ದೊಡ್ಡಬಳ್ಳಾಪುರ (Doddaballapura): ಬೆಸ್ಕಾಂ ನಗರ ಉಪ ವಿಭಾಗ ವ್ಯಾಪ್ತಿಯ ಕೆಐಎಡಿಬಿ ವಿದ್ಯುತ್ ಉಪ ಕೇಂದ್ರ ವ್ಯಾಪ್ತಿಯಲ್ಲಿ ಕಾಮಗಾರಿ ಹಿನ್ನೆಲೆಯಲ್ಲಿ ನಗರದ ಕೆಲ ಪ್ರದೇಶದಲ್ಲಿ ಏ.07 ರಂದು ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಲಾಗುತ್ತಿದೆ.
ಈ ಕುರಿತು ಪ್ರಕಟಣೆ ಬೆಸ್ಕಾಂ ಎಇಇ ವಿಜಯ್ ಕುಮಾರ್ ಹೆಚ್ಪಿ ಅವರು ಪ್ರಕಟಣೆ ನೀಡಿದ್ದು, ಕೆಐಎಡಿಬಿ ಉಪಕೇಂದ್ರದ F08-Town ಫೀಡರ್ ಮಾರ್ಗದಲ್ಲಿ ವಾಹಕ ಬದಲಾವಣೆ ಕಾಮಗಾರಿ ನಡೆಸಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ F08-Town ಫೀಡರ್ನ ಮಾರ್ಗದಲ್ಲಿ ಏಪ್ರಿಲ್ 07ರ ಬೆಳಿಗ್ಗೆ 10:00 ರಿಂದ ಸಂಜೆ 06:00 ಗಂಟೆವರೆಗೆ ವಿದ್ಯುತ್ ವ್ಯತ್ಯಯವಿರುತ್ತದೆ. ಆದ್ದರಿಂದ ಗ್ರಾಹಕರು ಸಹಕರಿಸುವಂತೆ ವಿಜಯ್ ಕುಮಾರ ಅವರು ಮನವಿ ಮಾಡಿದ್ದಾರೆ..
ವಿದ್ಯುತ್ ಅಡಚಣೆಯಾಗುವ ಪ್ರದೇಶಗಳು
ವೀರಾಪುರ, ವಿವೇಕಾನಂದ ನಗರ, ತಿಪ್ಪಾಪುರ, ಭುವನೇಶ್ವರಿ ನಗರ, ತೇರಿನ ಬೀದಿ, ಕುಚ್ಚಪ್ಪನಪೇಟೆ, ಸಂಜಯನಗರ, ಚೈತನ್ಯನಗರ, ವಿದ್ಯಾನಗರ, ಕೆಸಿಪಿ ಸರ್ಕಲ್, ವೀರಭದ್ರನಪಾಳ್ಯ, ಕನಕದಾಸ ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.(ಕೊನೆಯ ಕ್ಷಣದ ಬದಲಾವಣೆ ಹೊರತುಪಡಿಸಿ)