವಕುಮಾರ್ ತೋರಿಸಿದ ಪೆನ್ ಡ್ರೈವ್ ಏನು..? ಬಿಜೆಪಿಯವರಿಗೆ ಗೊತ್ತು ಇವು ಮಂಚ ಮುರಿದವರೆ. ಪೂನಾದಲ್ಲಿ ಮಂಚ ಮುರಿದು ಇವು ಸ್ಟೇ ತಗೊಂಡವೆ. ಜೆಡಿಎಸ್- ಬಿಜೆಪಿ ಇಬ್ಬರು ಚಿಕ್ಕಪ್ಪ-ದೊಡ್ಡಪ್ಪನ ಮಕ್ಕಳು ಎಂದು ವ್ಯಂಗ್ಯವಾಡಿದರು.
ನಾನು ಕೇಶವಕೃಪದಲ್ಲಿ ಗೌರವ ಸಿಗಲ್ಲ, ಬಸವಕೃಪದಲ್ಲಿರೋದು ಒಳ್ಳೆದು ಎಂದು ದೇವೆಗೌಡರಿಗೆ ಹೇಳಿದ್ದೆ. ಅದರಂತೆ ದೇವೆಗೌಡರು ಚುನಾವಣೆಯಾದ ಕೆಲವೇ ದಿನಗಳಲ್ಲಿ ಬಿಜೆಪಿಯವರು ಸಹಾಯ ಮಾಡಲಿಲ್ಲ ಎಂದು ಹೇಳಿದ್ದಾರೆ.
ಕರ್ನಾಟಕದಲ್ಲಿ ಕಾಂಗ್ರೆಸ್ ತಪ್ಪಿನಿಂದ ಬಿಜೆಪಿ ಬೆಳೆಯುತ್ತಿದೆ. ಇವತ್ತು ಬಸವತತ್ವದ ಆಧಾರದ ಮೇಲೆ ಸಂಘಟನೆ ಮಾಡಬೇಕಿದೆ. ನಾವು ಇದನ್ನು ತೀರ್ಮಾನ ಮಾಡಿದ್ದೇವೆ. ದಿಂಗಾಲೇಶ್ವರ ಸ್ವಾಮೀಜಿ ಕೆಲವೇ ದಿನಗಳಲ್ಲಿ ಈ ಕುರಿತು ಹೇಳುತ್ತಾರೆ ಎಂದು ದಿಂಗಾಲೇಶ್ವರ ಸ್ವಾಮೀಜಿ ರಾಜಕೀಯ ನಡೆ ಕುರಿತು ಸಿಎಮ್ ಇಬ್ರಾಹಿಂ ಸ್ಪೋಟಕ ಹೇಳಿಕೆ ನೀಡಿದ್ದಾರೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....<!--
-->Latest News
literature
others
literature
crime
crime
politics
politics
politics
politics
politics
crime
crime
crime
crime
politics
crime
crime
crime
agriculture
agriculture
others
economy
politics
others
literature
crime
politics
politics
crime
crime