Lokayukta attack in Doddaballapur when celebrities including TN Sitaram came to register..!

ಟಿ.ಎನ್ ಸೀತಾರಾಂ ಸೇರಿ ಖ್ಯಾತರು ನೋಂದಣಿಗೆ ಬಂದಿದ್ದ ವೇಳೆಯೇ ದೊಡ್ಡಬಳ್ಳಾಪುರದಲ್ಲಿ ಲೋಕಾಯುಕ್ತ ದಾಳಿ‌‌..!

ದೊಡ್ಡಬಳ್ಳಾಪುರ (Doddaballapura); ನಗರದ ಸಬ್ ರಿಜಿಸ್ಟರ್ ಕಚೇರಿಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಪ್ರಸಿದ್ಧಿ ಪಡೆದವರು ಜಮೀನು ನೋಂದಣಿಗೆ ಬಂದಿದ್ದರೆನ್ನಲಾದ ವೇಳೆಯೇ.. ನಿನ್ನೆ ಏಕಾಏಕಿ ಲೋಕಾಯುಕ್ತ ಅಧಿಕಾರಿಗಳು ದಾಳಿ (Lokayukta raid) ನಡೆಸಿದ್ದು, ಗಣ್ಯರು ಒಂದು ಕ್ಷಣ ಗಲಿಬಿಲಿಗೆ ಒಳಗಾಗಿದ್ದು ಕಂಡು ಬಂತು.

ಗುರುವಾರ ಮಧ್ಯಾಹ್ನ 3.30ರ ವೇಳೆಗೆ ಉಪಲೋಕಾಯುಕ್ತ ಕೆಎನ್ ಫಣೀಂದ್ರ, ಎಸ್ಪಿ ಉದೇಶ್ ಟಿಜೆ, ನೇತೃತ್ವದಲ್ಲಿ ನಾಲ್ಕೈದು ಕಾರುಗಳಲ್ಲಿ ಬಂದ ಲೋಕಾಯುಕ್ತ ಅಧಿಕಾರಿಗಳು ಉಪ ನೋಂದಣಾಧಿಕಾರಿ ಕಚೇರಿಗೆ ದಿಢೀರ್ ದಾಳಿ ನಡೆಸಿ, ದಾಖಲೆಗಳ ಪರಿಶೀಲನೆ ನಡೆಸಿದರು.

ಈ ವೇಳೆ ಕಚೇರಿಗೆ ಬಂದಿದ್ದ ಸಾರ್ವಜನಿಕರ ಬಳಿ ಹೆಚ್ಚಿನ ಹಣ ಇಟ್ಟುಕೊಂಡವರನ್ನು ವಿಚಾರಣೆ ನಡೆಸಿದರು.

ಇತರೆ ಅಧಿಕಾರಿಗಳು ಜೂಟ್

ಲೋಕಾಯುಕ್ತ ಅಧಿಕಾರಿಗಳ ದಾಳಿ ಮಾಹಿತಿ ತಿಳಿಯುತ್ತಿದ್ದಂತೆ ಇತರೆ ಇಲಾಖೆಯ ಅಧಿಕಾರಿಗಳು ಬಾಗಿಲು ಬಡಿದುಕೊಂಡು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಸಾರ್ವಜನಿಕರು ಲೇವಡಿ ಮಾಡಿದರು.

ಇದಕ್ಕೆ ಪೂರಕವೆಂಬಂತೆ ಅಭಿಲೇಖಾಲಯ, ಹಕ್ಕು ದಾಖಲೆ ವಿಭಾಗದ ಕಚೇರಿ ಸಿಬ್ಬಂದಿಗಳು ಬಾಗಿಲಿಗೆ ಬೀಗ ಬಡಿದುಕೊಂಡು ಸ್ಥಳದಿಂದ ಕಾಣೆಯಾಗಿದ್ದರು. ಅಲ್ಲದೆ ತಹಶಿಲ್ದಾರ್ ಕೂಡ ಕಚೇರಿಯಲ್ಲಿ ಲಭ್ಯವಿರಲಿಲ್ಲ.

ಖ್ಯಾತರ ನೋಂದಣಿ ವೇಳೆ ದಾಳಿ

ಆಶ್ಚರ್ಯಕರ ಬೆಳವಣಿಗೆಯಲ್ಲಿ ವಿವಿಧ ಕ್ಷೇತ್ರದಲ್ಲಿ ಪ್ರಸಿದ್ಧರಾದ ಘಟಾನುಘಟಿಗಳು ನೋಂದಣಿಗೆ ಬಂದಿದ್ದ ವೇಳೆಯೇ ಲೋಕಾಯುಕ್ತರ ದಾಳಿ ನಡೆದಿದೆ ಎಂಬುದು ತೀವ್ರ ಕುತೂಹಲ ಮತ್ತು ಚರ್ಚೆಗೆ ಕಾರಣವಾಯಿತು.

ಕನ್ನಡ ಚಲನಚಿತ್ರ ಮತ್ತು ಸೀರಿಯಲ್ ನಿರ್ದೇಶಕ ಟಿ.ಎನ್.ಸೀತಾರಾಂ, ನಿರ್ಮಾಪಕ ಕೆ.ಮಂಜು, ನಿವೃತ್ತ ಡಿವೈಎಸ್‌ಪಿ ಕೋನಪ್ಪ ರೆಡ್ಡಿ ಸೇರಿದಂತೆ ಇನ್ನು ಕೆಲವು ಗಣ್ಯ ವ್ಯಕ್ತಿಗಳು ಬಂದಿದ್ದು ಲೋಕಾಯುಕ್ತ ದಾಳಿ ವೇಳೆ ಹೊರಾಂಗಣದಲ್ಲಿ ಕಾದು ನಿಂತಿದ್ದು ಕಂಡು ಬಂದಿತು.

ಬೀಗ ಹೊಡೆದು ಪರಿಶೀಲನೆ

ದಾಳಿ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಉಪಲೋಕಾಯುಕ್ತ ಕೆಎನ್ ಫಣೀಂದ್ರ, ಗುರುವಾರ ಸುಮಾರು ಇಪ್ಪತೈದು ಕಡೆ ಸಬ್ ರಿಜಿಸ್ಟ್ರಾರ್ ಆಫೀಸ್ ಗಳ ಮೇಲೆ ರೈಡ್ ಮಾಡಲಾಗಿದೆ. ಅದರಲ್ಲಿ ದೇವನಹಳ್ಳಿ, ದೊಡ್ಡಬಳ್ಳಾಪುರ, ಬ್ಯಾಟರಾಯನಪುರ, ಯಲಹಂಕ ಈ ನಾಲ್ಕು ಕಡೆ ನಾನು ನೋಡ್ತಿದೀನಿ.

ಈಗ ಆನ್ ಲೈನ್ ಮಾಡಿರೋದ್ರಿಂದ ಭ್ರಷ್ಟಾಚಾರ ಕಡಿಮೆ ಆಗಿರಬಹುದು ಎಂದು ಬಂದ್ವಿ. ಆದರೆ ಇಲ್ಲಿ ಸ್ವಲ್ಪ ವ್ಯತ್ಯಾಸ ಇದೆ. ಹಾಜರಾತಿ ಸರಿ ಇಲ್ಲ, ಡೈಲಿ ಕ್ಯಾಶ್ ರಿಜಿಸ್ಟರ್ ಮೇಂಟೇನ್ ಮಾಡಿಲ್ಲ.. ಕೇಳಿದರೆ ಸ್ಟಾಫ್ ಇಲ್ಲ ಅಂತಾರೆ.

ರೆಕಾರ್ಡ್ ರೂಂ ಇದೆ ಆದ್ರೆ ಬೀಗ ತೆಗೆಯೋಕ್ಕೆ ಆಗ್ತಿಲ್ಲ.. ರೆಕಾರ್ಡ್ ರೂ ಕಸ್ಟೋಡಿಯನ್ ನಾನೆ ಅಂತಾರೆ ಆದ್ರೆ ಬೀಗ ತೆಗಿ ಅಂದ್ರೆ ಆಗ್ತಿಲ್ಲ ಅದ್ಯಾವ ಬೀಗ ತಂದಿದಾರೋ ಏನೋ ಎಂದು ಅನುಮಾನ ವ್ಯಕ್ತಪಡಿಸಿದರು.

ಇನ್ನೂ ಏನೇನೊ ನ್ಯೂನ್ಯತೆ ಇದೆಯೊ ಎಲ್ಲವನ್ನ ಚೆಕ್ ಮಾಡ್ಲಿಕ್ಕೆ ನಮ್ಮ ಸಿಬ್ಬಂದಿಗೆ ಹೇಳಿದ್ದೇನೆ. ಅವರು ಸಂಜೆಯವರೆಗೆ ಇಲ್ಲೆ ಇದ್ದು ಎಲ್ಲವನ್ನ ಪರಿಶೀಲನೆ ಮಾಡ್ತಾರೆ. ಬೀಗ ತೆಗಿಲಿಲ್ಲ ಅಂದ್ರೆ ಬೀಗ ಹೊಡೆದಾದರು ಅದರಲ್ಲಿ ಏನೇನು ನ್ಯೂನ್ಯತೆಗಳಿದೆಯೊ ಎಲ್ಲ ವನ್ನ ಚೆಕ್ ಮಾಡಿ ಅಂತ ಸೂಚನೆ ನೀಡಿದ್ದೇನೆ.

ಯಾವ್ಯಾವ ರಿಜಿಸ್ಟರ್ ಮೇಂಟೇನ್ ಮಾಡಬೇಕು, ಯಾವುದೆಲ್ಲ ಮಾಡಿಲ್ಲ. ಎಲ್ಲಾ ಚೆಕ್ ಮಾಡ್ತಾರೆ. ಜನಗಳುನ ಕೂಡ ಲಂಚ ಕೊಟ್ಟು ಕೆಲ್ಸ ಮಾಡಿಸಿಕೊಳ್ತಾರ? ಅಥವಾ ಹಂಗೆ ಮಾಡಿಸಿಕೊಳ್ತಾರ ಎಲ್ಲ ನೋಡಬೇಕು..

ಎಷ್ಟು ಅರ್ಜಿಗಳು ಬಂದಿವೆ, ಬಾಕಿ ಎಷ್ಟಿವೆ,ಏನಾದ್ರು ಕೊಡ್ಲಿ ಅಂತ ಕಾಯ್ತಿದಾರ ಅನ್ನೋದನ್ನ ನಮ್ಮ ಆಫೀಸರ್ಸ್ ಚೆಕ್ ಮಾಡ್ತಾರೆ ಎಂದರು.

ರಾಜಕೀಯ

ವಿಜಯೇಂದ್ರಗೆ ಯತ್ನಾಳ್ ಬಹಿರಂಗ ಸವಾಲು..!

ವಿಜಯೇಂದ್ರಗೆ ಯತ್ನಾಳ್ ಬಹಿರಂಗ ಸವಾಲು..!

ಬಿಜೆಪಿ ಮುಕ್ತ ಆಗುವುದಿಲ್ಲವೋ ಅಲ್ಲಿಯವರೆಗೆ ನಾನು ಪಕ್ಷ ಸೇರ್ಪಡೆ ಆಗುವುದಿಲ್ಲ ಎಂದು ಉಚ್ಚಾಟಿತ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. Bjp

[ccc_my_favorite_select_button post_id="105018"]
KSDL; ಮೈಸೂರು ಸ್ಯಾಂಡಲ್ ಫ್ಯಾಕ್ಟರಿ: ₹416 ಕೋಟಿ ದಾಖಲೆಯ ನಿವ್ವಳ ಲಾಭ

KSDL; ಮೈಸೂರು ಸ್ಯಾಂಡಲ್ ಫ್ಯಾಕ್ಟರಿ: ₹416 ಕೋಟಿ ದಾಖಲೆಯ ನಿವ್ವಳ ಲಾಭ

ಬೆಂಗಳೂರು: ಸರಕಾರಿ ಸ್ವಾಮ್ಯದ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತವು (KSDL) 2024-25ನೇ ಸಾಲಿನಲ್ಲಿ 1,787 ಕೋಟಿ ರೂಪಾಯಿ ದಾಖಲೆ ವಹಿವಾಟು ನಡೆಸಿ, ₹416 ಕೋಟಿ ನಿವ್ವಳ ಲಾಭ ಗಳಿಸಿದೆ. ಇದು ಸಾಲಿಗಿಂತ ₹54

[ccc_my_favorite_select_button post_id="105006"]
ಪಂಬನ್ ಸೇತುವೆ ಲೋಕಾರ್ಪಣೆ| Video ನೋಡಿ

ಪಂಬನ್ ಸೇತುವೆ ಲೋಕಾರ್ಪಣೆ| Video ನೋಡಿ

ರಾಮೇಶ್ವರಂ: ತಮಿಳುನಾಡಿನ ಪಂಬನ್ ಮತ್ತು ಹಿಂದೂ ಮಹಾಸಾಗರದಲ್ಲಿನ ದ್ವೀಪದ ರಾಮೇಶ್ವರಂ ನಗರವನ್ನು ಸಂಪರ್ಕಿಸುವ ಪಂಬನ್ ವರ್ಟಿಕಲ್ ಲಿಫ್ಟ್ (ಮೇಲ್ಮುಖ ತೆರೆದುಕೊಳ್ಳುವ) ಪಂಬನ್ ಸೇತುವೆಯನ್ನು (Pamban pridge) ಪ್ರಧಾನಿ ನರೇಂದ್ರ ಮೋದಿ ಭಾನುವಾರ ಮಧ್ಯಾಹ್ನ 12.30ರಲ್ಲಿ

[ccc_my_favorite_select_button post_id="105011"]
los angeles fire| ಅಮೆರಿಕ ಕಾಡ್ಗಿಚ್ಚು: ಸಾವಿನ ಸಂಖ್ಯೆ 11ಕ್ಕೆ| Video

los angeles fire| ಅಮೆರಿಕ ಕಾಡ್ಗಿಚ್ಚು: ಸಾವಿನ ಸಂಖ್ಯೆ 11ಕ್ಕೆ| Video

ಹಾಲಿವುಡ್ ಹಿಲ್ ಹಾಗೂ ಸ್ಟುಡಿಯೋ ಸಿಟಿಗೆ ಹೊತ್ತಿಕೊಂಡಿದ್ದ ಬೆಂಕಿಯನ್ನು ವಿಮಾನ, ಹೆಲಿಕಾಪ್ಟರ್ ಗಳ ಮೂಲಕ ನೀರು ಸಿಂಪಡಿಸಿ ನಂದಿಸಲಾಗಿತ್ತು los Angeles fire

[ccc_my_favorite_select_button post_id="100721"]

ಕ್ರೀಡೆ

ಬೆಂ.ಗ್ರಾ.ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗೆ ಚಾಲನೆ

ಬೆಂ.ಗ್ರಾ.ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗೆ ಚಾಲನೆ

ನೌಕರರ ಕ್ಷೇಮಾಭಿವೃದ್ಧಿಗೆ ಎಲ್ಲಾ ಸಹಕಾರ ನೀಡಲಾಗುವುದು, ಜಿಲ್ಲೆಯ ಅಭಿವೃದ್ಧಿಯಲ್ಲಿ ಸರ್ಕಾರಿ ನೌಕರರ ಪಾತ್ರ ಬಹಳ ಮುಖ್ಯ, ಜಿಲ್ಲೆಯ ಎಲ್ಲಾ ಅಭಿವೃದ್ಧಿ ಕೆಲಸಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. Sports Meet

[ccc_my_favorite_select_button post_id="104998"]
Doddaballapura: ದೇವಾಲಯದ ಬಳಿ ಇಸ್ಪೀಟ್ ಜೂಜಾಟ.. ಪೊಲೀಸರ ದಾಳಿ

Doddaballapura: ದೇವಾಲಯದ ಬಳಿ ಇಸ್ಪೀಟ್ ಜೂಜಾಟ.. ಪೊಲೀಸರ ದಾಳಿ

ದೊಡ್ಡಬಳ್ಳಾಪುರ (Doddaballapura): ದೇವಾಲಯದ ಮುಂಭಾಗ ಜೂಜಾಟದಲ್ಲಿ ತೊಡಗಿದ್ದವರ ಮೇಲೆ ದಾಳಿ ನಡೆಸಿರುವ ದೊಡ್ಡಬೆಳವಂಗಲ ಪೊಲೀಸರು 8 ಆರೋಪಿಗಳನ್ನು ಬಂಧಿಸಿದ್ದಾರೆ.

[ccc_my_favorite_select_button post_id="105020"]
ಡಿವೈಡರ್‌ಗೆ ಡಿಕ್ಕಿ.. 15 ಬಾರಿ ನಿರಂತರವಾಗಿ ಉರುಳಿ ಬಿದ್ದ ಕಾರು..!| Video

ಡಿವೈಡರ್‌ಗೆ ಡಿಕ್ಕಿ.. 15 ಬಾರಿ ನಿರಂತರವಾಗಿ ಉರುಳಿ ಬಿದ್ದ ಕಾರು..!| Video

ಕಾರು ಹೆದ್ದಾರಿ ವಿಭಜಕಕ್ಕೆ ಡಿಕ್ಕಿ ಹೊಡೆದು 15 ಬಾರಿ ನಿರಂತರವಾಗಿ ಉರುಳಿ ಬಿದ್ದಿರುವುದು ಸಿಸಿಟಿವಿ ದೃಶ್ಯಗಳಲ್ಲಿ ಕಂಡುಬಂದಿದೆ. Video

[ccc_my_favorite_select_button post_id="104851"]

ಆರೋಗ್ಯ

ಸಿನಿಮಾ

ಕಲಾವಿದರು ಮಾಸಾಶನ ಪಡೆಯಲು ಜೀವಿತಾವಧಿ ಪ್ರಮಾಣ ಪತ್ರ ಸಲ್ಲಿಸಿ

ಕಲಾವಿದರು ಮಾಸಾಶನ ಪಡೆಯಲು ಜೀವಿತಾವಧಿ ಪ್ರಮಾಣ ಪತ್ರ ಸಲ್ಲಿಸಿ

ನಿಗದಿತ ಅರ್ಜಿ ನಮೂನೆಯನ್ನು ಸಹಾಯಕ ನಿರ್ದೇಶಕರ ಕಛೇರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಿಲ್ಲಾಡಳಿತ ಭವನ, ಕೊಠಡಿ ಸಂಖ್ಯೆ:118 Affidavit

[ccc_my_favorite_select_button post_id="104955"]
error: Content is protected !!