![Channel Gowda](https://www.harithalekhani.com/wp-content/uploads/2025/02/IMG-20250204-WA0002.jpg)
ಬೆಂಗಳೂರು: ಮುಡಾ ಹಗರಣ ಮಹತ್ತರ ತಿರುವು ಪಡೆದುಕೊಂಡಿದೆ ಅಂತ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ಹೇಳಿದರು.
![hulukudi maharathotsava](https://www.harithalekhani.com/wp-content/uploads/2025/02/IMG-20250205-WA0002.jpg)
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಇಡಿ 300 ಕೋಟಿ ಮೌಲ್ಯದ ಸ್ಥಿರಾಸ್ತಿ ಮುಟ್ಟುಗೋಲು ಹಾಕಿಕೊಂಡಿದೆ.
ಇದರರ್ಥ ಸಿಎಂ ಅವರು ಕುಟುಂಬಕ್ಕೆ14 ಸೈಟು ಪಡೆದುಕೊಂಡಿದ್ದಾರೆ, ಮುಡಾಗೆ ಕೋಟಿ ಕೋಟಿ ನಷ್ಟ ಆಗಿದೆ ಅಕ್ರಮವಾಗಿ ಮುಡಾ ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ, ಇದರಿಂದಲೂ ಭಾರೀ ನಷ್ಟ ಆಗಿದೆ ಅಂತ ಹೇಳಿದರು.
![Hulukudi mahajathre](https://www.harithalekhani.com/wp-content/uploads/2025/02/IMG-20250205-WA0001.jpg)
ಸ್ನೇಹಮಯಿ ಕೃಷ್ಣಾಗೆ ಅಭಿನಂದನೆ
ಆರ್ ಟಿ ಐ ಕಾರ್ಯಕರ್ತ ಹಾಗು ಮೂಡ ಅಕ್ರಮದ ವಿರುದ್ದ ಹೋರಾಟ ಮಾಡುತ್ತಿರುವ ಸ್ನೇಹಮಹಿ ಕೃಷ್ಣ ಅವರಿಗೆ ಅಭಿನಂದನೆ ಸಲ್ಲಿಸಿದ ವಿಜಯೇಂದ್ರ ಅವರು, ಸ್ನೇಹಮಯಿ ಕೃಷ್ಣಾ ಅವರ ಮೇಲೆಯೇ ಸರ್ಕಾರ ಆರೋಪ ಮಾಡಿ ಅವರನ್ನು ಬಂಧಿಸಲು ಹೋಗಿತ್ತು.
ಇಡಿ ಮುಟ್ಟುಗೋಲು ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರು ಆರೋಪಿ ಸ್ಥಾನದಲ್ಲಿ ಮತ್ತೆ ನಿಲ್ಲುವಂತಾಗಿದೆ. ತತಕ್ಷಣ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ ಅಂತ ಹೇಳಿದರು.
ಅನುದಾನವಿಲ್ಲದೆ ಬಿಜೆಪಿ ಶಾಸಕರು ಹತಾಶರಾಗಿದ್ದಾರೆ
ಬಿಜೆಪಿಯವ್ರು ಅನುದಾನ ವಾಪಸ್ ಕೊಡಲಿ ಎಂಬ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರ ನಮಗೇನು ಉಪಕಾರ ಮಾಡ್ತಿದ್ದಾರಾ? ಅಂತ ಪ್ರಶ್ನೆ ಮಾಡಿದ ಅವರು ಸರ್ಕಾರ ಬಂದು ಎರಡು ವರ್ಷ ಆದರೂ ಅನುದಾನ ಇಲ್ಲ.
ನೂತನವಾಗಿ ಗೆದ್ದ, ಎರಡನೇ ಬಾರಿಗೆ ಗೆದ್ದ ನಮ್ಮ(ಬಿಜೆಪಿ) ಶಾಸಕರು ಹತಾಶರಾಗಿದ್ದಾರೆ.. ಎರಡು ವರ್ಷ ಆದರೂ ಅನುದಾನ ಕೊಟ್ಟಿಲ್ಲ, ಇವರ ಯೋಗ್ಯತೆಗೆ ಯಾವ ರೀತಿ ಸರ್ಕಾರ ನಡೆಸ್ತಿದ್ದಾರೆ ನಮಗೇನು ಅನುದಾನ ಕೊಟ್ಟು ಉಪಕಾರ ಮಾಡ್ತಿದ್ದಾರಾ?
ಕ್ಷೇತ್ರಗಳಿಗೆ ಹಣ ಕೊಡೋದು ಕರ್ತವ್ಯ, ಉಪಕಾರ ಅಲ್ಲ, ಅನುದಾನವನ್ನು ತಕ್ಷಣ ಬಿಡುಗಡೆ ಮಾಡಲಿ ಅಂತ ಹೇಳಿದರು.
ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಚುನಾವಣೆ
ನಮ್ಮದು ಆಂತರಿಕ ಪ್ರಜಾಪ್ರಭುತ್ವ ವ್ಯವಸ್ಥೆಯಿರುವ ಪಕ್ಷ ನಮಗೆ ಪಕ್ಷದ ಹಿರಿಯರು, ವರಿಷ್ಠರು ರಾಜ್ಯಾಧ್ಯಕ್ಷ ಆಗಿ ಮಾಡಿದ್ರು ನಾನು ಆಗಿನಿಂದಲೂ ಸರ್ಕಾರದ ವಿರುದ್ಧ ಸತತ ಹೋರಾಟ ಮಾಡ್ತಿದ್ದೇನೆ.
ನನ್ನ ನೇತೃತ್ವದಲ್ಲಿ ಪಕ್ಷ ಸಂಘಟನೆ ಮಾಡ್ತಿರುವ ಬಗ್ಗೆ ಕಾರ್ಯಕರ್ತರಲ್ಲಿ ಸಮಾಧಾನ ಇದೆ ಆದರೆ ನಮ್ಮ ಪಕ್ಷದ ಕೆಲ ಹಿರಿಯ ಮುಖಂಡರು ಅಲ್ಲೊಂದು ಇಲ್ಲೊಂದು ಹೇಳಿಕೆ ಕೊಡ್ತಿದ್ದಾರೆ, ಇದನ್ನು ನಾನು ಇಲ್ಲ ಅಂತ ಹೇಳುವುದಿಲ್ಲ . ಮುಂದಿನ ರಾಜ್ಯಾಧ್ಯಕ್ಷ ಚುನಾವಣೆಗೆ ಶಿವರಾಜ್ ಸಿಂಗ್ ಚೌಹಾಣ್ ಅವರೇ ಉಸ್ತುವಾರಿ ಆಗಿದ್ದಾರೆ.
ಅತೀ ಶೀಘ್ರದಲ್ಲೇ ಯಾರನ್ನು ಅಧ್ಯಕ್ಷ ಮಾಡಬೇಕು ಅಂತ ಚೌಹಾಣ್ ಅವರು ಎಲ್ಲ ಹಿರಿಯರ ಜತೆ ಚರ್ಚಿಸಿ ಉತ್ತಮ ತೀರ್ಮಾನ ಕೈಗೊಳ್ಳಲಿದ್ದಾರೆ ಅಂತವಹೇಳಿದರು
ನನ್ನನ್ನೇ ಮುಂದುವರೆಸುವ ವಿಶ್ವಾಸ
ನನ್ನ ಒಂದು ವರ್ಷದ ಪರಿಶ್ರಮದ ಪರಿಣಾಮವಾಗಿ ವರಿಷ್ಟರು ನನ್ನನ್ನೇ ರಾಜ್ಯಾಧ್ಯಕ್ಷರಾಗಿ ಮುಂದುವರೆಸುತ್ತಾರೆ ಅನ್ನೋ ದೃಡ ವಿಶ್ವಾಸ ನನಗೆ ಸಂಪೂರ್ಣ ನನ್ನಲ್ಲಿ ಇದೆ ಅಂತ ಹೇಳಿದರು ತಾವೇ ಅಧ್ಯಕ್ಷ ಸ್ಥಾನದಲ್ಲಿ ಮುಂದುವರೆಯುವ ಬಗ್ಗೆ ಮತ್ತೆ ವಿಶ್ವಾಸ ವ್ಯಕ್ತಪಡಿಸಿದರು
ಭ್ರಷ್ಟಾಚಾರ ಮರೆಮಾಚಲು ಜಾತಿಗಣತಿ ಮುನ್ನಲೆಗೆ
ಭ್ರಷ್ಟಾಚಾರ ಮರೆಮಾಚಲು ಜಾತಿಗಣತಿಯನ್ನು ಮುನ್ನಲೆಗೆ ತಂದಿದ್ದಾರೆ ಅಂತ ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದರು. ವಾಲ್ಮೀಕಿ ನಿಗಮದಲ್ಲಿ, ಮುಡಾದಲ್ಲಿ ಹಗರಣ ಆಗಿದೆ.
ಕಿಯೋನಿಕ್ಸ್ ನಲ್ಲಿ ಗುತ್ತಿಗೆದಾರರು ದಯಾಮರಣ ಕೋರಿದ್ದಾರೆ. ಇನ್ನೊಂದು ಕಡೆ ಆತ್ಮಹತ್ಯೆಗಳು ಆಗುತ್ತಿವೆ.
ಜಾತಿ ಗಣತಿ ಹಿಂದೆ ಒಳ್ಳೇ ಉದ್ದೇಶ ಇದೆಯೋ, ದುರುದ್ದೇಶ ಇದೆಯೋ ಅಂತ ಜನ ಪ್ರಶ್ನೆ ಮಾಡ್ತಿದ್ದಾರೆ. ಸಿದ್ದರಾಮಯ್ಯನವರು ನಿಜವಾಗಿಯೂ ಪ್ರಾಮಾಣಿಕರಾಗಿದ್ದರೆ 2016 ರಲ್ಲೇ ವರದಿ ಕೈಸೇರಿದ್ದಾಗಲೇ ಜಾರಿ ಮಾಡಬೇಕಿತ್ತು.
ಇಷ್ಟು ವರ್ಷ ಕಾರಣಗಳನ್ನು ಮುಂದೊಡ್ಡಿದ್ರು. ಇದು ರಾಜಕೀಯ ಷಢ್ಯಂತ್ರ, ಜಾತಿ ಜನಗಣತಿಯನ್ನು ರಾಜಕೀಯ ಚದುರಂಗ ಅನ್ಕೊಂಡಿದ್ದಾರೆ.
ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಜಾತಿ ಜನಗಣತಿ ಅಸ್ತ್ರ ಬಿಟ್ಟು ಜಾತಿ ಜಾತಿಗಳ ನಡುವೆ ವಿಷಬೀಜ ಬಿತ್ತುತ್ತಿರೋದು ಅಕ್ಷಮ್ಯ ಅಪರಾಧ ಅಂತ ಹೇಳಿದರು