ಬೆಂಗಳೂರು: ಯುಗಾದಿ ಸಂಭ್ರಮದಲ್ಲಿರುವ ಹಿಂದೂಗಳ ಕಡೆಗಣಿಸಿ ಪ್ರಧಾನಿ ಮೋದಿ ಹೆಸರಲ್ಲಿ 32 ಲಕ್ಷ ಮುಸ್ಲಿಂ ಸಮುದಾಯಕ್ಕೆ ಸೌಗಾತ್-ಎ ಮೋದಿ ಹೆಸರಲ್ಲಿ ಬಿಜೆಪಿ ಈದ್ ಕಿಟ್ ವಿತರಿಸುತ್ತಿರುವುದು ಹಿಂದೂಗಳ ಕೆಂಗಣ್ಣಿಗೆ ಗುರಿಯಾಗಿದ್ದರೆ, ವಿರೋಧ ಪಕ್ಷಗಳ ಲೇವಡಿಗೆ ಒಳಗಾಗುವಂತಾಗಿದೆ.
ಈ ಕುರಿತು ಕಾಂಗ್ರೆಸ್ ಸೇರಿದಂತೆ ಅನೇಕ. ವಿರೋಧ ಪಕ್ಷದ ನಾಯಕರು ಪ್ರಧಾನಿ ಮೋದಿ ಅವರನ್ನು, ಇದೇ ಹಿಂದುತ್ವ, ಇದೇನಾ ಹಿಂದೂಗಳ ಮೇಲಿನ ಕಾಳಜಿ, ಇದು ಅಲ್ಪ ಸಂಖ್ಯಾತರ ಓಲೈಕೆ ಅಲ್ವಾ ಎಂದು ಪ್ರಶ್ನಿಸುತ್ತಿದ್ದಾರೆ.
ಅಂತೆಯೇ ಸಚಿವ ರಾಮಲಿಂಗಾರೆಡ್ಡಿ ಅವರು ಹಿಂದೂಗಳಿಗೆ ಯುಗಾದಿ ಕಿಟ್ ಕೊಡಲ್ವಾ ಎಂದು ಪ್ರಶ್ನೆ ಮಾಡಿದ್ದಾರೆ.
ಈ ಕುರಿತು ಟ್ವಿಟ್ ಮಾಡಿರುವ ಅವರು, ನರೇಂದ್ರ ಮೋದಿ ಜೀ ಅವರು 32 ಲಕ್ಷ ಮುಸ್ಲಿಂ ಕುಟುಂಬಗಳಿಗೆ ಈದ್ ಕಿಟ್ ನೀಡಲು ಘೋಷಿಸಿರುವುದು ನಿಜಕ್ಕೂ ಒಳ್ಳೆಯ ಬೆಳವಣಿಗೆ.
ಪವಿತ್ರ ರಂಜಾನ್ ಸಮಯದಲ್ಲಿ ಮುಸ್ಲಿಂಮರಿಗೆ ಈದ್ ಕಿಟ್ ಕೊಡುತ್ತಿರುವುದಕ್ಕೆ ನಮ್ಮ ಆಕ್ಷೇಪವಿಲ್ಲ, ಆದರೆ ಕಾಂಗ್ರೆಸ್ ನವರು ಇದನ್ನು ಮಾಡಿದ್ದರೆ, ತುಷ್ಠೀಕರಣ ರಾಜಕಾರಣ, ಒಂದು ಸಮುದಾಯವನ್ನು ಮಾತ್ರ ಓಲೈಸುವ ರಾಜಕಾರಣವೆಂದು ಹೀಗೆಳೆಯುವ ಬಿಜೆಪಿ ಅವರನ್ನು ಕೇಳುತ್ತಿದ್ದೇವೆ , ಇದು ಓಲೈಕೆ ಅಲ್ಲವೇ ?? ಇದಕ್ಕೆ ಬೇರೆ ಏನಾದರೂ ಹೆಸರಿದೆಯೇ?? ಎಂದು ಲೇವಡಿ ಮಾಡಿದ್ದಾರೆ.
ದೇಶದ್ಯಾಂತ ಯುಗಾದಿ ಹಬ್ಬವನ್ನು ರಂಜಾನ್ ಗೆ ಒಂದು ದಿನ ಮೊದಲೇ ನವ ವರ್ಷ, ಬಿಹು, ವೈಶಾಖಿ, ಪಾನ ಸಂಕ್ರಾಂತಿ, ಗುಡಿ ಪಾಡ್ವಾ, ಬೈಶಾಖ ಎಂಬ ಹೆಸರುಗಳಿಂದ ಹಬ್ಬವನ್ನು ಆಚರಿಸುತ್ತಿರುವ ಹಿಂದೂಗಳ ಬಗ್ಗೆ ಮೋದಿ ಜೀ ಅವರಿಗೆ ಪ್ರೇಮ ಬರಲಿಲ್ವಾ?
ಕಾಂಗ್ರೆಸ್ ನವರು ಮಾಡಿದರೆ ಒಂದು ವ್ಯಾಖ್ಯಾನ , ಮೋದಿ ಜೀ ಅವರು ಮಾಡಿದರೆ ಮಾತ್ರ ಸಬ್ ಕಾ ಸಾತ್ ಸಬ್ ಕಾ ವಿಕಾಸ್ ಎಂಬ ವ್ಯಾಖ್ಯಾನವೇ?
ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ “ಸೌಗಾತ್-ಎ ಮೋದಿ” ಅಭಿಯಾನದ ಮೂಲಕ ಈದ್ ಗೆ ವಿತರಿಸುತ್ತಿರುವ ಕಿಟ್ ಗಳು, ಹಿಂದೂ ಹಬ್ಬಕ್ಕೆ ಹಿಂದೂಗಳಿಗೆ ವಿತರಿಸಲು ಸಾಧ್ಯವಾಗದಿರುವುದಕ್ಕೆ?
ಬಿ.ಜೆ.ಪಿ ಅವರ ಬಳಿ ಉತ್ತರವಿದೆಯೇ?? ಎಂದು ರಾಮಲಿಂಗಾ ರೆಡ್ಡಿ ಪ್ರಶ್ನಿಸಿದ್ದಾರೆ.