ಹರಿತಲೇಖನಿ ದಿನಕ್ಕೊಂದು ಕಥೆ: ಲಂಕಾಧಿಪತಿ ರಾವಣ
ಹರಿತಲೇಖನಿ ದಿನಕ್ಕೊಂದು ಕಥೆ: ಲಂಕಾಧಿಪತಿ ರಾವಣ

ರಾಮಾಯಣದಲ್ಲಿ ರಾಮ, ಸೀತೆ, ಲಕ್ಷ್ಮಣ ಹಾಗೂ ಹನುಮನ ಪಾತ್ರ ಎಷ್ಟು ಮುಖ್ಯವೋ ಅಷ್ಟೇ ರಾವಣನ ಪಾತ್ರ ಕೂಡ ಪ್ರಮುಖವಾದುದಾಗಿದೆ. ರಾಮಾಯಣವೆಂಬ ಮಹಾಕಾವ್ಯದಲ್ಲಿನ ರಾವಣನ ಜನ್ಮ, ಆತನ ಗುಣ, ನಡವಳಿಕೆ ಬಗ್ಗೆ ಕೆಲವರಿಗೆ ಮಾತ್ರ ತಿಳಿದಿರಬಹುದು ಆದರೆ ಸಾಕಷ್ಟು ಜನರಿಗೆ ರಾವಣನ ಗುಣ, ಸ್ವಭಾವ ತಿಳಿದಿಲ್ಲ. ಆತನನ್ನು ಯಾವಾಗಲು ಕೆಟ್ಟವನೆಂದೇ ಸೂಚಿಸಲಾಗುತ್ತದೆ. ಆದರೆ ರಾವಣನಲ್ಲೂ ಸದ್ಗುಣಗಳಿದ್ದವು. ರಾವಣನಲ್ಲೂ ಒಳ್ಳೆಯ ಗುಣಗಳಿದ್ದವು.

ಲಂಕಾಧಿಪತಿ ರಾವಣನನ್ನು ದಶಾನನ ಎಂದೂ ಕೂಡ ಕರೆಯಲಾಗುತ್ತದೆ. ರಾಮಾಯಣದಲ್ಲಿನ ರಾವಣನ ಬಗ್ಗೆ ಸಾಕಷ್ಟು ಆಸಕ್ತಿದಾಯಕ ಸಂಗತಿಗಳಿವೆ. ರಾವಣ ನಿಜವಾಗಿಯೂ ಕೆಟ್ಟವನೇ..? ಅಥವಾ ಆತನಲ್ಲಿಯೂ ಸದ್ಗುಣಗಳಿದ್ದವೇ..? ಎಂಬುದು ಅನೇಕರಲ್ಲಿ ಪ್ರಶ್ನೆಯಾಗಿ ಉಳಿದಿದೆ.

ಲಂಕಾಧಿಪತಿ ರಾವಣನು ಮುನಿ ವಿಶ್ರವ ಮತ್ತು ರಾಕ್ಷಸ ರಾಣಿ ಕೈಕೇಶಿಯ ಮಗನಾಗಿದ್ದನು. ಆದ್ದರಿಂದ ಅವನು ಅರ್ಧ ಬ್ರಾಹ್ಮಣ ಹಾಗೂ ಇನ್ನರ್ಧ ರಾಕ್ಷಸನಾಗಿದ್ದನು. ರಾಮಾಯಣದಲ್ಲಿನ ರಾಮನು ಕೂಡ ರಾವಣನನ್ನು ಮಹಾಬ್ರಾಹ್ಮಣನೆಂದು ಗುರುತಿಸಿದ್ದನು ಹಾಗೂ ರಾವಣನನ್ನು ಕೊಲ್ಲುವುದಕ್ಕಾಗಿ ರಾಮನು ದೊಡ್ಡ ಅಶ್ವಮೇಧ ಯಾಗವನ್ನೇ ಮಾಡಿದ್ದನು.

ರಾವಣನ ಅಜ್ಜನ ಹೆಸರು ಪ್ರಜಾಪತಿ ಪುಲಸ್ತ್ಯ. ಪುಲಸ್ತ್ಯರು ಬ್ರಹ್ಮ ದೇವರ ಹತ್ತು ಪುತ್ರರಲ್ಲಿ ಒಬ್ಬರಾಗಿದ್ದರು. ಈ ರೀತಿಯಾಗಿ ರಾವಣನು ಬ್ರಹ್ಮನ ಮೊಮ್ಮಗನಾಗಿ ಜನಿಸಬೇಕಾಯಿತು. ಆದರೆ ರಾಮಾಯಣದ ಕಥೆಯ ಪ್ರಕಾರ, ರಾವಣನು ತನ್ನ ಅಜ್ಜನ ಮಾರ್ಗಗಳನ್ನು ಅನುಸರಿಸಿರಲಿಲ್ಲ. ರಾವಣನು ರಾಮಾಯಣದಲ್ಲಿ ರಾಮನ ಪತ್ನಿ ಸೀತೆಯನ್ನು ಅಪಹರಿಸುವ ಮೂಲಕ ಕೆಟ್ಟವನೆಂದು ಪರಿಗಣಿಸಬೇಕಾಯಿತು.

ರಾವಣನನ್ನು ರಾಮಾಯಣ ಕಾಲದ ಅತ್ಯಂತ ಶ್ರೇಷ್ಟ ವಿದ್ವಾಂಸನೆಂದು ಪರಿಗಣಿಸಲಾಗುತ್ತದೆ. ರಾವಣನು ತಾನು ಮರಣ ಹೊಂದುವ ಮೊದಲು ಭಗವಾನ್‌ ರಾಮ ಮತ್ತು ಲಕ್ಷ್ಮಣನ ಬಳಿ ತನ್ನೊಂದಿಗೆ ಸ್ವಲ್ಪ ಸಮಯ ಕುಳಿತುಕೊಳ್ಳಲು ಕೇಳಿಕೊಂಡನು. ರಾಮ ಮತ್ತು ಲಕ್ಷ್ಮಣರು ರಾವಣನ ಕೋರಿಕೆಯ ಮೇರೆಗೆ ರಾವಣನೊಂದಿಗೆ ಕುಳಿತುಕೊಂಡರು ಆಗ ರಾವಣನು ಅವರಿಬ್ಬರಿಗೆ ರಾಜತಾಂತ್ರಿಕ ಹಾಗೂ ಸಂಖ್ಯಾಶಾಸ್ತ್ರದ ಅಂಶಗಳನ್ನು ಕಲಿಸಿಕೊಟ್ಟಿದ್ದನಂತೆ.

ರಾವಣನು ಓರ್ವ ಮಹಾನ್‌ ಸಂಗೀತಗಾರನಾಗಿದ್ದನು ಮತ್ತು ಸಂಗೀತದ ಬಗ್ಗೆ ಅಪಾರ ಆಸಕ್ತಿಯನ್ನು ಹೊಂದಿದ್ದನೆಂಬ ನಂಬಿಕೆಯಿದೆ. ರಾವಣನ ಜ್ಞಾನದ ಕುರಿತಿರುವ ಇನ್ನೊಂದು ಅಚ್ಚರಿಯ ವಿಷಯವೇನೆಂದರೆ ಶಿವನನ್ನು ಸ್ತುತಿಸುವ ಸತ್ಯಮೂಲ್ಯ ಕೃತಿ ಎಂದು ಪರಿಗಣಿಸಲಾಗುವ ಶಿವ ತಾಂಡವವನ್ನು ಸಂಯೋಜನೆ ಮಾಡಿರುವುದು ಕೂಡ ರಾವಣನೇ ಆಗಿದ್ದನು ಎನ್ನಲಾಗಿದೆ.

ರಾವಣನ ಮಗ ಮೇಘನಾದನು ಹುಟ್ಟಬೇಕಾದರೆ ಅವನು ಅಮರನಾಗಲು ರಾವಣನು ಎಲ್ಲಾ ಗ್ರಹಗಳಲ್ಲಿ ಹಾಗೂ ಸೂರ್ಯನಲ್ಲಿ ಒಂದು ನಿರ್ದಿಷ್ಟ ಸ್ಥಾನದಲ್ಲಿರಲು ಸೂಚಿಸಿದನು. ಆದರೆ ಶನಿ ರಾವಣನ ಮಾತನ್ನು ಅಲ್ಲಗಳೆದು ತನ್ನ ಸ್ಥಾನವನ್ನು ಬದಲಾಯಿಸುತ್ತಾನೆ. ಇದರಿಂದ ರಾವಣನು ಕೋಪಗೊಂಡು ಅವನು ತನ್ನ ಜಟಿಲದಿಂದ ಶನಿಯ ಮೇಲೆ ಆಕ್ರಮಣ ನಡೆಸಿ ಆತನ ಒಂದು ಕಾಲನ್ನು ಮುರಿದು ಹಾಕುತ್ತಾನೆ.

ಇಂದಿಗೂ ಕೂಡ ದೇಶದ ಹಲವೆಡೆ ರಾವಣನನ್ನು ಪೂಜಿಸಲಾದರೆ, ಇನ್ನು ಕೆಲವೆಡೆ ರಾವಣನನ್ನು ದ್ವೇಷಿಸಲಾಗುತ್ತದೆ. ರಾವಣ ಕೇವಲ ಕೆಟ್ಟ ಗುಣಗಳು ಮಾತ್ರವಲ್ಲ, ಸದ್ಗುಣಗಳು ಕೂಡ ಅಡಕವಾಗಿದ್ದವು.

ಕೃಪೆ: ಸಾಮಾಜಿಕ ಜಾಲತಾಣ.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....