Daily story: ಸಿದ್ಧ ಸಂತ-ಮಹಾತ್ಮರು, ಗುರುಗಳು, ಈಶ್ವರನ ಅವತಾರ, ಲಭ್ಯ ಈಶ್ವರ ತಮ್ಮ ದೈವೀ ಸಾಮರ್ಥ್ಯದಿಂದ ಮನುಷ್ಯನ ಮನಸ್ಸಿನ ವಿಚಾರಗಳನ್ನು ಬದಲಾಯಿಸುವ, ಬುದ್ಧಿಯ ನಿರ್ಣಯವನ್ನು ಬದಲಾಯಿಸುವ ಕೆಲಸ.
ಉದಾಹರಣೆಗೆ ಸಂತ ತುಕಾರಾಮ, ಸಂತ ಜ್ಞಾನೇಶ್ವರ, ಆದಿಶಂಕರಾಚಾರ್ಯ ಮುಂತಾದ ಶ್ರೇಷ್ಠ ಸಂತ-ಮಹಾತ್ಮರು ತಮಗೆ ತೊಂದರೆ ನೀಡುವವರ ದುರ್ಬುದ್ಧಿಯನ್ನು ಸುಬುದ್ಧಿಯನ್ನಾಗಿ ಬದಲಾಯಿಸಲಿಲ್ಲ.
ಮಹರ್ಷಿ ವ್ಯಾಸರು ದುರ್ಯೋಧನನ ಅತಿಯಾದ ದುರಾಸೆಯನ್ನು ನಾಶ ಮಾಡಲಿಲ್ಲ. ಇವಾದವು ಮಹಾತ್ಮರ ಉದಾಹರಣೆ.
ಈಶ್ವರನ ಉದಾಹರಣೆಗಳನ್ನು ನೋಡುವುದಾದರೆ ಕುರುಕ್ಷೇತ್ರದ ಯುದ್ಧಭೂಮಿಯಲ್ಲಿ ಯುದ್ಧವು ಪ್ರಾರಂಭವಾಗುವ ಮೊದಲು ಅರ್ಜುನನ ಮನಸ್ಸಿನಲ್ಲಿ ಗೊಂದಲ ಉಂಟಾಗಿ ಯುದ್ಧ ಮಾಡಬಾರದು ಎಂದು ಅವನಿಗೆ ಅನಿಸಿತು.
ಪೂರ್ಣಾವತಾರ ಆಗಿರುವ ಭಗವಾನ್ ಶ್ರೀಕೃಷ್ಣರು ತಮ್ಮ ದೈವೀ ಸಾಮರ್ಥ್ಯದಿಂದ ಅರ್ಜುನನ ಬುದ್ಧಿಯನ್ನು ಬದಲಾಯಿಸಿ ಒಂದು ಕ್ಷಣದಲ್ಲಿ ಆತನು ಯುದ್ಧಕ್ಕೆ ಸಿದ್ಧ ಮಾಡಿದ್ದಲ್ಲ. ಅವರು ಅರ್ಜುನನಿಗೆ 574 ಶ್ಲೋಕಗಳ ಉಪದೇಶ, ಯಾವುದು ಯೋಗ್ಯವಾಗಿದೆ ಮತ್ತು ಯಾವುದು ಅಯೋಗ್ಯವಿದೆ ಎಂದು ಹೇಳಿದರು, ನಿಜವಾದ ಶಾಶ್ವತ ಕಲ್ಯಾಣ ಯಾವುದರಲ್ಲಿದೆ ಮತ್ತು ಅದು ಹೇಗೆ ಸಾಧ್ಯ ಎಂದು ಹೇಳಿದರು.
ಇಷ್ಟೆಲ್ಲ ಹೇಳಿದ ನಂತರ ಮುಂದೆ ಏನು ಮಾಡಬೇಕು, ನಿರ್ಣಯವನ್ನು ತೆಗೆದುಕೊಳ್ಳಲು ಅರ್ಜುನನಿಗೆ ಹೇಳಿದರು. ಪ್ರಭು ಶ್ರೀರಾಮ ರಾವಣನ ಬುದ್ಧಿಯನ್ನು ಸುಧಾರಿಸಲಿಲ್ಲ, ಭಗವಾನ್ ನರಸಿಂಹ ಹಿರಣ್ಯಕಶ್ಯಪುವಿನ ಮನಸ್ಸನ್ನು (ಚಿತ್ತವೃತ್ತಿಯನ್ನು) ಬದಲಾಯಿಸಲಿಲ್ಲ.
ಮಹಾತ್ಮರಿರಲಿ ಈಶ್ವರನೇ ಇರಲಿ, ಮನುಷ್ಯನ ಸ್ವಭಾವದಲ್ಲಿರುವ ದೋಷಗಳನ್ನು ತೆಗೆದುಹಾಕುವುದಿಲ್ಲ, ಅವರು ಚಿತ್ತಶುದ್ಧಿಯನ್ನು ನಿಲ್ಲಿಸುತ್ತಾರೆ. ಅವರೆಲ್ಲರೂ ಕೇವಲ ಯಾವುದು ಯೋಗ್ಯವಾಗಿದೆ ಎಂದು ಹೇಳುತ್ತಾರೆ, ಮಾರ್ಗದರ್ಶನ ಮಾಡುತ್ತಾರೆ.
ನಮ್ಮ ಸ್ಥಿತಿಯೂ ಸಹ ಹಾಗೆಯೇ ಇದೆ. ಯಾವುದೇ ಗುರು ಅಥವಾ ಈಶ್ವರ ಬಂದು ನಮ್ಮಿಂದಾದ ಪಾಪಗಳು ನಾಶವಾದ ತಪ್ಪು, ನಮ್ಮ ಸ್ವಭಾವವನ್ನು ಸುಧಾರಿಸುವುದಿಲ್ಲ. ನಾವು ಭಾಗ್ಯಶಾಲಿಗಳಾಗಿದ್ದೇವೆ, ನಮಗೆ ಗ್ರಂಥಗಳಿಂದ, ಗುರುಗಳಿಂದ ಮಾರ್ಗದರ್ಶನ ಸಿಗುತ್ತಿದೆ. ಇನ್ನು ಮುಂದೆ ನಮ್ಮ ಚಿತ್ತಶುದ್ಧಿಯನ್ನು ನಾವೇ ಮಾಡಿಕೊಳ್ಳಬೇಕು, ನಾವೇ ಮಾಡಿಕೊಳ್ಳಬೇಕು!
ಕೃಪೆ: ಸನಾತನ ಸಂಸ್ಥೆ.