Site icon Harithalekhani

Doddaballapura; ಗುಟ್ಟೆ ಲಕ್ಷ್ಮೀನರಸಿಂಹಸ್ವಾಮಿ ಕ್ಷೇತ್ರದಲ್ಲಿ ಸಂಭ್ರಮದ ಜಾತ್ರಾ ಮಹೋತ್ಸವ| Video ನೋಡಿ

Doddaballapura; Gutte Lakshminarasimhaswamy celebrated Jatra Mahotsava

Doddaballapura; Gutte Lakshminarasimhaswamy celebrated Jatra Mahotsava

ದೊಡ್ಡಬಳ್ಳಾಪುರ (Doddaballapura): ತಾಲೂಕಿನ ಗುಟ್ಟೆ (ಕಾಮೇನಹಳ್ಳಿ) ಲಕ್ಷ್ಮೀನರಸಿಂಹಸ್ವಾಮಿ ಕ್ಷೇತ್ರದಲ್ಲಿ ಜಾತ್ರಾ ಮಹೋತ್ಸವದ ಅಂಗವಾಗಿ ಪ್ರಪ್ರಥಮ ಬಾರಿಗೆ ರಥೋತ್ಸವ ನಡೆಸಲಾಯಿತು.

ನಿನ್ನೆಯಿಂದ ಆರಂಭವಾಗಿರುವ ಜಾತ್ರಾ ಮಹೋತ್ಸವದಲ್ಲಿ ಗಂಗಾಪೂಜೆ ಅಂಕುರಾರ್ಪಣೆ, ಪುಣ್ಯಾಃ ಪಂಚಗವ್ಯ ರಕ್ಷಾಬಂಧನ ಲ, ಶೋಡಶೋಪಚಾರ ಪೂಜೆ, ಧ್ವಜಾರೋಹಣ ಸಂಕಲ್ಪ, ಗಣಹೋಮ ನೃಸಿಂಹ ಹೋಮ, ಸುದರ್ಶನ ಹೋಮ, ಪ್ರಪ್ರಧಮ ಸಂಕಲ್ಪ ಹಾಗೂ ಪೂಜಾ ಕೈಂಕರ್ಯ ನಡೆಸಲಾಯಿತು.

ಇಂದು ಬೆಳಿಗ್ಗೆ 9.00 ಗಂಟೆಗೆ ಶ್ರೀಕ್ಷೇತ್ರಕ್ಕೆ ತುಮಕೂರಿನ ಶ್ರೀ ಸಿದ್ದಗಂಗಾ ಮರಾಧ್ಯಕ್ಷರಾದ ಶ್ರೀ ಸಿದ್ದಲಿಂಗಮಹಾಸ್ವಾಮಿಗಳಿಂದ ತ್ರಿವಿಧ ದಾಸೋಹಿ, ನಡೆದಾಡುವ ದೇವರು, ಕರ್ನಾಟಕ ರತ್ನ ಡಾ. ಶ್ರೀ ಶಿವಕುಮಾರ ಮಹಾಸ್ವಾಮಿಗಳವರ ಪುತ್ಥಳಿ ಅನಾವರಣ ನೆರವೇರಿಸಿದರು.

ಮಧ್ಯಾಹ್ನ 12.05ಕ್ಕೆ ಸಲ್ಲುವ ಶುಭ ಅಭಿಜನ್ ಲಗ್ನದಲ್ಲಿ ಇದೇ ಮೊದಲ ಬಾರಿಗೆ ವಿಜೃಂಭಣೆಯಿಂದ ರಥೋತ್ಸವ ನೆರವೇರಿತು.

https://www.harithalekhani.com/wp-content/uploads/2025/03/1001144567.mp4

ಸಾವಿರಾರು ಮಂದಿ ಭಕ್ತರು ರಥೋತ್ಸವದಲ್ಲಿ ಭಾಗಿಯಾದರು.

ಇದೇ ಸಂದರ್ಭದಲ್ಲಿ ನೂತನವಾಗಿ ನಿರ್ಮಿಸಿರುವ ರಥಕ್ಕೆ ದಶಶಾಂತಿ ಹೋಮಗಳನ್ನು ನೆರವೇರಿಸಲಾಯಿತು.

ವೀರಗಾಸೆ, ನಂದಿಧ್ವಜ, ಡೊಳ್ಳುಕುಣಿತ, ಗಾರುಡಿಗೊಂಬೆ, ತಮಟೆ, ಸೋಮನ ಕುಣಿತ, ಚಿಟ್ಟಿಮೇಳ ಇನ್ನಿತರೆ ಕಲಾವಿದರು ಭಾಗವಹಿಸಿದ್ದರು.

ಪಚ್ಚಾರಹಳ್ಳಿ, ಕಾಮೇನಹಳ್ಳಿ, ಆಮಲಗುಂಟೆ, ಆರೂಢಿ, ದೊಡ್ಡಗುಂಡಪ್ಪನಾಯಕನಹಳ್ಳಿ, ಕಲ್ಲುಕುಂಟೆ, ಗರಿಕೇನಹಳ್ಳಿ, ವಡ್ಡನಹಳ್ಳಿ ಕೊಟ್ಟಿಗೆಮಾಚೇನಹಳ್ಳಿ ಹಾಗೂ ಇನ್ನಿತರೆ ಗ್ರಾಮಸ್ತರಿಂದ ದೀಪಾರತಿಗಳು ನಡೆದವು.

ಇದೇ ದಿನ ಸಂಜೆ 7-00 ರಿಂದ 9-30 ಗಂಟೆಯವರೆಗೆ ತುಮಕೂರಿನ ಹೆಸರಾಂತ ಕಲಾವಿದರಾದ ಡಾ.ಲಕ್ಷ್ಮಣ್‌ ದಾಸ್‌ರವರಿಂದ ಹರಿಕಥೆ.

ಮಾ.15ರಂದು ಜಾತ್ರಾ ಮಹೋತ್ಸವದ ಜಲಧಿ ಕಾಯಕ್ರಮ, ಬಾಳೆಮರ ಅಂಬು ಹಾಕುವ ಮುಖೇನ ಶಾಂತಿ ಸಂಪನ್ನ. ಶನಿವಾರ ಸಂಜೆ 8-00 ಗಂಟೆಗೆ ಶ್ರೀ ಸೋಮೇಶ್ವರ ನಾಟಕ ಮಂಡಲಿ, ಸೂಲಿಬೆಲೆ ಇವರಿಂದ ಕುರುಕ್ಷೇತ್ರ ಅಥವಾ ಶ್ರೀ ಕೃಷ್ಣ ಸಂಧಾನ ಪೌರಾಣಿಕ ನಾಟಕ ನಡೆಯಲಿದೆ.

Exit mobile version