ಹಾಸನ, (ಏ.30): ಸಂಸದ ಪ್ರಜ್ವಲ್ ರೇವಣ್ಣರದ್ದು ಎನ್ನಲಾದ ಅಶ್ಲೀಲ ವಿಡಿಯೋಗಳುಳ್ಳ ಪೆನ್ಡ್ರೈವ್ ಅನ್ನು ಬಿಜೆಪಿ ಮುಖಂಡರಾದ ದೇವರಾಜೆಗೌಡಗೆ ಬಿಟ್ಟು ಯಾವ ಕಾಂಗ್ರೆಸ್ ಮುಖಂಡನಿಗೂ ನೀಡಿಲ್ಲ ಎಂದು ಪ್ರಜ್ವಲ್ ರೇವಣ್ಣ ಅವರ ಮಾಜಿ ಕಾರು ಚಾಲಕ ಕಾರ್ತಿಕ್ ಸ್ಪಷ್ಟನೆ ನೀಡಿದ್ದಾರೆ.
ಹಾಸನ ಜಿಲ್ಲೆಯಲ್ಲಿ ಹರಿದಾಡಿದ ಮಹಿಳೆಯರ ಅಶ್ಲೀಲ ವಿಡಿಯೋ ಉಳ್ಳ ಪೆನ್ಡ್ರೈವ್ ಅನ್ನು ಡಿಸಿಎಂ ಡಿಕೆ ಶಿವಕುಮಾರ್ ಮತ್ತು ಕಾಂಗ್ರೆಸ್ ಸಂಸದ ಡಿಕೆ ಸುರೇಶ್ಗೆ ಕಾರ್ತಿಕ್ ನೀಡಿದ್ದ. ನಂತರ ನನಗೆ ನೀಡಿದ್ದ ಎಂದು ದೇವರಾಜೇಗೌಡ ಸೋಮವಾರ ಖಾಸಗಿ ಸುದ್ದಿ ವಾಹಿನಿಗೆ ತಿಳಿಸಿದ್ದರು ಈ ಹಿನ್ನೆಲೆಯಲ್ಲಿ ಅಜ್ಞಾತ ಸ್ಥಳದಿಂದ ವಿಡಿಯೋ ಮಾಡಿರುವ ಕಾರ್ತಿಕ್ ಈ ಸ್ಪಷ್ಟನೆ ನೀಡಿದ್ದಾರೆ.
ವಿಡಿಯೋದಲ್ಲಿ ನಾನು ರೇವಣ್ಣ ಹಾಗೂ ಪ್ರಜ್ವಲ್ ಜೊತೆ ಹದಿನೈದು ವರ್ಷಗಳಿಂದ ಕೆಲಸ ಮಾಡಿಕೊಂಡಿದ್ದೆ. ವರ್ಷದ ಹಿಂದೆ ನಾನು ಕೆಲಸ ಬಿಟ್ಟಿದ್ದೇನೆ. ನನ್ನ ಮೇಲೆ ಮಾಡಿದ ದೌರ್ಜನ್ಯ, ನಮ್ಮ ಜಮೀನು ಬರೆಸಿಕೊಂಡಿದ್ದು, ಹೆಂಡತಿ ಮೇಲೆ ಹಲ್ಲೆ ಮಾಡಿದ್ದ ವಿಚಾರವಾಗಿ ನಾನು ಅವರ ಮನೆಯಿಂದ ಹೊರಗೆ ಬಂದೆ.
ನಾನು ಅವರ ವಿರುದ್ಧ ಕೇಸ್ ದಾಖಲಿಸಿ ಹೋರಾಟ ಮಾಡುವ ತಯಾರಿಯಲ್ಲಿ ಇದ್ದೆ. ಆಗ ಅವರ ವಿರುದ್ಧ ಹೋರಾಟ ಮಾಡುತ್ತಿದ್ದ ಬಿಜೆಪಿ ಮುಖಂಡ ದೇವರಾಜೇಗೌಡ ಬಗ್ಗೆ ವಿಚಾರ ಗೊತ್ತಾಗಿ ಅವರ ಬಳಿ ಕಷ್ಟ ಹೇಳಿಕೊಂಡಿದ್ದೆ.
ಆಗ, ಅನ್ಯಾಯಕ್ಕೆ ನ್ಯಾಯ ಒದಗಿಸಿ ಕೊಡುವ ಭರವಸೆ ನೀಡಿದ್ದರು. ಆದರೆ, ಅವರು ಕೇಸ್ ತಗೊಳ್ಳಲಿಲ್ಲ. ಹಾಗಾಗಿ ನಾನು ಬೇರೆ ಲಾಯರ್ ಮೂಲಕ ಕೇಸ್ ಹಾಕಿಸಿದೆ. ಆಗ ಮತ್ತೆ ನನ್ನನ್ನು ಕರೆಸಿ, ಕೋರ್ಟ್ ಹೋರಾಟ ಮಾಡಿದರೆ ನಿನಗೆ ನ್ಯಾಯ ಸಿಗಲ್ಲ. ಜನರಿಗೆ ಗೊತ್ತಾಗಬೇಕು ಎಂದರು. ಎಲ್ಲಾ ಮಾದ್ಯಮಗಳ ಎದುರು ಹೇಳಿಕೆ ಕೊಡಿಸಿದರು. ಆಗ ಅವರೇ ನನ್ನ ಜೊತೆ ನಿಂತು ಅವರೇ ಹೇಳಿಕೆ ಕೊಟ್ಟಿದ್ದರು ಎಂದು ಕಾರ್ತಿಕ್ ಹೇಳಿದ್ದಾರೆ.
ಇದೆಲ್ಲ ಆದ ಬಳಿಕ ಪ್ರಜ್ವಲ್ ರೇವಣ್ಣ ನನ್ನ ವಿರುದ್ಧ ಸ್ಟೇ ತಂದರು. ಯಾವುದೆ ವೀಡಿಯೋ ಬಿಡುಗಡೆ ಮಾಡದಂತೆ ಸ್ಟೇ ತಂದಿದ್ದರು. ಆಗ ಆ ತಡೆಯಾಜ್ಞೆ ಪ್ರತಿಯನ್ನು ತೆಗೆದುಕೊಂಡು ನಾನು ದೇವರಾಜೇಗೌಡ ಬಳಿ ಹೋದೆ. ಆಗ ಅವರು, ನಿನ್ನ ಬಳಿ ಏನೊ ವೀಡಿಯೋ, ಫೋಟೊ ಇದೆಯಂತೆ, ಹಾಗಾಗಿ ತಡೆಯಾಜ್ಞೆ’ ತಂದಿದಾರೆ ಎಂದರು.
ನನ್ನ ಬಳಿ ಏನು ವೀಡಿಯೋ ಇದೆ? ಅದನ್ನು ಅವರಿಗೆ ಯಾರು ಹೇಳಿದರು ಎಂದು ದೇವರಾಜೇಗೌಡರನ್ನು ಪ್ರಶ್ನಿಸಿದೆ. ಅದಕ್ಕವರು, ನಿನ್ನ ಬಳಿ ಇರುವ ಫೋಟೊ ಹಾಗೂ ವೀಡಿಯೊ ನನಗೆ ಕೊಡು ಎಂದರು. ಯಾರಿಗೂ ತೋರಿಸಲ್ಲ, ಜಡ್ಜ್ ಮುಂದೆ ಪ್ರಸ್ತುತಪಡಿಸುತ್ತೇನೆ. ತಡೆಯಾಜ್ಞೆ ತೆರವು ಮಾಡಿಸಿಕೊಡುತ್ತೇನೆ ಎಂದಿದ್ದರು.
ಅವರನ್ನು ನಂಬಿ ನನ್ನ ಬಳಿ ಇದ್ದ ಒಂದು ಕಾಪಿಯನ್ನು ಅವರಿಗೆ ಕೊಟ್ಟಿದ್ದೆ. ಅದನ್ನು ಅವರು ಸ್ವಾರ್ಥಕ್ಕೆ ಬಳಸಿಕೊಂಡರೋ ಏನೋ.. ನಾನು ಅದನ್ನು ಕೊಟ್ಟು ವಕಾಲತ್ ಪತ್ರಕ್ಕೆ ಸಹಿ ಮಾಡಿ ಬಂದಿದ್ದೆ ಎಂದು ಕಾರ್ತಿಕ್ ತಿಳಿಸಿದ್ದಾರೆ.
ದೇವರಾಜೇಗೌಡರು ತಿಂಗಳಾದರೂ ಕೂಡ ಕೇಸ್ ಮೂವ್ ಮಾಡಿರಲಿಲ್ಲ. ಆ ಬಗ್ಗೆ ವಿಚಾರಿಸಿದಾಗ, ಈಗ ಮಾಡೋಕೆ ಆಗಲ್ಲ ಸ್ವಲ್ಪ ದಿನ ಇರು, ಮುಂದೆ ನೋಡೋಣ ಎಂದಿದ್ದರು. ಅಲ್ಲಿಂದ ನಾನು ಸುಮ್ಮನಾದೆ. ಕೊಟ್ಟ ವೀಡಿಯೋ ವಾಪಸ್ ಕೇಳಿದ್ದಕ್ಕೆ, ನನ್ನ ಬಳಿಯೇ ಇರಲಿ ಎಂದರು. ಆಗ ನಾನು ಸುಮ್ಮನಾದೆ.
ಆದರೆ ಇತ್ತೀಚಿಗೆ ಪ್ರಸ್ಮೀಟ್ ಮಾಡಿ ರೇವಣ್ಣ ಕುಟುಂಬದ ನಡವಿನ ವೈಷಮ್ಯದ ಕುರಿತು ಮಾತನಾಡಿ, ಮರ್ಯಾದೆ ಕಳಿಯುವುದಾಗಿ ಬೆದರಿಸಿದ್ದ ನೋಡಿ ಮತ್ತೆ ಹೋಗಿ ಕೇಳಿದರೆ.. ನಿನಗೂ ಇದಕ್ಕೂ ಸಂಬಂಧವಿಲ್ಲ ಸುಮ್ಮನಿರು ಎಂದರು.
ಈ ಬೆನ್ನಲ್ಲೆ ಕಾರ್ತಿಕ್ ನಂಗ್ ಕೊಟ್ಟ, ನನಗೆ ಕೊಡುವ ಮುಂಚೆ ಕಾಂಗ್ರೆಸ್ ಮುಖಂಡರಿಗೆ ಕೊಟ್ಟಿದ್ದಾನೆ ಎಂದು ಸುಳ್ಳು ಆರೋಪ ಮಾಡ್ತಾ ಇದ್ದಾರೆ..
ಆದರೆ ನಾನು ಬಿಜೆಪಿ ಮುಖಂಡರಾದ ದೇವರಾಜೇಗೌಡರ ಬಿಟ್ಟರೆ, ಬೇರೆ ಯಾರೇ ಕಾಂಗ್ರೆಸ್ ಮುಖಂಡರಿಗೆ ಕೊಟ್ಟಿಲ್ಲ. ಕಾಂಗ್ರೆಸ್ ಅವರು ಅವರ ಜೊತೆ ಚೆನ್ನಾಗಿದ್ದಾರೆ, ಒಡನಾಟ ಇಟ್ಕೊಂಡಿದ್ದಾರೆ ಅದಕ್ಕೆ ನನಗೆ ನ್ಯಾಯ ಸಿಗಲಿಲ್ಲ. ಅಂತವ್ರತ್ರ ಏನುಕ್ ಹೋಗ್ಲಿ. ನಾನು ದೇವರಾಜೇಗೌಡರನ್ನು ನಂಬಿ ಹೋಗಿದ್ದೆ ಆದರೆ ಅವರು ಮೋಸ ಮಾಡಿದ್ದಾರೆ..
ಪೆನ್ ಡ್ರೈವ್ ಇವರೆ ಹಂಚಿದರೋ.., ಇನ್ನೊಬ್ಬರಿಗೆ ಕೊಟ್ಟು ಹಂಚಿದರೋ ಅವರು ತಪ್ಪಿಸಕೊಳ್ಳಲು ನನ್ನ ಮೇಲೆ ಆರೋಪ ಮಾಡ್ತಾ ಇದ್ದಾರೆ. ನಾ ಕಾಂಗ್ರೆಸ್ ಅವರಿಗೆ ಕೊಡೋದಾಗಿದ್ದರೆ ನಿಮ್ಮತ್ರ ಏನುಕ್ ಬರ್ತಾ ಇದ್ದೆ..? ಎಂದು ಪ್ರಶ್ನಿಸಿದ್ದಾರೆ.
ಈ ಎಲ್ಲಾ ಅನ್ಯಾಯವನ್ನು ಅವರ ಮನೇಲ್ ಇದ್ ನೋಡಿದ್ದೀನಿ ಇದನ್ನೆಲ್ಲ ಎಸ್ಐಟಿ ಮುಂದೆ ಹೇಳ್ತಿನಿ ನಂತರ ಮಾಧ್ಯಮಗಳ ಮುಂದೆ ಬರ್ತಿನಿ ಎಂದಿದ್ದಾರೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....
Latest News
crime
agriculture
agriculture
others
economy
politics
others
literature
crime
politics
politics
crime
crime
crime
crime
politics
politics
politics
economy
crime
crime
crime
politics
agriculture
crime
crime
crime
crime
others
crime