ದೊಡ್ಡಬಳ್ಳಾಪುರದಲ್ಲಿ ಮುಂದುವರಿದ ಸಾರಿಗೆ ಸಮಸ್ಯೆ: ಪ್ರತಿಭಟನೆಗಿಳಿದ ಪ್ರಯಾಣಿಕರು, ಸಾರಿಗೆ ಸಿಬ್ಬಂದಿ ಜೊತೆ ಮಾತಿನ ಚಕಮಕಿ
ದೊಡ್ಡಬಳ್ಳಾಪುರದಲ್ಲಿ ಮುಂದುವರಿದ ಸಾರಿಗೆ ಸಮಸ್ಯೆ: ಪ್ರತಿಭಟನೆಗಿಳಿದ ಪ್ರಯಾಣಿಕರು, ಸಾರಿಗೆ ಸಿಬ್ಬಂದಿ ಜೊತೆ ಮಾತಿನ ಚಕಮಕಿ

ದೊಡ್ಡಬಳ್ಳಾಪುರ, (ಜೂ.08): ಬೆಂಗಳೂರು ವ್ಯಾಪ್ತಿಗೆ ತೆರಳಬೇಕಾದ ಮಾರ್ಗಕ್ಕೆ ಸಮರ್ಪಕ ಸಾರಿಗೆ ವ್ಯವಸ್ಥೆ ಮಾಡಬೇಕೆಂದು ಒತ್ತಾಯಿಸಿ ವಿದ್ಯಾರ್ಥಿಗಳು, ಪ್ರಯಾಣಿಕರು ನಗರದ ಬಸ್ ನಿಲ್ದಾಣದಲ್ಲಿ ವಿಳಂಬವಾಗಿ ಬಂದ ಬಸ್ಸುಗಳನ್ನು ತಡೆದು ಪ್ರತಿಭಟನೆ ನಡೆಸುತ್ತಿದ್ದಾರೆ.

ದೊಡ್ಡಬಳ್ಳಾಪುರದಿಂದ ಕಾವೇರಿಭವನ, ಮೆಜೆಸ್ಟಿಕ್ ಕಡೆಗೆ ಸಾಗಬೇಕಾದ ಬಸ್ಸುಗಳು ನಿಗದಿತ ಸಮಯಕ್ಕೆ ಬಾರದ ಕಾರಣ ಪ್ರತಿನಿತ್ಯ, ವಿದ್ಯಾರ್ಥಿಗಳು, ಉದ್ಯೋಗಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದ್ದು, ಅಧಿಕಾರಿಗಳು ಸಮಸ್ಯೆ ಬಗೆ ಹರಿಸಲು ಪ್ರಯತ್ನಿಸದೆ. ಬೇಕಾಬಿಟ್ಟಿ ಲೆಕ್ಕತೋರಿಸಿ ನುಣಿಚಿಕೊಳ್ಳುತ್ತಿದ್ದಾರೆಂಬ ಅರೋಪ ವ್ಯಕ್ತವಾಗಿದೆ.

ಗುರುವಾರ ಬೆಳಗ್ಗೆ ಪ್ರತಿ ದಿನದಂತೆ ಬೆಂಗಳೂರು ಮಾರ್ಗಕ್ಕೆ ಬಸ್ ಇಲ್ಲದೆ ಪ್ರಯಾಣಿಕರು ಪರದಾಡಿದ್ದಾರೆ. ಬೆಳಗ್ಗೆ 8 ಗಂಟೆಯಿಂದ 8.50ರ ವರೆಗೆ ಬರಬೇಕಾದ ಬಸ್ಸುಗಳು ಬಂದಿಲ್ಲ. ಈ ಕುರಿತಂತೆ ಟಿಸಿ ಅವರಿಗೆ ವಿದ್ಯಾರ್ಥಿಗಳು ಮನವಿ ಮಾಡಿದರು ಸ್ಪಂದಿಸಿಲ್ಲ. ಈ ವಿಷಯ ತಿಳಿದ ಉದ್ಯೋಗಿಗಳು, ವಿದ್ಯಾರ್ಥಿಗಳು, ಪ್ರಯಾಣಿಕರು ಒಟ್ಟಾಗಿ ತೆರಳಿ ಕೇಳಿದಾಗ ಡಿಪೋಗೆ ಕರೆ ಮಾಡಿ ಬಸ್ ತರಿಸಿದ್ದಾರೆ.

ಅಲ್ಲದೆ ಸಿಬ್ಬಂದಿಗಳ ಮೇಲೆ ದೌರ್ಜನ್ಯ ಮಾಡ್ತಿರಾ ಎಂದು ಅವಾಜ್ ಹಾಕಿದ್ದು,‌ ಪೊಲೀಸ್ ಕರೆಸುವುದಾಗಿ ಬೆದರಿಕೆಯೊಡ್ಡಿದ್ದಾರೆ ಎಂಬ ಆರೋಪ ಸಿಬ್ಬಂದಿಗಳ ವಿರುದ್ಧ ಕೇಳಿ ಬಂದಿದೆ.

ಇದರಿಂದ ಕೆರಳಿದ ವಿದ್ಯಾರ್ಥಿಗಳು, ನೌಕರರು, ಪ್ರಯಾಣಿಕರು ಸಮರ್ಪಕವಾಗಿ ಬಸ್ ವ್ಯವಸ್ಥೆ ಮಾಡದೇ, ಪ್ರಶ್ನೆ ಮಾಡುವವರ ವಿರುದ್ಧವೇ ಆರೋಪ ಮಾಡುತ್ತಿರುವ ಸಿಬ್ಬಂದಿಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದು, ಸಮರ್ಪಕವಾಗಿ ಬಸ್ ವ್ಯವಸ್ಥೆ ಭರವಸೆ ನೀಡದ ಹೊರತು ಬಸ್ ತೆರಳಲು ಬಿಡುವುದಿಲ್ಲವೆಂದು ಪಟ್ಟು ಹಿಡಿದಿದ್ದಾರೆ.

ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....<!--

-->