ದೊಡ್ಡಬಳ್ಳಾಪುರ, (ಮೇ.16); ನಗರದ ತಾಲೂಕು ಕಚೇರಿ ಮುಂಭಾಗ ಮಳೆ ನೀರು ನಿಂತಿದ್ದು, ಮಳೆ ಸುರಿದು ಮೂರು ದಿನವಾದರು ನೀರು ಖಾಲಿಯಾಗದೆ, ಈ ವ್ಯಾಪ್ತಿಯಲ್ಲಿ ಸಂಚರಿಸುವ ವಾಹನ ಸವಾರರು ಪರದಾಡುವಂತಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಪವಿಭಾಗಾಧಿಕಾರಿ ಕಚೇರಿ, ತಹಶೀಲ್ದಾರ್ ಕಚೇರಿ ಸೇರಿದಂತೆ ತಾಲೂಕಿನ ಆಡಳಿತ ಯಂತ್ರವೇ ಈ ಕಟ್ಟಡದಲ್ಲಿ ಅಡಗಿದೆ. ಆದರೆ ಈ ಕಚೇರಿಯ ಮುಂಭಾಗದಲ್ಲಿನ ಕಳೆದ ಮೂರು ದಿನಗಳಿಂದ ಈ ಅವಾಂತರವಾಗಿದ್ದರು ಯಾರೊಬ್ಬರು ತಲೆ ಕೆಡಿಸಿಕೊಳ್ಳುತ್ತಿಲ್ಲ ಎಂಬ ಆಕ್ರೋಶ ಸ್ಥಳೀಯರದ್ದಾಗಿದೆ
ಪ್ರತಿ ನಿತ್ಯ ಈ ಕಚೇರಿಗಳಿಗೆ ಭೇಟಿ ನೀಡುವ ಸಾವಿರಾರು ಮಂದಿ ಸಾರ್ವಜನಿಕರು ರಸ್ತೆಯಲ್ಲಿ ನಿಂತಿರುವ ಕೊಚ್ಚೇ ನೀರನ್ನು ತುಳಿದುಕೊಂಡು ತಾಲೂಕು ಕಚೇರಿಗೆ ಕೊಂಡೋಯ್ಯಬೇಕಾದ ಅನಿವಾರ್ಯತೆ ಎದುರಾಗಿದೆ.
ಇನ್ನು ನೆಲಮಂಗಲ – ದೊಡ್ಡಬಳ್ಳಾಪುರದ ಜಿ.ರಾಮೇಗೌಡ ವೃತ್ತ ಸಂಪರ್ಕಿಸುವ ರಸ್ತೆ ಇದಾಗಿರುವ ಕಾರಣ, ನೂರಾರು ವಾಹನಗಳು ಕೂಡ ಈ ರಸ್ತೆಯಲ್ಲಿಯೇ ಸಂಚರಿಸುತ್ತವೆ. ಈ ವೇಳೆ ರಸ್ತೆಯಲ್ಲಿ ನಿಂತಿರುವ ಕೊಚ್ಚೆ ನೀರು ಸಿಡಿದು ಸಾರ್ವಜನಿಕರಿಗೂ ತೊಂದರೆಯಾಗುತ್ತಿದೆ.
ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಿ, ಸಮಸ್ಯೆ ಬಗೆ ಹರಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….