Daily story| ಹರಿತಲೇಖನಿ ದಿನಕ್ಕೊಂದು ಕಥೆ: ಚದುರಂಗದಿಂದ ಚಕ್ರವರ್ತಿ

Daily story: ಒಂದು ದಟ್ಟ ಕಾಡು, ಆ ಕಾಡಿಗೆ ರಾಜ ಮೃಗರಾಜನಿದ್ದ. ಅವನ ಮಂತ್ರಿ ಹುಲಿ. ಕುದುರೆ, ಆನೆ, ಮೊಲ, ಜಿಂಕೆ ಉಳಿದ ಪ್ರಾಣಿಗಳು ಸೈನಿಕರಂತೆ ಇದ್ದರು.

‘ನಾ ಹೆಚ್ಚು, ನಾ ಹೆಚ್ಚು’ ಎನ್ನುವ ಭಾವನೆ ಎಲ್ಲರಲ್ಲಿಯೂ ಇತ್ತು. ಕಾಡಿನ ರಾಜ ಸಿಂಹನಿಗೆ ವಯಸ್ಸಾಯಿತು. ಅದು ಮುಂದಿನ ಉತ್ತರಾಧಿಕಾರಿಯ ಹುಡುಕಾಟದಲ್ಲಿತ್ತು. ಕುದುರೆಗಳ ಸಾಮರ್ಥ್ಯ, ಜಿಂಕೆ ಮೊಲಗಳ ಮುಗ್ಧತೆ ಕಾನನದ ಅಧಿಪತ್ಯದ ಗದ್ದುಗೆಯ ಆಸೆಯಿಂದ ಹಿಂದೆ ಸರಿಯಲು ಕಾರಣವಾದವು.

ಮಂತ್ರಿ ಹುಲಿರಾಯ ಬಹಳ ಆತುರದಿಂದ ತನ್ನಿಂದಲೇ ಸಿಂಹವು ರಾಜನಾಗಿರುವುದು ಎಂದು ಅಹಂಕಾರದಿಂದ ಮೆರೆಯುತ್ತಿತ್ತು.

ಆನೆ ತಾನೂ ಏಕೆ ಸುಮ್ಮನಿರಬೇಕು? ‘ನಾನು ಕೂಡಾ ನೇತೃತ್ವ ವಹಿಸಲಿಕ್ಕೆ ಸಿದ್ಧನಿದ್ದೇನೆ’ ಎಂದು ನಿರ್ಧರಿತು.

ಹೀಗೆ ಒಂದು ದಿನ ತನ್ನ ಅಭಿಲಾಷೆಯನ್ನು ಉಳಿದೆಲ್ಲಾ ಮುಗ್ಧ ಪ್ರಾಣಿಗಳ ಮುಂದೆ ವ್ಯಕ್ತಪಡಿಸಿದಾಗ ಅದಕ್ಕೆ ಒಪ್ಪಿಕೊಂಡು ಬೆಂಬಲಿಸಿದವು. ಮೃಗರಾಜನಿಗೆ ಹುಲಿಯ ಸ್ವಭಾವ ಗೊತ್ತಿತ್ತು. ಇದು ಕಾಡಿನ ಸಂಪ್ರದಾಯ ಉಳಿಸುವುದಿಲ್ಲ. ಅದು ಆನೆಗೆ ಪರೋಕ್ಷವಾಗಿ ಬೆಂಬಲಿಸುತ್ತಿತ್ತು.

ಒಂದು ದಿನ ಇನ್ನೊಂದು ಕಾಡಿನ ಸಿಂಹವು ಈ ಕಾಡನ್ನು ವಶಪಡಿಸಿಕೊಳ್ಳಲು ಹವಣಿಸಿತು. ಇವರ ಜೊತೆ ಮಲ್ಲಯುದ್ಧ. ಇತರೆ ದೈಹಿಕ ಯುದ್ಧದಲ್ಲಿ ಗೆಲ್ಲಲಿಕ್ಕೆ ಆಗುವುದಿಲ್ಲ. ಬುದ್ಧಿಯಿಂದ ಗೆಲ್ಲಬೇಕು ಎಂದು ಉಪಾಯ ಮಾಡಿತು.

ಅದು ಈ ಕಾಡಿಗೆ ಬಂದು ನಾಯಕ ಮೃಗರಾಜನಿಗೆ ಹೇಳುತ್ತಾ ‘ನಾವು ಒಂದು ಚದುರಂಗ ಸ್ಪರ್ಧೆಯನ್ನು ಏರ್ಪಡಿಸೋಣ. ಸೋತರೆ ನಾವು ನಿಮಗೆ ಶರಣಾಗುತ್ತೇವೆ. ಗೆದ್ದರೆ ನೀವು ನಮ್ಮ ಸೇವಕರಾಗಿ ಮುಂದುವರೆಯಬೇಕು’ ಎಂದು ಹೇಳಿತು. ಈ ಸವಾಲಿಗೆ ಒಪ್ಪಿ ಸಿಂಹವು ಕಾಡಿನ ಎಲ್ಲ ಪ್ರಾಣಿಗಳ ಸಭೆ ಕರೆದು ನೆರೆಯ ಕಾಡಿನ ರಾಜ ಹಾಕಿದ ಸವಾಲ್ ಬಗ್ಗೆ ವಿವರಿಸಿತು.

‘ಸುಮ್ಮನಿದ್ದರೆ ನಾವು ಹೇಡಿಗಳಾಗುತ್ತವೆ. ಹಾಗಾಗಿ ನಾವು ಒಗ್ಗಟ್ಟಾಗಿ ಅವರ ವಿರುದ್ಧ ಗೆಲ್ಲಬೇಕು’ ಎಂದು ಉಪದೇಶಿಸಿತು. ಎಲ್ಲ ಪಶುಗಳು ಸಮ್ಮತಿಸಿದರು.

ಸಭೆ ಮುಗಿದ ಬಳಿಕ ಸಿಂಹ, ಹುಲಿಯನ್ನು ಆಮಂತ್ರಿಸಿ ಸಲಹೆ ನೀಡುತ್ತಾ, ‘ನೀನು ಅಹಂಕಾರ ಬಿಟ್ಟು ಎಲ್ಲರೊಂದಿಗೆ ಒಗ್ಗಟ್ಟಾಗಿರಬೇಕು. ಒಗ್ಗಟ್ಟಾಗಿದ್ದರೆ ಸಂತೋಷ ಒಂಟಿಯಾಗಿದ್ದರೆ ಉಪವಾಸ. ನಾವು ಬಲಿಷ್ಠರಿದ್ದರೂ ಸಣ್ಣವರ ಸಹಾಯ ಬೇಕು. ಅಪಾಯ ಬಂದಾಗ ಹುಲ್ಲಕಡ್ಡಿ ಕೂಡಾ ಆಸರೆವಾಗುತ್ತದೆ’ ಎಂದು ಹಿತನುಡಿಗಳನ್ನು ಹೇಳಿತು. ಆದರೆ ಸಿಂಹದ ಉಪದೇಶದ ಮಾತುಗಳು ಅದರ ಅಹಂಭಾವ ಸ್ವಭಾವವನ್ನು ಬದಲಾಯಿಸಲಿಲ್ಲ. ‘ನಾನೇ ಶಕ್ತಿವಂತ. ನನ್ನಿಂದ ಎಲ್ಲವು ಸಾಧ್ಯ. ಯಾವುದೇ ಪ್ರಾಣಿಗಳಿಂದ ನನಗೆ ಸಹಾಯ ಬೇಕಿಲ್ಲ. ಸಣ್ಣವರ ಸಹಕಾರ ಇಷ್ಟಪಡಲ್ಲ. ಅವರ ಜೊತೆ ಸೇರುವುದಿಲ್ಲ’ ಎಂದಿತು.

ಎರಡು ಕಾಡಿನ ಪ್ರಾಣಿಗಳ ‘ಚದುರಂಗ ಸ್ಪರ್ಧೆ’ ಪ್ರಾರಂಭವಾಯಿತು. ಆನೆಗಳ ಗುಂಪು ತಮ್ಮ ತಂಡವೇ ಗೆಲ್ಲಬೇಕು. ಹುಲಿಗೆ ಬುದ್ದಿ ಕಲಿಸಬೇಕು. ಅದರ ಸಹಾಯವಿಲ್ಲದೆ ಗೆದ್ದು ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿಬೇಕು ಎಂದು ಆತ್ಮವಿಶ್ವಾಸದಿಂದ ಆಡಲು ಪ್ರಾರಂಭಿಸಿದವು.

ಆ ಕಡೆ ಕಾಡಿನ ಗುಂಪಿನಲ್ಲಿಯೂ ಕೆಲವು ನ್ಯೂನ್ಯತೆಗಳಿದ್ದವು. ಆ ಕಡೆ ರಾಜ ಸಿಂಹನಿಗೆ ನಾವು ಈ ಕಾಡನ್ನು ವಶಪಡಿಸಿಕೊಳ್ಳುತ್ತೇವೆ ಎಂಬ ಆತ್ಮವಿಶ್ವಾಸವಿತ್ತು. ಆದರೆ ಮಂತ್ರಿ ಇತರೆ ಎಲ್ಲ ಸದಸ್ಯರಿಗೆ ನಿರ್ದಿಷ್ಟವಾದ ಗುರಿ ಹಾಗೂ ಛಲವಿರಲಿಲ್ಲ. ನಾಯಕನ ಸರ್ವಾಧಿಕಾರಿ ಧೋರಣೆ ಇಷ್ಟ ಆಗುತ್ತಿರಲಿಲ್ಲ. ಹೀಗೆ ದೃಢ ನಿರ್ಧಾರವಿಲ್ಲದೆ ನಾಯಕನ ಒತ್ತಾಯಕ್ಕೆ ಮಣಿದು ಆಡಲು ಬಂದಿದ್ದವು.

ಆಟ ಪ್ರಾರಂಭವಾಯಿತು. ಆ ಕಡೆಯಿಂದ ಈ ಕಡೆಗೆ ಒಂದೊಂದೇ ಪ್ರಾಣಿಗಳು ಚಲನೆಯಾಗಿ ಎರಡು ಕಡೆ ಕೆಲವು ಮುಗ್ಧ ಪ್ರಾಣಿಗಳು ಆಹುತಿಯಾದವು. ಆಟ ರೋಚಕ ಹಂತದಲ್ಲಿತ್ತು. ಈ ಕಡೆಯ ಹುಲಿರಾಯ ಆತುರ ಸ್ವಭಾವದವ. ‘ನಾನೇ ಗೆಲ್ಲಬೇಕು. ನನ್ನಿಂದಲೇ ಜಯಿಸಬೇಕು’ ಎಂಬ ಅತಿಯಾದ ಆತ್ಮವಿಶ್ವಾಸದಿಂದ ಮುನ್ನಡೆಯುತ್ತಿತ್ತು. ಆನೆಗಳು ಗಾಬರಿಯಾದವು. ಮತ್ತೆ ಆ ಹುಲಿ ಈ ಕುದುರೆ, ಮೊಲ, ಜಿಂಕೆಗಳನ್ನು ತಿಂದಿತು. ಕೇವಲ ಎರಡು ಆನೆಗಳು ಕೆಲವೇ ಕೆಲವು ಮುಗ್ಧ ಪ್ರಾಣಿಗಳು ಉಳಿದವು.

ಈ ಕಡೆ ಗುಂಪಿನ ಸದಸ್ಯರಿಗೆ ಬೆವರು ಇಳಿಯಿತು. ನಾಯಕ ಸಿಂಹವು ಆನೆಗಳಿಗೆ ‘ಬಹಳ ಜಾಗರೂಕವಾಗಿರಬೇಕು. ನೀವೇ ನಮ್ಮ ಗೌರವವನ್ನು ಕಾಪಾಡಬೇಕು. ಅವಸರ ಮಾಡಬೇಡಿರಿ. ಜಾಣ್ಣೆಯಿಂದ ಆಟ ಮುಂದುವರೆಸಿ’ ಎಂದು ಸಮಾಧಾನವನ್ನು ಹೇಳಿತು. ಅವು ಸ್ಥಿರ ಮನಸ್ಸಿನಿಂದ ಆಟ ಮುಂದುವರೆಸಿದವು.

ಅವಸರದಿಂದ ಓಡುತ್ತಿದ್ದ ವಿರೋಧಿ ಹುಲಿಯನ್ನು ಎರಡು ಆನೆಗಳು ಎರಡು ಕಡೆಯಿಂದ ಮುತ್ತಿಗೆ ಹಾಕಿ ಕೊಂದವು. ಜಾಣತನದಿಂದ ಒಂದೊಂದು ಪ್ರಾಣಿಗಳನ್ನು ಬಲಿ ತೆಗೆದುಕೊಳ್ಳುತ್ತಾ ವಿರೋಧಿ ಆನೆಗಳನ್ನು ಖೆಡ್ಡಾದಲ್ಲಿ ಕೆಡವಿ ಕೊನೆಗೆ ರಾಜನಾದ ಸಿಂಹವನ್ನು ಮುತ್ತಿಗೆ ಹಾಕಿದ್ದರಿಂದ ಬೆದರಿ ತಮ್ಮ ಸೋಲನ್ನು ಒಪ್ಪಿ ಶರಣಾದವು.

ಆತ್ಮವಿಶ್ವಾಸದಿಂದ ಆನೆಗಳು ತಮ್ಮ ರಾಜ್ಯವನ್ನು ವಿಸ್ತರಿಸಿ ರಾಜನ ಗೌರವ ಇಮ್ಮಡಿಗೊಳಿಸಿದವು. ಹುಲಿಗೆ ಬುದ್ದಿ ಕಲಿಸಿದವು. ಕೊನೆಗೆ ಬುದ್ದಿ ಬಂದ ಹುಲಿ ತನ್ನಲ್ಲಿರುವ ಅಹಂಕಾರವನ್ನು ತೆಗೆದುಹಾಕಿ ಕಾಡಿನಲ್ಲಿ ಎಲ್ಲರೊಂದಿಗೆ ಸಂತೋಷದಿಂದ ಬಾಳ ತೊಡಗಿತು.

ಕೃಪೆ: ಸಾಮಾಜಿಕ ಜಾಲತಾಣ (ಲೇಖಕರ ಮಾಹಿತಿ ಲಭ್ಯವಾಗಿಲ್ಲ)

ರಾಜಕೀಯ

ಕಾಂಗ್ರೆಸ್ ವಿರುದ್ಧ ಗುಡುಗಿದ ಮಾಜಿ ಪ್ರಧಾನಿ ಹೆಚ್‌.ಡಿ.ದೇವೇಗೌಡರು

ಕಾಂಗ್ರೆಸ್ ವಿರುದ್ಧ ಗುಡುಗಿದ ಮಾಜಿ ಪ್ರಧಾನಿ ಹೆಚ್‌.ಡಿ.ದೇವೇಗೌಡರು

ಕರ್ನಾಟಕವನ್ನು ಕಾಂಗ್ರೆಸ್ ಸರಕಾರ ಹಾಳು ಮಾಡುತ್ತಿದೆ. ಅದು ಎಷ್ಟರ ಮಟ್ಟಿಗೆ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದರೆ ಪರಿಶಿಷ್ಟ ಜನರ ಕಲ್ಯಾಣಕ್ಕಾಗಿ ಮೀಸಲಿಟ್ಟಿದ್ದ ಹಣವನ್ನು ಹಣವನ್ನು ಚುನಾವಣೆಗೆ ಬಳಸಿಕೊಂಡಿದೆ. HD Deve Gowda

[ccc_my_favorite_select_button post_id="102362"]
ದೇವನಹಳ್ಳಿ: ದೇವಾಲಯದ ಜೀರ್ಣೋದ್ಧಾರ ಕಾರ್ಯಕ್ರಮದಲ್ಲಿ ನಿಖಿಲ್ ಭಾಗಿ

ದೇವನಹಳ್ಳಿ: ದೇವಾಲಯದ ಜೀರ್ಣೋದ್ಧಾರ ಕಾರ್ಯಕ್ರಮದಲ್ಲಿ ನಿಖಿಲ್ ಭಾಗಿ

ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷ ಬದಲಾವಣೆ ವಿಚಾರಕ್ಕೆ ಪ್ರತಿಕ್ರಿಯೆಸಿದರು. ಭಾರತೀಯ ಜನತಾ ಪಾರ್ಟಿ ರಾಷ್ಟ್ರೀಯ ಪಕ್ಷ. ನಾನು ಮಾಧ್ಯಮಗಳಲ್ಲಿ ಗಮನಿಸಿದ್ದೇನೆ, nikhil kumaraswamy

[ccc_my_favorite_select_button post_id="102348"]
Video: ಸಂಕೋಲೆಗಳಲ್ಲಿ ಕಟ್ಟಿ ಭಾರತೀಯರ ಅವಮಾನಿಸಿದ ಮೋದಿ ಮಿತ್ರ ಟ್ರಂಪ್ ಸರ್ಕಾರ.. ವ್ಯಾಪಕ ಆಕ್ರೋಶ

Video: ಸಂಕೋಲೆಗಳಲ್ಲಿ ಕಟ್ಟಿ ಭಾರತೀಯರ ಅವಮಾನಿಸಿದ ಮೋದಿ ಮಿತ್ರ ಟ್ರಂಪ್ ಸರ್ಕಾರ.. ವ್ಯಾಪಕ

ವೈರಲ್ ವಿಡಿಯೋದಲ್ಲಿ ಅಕ್ರಮ ವಲಸಿಗರ ಕಾಲನ್ನು ಸಂಕೋಲೆಗಳಲ್ಲಿ ಕಟ್ಟಿರುವುದು ಹಾಗೂ ಕೈಗಳನ್ನು ಕೋಳಗಳಿಂದ ಬಂಧಿಸಿರುವುದು ಸ್ಪಷ್ಟವಾಗಿ ಕಂಡುಬಂದಿದೆ. Video

[ccc_my_favorite_select_button post_id="102365"]
los angeles fire| ಅಮೆರಿಕ ಕಾಡ್ಗಿಚ್ಚು: ಸಾವಿನ ಸಂಖ್ಯೆ 11ಕ್ಕೆ| Video

los angeles fire| ಅಮೆರಿಕ ಕಾಡ್ಗಿಚ್ಚು: ಸಾವಿನ ಸಂಖ್ಯೆ 11ಕ್ಕೆ| Video

ಹಾಲಿವುಡ್ ಹಿಲ್ ಹಾಗೂ ಸ್ಟುಡಿಯೋ ಸಿಟಿಗೆ ಹೊತ್ತಿಕೊಂಡಿದ್ದ ಬೆಂಕಿಯನ್ನು ವಿಮಾನ, ಹೆಲಿಕಾಪ್ಟರ್ ಗಳ ಮೂಲಕ ನೀರು ಸಿಂಪಡಿಸಿ ನಂದಿಸಲಾಗಿತ್ತು los Angeles fire

[ccc_my_favorite_select_button post_id="100721"]

ಕ್ರೀಡೆ

ಕ್ರೀಡಾ ಶಾಲೆ/ ವಸತಿ ನಿಲಯ ಪ್ರವೇಶಾತಿಗೆ ಆಯ್ಕೆ ಪ್ರಕ್ರಿಯೆ

ಕ್ರೀಡಾ ಶಾಲೆ/ ವಸತಿ ನಿಲಯ ಪ್ರವೇಶಾತಿಗೆ ಆಯ್ಕೆ ಪ್ರಕ್ರಿಯೆ

ವಿಭಾಗ ಮಟ್ಟಕ್ಕೆ ಆಯ್ಕೆಯಾಗುವ ಕಿರಿಯ ಕ್ರೀಡಾಪಟುಗಳಿಗೆ ವಿಭಾಗ ಮಟ್ಟಕ್ಕೆ ತೆರಳಲು ಇಲಾಖೆಯಿಂದ ಪ್ರಯಾಣಭತ್ಯೆ ನೀಡಲಾಗುವುದು. hostel admission

[ccc_my_favorite_select_button post_id="101814"]

Kho kho world cup ಫೈನಲ್‌ನಲ್ಲಿ ಗೆದ್ದು

[ccc_my_favorite_select_button post_id="101277"]

Khel ratna: ಗುಕೇಶ್ ಸೇರಿ 4 ಕ್ರೀಡಾಪಟುಗಳಿಗೆ

[ccc_my_favorite_select_button post_id="99992"]

Video: ವಿಶ್ವ ಚದುರಂಗ ವೀರನಾದ ಭಾರತದ ಡಿ.ಗುಕೇಶ್..

[ccc_my_favorite_select_button post_id="98503"]
ಮನೆ ಮಾರಿ ಪ್ರೇಮಿಯೊಂದಿಗೆ ಪತ್ನಿ ಪರಾರಿ.. ಗಂಡ ಆತ್ಮಹತ್ಯೆ..!

ಮನೆ ಮಾರಿ ಪ್ರೇಮಿಯೊಂದಿಗೆ ಪತ್ನಿ ಪರಾರಿ.. ಗಂಡ ಆತ್ಮಹತ್ಯೆ..!

ಪ್ರಿಯಕರೊಂದಿಗೆ ಓಡಿ ಹೋಗಿರುವ ವಿವಾಹಿತ ಮಹಿಳೆ ವಿದೇಶದಲ್ಲಿದ್ದ ತನ್ನ ಗಂಡನನ್ನು ಬಿಟ್ಟಿರುವುದಲ್ಲದೆ, ಗಂಡ ತನಗಾಗಿ ಕಟ್ಟಿದ್ದ ಮನೆಯನ್ನು ಮಾರಿದ್ದಾಳೆ. Suicide

[ccc_my_favorite_select_button post_id="102360"]
ಬಸ್ -ಬೈಕ್ ಡಿಕ್ಕಿ: 1 ವರ್ಷದ ಮಗು ಸೇರಿ ಒಂದೇ ಕುಟುಂಬದ ಐವರ ಸಾವು

ಬಸ್ -ಬೈಕ್ ಡಿಕ್ಕಿ: 1 ವರ್ಷದ ಮಗು ಸೇರಿ ಒಂದೇ ಕುಟುಂಬದ ಐವರ

ಹುಲಿಗೆಮ್ಮ ದೇವಿಯ ದೇವರ ಕಾರ್ಯಕ್ರಮಕ್ಕಾಗಿ ಗುರುಗುಂಟಾಗೆ ತೆರಳುತ್ತಿದ್ದಾಗ ತಿಂಥಣಿ ಸಮೀಪ ಮುಂದೆ ಸಾಗುತ್ತಿದ್ದ ಲಾರಿಯನ್ನು ಓವರ್ ಟೇಕ್ ಮಾಡುವಾಗ ಎದುರಿಗೆ ಬಂದ ಬಸ್ಸಿಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಮಕ್ಕಳು ಸೇರಿ ಐವರು ಸ್ಥಳದಲ್ಲೇ

[ccc_my_favorite_select_button post_id="102325"]

ಆರೋಗ್ಯ

ಸಿನಿಮಾ

ಅನಂತ್ ನಾಗ್, ಬಾಲಕೃಷ್ಣ ಸೇರಿ 139 ಮಂದಿಗೆ ಪದ್ಮ ಗೌರವ

ಅನಂತ್ ನಾಗ್, ಬಾಲಕೃಷ್ಣ ಸೇರಿ 139 ಮಂದಿಗೆ ಪದ್ಮ ಗೌರವ

ಕನ್ನಡ ಸಿನಿಮಾ ಇಡೀ ದೇಶದ ಚಿತ್ರರಂದ ಮಂದಿ ಗೌರವಿ ಸುವ ಹೆಸರು ಅನಂತ್ ನಾಗ್ ಅವರದು. ಆದರೆ 140ಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ, ಅಂಕು‌ರ್ ಸೇರಿದಂತೆ 10ಕ್ಕೂ ಹೆಚ್ಚು ಹಿಂದಿ ಚಿತ್ರಗಳಲ್ಲಿ ನಟಿಸಿ, ರಾಷ್ಟ್ರಪ್ರಶಸ್ತಿಗೂ

[ccc_my_favorite_select_button post_id="101669"]
error: Content is protected !!