ದೊಡ್ಡಬಳ್ಳಾಪುರ, (ಸೆ.20); ನಗರಸಭೆ ವ್ಯಾಪ್ತಿಯ ಪ್ರತಿ ವಾರ್ಡ್ಲ್ಲೂ (ಇ)ಖಾತೆ ಆಂದೋಲನ, ಚರಂಡಿಗಳ ಸ್ವಚ್ಛತೆ ಬಳಿಕ ಔಷಧಿ ಸಿಂಪಡಣೆ, ಬೀದಿ ನಾಯಿಗಳ ಹಾವಳಿಗೆ ಕಡಿವಾ, ಬೀದಿ ದೀಪಗಳ ಅಳವಡಿಕೆ, ವಾಣಿಜ್ಯ ಮಳಿಗೆಗಳ ಪರವಾನಿಗೆ ಕೊಡುವಾಗ ಕನ್ನಡ ನಾಮಫಲಕ ಕಡ್ಡಾಯ ಮಾಡುವಂತೆ ಒತ್ತಾಯಿಸಿ ರಾಜ್ಯ ವಿಜಯ ಕರ್ನಾಟಕ ರಕಣಾ ವೇದಿಕೆ ವತಿಯಿಂದ ನಗರಸಭೆ ಪೌರಾಯುಕ್ತ ಕಾರ್ತಿಕ ಈಶ್ವರ್ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ಕುರಿತು ಮಾಹಿತಿ ನೀಡಿದ ವಿ-ಕರವೇ ಸಂಸ್ಥಾಪಕ ಅಧ್ಯಕ್ಷ ಎ.ನಂಜಪ್ಪ, ನಗರಸಭೆಯಿಂದ ಕಂದಾಯ ಅಂದೋಲನ ಮಾಡುವ ರೀತಿಯಲ್ಲಿ ಪ್ರತಿ ವಾರ್ಡ್ನಲ್ಲಿ (ಇ)ಖಾತೆ ಆಂದೋಲನ ಹಾಗೂ ಪ್ರತಿ ವಾಣಿಜ್ಯ ಮಳಿಗೆಗಳು, ಅಂಗಡಿಗಳಿಗೆ ಪರವಾನಿಗೆ ಕೊಡುವ ವೇಳೆ ಶೇಕಡಾ 60 ರಷ್ಟು ಕನ್ನಡ ದಪ್ಪ ಅಕ್ಷರದಲ್ಲಿ ನಾಮಫಲಕ ಕಡ್ಡಾಯಗೊಳಿಸಬೇಕಿದೆ.
ಅಲ್ಲದೆ ನಗರಸಭೆಯ ವ್ಯಾಪ್ತಿಯ ಚರಂಡಿಗಳನ್ನು ಶುಚಿ ಮಾಡುವಾಗ ಕನಿಷ್ಠ 10 ದಿನಕ್ಕೊಮ್ಮೆಯಾದರೂ ಔಷಧಿ ಸಿಂಪಡಣೆಯನ್ನು ಮಾಡಬೇಕಿದೆ. ಆ ಮೂಲಕ ಇತ್ತೀಚೆಗೆ ಹರಡುತ್ತಿರುವ ಡೆಂಘೇ ಹಾಗೂ ವೈರಲ್ ಜ್ವರವನ್ನು ತಡೆಗಟ್ಟಬೇಕಿದೆ.
ಇದನ್ನೂ ಓದಿ: ಹೊರನಾಡಲ್ಲಿ ವಸ್ತ್ರ ಸಂಹಿತೆ ಜಾರಿ
ದೊಡ್ಡಬಳ್ಳಾಪುರ ನಗರದ ಬೀದಿ ದೀಪಗಳ ಬಗ್ಗೆ ಗಮನಹರಿಸುವುದು, ಬೀದಿ ನಾಯಿಗಳ ಹಾವಳಿಯಿಂದ ಸಣ್ಣ ಮಕ್ಕಳು ಮತ್ತು ಹೆಣ್ಣು ಮಕ್ಕಳು, ಹಿರಿಯ ನಾಗರೀಕರು ತೊಂದರೆಗೆ ಒಳಗಾಗುತ್ತಿದ್ದಾರೆ. ಕೂಡಲೇ ನಾಯಿಗಳ ಕಡಿವಾಣ ಕೈಗೊಳ್ಳಬೇಕೆಂದು ಮನವಿ ಮಾಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ರಾಜ್ಯ ವಿಜಯ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯ ಸಮಿತಿಯ ನಯಾಜ್ ಖಾನ್ ಬಿ., ಸೋಮರಾಜು, ಗಂಗರಾಜು, ಅಜಯ್ ಕುಮಾರ್, ಜಿಲ್ಲಾಧ್ಯಕ್ಷ ಮಂಜುನಾಥ, ಯುವ ಜಿಲ್ಲಾಧ್ಯಕ್ಷ ಪಣೀಶ್,
ಮಹಿಳಾ ಜಿಲ್ಲಾಧ್ಯಕ್ಷೆ ಶಶಿಕಲಾ, ಕಾರ್ಯದರ್ಶಿ ರೇಷ್ಮಾ ಖಾನಂ, ತಾಲೂಕು ಅಧ್ಯಕ್ಷ ಹರಿ ಕುಮಾರ್, ಚಂದ್ರಶೇಖರಯ್ಯ, ನವೀನ್ ಕುಮಾರ್, ವಿದ್ಯಾಧರ, ನಗರ ಅಧ್ಯಕ್ಷ ಚರಣ್ ಕುಮಾರ್ ಮತ್ತಿತರರಿದ್ದರು.