ದೊಡ್ಡಬಳ್ಳಾಪುರ, (ಫೆ.06): ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ 2022-23ನೇ ಸಾಲಿನ ಪದಾಧಿಕಾರಿಗಳನ್ನು ಸಂಘದ ರಾಜ್ಯಾಧ್ಯಕ್ಷ ಕೆ.ಕೃಷ್ಣಪ್ಪ ಆಯ್ಕೆ ಮಾಡಿದ್ದಾರೆ.
ಇದರನ್ವಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಗೌರವ ಅಧ್ಯಕ್ಷರಾಗಿ ವಡ್ಡರಹಳ್ಳಿ ಶಾಲೆಯ ಎಸ್.ಲೋಕೇಶ್, ಅಧ್ಯಕ್ಷರಾಗಿ ಆರೂಢಿ ಶಾಲೆಯ ಎಂ.ಸಿದ್ದರಾಮಪ್ಪ, ಉಪಾಧ್ಯಕ್ಷರಾಗಿ ಬೀಡಿಕೆರೆ ಶಾಲೆಯ ಮಂಗಳಕುಮಾರಿ, ಎಸ್.ನಾಗೇನಹಳ್ಳಿ ಶಾಲೆಯ ಎನ್.ನಾರಾಯಣಪ್ಪ, ಕಾರ್ಯದರ್ಶಿಯಾಗಿ ಗುಂಜೂರು ಶಾಲೆಯ ಎಂ.ಜಿ.ಶ್ರೀನಿವಾಸ್, ಖಜಾಂಚಿಯಾಗಿ ಎಳ್ಳುಪುರ ಶಾಲೆಯ ಎ.ಎಂ.ಈಶ್ವರಯ್ಯ, ಸಂಘಟನಾ ಕಾರ್ಯದರ್ಶಿಯಾಗಿ ಅರಳುಮಲ್ಲಿಗೆ ಶಾಲೆಯ ನೂರುಲ್ಲಾ ಷರೀಫ್, ಸಕ್ಕರೆಗೊಲ್ಲಹಳ್ಳಿ ಶಾಲೆಯ ಪ್ರಮಿಳ, ರಾಜೀವ್ ಗಾಂಧಿ ಬಡಾವಣೆ ಶಾಲೆಯ ಚಿಕ್ಕಗಂಗಯ್ಯ, ದೇವರಾಜ ನಗರ ಶಾಲೆಯ ಪಿಟ್ಟ ಭವಾನಿ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಕಂಚಿಗನಾಳ ಶಾಲೆಯ ಸಿ.ಜಿ.ಶ್ರೀನಿವಾಸ್, ರೋಜಿಪುರ ಶಾಲೆಯ ವಿ.ಶ್ರೀನಿವಾಸ್ ಆಯ್ಕೆಯಾಗಿದ್ದಾರೆ.
ನೂತನವಾಗಿ ಅಯ್ಕೆಯಾದ ಪದಾಧಿಕಾರಿಗಳನ್ನು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಜೈಕುಮಾರ್, ಕಾರ್ಯದರ್ಶಿ ಎಸ್.ವಿ.ವಸಂತ್ ಗೌಡ, ಸರ್ಕಾರಿ ನೌಕರರ ಸಂಘದ ಜಿಲ್ಲಾ ಉಪಾಧ್ಯಕ್ಷ ಎಂ.ಎಸ್.ರಾಜಶೇಖರ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಉಪಾಧ್ಯಕ್ಷೆ ರಾಜೇಶ್ವರಿ, ತಾಲೂಕು ಉಪಾಧ್ಯಕ್ಷ ಎ.ವಿ.ಚಂದ್ರಪ್ಪ, ಜಿಲ್ಲಾ ಖಜಾಂಚಿ ಕೆ.ಹೆಚ್.ಬಸವಲಿಂಗಯ್ಯ ಮತ್ತಿತರರು ಅಭಿನಂದನೆ ಸಲ್ಲಿಸಿದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....<!--
-->Latest News
literature
crime
politics
others
politics