Daily story: Humble lamp

ಹರಿತಲೇಖನಿ ದಿನಕ್ಕೊಂದು: ವಿನಮ್ರ ಹಣತೆ

Daily story: ಬೆಳಕಿನ ವಿಚಾರದಲ್ಲಿನಾನೇ ಶ್ರೇಷ್ಠ, ನಾನೇ ಶ್ರೇಷ್ಠ’ ಅನ್ನುವ ತರ್ಕಗಳು ದಿನೇ ದಿನೇ ದೇವಲೋಕಕ್ಕೆ ಬರತೊಡಗಿದವು. ಸೂರ್ಯ, ಚಂದ್ರ, ನಕ್ಷತ್ರಗಳು ಪ್ರತಿನಿತ್ಯ ಇದೇ ವಿಷಯದ ಬಗ್ಗೆ ಸಂಬಂಧಿಸಿದವರ ಮೂಲಕ ತಮ್ಮನ್ನೇ ಶ್ರೇಷ್ಠರೆಂದು ಗುರುತಿಸಬೇಕು’ ಅನ್ನುವ ಬಲವಂತ ಹೇರತೊಡಗಿದವು.

ಯಾರನ್ನು ತಾನು ಶ್ರೇಷ್ಠನೆಂದು ಗುರುತಿಸಬೇಕೆಂದು ಬ್ರಹ್ಮನಿಗೆ ಗಲಿಬಿಲಿಯುಂಟಾಯಿತು. ಈ ವಿಚಾರದಲ್ಲಿಎಲ್ಲರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲು ನಿರ್ಧರಿಸಿ ತುರ್ತು ಸಭೆ ಕರೆದನು.

ಸಭೆಗೆ ಇಂದ್ರಾದಿಗಳು ಸೇರಿದಂತೆ ಎಲ್ಲಾದೇವತೆಗಳು ಹಾಜರಿದ್ದರು. ಸೂರ್ಯ, ಚಂದ್ರ ಹೀಗೆ ಯಾರಾರ‍ಯರು ಸ್ಪರ್ಧೆಯಲ್ಲಿಇದ್ದರೋ ಅವರಿಗೆಲ್ಲಾಕರೆ ಹೊಯಿತು. ಎಲ್ಲರೂ ಬಂದು ಸೇರಿದಾಗ ಸಭೆ ಆರಂಭವಾಯಿತು.

ಭೂಮಿ ಕಡೆಯಿಂದ ಮಿಂಚುಹುಳ ಸ್ಪರ್ಧೆಗೆ ಹೋಗಿತ್ತು. ಭೂಮಿಯಲ್ಲಿಬೆಳಕಿಗೆ ಪ್ರತಿನಿಧಿ ನೀನು ಒಬ್ಬನೇನಾ, ಮತ್ಯಾರು ಇಲ್ಲವೇ ಹಣತೆ ಯಾಕೆ ಬಂದಿಲ್ಲಅಂತ ಸಭೆಯಲ್ಲಿಕೇಳಲಾಯಿತು. ಆಗ ಮಿಂಚುಹುಳವು ಹಣತೆಯನ್ನು ನಾನು ಕರೆದೆ. ಆದರೆ ಹಣತೆ ನಾನು ಸ್ಪರ್ಧಿಸಲು ಸೂಕ್ತವಾದವನೊ, ಇಲ್ಲವೊ ಗೊತ್ತಿಲ್ಲ. ನೀವು ಹೋಗಿ ಬನ್ನಿ’ ಅಂತ ಹೇಳಿ ಕಳಿಸಿತು ಎಂದಿತು.

ಬ್ರಹ್ಮನಿಗೆ ಈ ಸಭೆಯಲ್ಲಿ ಹಣತೆ ಇರುವುದು ಸೂಕ್ತವೆನ್ನಿಸಿ ತುರ್ತಾಗಿ ಅದನ್ನು ಕರೆಯಿಸಿತು. ಸಭೆಯಲ್ಲಿಮೊದಲು ವಾದಿಸುವ ಮತ್ತು ಹಕ್ಕು ಮಂಡಿಸುವ ಅಧಿಕಾರವನ್ನು ಸೂರ್ಯನಿಗೆ ನೀಡಲಾಯಿತು.

ಸೂರ್ಯ, ನನಗೆ ಪ್ರತಿಸ್ಪರ್ಧಿಯೇ ಇಲ್ಲ. ಈ ಸಭೆಯ ಅವಶ್ಯಕತೆಯೂ ಇರಲಿಲ್ಲ. ನಾನು ಇಲ್ಲದ ಜಗತ್ತೇ ಇಲ್ಲ. ಜೀವನ ನಡೆಯುವುದು ನನ್ನ ಬೆಳಕಿನಿಂದನೇ’ ಎಂದು ಹೇಳಿ ಅಹಂನಿಂದ ಎಲ್ಲರ ಕಡೆ ನೋಡಿತು.

ಆನಂತರ ಚಂದ್ರ, ಈ ಸೂರ್ಯ ಎಲ್ಲಾಕಾಲದಲ್ಲೂಇರವವನಲ್ಲ. ಹಗಲು ಮಾತ್ರ ಅವನ ಕೆಲಸ. ರಾತ್ರಿ ನಾನು ಇಲ್ಲದೆ ಬದುಕಿಲ್ಲ. ಕವಿಗಳಿಗೆ, ಪ್ರೇಮಿಗಳಿಗೆ ನನ್ನಷ್ಟು ಸಹಾಯ ಮಾಡಿದವರು ಯಾರೂ ಇಲ್ಲ. ನಾನು ಸೂರ್ಯನಷ್ಟು ಪ್ರಖರವಾದ ಬಿಸಿಲು ನೀಡಿ ಜನರಿಗೆ ತೊಂದರೆ ಕೊಡುವುದಿಲ್ಲ’ ಎಂದು ವಾದಿಸಿತು.

ನಕ್ಷತ್ರಗಳು ಸೂರ್ಯನ ಬೆಳಕು ಹಗಲು ಮಾತ್ರ ಮತ್ತು ಚಂದ್ರ ತಿಂಗಳಲ್ಲಿಕೆಲವು ದಿನ ಮಾತ್ರ. ಆದರೆ ನಾವು ರಾತ್ರಿಯಲ್ಲಿಯಾವತ್ತೂ ಇರ್ತೀವಿ. ನಮ್ಮ ಬೆಳಕು ಅವರಿಗೆ ಚಿಕ್ಕದಿರಬಹುದು. ಆದರೆ ಅಷ್ಟರಲ್ಲೇ ಅವರಿಗೆ ಹಾದಿ ತೋರಿಸುತ್ತೀವಿ. ಮಕ್ಕಳಿಗೂ ನಮ್ಮನ್ನು ಕಂಡರೆ ಅಕ್ಕರೆ’ ಅಂತ ಹೇಳಿದವು.

ಮಿಂಚುಹುಳ ಕೂಡ ನಾನು ಸಣ್ಣವನಾದರೂ ಯಾರ ಸಹಾಯವಿಲ್ಲದೆ ಇಡೀ ಕತ್ತಲೆಯಲ್ಲಿಒಂದು ಬೆಳಕಿನ ಸೊಬಗು ಮೂಡಿಸುವೆ ಎಂದು ಹೇಳಿತು.

ತನ್ನ ವಾದ ಮಂಡಿಸಲು ಮುಂದಾದ ಹಣತೆ ನನಗೆ ವಾದ ಮಂಡಿಸಲು ಆಸೆಯೇನೂ ಇಲ್ಲ. ನಾನು ಶ್ರೇಷ್ಠನೆಂದೂ ಭಾವಿಸಿಲ್ಲ. ಕನಿಷ್ಠನೆಂದೂ ಭಾವಿಸಿಲ್ಲ. ನಾನು ನನ್ನ ಕೆಲಸ ಮಾಡುತ್ತಿದ್ದೇನೆ. ತನ್ನನ್ನು ತಾನು ಸುಟ್ಟುಕೊಂಡು ಬೆಳಕು ನೀಡುವುದರಲ್ಲಿನನಗೆ ಖುಷಿ ಇದೆ.

ಅದು ಕೇವಲ ಸ್ವಲ್ಪವೇ ಬೆಳಕಾಗಲಿ, ನನ್ನನ್ನು ನಂಬಿ ಹಚ್ಚಿದವರಿಗೆ ನಾನು ಮೋಸ ಮಾಡಲ್ಲ. ಅವರು ಬಯಸುವವರೆಗೂ ಬೆಳಕು ಕೊಡುತ್ತೇನೆ. ಅವರು ಬೇಡವೆಂದರೆ ನನ್ನ ಬೆಳಗುವಿಕೆ ನಿಲ್ಲಿಸುತ್ತೇನೆ. ಸೂರ್ಯನಾಗಲಿ, ಚಂದ್ರನಾಗಲಿ, ನಕ್ಷತ್ರಗಳಾಗಲಿ ಬೇಡವೆಂದರೆ ನಿಲ್ಲಿಸಿಯಾರೆ? ಜನರಿಗೆ ಬೇಕೋ ಬೇಡ್ವೊ ಗೊತ್ತಿಲ್ಲದೆ ತಮ್ಮ ಪಾಡಿಗೆ ತಾವು ಉರಿಯುತ್ತಲೇ ಇರುತ್ತಾರೆ.

ನಾನು ಇಲ್ಲದೆ ಹೋಗಿದ್ದರೆ ಮನುಷ್ಯರ ಜಗತ್ತು ಹೇಗಿರುತ್ತಿತ್ತು ಎಂದು ಊಹಿಸಿ. ಆದರೆ ನನಗೆ ಅದರಲ್ಲಿಹೆಗ್ಗಳಿಕೆ ಇಲ್ಲ. ಅದು ನನ್ನ ಕೆಲಸ, ನನ್ನ ಪಾಡಿಗೆ ನಾನು ಉರಿದು ಬೆಳಕು ಕೊಡುವುದು ಕರ್ತವ್ಯ. ಕರ್ತವ್ಯದಲ್ಲಿಶ್ರೇಷ್ಠತೆಯ ಲೆಕ್ಕ ಹಾಕುವುದು ನನಗೆ ಸರಿ ಬರುವುದಿಲ್ಲ. ಅದಕ್ಕಾಗಿ ನಾನು ಮೊದಲೇ ಸಭೆಗೆ ಬಂದಿರಲಿಲ್ಲ. ಕ್ಷಮಿಸಿ’ ಎಂದು ಕೈ ಮುಗಿಯಿತು.

ಹಣತೆಯ ಮಾತು ಮುಗಿಯುತ್ತಲೇ ಎಲ್ಲರೂ ಎದ್ದು ನಿಂತು ಚಪ್ಪಾಳೆ ತಟ್ಟಿದರು. ಆಗ ಬ್ರಹ್ಮ, ಯಾರು ಶ್ರೇಷ್ಠರು ಎಂಬುದನ್ನು ನಾನು ತೀರ್ಮಾನಿಸುವ ಅಗತ್ಯ ಇಲ್ಲ. ಇಡೀ ಸಭೆಯೇ ಅದನ್ನು ಗುರುತಿಸಿದೆ.

ಶ್ರೇಷ್ಠತೆ ಬರುವುದು ಬರೀ ಬಲದಿಂದಲ್ಲ, ತನ್ನ ಶಕ್ತಿಯಿಂದಲ್ಲ, ಅದರ ಜೊತೆಗೆ ನಡವಳಿಕೆಯಿಂದಲೂ. ಸಣ್ಣ ಬೆಳಕು ಕೊಟ್ಟರೂ ಹಣತೆಯ ವ್ಯಕ್ತಿತ್ವ ಗುರುತರವಾದದ್ದು’ ಎಂದ. ಎಲ್ಲರೂ ಹಣತೆಗೆ ಜಯಕಾರ ಹಾಕಿದರು. ಸೂರ್ಯ, ಚಂದ್ರ, ನಕ್ಷತ್ರಗಳಿಗೆ ತಮ್ಮ ತಪ್ಪಿನ ಅರಿವಾಯಿತು.

ಕೃಪೆ: ಸದಾಶಿವ್‌ ಸೊರಟೂರು

ರಾಜಕೀಯ

ಗ್ಯಾರಂಟಿ ಸಮಿತಿಗಳಿಂದ ಶಾಸಕರ ಘನತೆಗೆ ಕುಂದಿಲ್ಲ: ಸಿಎಂ  ಸಿದ್ದರಾಮಯ್ಯ

ಗ್ಯಾರಂಟಿ ಸಮಿತಿಗಳಿಂದ ಶಾಸಕರ ಘನತೆಗೆ ಕುಂದಿಲ್ಲ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಗ್ಯಾರಂಟಿ ಸಮಿತಿಗಳಿಂದ ಶಾಸಕರ ಘನತೆಗೆ ಕುಂದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Cmsiddaramaiah) ನುಡಿದರು. ಗ್ಯಾರಂಟಿ ಸಮಿತಿಯಿಂದ ಶಾಸಕರ ಘನತೆಗೆ ದಕ್ಕೆಯಾಗಿದೆ ಎಂಬ ಕುರಿತು ವಿಧಾನಸಭೆಯಲ್ಲಿ ಪ್ರತಿಪಕ್ಷದ ನಾಯಕರ ಆರೋಪಕ್ಕೆ ಪ್ರತಿಕ್ರಿಯಿಸಿದರು. ಅಧಿವೇಶನ ಮುಗಿಯುತ್ತಿದ್ದಂತೆ

[ccc_my_favorite_select_button post_id="104074"]
ಕೇಂದ್ರಕ್ಕೆ ಮಹತ್ವದ ವಿವಿಧ ಬೇಡಿಕೆಗಳನ್ನಿಟ್ಟ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ

ಕೇಂದ್ರಕ್ಕೆ ಮಹತ್ವದ ವಿವಿಧ ಬೇಡಿಕೆಗಳನ್ನಿಟ್ಟ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ

ನವದೆಹಲಿ: ಕರ್ನಾಟಕದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳ ಮೈಸೂರು ಮತ್ತು ಧಾರವಾಡ ವಿವಿಗಳು ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು, ಕೇಂದ್ರ ಸರ್ಕಾರ ನೆರವಿಗೆ ಧಾವಿಸಬೇಕು ಎಂದು ಮಾಜಿ ಪ್ರಧಾನಿಗಳಾದ ಹೆಚ್.ಡಿ.ದೇವೇಗೌಡ (HD Deve Gowda) ಅವರು ಮನವಿ

[ccc_my_favorite_select_button post_id="103998"]
ಸಿಎಂ ಸಿದ್ದರಾಮಯ್ಯರ ಭೇಟಿಯಾದ ತಮಿಳುನಾಡು ಅರಣ್ಯ ಸಚಿವ.. ಮಹತ್ವದ ಚರ್ಚೆ

ಸಿಎಂ ಸಿದ್ದರಾಮಯ್ಯರ ಭೇಟಿಯಾದ ತಮಿಳುನಾಡು ಅರಣ್ಯ ಸಚಿವ.. ಮಹತ್ವದ ಚರ್ಚೆ

ಬೆಂಗಳೂರು; ತಮಿಳುನಾಡಿನ ಅರಣ್ಯ ಸಚಿವರಾದ ಡಾ.ಕೆ.ಪೊನ್ನುಮುಡಿ ಮತ್ತು ರಾಜ್ಯಸಭಾ ಸದಸ್ಯರಾದ ಮೊಹಮದ್ ಅಬ್ದುಲ್ಲಾ ಇಸ್ಮಾಯಿಲ್ ಅವರು ಕಾವೇರಿ ನಿವಾಸದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (Cmsiddaramaiah) ಅವರನ್ನು ಭೇಟಿಯಾದರು. ಈ ವೇಳೆ ಕೇಂದ್ರ ಸರ್ಕಾರದ ಪ್ರಜಾಪ್ರಭುತ್ವ ವಿರೋಧಿ

[ccc_my_favorite_select_button post_id="104024"]
los angeles fire| ಅಮೆರಿಕ ಕಾಡ್ಗಿಚ್ಚು: ಸಾವಿನ ಸಂಖ್ಯೆ 11ಕ್ಕೆ| Video

los angeles fire| ಅಮೆರಿಕ ಕಾಡ್ಗಿಚ್ಚು: ಸಾವಿನ ಸಂಖ್ಯೆ 11ಕ್ಕೆ| Video

ಹಾಲಿವುಡ್ ಹಿಲ್ ಹಾಗೂ ಸ್ಟುಡಿಯೋ ಸಿಟಿಗೆ ಹೊತ್ತಿಕೊಂಡಿದ್ದ ಬೆಂಕಿಯನ್ನು ವಿಮಾನ, ಹೆಲಿಕಾಪ್ಟರ್ ಗಳ ಮೂಲಕ ನೀರು ಸಿಂಪಡಿಸಿ ನಂದಿಸಲಾಗಿತ್ತು los Angeles fire

[ccc_my_favorite_select_button post_id="100721"]

ಕ್ರೀಡೆ

Champions Trophy; ಭಾರತದ ಮುಡಿಯೇರಿದ ಚಾಂಪಿಯನ್ಸ್ ಟ್ರೋಫಿ

Champions Trophy; ಭಾರತದ ಮುಡಿಯೇರಿದ ಚಾಂಪಿಯನ್ಸ್ ಟ್ರೋಫಿ

ದುಬೈ: ಐಸಿಸಿ ಚಾಂಪಿಯನ್ಸ್ ಟ್ರೋಫಿ ಸರಣಿಯ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಮಣಿಸಿದ ಭಾರತ ಚಾಂಪಿಯನ್ಸ್ ಟ್ರೋಫಿಯನ್ನು (Champions Trophy) ತನ್ನದಾಗಿಸಿಕೊಂಡಿದೆ. ಟಾಸ್‌ ಗೆದ್ದು ಬ್ಯಾಟಿಂಗ್ ಮಾಡಿದ ಕೀವಿಸ್ ಪಡೆ 50 ಓವರ್‌ಗಳಲ್ಲಿ 7

[ccc_my_favorite_select_button post_id="103912"]
ಅತ್ತೆ-ಸೊಸೆ ಜಗಳ: ತಾಯಿ, ಮಗ ಆತ್ಮಹತ್ಯೆ

ಅತ್ತೆ-ಸೊಸೆ ಜಗಳ: ತಾಯಿ, ಮಗ ಆತ್ಮಹತ್ಯೆ

ಹಾಸನ: ಕೌಟುಂಬಿಕ ಕಲಹ ಹಿನ್ನೆಲೆ ಕೆರೆಗೆ ಹಾರಿ ತಾಯಿ-ಮಗ ಆತ್ಮಹತ್ಯೆ (Suicide) ಮಾಡಿಕೊಂಡ ಘಟನೆ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಕಬ್ಬಳಿ ಗ್ರಾಮದಲ್ಲಿ ನಡೆದಿದೆ. ಜಯಂತಿ (60 ವರ್ಷ), ಭರತ್ (35 ವರ್ಷ) ಆತ್ಮಹತ್ಯೆಗೆ ಶರಣಾದ ತಾಯಿ-ಮಗ ಎಂದು ಗುರುತಿಸಲಾಗಿದೆ. ಭರತ್ ಕಳೆದ

[ccc_my_favorite_select_button post_id="104008"]
Doddaballapura: ದ್ವಿಚಕ್ರ ವಾಹನಗಳ ಮುಖಾಮುಖಿ ಡಿಕ್ಕಿ.. ಓರ್ವನ ಸ್ಥಿತಿ ಗಂಭೀರI Accident

Doddaballapura: ದ್ವಿಚಕ್ರ ವಾಹನಗಳ ಮುಖಾಮುಖಿ ಡಿಕ್ಕಿ.. ಓರ್ವನ ಸ್ಥಿತಿ ಗಂಭೀರI Accident

ದೊಡ್ಡಬಳ್ಳಾಪುರ: ತಾಲೂಕಿನ ಅಪಘಾತ (Accident) ಪ್ರಕರಣಗಳು ಸಂಖ್ಯೆ ಒಂದೇ ಸಮನೇ ಹೆಚ್ಚಾಗುತ್ತಿರುವುದು ಸಾರ್ವಜನಿಕರಲ್ಲಿ ಆತಂಕವನ್ನು ಹೆಚ್ಚಿಸಿದೆ. ಇಂದು ಬೆಳಗ್ಗೆಯಿಂದ ದೊಡ್ಡಬಳ್ಳಾಪುರ ತಾಲೂಕಿನ ಮೂರು ಅಪಘಾತಗಳು ವರದಿಯಾಗಿದ್ದು, ಓರ್ವ ಸಾವನಪ್ಪಿದ್ದರೆ, ಹಲವರು ಗಾಯಗೊಂಡಿದ್ದಾರೆ. ಇದೀಗ ಕೆಲವು

[ccc_my_favorite_select_button post_id="104042"]

ಆರೋಗ್ಯ

ಸಿನಿಮಾ

ಸಿನಿಮಾದವರ ನೆಟ್ಟು, ಬೋಲ್ಟು ಟೈಟ್ ಮಾಡುವ ಕಾರ್ಯ ಆರಂಭ..?

ಸಿನಿಮಾದವರ ನೆಟ್ಟು, ಬೋಲ್ಟು ಟೈಟ್ ಮಾಡುವ ಕಾರ್ಯ ಆರಂಭ..?

ತುಮಕೂರು: ಬೆಂಗಳೂರು ನಡೆದ ಅಂತರರಾಷ್ಟ್ರೀಯ ಫಿಲಂ ಫೆಸ್ಟಿವಲ್ ಕಾರ್ಯಕ್ರಮಕ್ಕೆ ಗೈರಾದ ಖ್ಯಾತ ನಟ, ನಟಿಯರ ಕುರಿತು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ (DK Shivakumar) ಚಿತ್ರರಂಗದವರ ನಟ್ಟು ಬೋಲ್ಟು ಟೈಟು ಮಾಡುತ್ತೇನೆ ಎಂದು

[ccc_my_favorite_select_button post_id="103709"]
error: Content is protected !!