Daily story: We have to redeem ourselves

ಹರಿತಲೇಖನಿ ದಿನಕ್ಕೊಂದು ಕಥೆ: ಸ್ವಭಾವದೋಷ

Daily story: ಇದು ಗುರು ಹಾಗೂ ಶಿಷ್ಯನ ಕಥೆಯಾಗಿದೆ. ಓರ್ವ ಗುರುಗಳ ಆಶ್ರಮದಲ್ಲಿ ಅನೇಕ ಶಿಷ್ಯರಿರುತ್ತಿದ್ದರು. ಅವರ ಪೈಕಿ ಒಬ್ಬನ ಹೆಸರು ಸಾರ್ಥಕ ಎಂದಿತ್ತು.

ಒಮ್ಮೆ ಶಿಷ್ಯ ಸಾರ್ಥಕನು ತನ್ನ ಮಹಾನ್ ಗುರುಗಳಲ್ಲಿ, ‘ಹೇ ಗುರುದೇವಾ, ನೀವು ನನಗೆ ಆತ್ಮಸಾಕ್ಷಾತ್ಕಾರದ ದಾರಿಯನ್ನು ತೋರಿಸಿ !’ ಎಂದು ವಿನಂತಿಸಿದನು. ಅದಕ್ಕೆ ಗುರುದೇವರು ನುಡಿದರು, ‘ವತ್ಸ, ಆತ್ಮಸಾಕ್ಷಾತ್ಕಾರದ ಮಾರ್ಗ ತುಂಬಾ ಕಠಿಣವಾಗಿರುತ್ತದೆ.

ಆ ಮಾರ್ಗ ಕ್ರಮಿಸುವ ಸಾಧಕರು ಅನೇಕ ಕಠಿಣ ಪ್ರಸಂಗಗಳನ್ನು ಎದುರಿಸಬೇಕಾಗುತ್ತದೆ. ಒಂದು ವೇಳೆ ನಿನಗೆ ಅಷ್ಟು ಯೋಗ್ಯತೆಯಿದ್ದಲ್ಲಿ ನನಗೆ ಆ ಮಾರ್ಗವನ್ನು ಹೇಳುವುದರಲ್ಲಿ ಯಾವುದೇ ರೀತಿಯ ವಿಪತ್ತಿಲ್ಲ’ ಎಂದು.

ಜಿಜ್ಞಾಸು ಸಾರ್ಥಕನು ‘ಗುರುದೇವರೇ, ಮಾರ್ಗದಲ್ಲಿ ಬರುವ ಅಡಚಣೆಗಳನ್ನು ಎದುರಿಸುವೆನು ಹಾಗೂ ಅದರೊಂದಿಗೆ ಹೋರಾಡಿ ನಾನು ನನ್ನ ಗುರಿ ತಲುಪಲು ಪ್ರಯತ್ನಿಸುವೆನು’.

ಸಾರ್ಥಕನ ದೃಢ ವಿಶ್ವಾಸವನ್ನು ನೋಡಿ ಆಚಾರ್ಯರು ನುಡಿದರು, ‘ಏಕಾಂತವಾಸಕ್ಕೆ ಹೋಗಿ ನಿಷ್ಕಾಮ (ಯಾವುದೇ ಆಸೆಯಿಲ್ಲದೇ) ಭಾವದಿಂದ ಗಾಯತ್ರೀ ಮಂತ್ರವನ್ನು ಜಪಿಸು.

ಒಂದು ವರ್ಷದವರೆಗೂ ಯಾರೊಂದಿಗೂ ಮಾತನಾಡಬಾರದು ಹಾಗೂ ಯಾರೊಂದಿಗೂ ಸಂಪರ್ಕವಿಟ್ಟುಕೊಳ್ಳಬಾರದು.

ಒಂದು ವರ್ಷದ ಬಳಿಕ ನನ್ನನ್ನು ಬಂದು ಭೇಟಿಯಾಗು’. ಸಾರ್ಥಕನು ತನ್ನ ಗುರುಗಳ ಆಜ್ಞೆಯನ್ನು ಪಾಲಿಸಿದನು. ತನ್ನ ಸಾಧನೆ ಮಾಡಲು ಏಕಾಂತವಾಸಕ್ಕೆ ಹೊರಟು ಹೋದ.

ಒಂದು ವರ್ಷವಾಯಿತು

ಒಂದು ವರ್ಷವಾಯಿತು, ಸಾರ್ಥಕನು ಆಶ್ರಮಕ್ಕೆ ಮರಳಿ ಬರುವ ದಿನವಾಯಿತು. ಗುರುಗಳ ಆಶ್ರಮದಲ್ಲಿ ಅನೇಕ ಶಿಷ್ಯರಿದ್ದರು ಹಾಗೂ ಅವರೆಲ್ಲರೂ ನಾನಾ ರೀತಿಯ ಸೇವೆಗಳನ್ನು ಮಾಡುತ್ತಿದ್ದರು.

ಶಿಷ್ಯರೊಬ್ಬರು ಆಶ್ರಮದ ಸ್ವಚ್ಛತೆಯ ಸೇವೆಯನ್ನು ಮಾಡುತ್ತಿದ್ದರು, ಆ ಶಿಷ್ಯನಿಗೆ ಗುರುಗಳು ಹೇಳಿದರು, ‘ಇಂದು ನನ್ನ ಶಿಷ್ಯನು ಬರಲಿದ್ದಾನೆ, ನೀನು ಅವನ ಮೇಲೆ ನಿನ್ನ ಪೊರಕೆಯಿಂದ ಕಸವನ್ನು ಎರಚಬೇಕು’ ಎಂದು.

ಒಂದು ವರ್ಷದ ಬಳಿಕ ಸಾರ್ಥಕನು ಏಕಾಂತವಾಸದಲ್ಲಿ ಸಾಧನೆ ಮಾಡಿ ಆಶ್ರಮದ ಸಮೀಪಕ್ಕೆ ಬಂದ ತಕ್ಷಣ ಆ ಶಿಷ್ಯನು ಗುರುದೇವರ ಆಜ್ಞೆಯಂತೆ ಕಸವನ್ನು ಎರಚಲು ಪ್ರಾರಂಭಿಸಿದನು.

ಇದರಿಂದ ಸಾರ್ಥಕನ ಶರೀರಕ್ಕೆಲ್ಲ ಧೂಳು ಮೆತ್ತಿ ಹೊಯಿತು. ಸಾರ್ಥಕನು ಕೋಪದಿಂದ ಆ ಶಿಷ್ಯನನ್ನು ಹೊಡೆಯಲು ಹೋದಾಗ ಅವನು ತಪ್ಪಿಸಿಕೊಂಡು ಓಡಿ ಹೋದನು.

ಸ್ನಾನ ಮಾಡಿಕೊಂಡು ಬಂದ ಬಳಿಕ ಸಾರ್ಥಕನು ಗುರುದೇವರ ಸೇವೆ ಮಾಡಲು ಅವರ ಬಳಿಗೆ ಹೋದಾಗ. ಗುರುದೇವರು ಸಾರ್ಥಕನನ್ನು ನೋಡಿ ನುಡಿದರು, ‘ವತ್ಸ, ನೀನು ಇನ್ನೂ ಸಹ ಹಾವಿನಂತೆ ಕಡಿಯುತ್ತಿರುವಿ. ಆದ್ದರಿಂದ ಇದೇ ಸಾಧನೆಯನ್ನು ಇನ್ನು ಒಂದು ವರ್ಷ ಮಾಡು’.

ಈ ಮಾತಿನಿಂದ ಸಾರ್ಥಕನ ಮನಸ್ಸಿನಲ್ಲಿ ಕೋಪ ಬಂತು; ಆದರೆ ಆತ್ಮತತ್ತ್ವವನ್ನು ತಿಳಿದುಕೊಳ್ಳುವ ತೀವ್ರ ಜಿಜ್ಞಾಸೆಯಿಂದ ಅವನು ಮತ್ತೆ ಸಾಧನೆ ಮಾಡಲು ಪ್ರಾರಂಭಿಸಿದನು. ನಿಧಾನವಾಗಿ ಅವನ ಸಾಧನೆಯ ಮತ್ತೊಂದು ವರ್ಷ ಪೂರ್ಣವಾಯಿತು.

ಈಗ ಅವನು ಮತ್ತೆ ಗುರುದೇವರ ಆಶ್ರಮಕ್ಕೆ ಹೋಗಲು ತಯಾರಾದನು. ಮತ್ತೆ ಗುರುದೇವರು ಸಾರ್ಥಕನು ಬರುವ ಮುನ್ನ ಆ ಸ್ವಚ್ಛತೆಯ ಸೇವೆ ಮಾಡುವ ಶಿಷ್ಯನಿಗೆ ಹೇಳಿದರ, ‘ಇಂದು ಸಾರ್ಥಕನು ಬರುವವನಿದ್ದಾನೆ, ನೀನು ನಿನ್ನ ಪೊರಕೆಯಿಂದ ಅವನನ್ನು ಸ್ಪರ್ಶಿಸಿ ಬಿಡು’ ಎಂದು.

ಸಾರ್ಥಕನು ಆಶ್ರಮಕ್ಕೆ ಬಂದ ಬಳಿಕ ಹಾಗೆಯೇ ಆಯಿತು. ಆ ಶಿಷ್ಯನು ಗುರುದೇವರ ಆಜ್ಞೆಯಂತೆ ಸಾರ್ಥಕನ ಶರೀರವನ್ನು ಪೊರಕೆಯಿಂದ ಸ್ಪರ್ಶಿಸಿದನು. ಮತ್ತೆ ಸಾರ್ಥಕನಿಗೆ ಕೋಪ ಬಂತು.

ಅವನು ಆ ಶಿಷ್ಯನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದನು ಹಾಗೂ ಸ್ನಾನ ಮಾಡಲು ಹೊರಟು ಹೋದನು.

ಸ್ನಾನ ಮಾಡಿಕೊಂಡು ಅವನು ಮತ್ತೆ ಗುರುದೇವರ ಎದುರಿಗೆ ನಿಂತು ‘ಹೇ ಗುರುದೇವಾ, ಈಗಲಾದರೂ ಆತ್ಮಸಾಕ್ಷಾತ್ಕಾರದ ಮಾರ್ಗವನ್ನು ತೋರಿಸಿ’ ಎಂದು ಬೇಡಿದನು.

ಗುರುಗಳು ‘ವತ್ಸ, ಈಗ ನೀನು ಹಾವಿನಂತೆ ಕಚ್ಚುತ್ತಿಲ್ಲ, ಆದರೆ ಹಾವಿನಂತೆ ಬುಸುಗುಟ್ಟುತ್ತಿರುವೆ ! ಆದ್ದರಿಂದ ಮತ್ತೊಂದು ವರ್ಷ ಸಾಧನೆ ಮಾಡು’.

ಸಾರ್ಥಕನು ಮೂರನೇ ವರ್ಷ ಸಹ ಸಾಧನೆ ಮಾಡಲು ಹೊರಟು ಹೋದನು.

ಮೂರನೆಯ ವರ್ಷವೂ ಪೂರ್ಣಗೊಂಡಿತು

ಮೂರನೆಯ ವರ್ಷವೂ ಪೂರ್ಣಗೊಂಡಿತು. ಗುರುದೇವರು ತಮ್ಮ ಸ್ವಚ್ಛತೆ ಮಾಡುವ ಶಿಷ್ಯರನ್ನು ಕರೆದು ಮತ್ತೆ ನುಡಿದರು, ‘ಇಂದು ಸಾರ್ಥಕನು ಸಾಧನೆ ಪೂರ್ಣಗೊಳಿಸಿ ಬರಲಿದ್ದಾನೆ. ನೀನು ಅವನ ಮೇಲೆ ಕಸವಿರುವ ಬುಟ್ಟಿಯನ್ನೇ ಮುಗುಚಿ ಹಾಕು.

ಆ ಶಿಷ್ಯನು ಗುರುದೇವರ ಆಜ್ಞೆಯನ್ನು ಪಾಲಿಸಿದನು. ಸಾರ್ಥಕನು ಬರುತ್ತಿದ್ದಂತೆ ಅವನ ಮೇಲೆ ಇಡೀ ಕಸದ ಬುಟ್ಟಿಯನ್ನೇ ಬುಡಮೇಲು ಮಾಡಿ ಹಾಕಿಬಿಟ್ಟನು. ಆದರೆ ಈ ಸಲ ಸಾರ್ಥಕನಿಗೆ ಕೋಪ ಬರಲೇ ಇಲ್ಲ.

ಅವನು ಸ್ವಚ್ಛತೆ ಮಾಡುವ ಶಿಷ್ಯರಿಗೆ ನಮಸ್ಕರಿಸಿ ‘ಗುರುಬಂಧು, ನೀವು ತುಂಬಾ ಶ್ರೇಷ್ಠರಾಗಿದ್ದೀರಿ. ನೀವು ಕಳೆದ 3 ವರ್ಷಗಳಿಂದ ನನ್ನ ಎಲ್ಲ ದುರ್ಗುಣಗಳನ್ನು ನಾಶ ಮಾಡಲು ಪ್ರಯತ್ನಿಸುತ್ತಿರುವಿರಿ.

ನಾನು ನಿಮ್ಮ ಈ ಉಪಕಾರಗಳನ್ನು ಮರೆಯಲು ಸಾಧ್ಯವೇ ಇಲ್ಲ’ ಎಂದು ನುಡಿದು ಸಾರ್ಥಕನು ಸ್ನಾನ ಮಾಡಲು ಹೊರಟು ಹೋದನು.

ಸ್ನಾನ ಮಾಡಿ ಸಾರ್ಥಕನು ತನ್ನ ಗುರುಗಳ ದರ್ಶನಕ್ಕೆ ಬಂದನು. ಅವನು ಗುರುಗಳನ್ನು ವಂದಿಸಿ ಅವರಿಂದ ಆತ್ಮಸಾಕ್ಷಾತ್ಕಾರಕ್ಕಾಗಿ ವಿನಂತಿಸಿದನು.

ಗುರುದೇವರು ‘ಈಗ ನೀನು ಆತ್ಮಸಾಕ್ಷಾತ್ಕಾರಕ್ಕಾಗಿ ಪಾತ್ರತೆಯನ್ನು ಹೊಂದಿದ್ದೀಯ !’ ಎಂದು ಸಾರ್ಥಕನನ್ನು ಮೆಚ್ಚಿದರು. ಇದರ ಬಳಿಕ ಗುರುದೇವರು ಅವನಿಗೆ ಆತ್ಮಸಾಕ್ಷಾತ್ಕಾರದ ರಹಸ್ಯವನ್ನು ಹೇಳಿದರು.

ಮಕ್ಕಳೇ ಸ್ವಭಾವದೋಷ ನಿರ್ಮೂಲನೆ ಮಾಡುವುದರ ಮಹತ್ವವು ತಮ್ಮ ಗಮನಕ್ಕೆ ಬಂತಲ್ಲವೇ? ಒಂದು ವೇಳೆ ನಮ್ಮಲ್ಲಿ ಒಂದೇ ಒಂದು ದೋಷವಿದ್ದರೂ ಸಹ ನಾವು ಭಗವಂತನ ಸಮೀಪಕ್ಕೆ ಹೋಗಲು ಸಾಧ್ಯವಿಲ್ಲ.

ಆದ್ದರಿಂದ ನಾವು ನಮ್ಮ ದುರ್ಗುಣಗಳನ್ನು ದೂರ ಮಾಡಿ ಗುಣಗಳನ್ನು ಸಂಪಾದಿಸಿಕೊಳ್ಳಬೇಕು!

ಕೃಪೆ: ಹಿಂದೂ ಜಾಗೃತಿ. (ಸಾಮಾಜಿಕ ಜಾಲತಾಣ)

ರಾಜಕೀಯ

ಕರ್ನಾಟಕದ ರೇಲ್ವೆ ಯೋಜನೆಗಳಿಗೆ ವೇಗ ನೀಡಲು ಕೇಂದ್ರವನ್ನು ಒತ್ತಾಯಿಸಿದ ಹೆಚ್.ಡಿ.ದೇವೇಗೌಡ

ಕರ್ನಾಟಕದ ರೇಲ್ವೆ ಯೋಜನೆಗಳಿಗೆ ವೇಗ ನೀಡಲು ಕೇಂದ್ರವನ್ನು ಒತ್ತಾಯಿಸಿದ ಹೆಚ್.ಡಿ.ದೇವೇಗೌಡ

ನವದೆಹಲಿ: ಕರ್ನಾಟಕದಲ್ಲಿ ಚಾಲ್ತಿಯಲ್ಲಿರುವ ಹಾಗೂ ನೆನೆಗುದಿಗೆ ಬಿದ್ದಿರುವ ರೇಲ್ವೆ ಯೋಜನೆಗಳನ್ನು ಆದ್ಯತೆಯ ಮೇರೆಗೆ ಕ್ಷಿಪ್ರಗತಿಯಲ್ಲಿ ಕಾರ್ಯಗತಗೊಳಿಸಬೇಕು ಎಂದು ಮಾಜಿ ಪ್ರಧಾನಿಗಳಾದ ಹೆಚ್.ಡಿ.ದೇವೇಗೌಡ (HD Deve Gowda) ಅವರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು. ರಾಜ್ಯಸಭೆಯಲ್ಲಿ ರೇಲ್ವೆ

[ccc_my_favorite_select_button post_id="104046"]
ಕೇಂದ್ರಕ್ಕೆ ಮಹತ್ವದ ವಿವಿಧ ಬೇಡಿಕೆಗಳನ್ನಿಟ್ಟ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ

ಕೇಂದ್ರಕ್ಕೆ ಮಹತ್ವದ ವಿವಿಧ ಬೇಡಿಕೆಗಳನ್ನಿಟ್ಟ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ

ನವದೆಹಲಿ: ಕರ್ನಾಟಕದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳ ಮೈಸೂರು ಮತ್ತು ಧಾರವಾಡ ವಿವಿಗಳು ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು, ಕೇಂದ್ರ ಸರ್ಕಾರ ನೆರವಿಗೆ ಧಾವಿಸಬೇಕು ಎಂದು ಮಾಜಿ ಪ್ರಧಾನಿಗಳಾದ ಹೆಚ್.ಡಿ.ದೇವೇಗೌಡ (HD Deve Gowda) ಅವರು ಮನವಿ

[ccc_my_favorite_select_button post_id="103998"]
ಸಿಎಂ ಸಿದ್ದರಾಮಯ್ಯರ ಭೇಟಿಯಾದ ತಮಿಳುನಾಡು ಅರಣ್ಯ ಸಚಿವ.. ಮಹತ್ವದ ಚರ್ಚೆ

ಸಿಎಂ ಸಿದ್ದರಾಮಯ್ಯರ ಭೇಟಿಯಾದ ತಮಿಳುನಾಡು ಅರಣ್ಯ ಸಚಿವ.. ಮಹತ್ವದ ಚರ್ಚೆ

ಬೆಂಗಳೂರು; ತಮಿಳುನಾಡಿನ ಅರಣ್ಯ ಸಚಿವರಾದ ಡಾ.ಕೆ.ಪೊನ್ನುಮುಡಿ ಮತ್ತು ರಾಜ್ಯಸಭಾ ಸದಸ್ಯರಾದ ಮೊಹಮದ್ ಅಬ್ದುಲ್ಲಾ ಇಸ್ಮಾಯಿಲ್ ಅವರು ಕಾವೇರಿ ನಿವಾಸದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (Cmsiddaramaiah) ಅವರನ್ನು ಭೇಟಿಯಾದರು. ಈ ವೇಳೆ ಕೇಂದ್ರ ಸರ್ಕಾರದ ಪ್ರಜಾಪ್ರಭುತ್ವ ವಿರೋಧಿ

[ccc_my_favorite_select_button post_id="104024"]
los angeles fire| ಅಮೆರಿಕ ಕಾಡ್ಗಿಚ್ಚು: ಸಾವಿನ ಸಂಖ್ಯೆ 11ಕ್ಕೆ| Video

los angeles fire| ಅಮೆರಿಕ ಕಾಡ್ಗಿಚ್ಚು: ಸಾವಿನ ಸಂಖ್ಯೆ 11ಕ್ಕೆ| Video

ಹಾಲಿವುಡ್ ಹಿಲ್ ಹಾಗೂ ಸ್ಟುಡಿಯೋ ಸಿಟಿಗೆ ಹೊತ್ತಿಕೊಂಡಿದ್ದ ಬೆಂಕಿಯನ್ನು ವಿಮಾನ, ಹೆಲಿಕಾಪ್ಟರ್ ಗಳ ಮೂಲಕ ನೀರು ಸಿಂಪಡಿಸಿ ನಂದಿಸಲಾಗಿತ್ತು los Angeles fire

[ccc_my_favorite_select_button post_id="100721"]

ಕ್ರೀಡೆ

Champions Trophy; ಭಾರತದ ಮುಡಿಯೇರಿದ ಚಾಂಪಿಯನ್ಸ್ ಟ್ರೋಫಿ

Champions Trophy; ಭಾರತದ ಮುಡಿಯೇರಿದ ಚಾಂಪಿಯನ್ಸ್ ಟ್ರೋಫಿ

ದುಬೈ: ಐಸಿಸಿ ಚಾಂಪಿಯನ್ಸ್ ಟ್ರೋಫಿ ಸರಣಿಯ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಮಣಿಸಿದ ಭಾರತ ಚಾಂಪಿಯನ್ಸ್ ಟ್ರೋಫಿಯನ್ನು (Champions Trophy) ತನ್ನದಾಗಿಸಿಕೊಂಡಿದೆ. ಟಾಸ್‌ ಗೆದ್ದು ಬ್ಯಾಟಿಂಗ್ ಮಾಡಿದ ಕೀವಿಸ್ ಪಡೆ 50 ಓವರ್‌ಗಳಲ್ಲಿ 7

[ccc_my_favorite_select_button post_id="103912"]
ಅತ್ತೆ-ಸೊಸೆ ಜಗಳ: ತಾಯಿ, ಮಗ ಆತ್ಮಹತ್ಯೆ

ಅತ್ತೆ-ಸೊಸೆ ಜಗಳ: ತಾಯಿ, ಮಗ ಆತ್ಮಹತ್ಯೆ

ಹಾಸನ: ಕೌಟುಂಬಿಕ ಕಲಹ ಹಿನ್ನೆಲೆ ಕೆರೆಗೆ ಹಾರಿ ತಾಯಿ-ಮಗ ಆತ್ಮಹತ್ಯೆ (Suicide) ಮಾಡಿಕೊಂಡ ಘಟನೆ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಕಬ್ಬಳಿ ಗ್ರಾಮದಲ್ಲಿ ನಡೆದಿದೆ. ಜಯಂತಿ (60 ವರ್ಷ), ಭರತ್ (35 ವರ್ಷ) ಆತ್ಮಹತ್ಯೆಗೆ ಶರಣಾದ ತಾಯಿ-ಮಗ ಎಂದು ಗುರುತಿಸಲಾಗಿದೆ. ಭರತ್ ಕಳೆದ

[ccc_my_favorite_select_button post_id="104008"]
Doddaballapura: ದ್ವಿಚಕ್ರ ವಾಹನಗಳ ಮುಖಾಮುಖಿ ಡಿಕ್ಕಿ.. ಓರ್ವನ ಸ್ಥಿತಿ ಗಂಭೀರ

Doddaballapura: ದ್ವಿಚಕ್ರ ವಾಹನಗಳ ಮುಖಾಮುಖಿ ಡಿಕ್ಕಿ.. ಓರ್ವನ ಸ್ಥಿತಿ ಗಂಭೀರ

ದೊಡ್ಡಬಳ್ಳಾಪುರ: ತಾಲೂಕಿನ ಅಪಘಾತ (Accident) ಪ್ರಕರಣಗಳು ಸಂಖ್ಯೆ ಒಂದೇ ಸಮನೇ ಹೆಚ್ಚಾಗುತ್ತಿರುವುದು ಸಾರ್ವಜನಿಕರಲ್ಲಿ ಆತಂಕವನ್ನು ಹೆಚ್ಚಿಸಿದೆ. ಇಂದು ಬೆಳಗ್ಗೆಯಿಂದ ದೊಡ್ಡಬಳ್ಳಾಪುರ ತಾಲೂಕಿನ ಮೂರು ಅಪಘಾತಗಳು ವರದಿಯಾಗಿದ್ದು, ಓರ್ವ ಸಾವನಪ್ಪಿದ್ದರೆ, ಹಲವರು ಗಾಯಗೊಂಡಿದ್ದಾರೆ. ಇದೀಗ ಕೆಲವು

[ccc_my_favorite_select_button post_id="104042"]

ಆರೋಗ್ಯ

ಸಿನಿಮಾ

ಸಿನಿಮಾದವರ ನೆಟ್ಟು, ಬೋಲ್ಟು ಟೈಟ್ ಮಾಡುವ ಕಾರ್ಯ ಆರಂಭ..?

ಸಿನಿಮಾದವರ ನೆಟ್ಟು, ಬೋಲ್ಟು ಟೈಟ್ ಮಾಡುವ ಕಾರ್ಯ ಆರಂಭ..?

ತುಮಕೂರು: ಬೆಂಗಳೂರು ನಡೆದ ಅಂತರರಾಷ್ಟ್ರೀಯ ಫಿಲಂ ಫೆಸ್ಟಿವಲ್ ಕಾರ್ಯಕ್ರಮಕ್ಕೆ ಗೈರಾದ ಖ್ಯಾತ ನಟ, ನಟಿಯರ ಕುರಿತು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ (DK Shivakumar) ಚಿತ್ರರಂಗದವರ ನಟ್ಟು ಬೋಲ್ಟು ಟೈಟು ಮಾಡುತ್ತೇನೆ ಎಂದು

[ccc_my_favorite_select_button post_id="103709"]
error: Content is protected !!