Daily story; Whose pain is bigger..?

ಹರಿತಲೇಖನಿ ದಿನಕ್ಕೊಂದು ಕಥೆ: ಯಾರ ನೋವು ದೊಡ್ಡದು..?

Daily story; ನಾವು-ನೀವು ಎಲ್ಲರೂ ಬದುಕಿನಲ್ಲಿ ಆಗೊಮ್ಮೆ ಈಗೊಮ್ಮೆ ಯಾವ್ಯಾವುದೋ ನೋವಿನಿಂದ ನರಳಿರಬಹುದಲ್ಲವೇ? ಆ ನೋವಿನ ಪ್ರಮಾಣ ಅಥವಾ ಅವಧಿ ಬೇರೆ ಬೇರೆ ಇರಬಹುದು! ಆದರೆ ನೋವೇ ಇಲ್ಲದವರು ಯಾರಾದರೂ ಇದ್ದಾರೆಯೇ? ಇರಲಿಕ್ಕಿಲ್ಲ ಅಲ್ಲವೇ? ನೋವಿನ ಬಗೆಗಿನ ಕತೆಯೊಂದು ಇಲ್ಲಿದೆ.

ಒಬ್ಬ ರಾಜಕುಮಾರ ಇದ್ದರಂತೆ. ವೈಭವೋಪೇತ ಅರಮನೆಯಲ್ಲಿ ವಾಸ. ಇಂತಹದ್ದು ಬೇಕು ಎಂದು ಬಾಯ್ಬಿಡುವ ಮುಂಚೆಯೇ ಅದನ್ನು ತಂದು ಮುಂದಿಡುವ ತಾಯ್ತಂದೆಯರು, ಕೂತು ಉಂಡರೂ ಮುಗಿಯದಷ್ಟು ಸಿರಿವಂತಿಕೆ.

ಇವೆಲ್ಲ ಇದ್ದರೂ ಆ ರಾಜಕುಮಾರರಿಗೆ ಮನಃಶಾಂತಿ ಇರಲಿಲ್ಲ. ಅಂತಹ ಪರಿಸ್ಥಿತಿಯಲ್ಲಿ ಅವರು ಬೌದ್ಧ ಧರ್ಮದ ಪ್ರಭಾವಕ್ಕೆ ಒಳಗಾದರು.
ತಮ್ಮ ಎಲ್ಲಾ ತುಡಿತಗಳಿಗೂ ಅಲ್ಲಿ ಉತ್ತರ ಸಿಗಬಹುದು ಎನಿಸಿತು.

ರಾಜ ಪರಿವಾರವನ್ನು ತೊರೆದರು. ಬೌದ್ಧ ಭಿಕ್ಷು ಆದರು. ಆನಂತರ ಅವರು ಕುಟೀರದಲ್ಲಿ ವಾಸಿಸುತ್ತಿದ್ದರು. ಚಾಪೆಯ ಮೇಲೆ ಮಲಗುತ್ತಿದರು. ಭಿಕ್ಷಾಟನೆಯಿಂದ ಸಿಗುತ್ತಿದ್ದ ಅನ್ನಾಹಾರಗಳ ಸೇವನೆ. ಧ್ಯಾನ-ಅಧ್ಯಯನಗಳಲ್ಲಿ ಮಗ್ನ.

ಮೊದಲಿನ ಸಿರಿವಂತ ಬದುಕಿಗೂ ಈಗಿನ ಬಡತನದ ಬದುಕಿಗೂ ಆಕಾಶ ಭೂಮಿಗಳಷ್ಟು ಅಂತರ. ಆದರೂ ಅವರಿಗೆ ಏನೋ ಸಾಧಿಸುತ್ತೇನೆಂಬ ಹುಮ್ಮಸ್ಸು. ಎಲ್ಲರ ಬದುಕಿನಲ್ಲೂ ಆಗುವಂತೆ ಎಲ್ಲವೂ ಚೆನ್ನಾಗಿದೆ ಎಂದು ಅವರು ಅಂದುಕೊಳ್ಳುತ್ತಿರುವ ಸಮಯದಲ್ಲೇ ಅವರಿಗೊಂದು ಸಮಸ್ಯೆ ಎದುರಾಯಿತು.

ಅವರ ಆರೋಗ್ಯದಲ್ಲಿ ಏರುಪೇರುಂಟಾಯಿತು. ಅವರನ್ನು ಸಂಧಿವಾತ ನೋವು ಕಾಡತೊಡಗಿತು. ಏನೋ ನೋವು ಬಂದಿದೆ.

ಒಂದೆರಡು ದಿನವಿದ್ದು ಹೊರಟು ಹೋಗುತ್ತದೆಂದು ಭಾವಿಸಿದ್ದ ನೋವು ಅವರಿಗೆ ಒಂದೇ ಸಮನೆ ಬಾಧಿಸತೊಡಗಿತು. ನಡೆಯಲಾಗುತ್ತಿರಲಿಲ್ಲ. ಕುಳಿತುಕೊಳ್ಳಲಾಗುತ್ತಿರಲಿಲ್ಲ. ಮಲಗಲೂ ಆಗುತ್ತಿರಲಿಲ್ಲ. ಅಷ್ಟೊಂದು ನೋವು! ಹೀಗಾಗಿ ಅವರು ಅಧ್ಯಯನ, ಧ್ಯಾನ, ಸಂಚಾರಗಳೆಲ್ಲವನ್ನೂ ಬಿಡಬೇಕಾಗಿ ಬಂದಿತು.

ಯಾವ ಔಷಧಿಯೂ ಅವರ ನೋವನ್ನು ಕಡಿಮೆ ಮಾಡಲಿಲ್ಲ. ಯಾರಿಗೆ ಹೇಳಿಕೊಳ್ಳಲೂ ಸಾಧ್ಯವಿಲ್ಲ. ಹೇಳಿಕೊಂಡರೂ ಪ್ರಯೋಜನವಿಲ್ಲ. ಇನ್ನು ಬದುಕುವುದೇ ಬೇಡವೆನ್ನಿಸುವಷ್ಟು ನೋವು ಅವರನ್ನು ಕಾಡುತ್ತಿತ್ತು.
ಈ ಪರಿಯ ನೋವಿನಿಂದ ನರಳುತ್ತಲಿದ್ದ ಅವರು ಒಂದು ದಿನ ಊರಿನಲ್ಲಿ ಸುತ್ತಾಡುವಾಗ ಮಕ್ಕಳು ಆಡುತ್ತಿರುವುದನ್ನು ಕಂಡರು.

ಮಕ್ಕಳೆಲ್ಲ ಕೇಕೆ ಹೊಡೆದು ಆನಂದದಿಂದ ಕಿರುಚಾಡುತ್ತಾ ಆಟವಾಡುತ್ತಿದ್ದರು. ಸುತ್ತ ಮುತ್ತಲಿನ ಪರಿವೆಯೇ ಇಲ್ಲದೆ ಆನಂದದಿಂದ ಆಡುತ್ತಿದ್ದ ಆ ಮಕ್ಕಳನ್ನು ನೋಡಿ ಈ ಬೌದ್ಧ ಭಿಕ್ಷುವಿಗೆ ಆಶ್ಚರ್ಯವಾಯಿತು. ಅವರು ಮತ್ತೂ ಗಮನವಿಟ್ಟು ಆ ಮಕ್ಕಳನ್ನು ನೋಡಿದರು. ಆಗ ಅವರಿಗೆ ಮಕ್ಕಳ ಗುಂಪಿನ ಮಧ್ಯೆ ಆಡುತ್ತಿದ್ದ ಒಬ್ಬ ಪುಟ್ಟ ಹುಡುಗಿಯು ಅವರ ಗಮನ ಸೆಳೆಯಿತು. ಆಕೆಗೆ ಒಂದು ಕಾಲಿರಲಿಲ್ಲ.

ಊರುಗೋಲಿನ ಸಹಾಯದಿಂದ, ಇರುವ ಒಂದೇ ಕಾಲಿನ ಆಸರೆಯಿಂದ, ಆಕೆ ಇತರ ಮಕ್ಕಳೊಂದಿಗೆ ಆಡುತ್ತಿದ್ದಳು. ಕುಣಿಯುತ್ತಿದ್ದಳು. ಕುಪ್ಪಳಿಸುತ್ತಿದ್ದಳು. ಆಕೆಯನ್ನು ನೋಡಿದ ತಕ್ಷಣ ಬೌದ್ಧ ಭಿಕ್ಷುವಿಗೆ ‘ಈ ಪುಟ್ಟ
ಹುಡುಗಿಗೆ ಒಂದು ಕಾಲೇ ಇಲ್ಲ. ಆದರೆ ಅದರ ಪರಿವೆಯೇ ಇಲ್ಲದೆ ಆನಂದದಿಂದ ಆಡುತ್ತಿದ್ದಾಳೆ.

ನನಗೆ ಎರಡೂ ಕಾಲುಗಳಿವೆ, ಕೈಗಳಿವೆ. ಆದರೆ ಸ್ವಲ್ಪ ನೋವಿದೆ. ಆ ನೋವನ್ನು ತಡೆಯಲಾಗದೆ ಬದುಕುವುದೇ ಬೇಡ ಎಂದುಕೊಳ್ಳುತ್ತಿದ್ದೇನಲ್ಲಾ ನಾನೆಂಥ ದಡ್ಡ?’ ಎಂಬ ಯೋಚನೆ ಮೂಡಿತು.

ತಕ್ಷಣ ಅವರ ಮುಖದಲ್ಲಿ ನಗು ಅರಳಿತು. ಆ ಕ್ಷಣವೇ ಅವರ ಆಚಾರ- ವಿಚಾರಗಳು ಬದಲಾದವು. ಆಶ್ಚರ್ಯವೆಂದರೆ ಕೆಲವೇ ದಿನಗಳಲ್ಲಿ ಅವರ ನೋವು ಅವರನ್ನು ಬಾದಿಸುತ್ತಿರಲಿಲ್ಲ! ಎಂದೋ ಓದಿದ್ದ ಈ ಪುಟ್ಟ ಕತೆಯೊಂದಿಗೆ ಮತ್ತೊಂದು ಮಾತೂ ನೆನಪಿಗೆ ಬರುತ್ತಿದೆ.

ಬದುಕಿನಲ್ಲಿ ನೋವುಗಳನ್ನು ಎದುರಿಸಬೇಕಾಗಿ ಬಂದಾಗ ನಮಗಿಂತ ಹೆಚ್ಚು ನೋವಿನಿಂದ ನರಳುತ್ತಿರುವವರನ್ನು ನೋಡಿ, ನಮಗೆ ನಾವೇ ಸಾಂತ್ವನ ಹೇಳಿಕೊಳ್ಳಬೇಕಂತೆ! ಹಾಗೆಯೇ ನಲಿವು ಬಂದಾಗ ನಮಗಿಂತ ಕಡಿಮೆ ನಲಿವಿನಲ್ಲಿಯೂ ನಗು-ನಗುತ್ತಿರುವವರನ್ನು ನೋಡಿ ಸಮಾಧಾನ ಮಾಡಿಕೊಳ್ಳಬೇಕಂತೆ! ಅದಿರಲಿ. ನೋವು-ನಲಿವುಗಳು ದೈಹಿಕವೋ? ಮಾನಸಿಕವೋ? ಯಾರ ನೋವು ದೊಡ್ಡದು? ನಮ್ಮದೋ? ಅವರದ್ದೋ?

ಕೃಪೆ: ಎಸ್.ಷಡಕ್ಷರಿ.

ರಾಜಕೀಯ

ಗ್ಯಾರಂಟಿ ಸಮಿತಿಗಳಿಂದ ಶಾಸಕರ ಘನತೆಗೆ ಕುಂದಿಲ್ಲ: Cmsiddaramaiah

ಗ್ಯಾರಂಟಿ ಸಮಿತಿಗಳಿಂದ ಶಾಸಕರ ಘನತೆಗೆ ಕುಂದಿಲ್ಲ: Cmsiddaramaiah

ಬೆಂಗಳೂರು: ಗ್ಯಾರಂಟಿ ಸಮಿತಿಗಳಿಂದ ಶಾಸಕರ ಘನತೆಗೆ ಕುಂದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ( Cmsiddaramaiah ) ನುಡಿದರು. ಗ್ಯಾರಂಟಿ ಸಮಿತಿಯಿಂದ ಶಾಸಕರ ಘನತೆಗೆ ದಕ್ಕೆಯಾಗಿದೆ ಎಂಬ ಕುರಿತು ವಿಧಾನಸಭೆಯಲ್ಲಿ ಪ್ರತಿಪಕ್ಷದ ನಾಯಕರ ಆರೋಪಕ್ಕೆ ಪ್ರತಿಕ್ರಿಯಿಸಿದರು.

[ccc_my_favorite_select_button post_id="104074"]
ಕೇಂದ್ರಕ್ಕೆ ಮಹತ್ವದ ವಿವಿಧ ಬೇಡಿಕೆಗಳನ್ನಿಟ್ಟ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ

ಕೇಂದ್ರಕ್ಕೆ ಮಹತ್ವದ ವಿವಿಧ ಬೇಡಿಕೆಗಳನ್ನಿಟ್ಟ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ

ನವದೆಹಲಿ: ಕರ್ನಾಟಕದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳ ಮೈಸೂರು ಮತ್ತು ಧಾರವಾಡ ವಿವಿಗಳು ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು, ಕೇಂದ್ರ ಸರ್ಕಾರ ನೆರವಿಗೆ ಧಾವಿಸಬೇಕು ಎಂದು ಮಾಜಿ ಪ್ರಧಾನಿಗಳಾದ ಹೆಚ್.ಡಿ.ದೇವೇಗೌಡ (HD Deve Gowda) ಅವರು ಮನವಿ

[ccc_my_favorite_select_button post_id="103998"]
ಸಿಎಂ ಸಿದ್ದರಾಮಯ್ಯರ ಭೇಟಿಯಾದ ತಮಿಳುನಾಡು ಅರಣ್ಯ ಸಚಿವ.. ಮಹತ್ವದ ಚರ್ಚೆ

ಸಿಎಂ ಸಿದ್ದರಾಮಯ್ಯರ ಭೇಟಿಯಾದ ತಮಿಳುನಾಡು ಅರಣ್ಯ ಸಚಿವ.. ಮಹತ್ವದ ಚರ್ಚೆ

ಬೆಂಗಳೂರು; ತಮಿಳುನಾಡಿನ ಅರಣ್ಯ ಸಚಿವರಾದ ಡಾ.ಕೆ.ಪೊನ್ನುಮುಡಿ ಮತ್ತು ರಾಜ್ಯಸಭಾ ಸದಸ್ಯರಾದ ಮೊಹಮದ್ ಅಬ್ದುಲ್ಲಾ ಇಸ್ಮಾಯಿಲ್ ಅವರು ಕಾವೇರಿ ನಿವಾಸದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (Cmsiddaramaiah) ಅವರನ್ನು ಭೇಟಿಯಾದರು. ಈ ವೇಳೆ ಕೇಂದ್ರ ಸರ್ಕಾರದ ಪ್ರಜಾಪ್ರಭುತ್ವ ವಿರೋಧಿ

[ccc_my_favorite_select_button post_id="104024"]
los angeles fire| ಅಮೆರಿಕ ಕಾಡ್ಗಿಚ್ಚು: ಸಾವಿನ ಸಂಖ್ಯೆ 11ಕ್ಕೆ| Video

los angeles fire| ಅಮೆರಿಕ ಕಾಡ್ಗಿಚ್ಚು: ಸಾವಿನ ಸಂಖ್ಯೆ 11ಕ್ಕೆ| Video

ಹಾಲಿವುಡ್ ಹಿಲ್ ಹಾಗೂ ಸ್ಟುಡಿಯೋ ಸಿಟಿಗೆ ಹೊತ್ತಿಕೊಂಡಿದ್ದ ಬೆಂಕಿಯನ್ನು ವಿಮಾನ, ಹೆಲಿಕಾಪ್ಟರ್ ಗಳ ಮೂಲಕ ನೀರು ಸಿಂಪಡಿಸಿ ನಂದಿಸಲಾಗಿತ್ತು los Angeles fire

[ccc_my_favorite_select_button post_id="100721"]

ಕ್ರೀಡೆ

Champions Trophy; ಭಾರತದ ಮುಡಿಯೇರಿದ ಚಾಂಪಿಯನ್ಸ್ ಟ್ರೋಫಿ

Champions Trophy; ಭಾರತದ ಮುಡಿಯೇರಿದ ಚಾಂಪಿಯನ್ಸ್ ಟ್ರೋಫಿ

ದುಬೈ: ಐಸಿಸಿ ಚಾಂಪಿಯನ್ಸ್ ಟ್ರೋಫಿ ಸರಣಿಯ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಮಣಿಸಿದ ಭಾರತ ಚಾಂಪಿಯನ್ಸ್ ಟ್ರೋಫಿಯನ್ನು (Champions Trophy) ತನ್ನದಾಗಿಸಿಕೊಂಡಿದೆ. ಟಾಸ್‌ ಗೆದ್ದು ಬ್ಯಾಟಿಂಗ್ ಮಾಡಿದ ಕೀವಿಸ್ ಪಡೆ 50 ಓವರ್‌ಗಳಲ್ಲಿ 7

[ccc_my_favorite_select_button post_id="103912"]
Doddaballapura: ನೇಣು ಬಿಗಿದುಕೊಂಡು ಅಪ್ರಾಪ್ತ ಬಾಲಕ ಆತ್ಮಹತ್ಯೆ..!

Doddaballapura: ನೇಣು ಬಿಗಿದುಕೊಂಡು ಅಪ್ರಾಪ್ತ ಬಾಲಕ ಆತ್ಮಹತ್ಯೆ..!

ದೊಡ್ಡಬಳ್ಳಾಪುರ: ಸುಮಾರು 15 ವರ್ಷದ ಅಪ್ರಾಪ್ತ ಬಾಲಕನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ (Suicide) ಮಾಡಿಕೊಂಡಿರುವ ಘಟನೆ ತಾಲೂಕಿನ ಪಿಂಡಕೂರುತಿಮ್ಮನಹಳ್ಳಿ ಹೊರವಲಯದಲ್ಲಿ ಸಂಭವಿಸಿದೆ. ಮೃತನನು ಪಿಂಡಕೂರುತಿಮ್ಮನಹಳ್ಳಿ ನಿವಾಸಿಗಳಾದ ಮಂಜಮ್ಮ, ಸುಬ್ಬರಾಯಪ್ಪ ದಂಪತಿಗಳ ಪುತ್ರ 15 ವರ್ಷ ರವಿಕುಮಾರ ಎಂದು ಗುರುತಿಸಲಾಗಿದೆ. ಆತ್ಮಹತ್ಯೆಗೆ ಕಾರಣ ತಿಳಿದು

[ccc_my_favorite_select_button post_id="104085"]

ಅತ್ತೆ-ಸೊಸೆ ಜಗಳ: ತಾಯಿ, ಮಗ ಆತ್ಮಹತ್ಯೆ

[ccc_my_favorite_select_button post_id="104008"]

ರೌಡಿಶೀಟರ್ ಬರ್ಬರ ಹತ್ಯೆ; ಐವರ ಬಂಧನ

[ccc_my_favorite_select_button post_id="103919"]

Suicide: ಬಸ್ ನಲ್ಲೇ ನೇಣಿಗೆ ಶರಣಾದ ಸಾರಿಗೆ

[ccc_my_favorite_select_button post_id="103856"]

ಮದುವೆ ಹಿಂದಿನ ದಿನ ವರ ಪರಾರಿ: FIR

[ccc_my_favorite_select_button post_id="103742"]
Doddaballapura: ಅಪಘಾತ.. ಶಿಕ್ಷಕನಿಗೆ ಗಂಭೀರ ಪೆಟ್ಟು..!

Doddaballapura: ಅಪಘಾತ.. ಶಿಕ್ಷಕನಿಗೆ ಗಂಭೀರ ಪೆಟ್ಟು..!

ದೊಡ್ಡಬಳ್ಳಾಪುರ (Doddaballapura): ಕಾರಿನಲ್ಲಿದ್ದವರು ಏಕಾಏಕಿ ಬಾಗಿಲು ತೆರೆದ ಪರಿಣಾಮ ಆಟೋದಲ್ಲಿ ತೆರಳುತ್ತಿದ್ದ ಶಿಕ್ಷಕನಿಗೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ಡಿಕ್ರಾಸ್ ರಸ್ತೆಯಲ್ಲಿ ಸಂಭವಿಸಿದೆ. ಗಾಯಗೊಂಡವರನ್ನು ತಾಲೂಕಿನ ಆರೂಢಿಯ ಶ್ರೀ ಅರವಿಂದ ಪ್ರೌಢಶಾಲೆಯ ಶಿಕ್ಷಕ ಸಿದ್ದಲಿಂಗಯ್ಯ ಎಂದು

[ccc_my_favorite_select_button post_id="104081"]

ಆರೋಗ್ಯ

ಸಿನಿಮಾ

ಸಿನಿಮಾದವರ ನೆಟ್ಟು, ಬೋಲ್ಟು ಟೈಟ್ ಮಾಡುವ ಕಾರ್ಯ ಆರಂಭ..?

ಸಿನಿಮಾದವರ ನೆಟ್ಟು, ಬೋಲ್ಟು ಟೈಟ್ ಮಾಡುವ ಕಾರ್ಯ ಆರಂಭ..?

ತುಮಕೂರು: ಬೆಂಗಳೂರು ನಡೆದ ಅಂತರರಾಷ್ಟ್ರೀಯ ಫಿಲಂ ಫೆಸ್ಟಿವಲ್ ಕಾರ್ಯಕ್ರಮಕ್ಕೆ ಗೈರಾದ ಖ್ಯಾತ ನಟ, ನಟಿಯರ ಕುರಿತು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ (DK Shivakumar) ಚಿತ್ರರಂಗದವರ ನಟ್ಟು ಬೋಲ್ಟು ಟೈಟು ಮಾಡುತ್ತೇನೆ ಎಂದು

[ccc_my_favorite_select_button post_id="103709"]
error: Content is protected !!