ನವದೆಹಲಿ (ಏ.30): ದೇಶದ ಹಲವಾರು ರಾಜ್ಯಗಳಲ್ಲಿ ಉಷ್ಣ ಮಾರುತ ಕಂಡುಬಂದಿದೆ. ಈಗಾಗಲೇ ಹಲವು ಕಡೆಗಳಲ್ಲಿ ತಾಪಮಾನ 45.6 ಡಿಗ್ರಿ ಸೆಲ್ಶಿಯಸ್ಗೆ ಮುಟ್ಟಿದೆ.
ಮಿತಿ ಮೀರಿದ ತಾಪಮಾನ ಹಾಗೂ ಬಿಸಿ ಗಾಳಿಯಿಂದಾಗಿ ಜನರು ಬವಣೆ ಪಡುತ್ತಿರುವಾಗಲೇ ಕರ್ನಾಟಕದಲ್ಲಿ ಮೇ 3ರವರೆಗೂ ಉಷ್ಣಮಾರುತ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಪೂರ್ವ ಹಾಗೂ ದಕ್ಷಿಣದ ರಾಜ್ಯಗಳಲ್ಲಿ ಇನ್ನೂ ಐದು ದಿನಗಳ ಉಷ್ಣ ಮಾರುತ ಕಂಡುಬರಲಿದೆ. ಕರ್ನಾಟಕದ ಜತೆಗೆ ಆಂಧ್ರಪ್ರದೇಶ, ತಮಿಳುನಾಡು, ತೆಲಂಗಾಣದಲ್ಲೂ ಇದೇ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ದೇಶದ 155 ಹವಾಮಾನ ಇಲಾಖೆಯ ಕೇಂದ್ರಗಳಲ್ಲಿ 40 ಡಿಗ್ರಿಗಿಂತ ಅಧಿಕ ತಾಪ ವರದಿಯಾಗಿದೆ. ಪೂರ್ವ, ದಕ್ಷಿಣ ಹಾಗೂ ಉತ್ತರ ಭಾರತದಲ್ಲಿ ಉಷ್ಣ ಮಾರುತದ ಅಬ್ಬರ ಹೆಚ್ಚಾಗಿದೆ. ಆಂಧ್ರದ ರಾಯಲಸೀಮೆ ಪ್ರಾಂತ್ಯದ ನಂದ್ಯಾಲದಲ್ಲಿ 45.6 ಡಿಗ್ರಿ ತಾಪ ದಾಖಲಾಗಿದೆ.
ಕರ್ನಾಟಕದ ಒಳನಾಡಿನ ಬಹುತೇಕ ಕಡೆಗಳಲ್ಲಿ ಬಿಸಿ ವಾತಾವರಣ ಕಂಡುಬಂದಿದೆ. ರಾಯಚೂರಿನಲ್ಲಿ 43 ಹಾಗೂ ಕಲಬುರಗಿಯಲ್ಲಿ 42.9 ಡಿಗ್ರಿ ಸೆಲ್ಶಿಯಸ್ ಕಂಡುಬಂದಿದೆ ಎಂದು ತಿಳಿಸಿದೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....
Latest News
politics
crime
crime
crime
agriculture
agriculture
others
economy
politics
others
literature
crime
politics
politics
crime
crime
crime
crime
politics
politics
politics
economy
crime
crime
crime
politics
agriculture
crime
crime
crime