ಹರಿತಲೇಖನಿ ದಿನಕ್ಕೊಂದು ಕಥೆ: ಕರುಣೆಯ ಗೆಲುವು

ಸಣ್ಣ ದೇಶಕ್ಕೆ ಒಬ್ಬ ಒಳ್ಳೆಯ ದೊರೆಯಿದ್ದ. ಅವನೆಂದಿಗೂ ಸಿಂಹಾಸನದ ಮೇಲೆ ಕುಳಿತು ರಾಜ್ಯಭಾರ ಮಾಡಲಿಲ್ಲ. ಬದಲಾಗಿ ನೊಂದವರ ಬಳಿಗೆ ಹೋಗಿ ಕಣ್ಣೀರೊರೆಸಿದ.

ಸೋತವರಿಗೆ ನೆರವು ನೀಡಿದ. ಅಸಹಾಯಕರ ಸೇವೆ ಮಾಡಿದ. ಎಲ್ಲರೂ ತನ್ನ ಸಮಾನರೆಂದು ತಿಳಿದ. ಪ್ರಜೆಗಳು ತಮ್ಮ ಪ್ರಾಣಕ್ಕಿಂತ ಹೆಚ್ಚಾಗಿ ಅವನ ಮೇಲೆ ಪ್ರೀತಿಯಿಟ್ಟರು.

ಒಂದು ಸಲ ಚಕ್ರವರ್ತಿ ಆ ದೇಶದ ಬಳಿಗೆ ಕಾರ್ಯ ನಿಮಿತ್ತ ಬಂದ. ತನ್ನನ್ನು ಭೇಟಿಯಾಗುವಂತೆ ದೊರೆಗೆ ಭಟರ ಮೂಲಕ ಕರೆ ಕಳುಹಿಸಿದ.

ಆಗ ದೊರೆ ಒಬ್ಬ ರೋಗಿಷ್ಠನ ಮನೆಗೆ ಬಂದು ಅವನ ಶುಶ್ರೂಷೆ ಮಾಡುವುದರಲ್ಲಿ ನಿರತನಾಗಿದ್ದ. ಭಟರು ‘ಕೂಡಲೇ ಬಂದು ಭೇಟಿಯಾಗಬೇಕೆಂದು ಚಕ್ರವರ್ತಿಗಳು ಕರೆ ಕಳುಹಿಸಿದ್ದಾರೆ ಬನ್ನಿ’ ಎಂದರು. ದೊರೆ ವಿನೀತನಾಗಿ ‘ಕಷ್ಟದಲ್ಲಿರುವ ಪ್ರಜೆಯೊಬ್ಬನಿಗೆ ನೆರವಾಗುವ ಕೆಲಸದಲ್ಲಿದ್ದೇನೆ. ಇದು ಮುಗಿದ ಕೂಡಲೇ ಬರುವುದಾಗಿ ಹೇಳಿ’ ಎಂದು ತಿಳಿಸಿದ.

ಈ ಮಾತಿನಿಂದ ಚಕ್ರವರ್ತಿಗೆ ಅಸಾಧ್ಯ ಕೋಪ ಬಂತು. ‘ಏನಿದು? ಒಬ್ಬ ಸಣ್ಣ ರಾಜನಿಗೆ ಚಕ್ರವರ್ತಿಯ ಆಜ್ಞೆಯನ್ನು ಧಿಕ್ಕರಿಸುವಂಥ ಪೊಗರೇ? ತಕ್ಷ ಣ ಈ ರಾಜ್ಯದ ಮೇಲೆ ಯುದ್ಧ ಸಾರಿ. ಅವನನ್ನು ಸದೆ ಬಡಿಯಿರಿ’ ಎಂದು ಮಂತ್ರಿಗಳಿಗೆ ಆಜ್ಞಾಪಿಸಿದ.

ದೊರೆಗೆ ಯುದ್ಧದ ವರ್ತಮಾನ ತಲುಪಿತು. ಮಂತ್ರಿಗಳು ಯುದ್ಧದ ಸಿದ್ಧತೆಗೆ ಮುಂದಾದರು. ಆದರೆ ದೊರೆ ಒಪ್ಪಲಿಲ್ಲ. ‘ಯುದ್ಧ ಮಾಡಿದರೆ ನೂರಾರು ಮಂದಿಯ ಸಾವು ನಿಶ್ಚಿತ. ಅದರ ಬದಲು ರಾಜ್ಯವನ್ನು ಚಕ್ರವರ್ತಿಗೆ ಒಪ್ಪಿಸಿದರೆ ಎಲ್ಲರೂ ಬದುಕುತ್ತಾರೆ’ ಎಂದು ನಿರ್ಧರಿಸಿ ಚಕ್ರವರ್ತಿಯ ಭೇಟಿಗೆ ಸಿದ್ಧನಾದ.

ದೊರೆ ಒಬ್ಬ ಸೇವಕನ ಜೊತೆಗೆ ಕುದುರೆಯ ಮೇಲೆ ಕುಳಿತುಕೊಂಡು ಚಕ್ರವರ್ತಿಯ ಬಳಿಗೆ ಹೊರಟ. ಕಡು ಬಿಸಿಲಿಗೆ ಕಾಲು ಸುಡುತ್ತಿತ್ತು. ತಾನು ಕುದುರೆಯ ಮೇಲೆ ಸಾಗುವಾಗ ಸೇವಕ ಕುದುರೆಯ ಹಗ್ಗ ಹಿಡಿದುಕೊಂಡು ನಡೆದು ಬರುತ್ತಿದ್ದ. ಅವನು ನಡೆಯಲಾಗದೆ ಕಷ್ಟಪಡುತ್ತಿದ್ದ. ಅವನಿಗೆ ಆಯಾಸವಾಗುತ್ತಿದೆಯೆಂದು ದೊರೆಗೆ ಅರ್ಥವಾಯಿತು.

ಕುದುರೆಯ ಮೇಲಿಂದ ಕೆಳಗಿಳಿದ. ಸೇವಕನನ್ನು ಕರೆದು ‘ನೀನು ತುಂಬ ಬಳಲಿದ್ದಿ. ನೀನೀಗ ಕುದುರೆ ಮೇಲೆ ಕುಳಿತುಕೋ. ನಾನು ಸ್ವಲ್ಪ ದೂರ ಹಗ್ಗ ಹಿಡಿದುಕೊಂಡು ನಡೆದು ಬರುತ್ತೇನೆ. ನಿನ್ನ ಬಳಲಿಕೆ ತೀರಿದ ಮೇಲೆ ನಾನು ಕುಳಿತುಕೊಳ್ಳುತ್ತೇನೆ. ನಾವಿಬ್ಬರೂ ಹೀಗೆ ಸರದಿ ಬದಲಾಯಿಸಿಕೊಂಡು ಮುಂದೆ ಸಾಗೋಣ’ ಎಂದ.

ಸೇವಕ ಗಾಬರಿಯಿಂದ ‘ಎಲ್ಲಾದರೂ ಉಂಟೇ? ನೀವು ನಡೆದು ನಾನು ಕುದುರೆಯ ಮೇಲೇರುವುದೆ!’ ಎಂದು ದೂರ ನಿಂತ. ಆದರೆ ದೊರೆ ಒತ್ತಾಯದಿಂದ ಅವನನ್ನೂ ಕುದುರೆಯಲ್ಲಿ ಕೂಡಿಸಿ ಮುಂದೆ ಸಾಗಿದ.

ಒಮ್ಮೆ ಸೇವಕ, ಒಮ್ಮೆ ತಾನು ಕುದುರೆಯ ಮೇಲೇರುತ್ತ ಕಡೆಗೂ ಚಕ್ರವರ್ತಿಯ ಶಿಬಿರ ತಲಪಿದ. ಆಗ ಸೇವಕ ಕುದುರೆಯ ಮೇಲಿದ್ದ. ಅವನನ್ನೇ ದೊರೆಯೆಂದು ಭಾವಿಸಿ ಮಾತನಾಡಿಸಲು ಬಂದ ಚಕ್ರವರ್ತಿಯ ಬಳಿ ಸೇವಕ ಕುದುರೆಯಿಂದ ಕೆಳಗಿಳಿದು ಕೈ ಜೋಡಿಸಿ ‘ದೊರೆಗಳು ಅವರು! ನಾನು ಸೇವಕ’ ಎಂದು ವಿನಯದಿಂದ ಹೇಳಿದ.

ಚಕ್ರವರ್ತಿ ನಡೆದ ವಿಷಯ ತಿಳಿದುಕೊಂಡ. ಮರುಕ್ಷಣವೇ ಪಶ್ಚಾತ್ತಾಪದಿಂದ ತಲೆ ತಗ್ಗಿಸಿದ. ‘ಛೇ! ಸೇವಕನನ್ನೂ ತನ್ನ ಸಮಾನನೆಂದು ಭಾವಿಸಿ ಕುದುರೆಯ ಮೇಲೆ ಕರೆ ತರುವ ದೊರೆ ಈ ಭರತಖಂಡದಲ್ಲೇ ಇರಲಿಕ್ಕಿಲ್ಲ. ಇಂತಹವನೊಂದಿಗೆ ಯುದ್ಧವೆಸಗಿದರೆ ಪ್ರಜೆಗಳು ದಂಗೆಯೆದ್ದು ನನ್ನನ್ನೇ ಕೊಂದಾರು. ಋುಷಿ ಸದೃಶನಾದ ದೊರೆಯ ರಾಜ್ಯವನ್ನು ಸ್ವತಂತ್ರಗೊಳಿಸುತ್ತೇನೆ’ ಎಂದ ಹೇಳಿದ.

ಕೃಪೆ: ಸಾಮಾಜಿಕ ಜಾಲತಾಣ.

ರಾಜಕೀಯ

ಮೈಕ್ರೋ ಫೈನಾನ್ಸ್‌ಗಳಿಂದ ಸತ್ತವರಿಗೆ ನ್ಯಾಯ ನೀಡಿ: ಆರ್‌.ಅಶೋಕ ಆಗ್ರಹ

ಮೈಕ್ರೋ ಫೈನಾನ್ಸ್‌ಗಳಿಂದ ಸತ್ತವರಿಗೆ ನ್ಯಾಯ ನೀಡಿ: ಆರ್‌.ಅಶೋಕ ಆಗ್ರಹ

ಮೈಕ್ರೋ ಫೈನಾನ್ಸ್‌ನ ಕಿರುಕುಳದಿಂದ ಆತ್ಮಹತ್ಯೆಗೆ ಶರಣಾದ ತಾಯಿ ಮತ್ತು ಮಗನ ಕುಟುಂಬಕ್ಕೆ ಆರ್‌.ಅಶೋಕ (R Ashoka) ಭೇಟಿ ನೀಡಿ ಸಾಂತ್ವನ ಹೇಳಿದರು.

[ccc_my_favorite_select_button post_id="102357"]
ದೇವನಹಳ್ಳಿ: ದೇವಾಲಯದ ಜೀರ್ಣೋದ್ಧಾರ ಕಾರ್ಯಕ್ರಮದಲ್ಲಿ ನಿಖಿಲ್ ಭಾಗಿ

ದೇವನಹಳ್ಳಿ: ದೇವಾಲಯದ ಜೀರ್ಣೋದ್ಧಾರ ಕಾರ್ಯಕ್ರಮದಲ್ಲಿ ನಿಖಿಲ್ ಭಾಗಿ

ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷ ಬದಲಾವಣೆ ವಿಚಾರಕ್ಕೆ ಪ್ರತಿಕ್ರಿಯೆಸಿದರು. ಭಾರತೀಯ ಜನತಾ ಪಾರ್ಟಿ ರಾಷ್ಟ್ರೀಯ ಪಕ್ಷ. ನಾನು ಮಾಧ್ಯಮಗಳಲ್ಲಿ ಗಮನಿಸಿದ್ದೇನೆ, nikhil kumaraswamy

[ccc_my_favorite_select_button post_id="102348"]
ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಭೇಟಿಯಾದ ನಾ.ರಾ.ಲೋಕೇಶ್

ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಭೇಟಿಯಾದ ನಾ.ರಾ.ಲೋಕೇಶ್

ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು, ಉಕ್ಕು ಖಾತೆ ಸಹಾಯಕ ಸಚಿವ ಭೂಪತಿರಾಜು ಶ್ರೀನಿವಾಸ ವರ್ಮ, ಸಂಸದ ಭರತ್ ಅವರೊಂದಿಗೆ ಉಕ್ಕು ಸಚಿವರನ್ನು ಭೇಟಿಯಾದ ಲೋಕೇಶ್ HD Kumaraswamy

[ccc_my_favorite_select_button post_id="102307"]
los angeles fire| ಅಮೆರಿಕ ಕಾಡ್ಗಿಚ್ಚು: ಸಾವಿನ ಸಂಖ್ಯೆ 11ಕ್ಕೆ| Video

los angeles fire| ಅಮೆರಿಕ ಕಾಡ್ಗಿಚ್ಚು: ಸಾವಿನ ಸಂಖ್ಯೆ 11ಕ್ಕೆ| Video

ಹಾಲಿವುಡ್ ಹಿಲ್ ಹಾಗೂ ಸ್ಟುಡಿಯೋ ಸಿಟಿಗೆ ಹೊತ್ತಿಕೊಂಡಿದ್ದ ಬೆಂಕಿಯನ್ನು ವಿಮಾನ, ಹೆಲಿಕಾಪ್ಟರ್ ಗಳ ಮೂಲಕ ನೀರು ಸಿಂಪಡಿಸಿ ನಂದಿಸಲಾಗಿತ್ತು los Angeles fire

[ccc_my_favorite_select_button post_id="100721"]

ಕ್ರೀಡೆ

ಕ್ರೀಡಾ ಶಾಲೆ/ ವಸತಿ ನಿಲಯ ಪ್ರವೇಶಾತಿಗೆ ಆಯ್ಕೆ ಪ್ರಕ್ರಿಯೆ

ಕ್ರೀಡಾ ಶಾಲೆ/ ವಸತಿ ನಿಲಯ ಪ್ರವೇಶಾತಿಗೆ ಆಯ್ಕೆ ಪ್ರಕ್ರಿಯೆ

ವಿಭಾಗ ಮಟ್ಟಕ್ಕೆ ಆಯ್ಕೆಯಾಗುವ ಕಿರಿಯ ಕ್ರೀಡಾಪಟುಗಳಿಗೆ ವಿಭಾಗ ಮಟ್ಟಕ್ಕೆ ತೆರಳಲು ಇಲಾಖೆಯಿಂದ ಪ್ರಯಾಣಭತ್ಯೆ ನೀಡಲಾಗುವುದು. hostel admission

[ccc_my_favorite_select_button post_id="101814"]

Kho kho world cup ಫೈನಲ್‌ನಲ್ಲಿ ಗೆದ್ದು

[ccc_my_favorite_select_button post_id="101277"]

Khel ratna: ಗುಕೇಶ್ ಸೇರಿ 4 ಕ್ರೀಡಾಪಟುಗಳಿಗೆ

[ccc_my_favorite_select_button post_id="99992"]

Video: ವಿಶ್ವ ಚದುರಂಗ ವೀರನಾದ ಭಾರತದ ಡಿ.ಗುಕೇಶ್..

[ccc_my_favorite_select_button post_id="98503"]
ನೇಣು ಬಿಗಿದು ವಿದ್ಯಾರ್ಥಿನಿ ಆತ್ಮಹತ್ಯೆ

ನೇಣು ಬಿಗಿದು ವಿದ್ಯಾರ್ಥಿನಿ ಆತ್ಮಹತ್ಯೆ

ಮೊದಲ ವರ್ಷದ ಬಿಎಸ್ಪಿ ನರ್ಸಿಂಗ್ ವ್ಯಾಸಂಗ ಮಾಡ್ತಿದ್ದರು. ಮಂಗಳವಾರ ರಾತ್ರಿ ಹಾಸ್ಟೆಲ್‌ನಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ.suicide

[ccc_my_favorite_select_button post_id="102335"]
ಬಸ್ -ಬೈಕ್ ಡಿಕ್ಕಿ: 1 ವರ್ಷದ ಮಗು ಸೇರಿ ಒಂದೇ ಕುಟುಂಬದ ಐವರ ಸಾವು

ಬಸ್ -ಬೈಕ್ ಡಿಕ್ಕಿ: 1 ವರ್ಷದ ಮಗು ಸೇರಿ ಒಂದೇ ಕುಟುಂಬದ ಐವರ

ಹುಲಿಗೆಮ್ಮ ದೇವಿಯ ದೇವರ ಕಾರ್ಯಕ್ರಮಕ್ಕಾಗಿ ಗುರುಗುಂಟಾಗೆ ತೆರಳುತ್ತಿದ್ದಾಗ ತಿಂಥಣಿ ಸಮೀಪ ಮುಂದೆ ಸಾಗುತ್ತಿದ್ದ ಲಾರಿಯನ್ನು ಓವರ್ ಟೇಕ್ ಮಾಡುವಾಗ ಎದುರಿಗೆ ಬಂದ ಬಸ್ಸಿಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಮಕ್ಕಳು ಸೇರಿ ಐವರು ಸ್ಥಳದಲ್ಲೇ

[ccc_my_favorite_select_button post_id="102325"]

ಆರೋಗ್ಯ

ಸಿನಿಮಾ

ಅನಂತ್ ನಾಗ್, ಬಾಲಕೃಷ್ಣ ಸೇರಿ 139 ಮಂದಿಗೆ ಪದ್ಮ ಗೌರವ

ಅನಂತ್ ನಾಗ್, ಬಾಲಕೃಷ್ಣ ಸೇರಿ 139 ಮಂದಿಗೆ ಪದ್ಮ ಗೌರವ

ಕನ್ನಡ ಸಿನಿಮಾ ಇಡೀ ದೇಶದ ಚಿತ್ರರಂದ ಮಂದಿ ಗೌರವಿ ಸುವ ಹೆಸರು ಅನಂತ್ ನಾಗ್ ಅವರದು. ಆದರೆ 140ಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ, ಅಂಕು‌ರ್ ಸೇರಿದಂತೆ 10ಕ್ಕೂ ಹೆಚ್ಚು ಹಿಂದಿ ಚಿತ್ರಗಳಲ್ಲಿ ನಟಿಸಿ, ರಾಷ್ಟ್ರಪ್ರಶಸ್ತಿಗೂ

[ccc_my_favorite_select_button post_id="101669"]
error: Content is protected !!