ದೊಡ್ಡಬಳ್ಳಾಪುರ (Doddaballapura):
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ತಾಲೂಕಿನ ಮಚ್ಚೇನಹಳ್ಳಿ ಗ್ರಾಮದ ವೃದ್ಧೆ ಕಾಮಕ್ಕ ಎನ್ನುವವರಿಗೆ ವಾತ್ಸಲ್ಯ ಮನೆ ನಿರ್ಮಿಸಲಾಗಿದ್ದು, ಇಂದು ಜಿಲ್ಲಾ ನಿರ್ದೇಶಕ ಉಮಾರಬ್ಬ ಹಸ್ತಾಂತರ ಮಾಡಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಡಿಯಲ್ಲಿ ಪಲಾನುಭವಿ ಆಯ್ಕೆ ಮಾಡಿ ಅವರಿಗೆ ಪ್ರತಿ ತಿಂಗಳು 1000 ಮಾಸಾಸನ ಬರುವ ರೀತಿ ಮಾಡಿಕೊಡಲಾಗಿದೆ.
ಇದೇ ವೇಳೆ ಕಾಮಕ್ಕ ಅವರ ವಾಸಕ್ಕೆ ಮನೆ ಇಲ್ಲದ ಕಾರಣ ಧರ್ಮಸ್ಥಳ ವತಿಯಿಂದ ಸುಮಾರು 1,15,000/- ರೂ ಮೌಲ್ಯದ ಮನೆಯನ್ನು ಕಟ್ಟಿಸಿ ಕೊಡಲಾಗಿದೆ.
ಕಾರ್ಯಕ್ರಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕಿನ ಯೋಜನಾಧಿಕಾರಿ ಸುಧಾ ಬಾಸ್ಕರ್, ಸಾಸಲು ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಶ್ರೀನಿವಾಸ್, ಬಿಲ್ ಕಲೆಕ್ಟರ್ ರಂಗಸ್ವಾಮಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಲಯದ ಮೇಲ್ವಿಚಾರಕ ಸುಪ್ರೀತ್ ಕುಮಾರ್ಣ ಜ್ಞಾನವಿಕಾಸ ಸಮನ್ವಧಿಕಾರಿ ಛಾಯಕುಮಾರಿ, ಸೇವಾ ಪ್ರತಿನಿಧಿ ಪುಟ್ಟತಾಯಮ್ಮ, ಆನಂದ್ ಮತ್ತಿತರರಿದ್ದರು.