ದೊಡ್ಡಬಳ್ಳಾಪುರ: ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ Doddaballapura ತಾಲೂಕು ಅಧ್ಯಕ್ಷರಾಗಿ ವಕೀಲರಾದ ಚಂದ್ರಶೇಖರ್ ಅವರನ್ನು ನೇಮಕ ಮಾಡಲಾಗಿದೆ.
ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆಯ ಕಚೇರಿಯಲ್ಲಿ ರಾಜ್ಯಾಧ್ಯಕ್ಷ ನಿಂಗರಾಜಗೌಡ ಅವರು ಚಂದ್ರಶೇಖರ್ ಅವರಿಗೆ ಆದೇಶ ಪತ್ರವನ್ನು ವಿತರಿಸಿದರು.
ಈ ವೇಳೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಧ್ಯಕ್ಷ ಕೇಶವಮೂರ್ತಿ, ಯಲಹಂಕ ತಾಲೂಕು ಅಧ್ಯಕ್ಷೆ ಕಲ್ಲೇಶ್ವರಿ, ಪದಾಧಿಕಾರಿಗಳಾದ ಮಂಜುನಾಥ್, ಹನುಮೇಗೌಡ, ನಿಂಗರಾಜು ಮತ್ತಿತರರಿದ್ದರು.