ಮೈಸೂರು; ಜಿಲ್ಲೆಯ ಕೆ.ಆರ್ ನಗರದ ರೇಡಿಯೋ ಮೈದಾನದಲ್ಲಿ ಕೆ ಆರ್ ನಗರ ಕ್ಷೇತ್ರದ ಜನತೆಯಿಂದ ಆಯೋಜಿಸಲಾಗಿದ್ದ ಕೇಂದ್ರದ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರ ಅಭಿಮಾನದ ಅಭಿನಂದನೆ ಕಾರ್ಯಕ್ರಮದಲ್ಲಿ ಜೆಡಿಎಸ್ (JDS) ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಪಾಲ್ಗೊಂಡರು.
ನಂತರ ಸಭೆಯಲ್ಲಿ ಮಾತನಾಡಿದ ಅವರು, ಇತ್ತೀಚಿಗೆ ಅಷ್ಟೇ ವೈಜಾಕ್ ವಿಶಾಖಪಟ್ಟಣ ಸ್ಟೀಲ್ ಉಕ್ಕಿನ ಕೈಗಾರಿಕೆ ಬಹಳ ವರ್ಷಗಳಿಂದ ಮುಚ್ಚಿಹೋಗಿತ್ತು. ಅದಿಕ್ಕೆ ಜೀವ ಕೊಡಬೇಕು ಎಂದು ಕೇಂದ್ರದ ಆರ್ಥಿಕ ಸಚಿವರನ್ನ ಭೇಟಿ ಮಾಡಿ ವೈಜಾಕ್ ಕಾರ್ಖಾನೆಗೆ ಬೇಕಾಗಿರುವ ಹಣವನ್ನ ಬಿಡುಗಡೆಮಾಡಿ ಎಂದು ಕುಮಾರಣ್ಣ ಅವರು ಮನವಿ ಮಾಡಿದ್ರು, ಅದರ ಫಲ ವಿಶಾಖಪಟ್ಟಣದಲ್ಲಿ ವೈಜಾಖ್ ಕಾರ್ಖಾನೆ ಆರಂಭವಾಗಿದೆ ಎಂದರು.
ರಾಜ್ಯ ಸರ್ಕಾರಕ್ಕೆ ಕೈ ಜೋಡಿಸಿ ನಿಖಿಲ್ ಮನವಿ
ನಮ್ಮ ರಾಜ್ಯದಲ್ಲಿ ನಿರುದ್ಯೋಗದ ಸಮಸ್ಯೆ ಯುವ ಸಮುದಾಯದಲ್ಲಿ ಹೆಚ್ಚು ಇದೆ. ಆದ್ರೆ ವಿಪರ್ಯಾಸ ಇವತ್ತು ಯುವ ಸಮುದಾಯದ ಮಕ್ಕಳಿಗೆ ಉದ್ಯೋಗ ಸೃಷ್ಟಿ ಆಗಿಲ್ಲ, ಇದನ್ನ ಬಗೆ ಹರಿಸಬೇಕೆಂದು ಕುಮಾರಣ್ಣನ ಮನಸ್ಸಿನಲ್ಲಿದೆ ಈ ರಾಜ್ಯ ಸರ್ಕಾರಕ್ಕೆ ಕೈ ಜೋಡಿಸಿ ಮನವಿ ಮಾಡುತ್ತೀನಿ.
ರಾಜ್ಯದಲ್ಲಿ ಬಹಳಷ್ಟು ಜನ ಉದ್ಯೋಗ ಇಲ್ಲ, ಇವತ್ತು ಕುಮಾರಣ್ಣನ ಕೇಂದ್ರ ಮಂತ್ರಿಯಾಗಿದ್ದಾರೆ ಇದಕ್ಕೆ ಪ್ರತಿಫಲ ಸಿಗಬೇಕು ಅಂದ್ರೆ ರಾಜ್ಯ ಸರ್ಕಾರ ಕುಮಾರಣ್ಣನ ಜತೆ ಕೈ ಜೋಡಿಸಬೇಕು ಎಂದು ನಿಖಿಲ್ ಅವರು ಮನವಿ ಮಾಡಿದರು.
ಉದಾಹರಣೆಗೆ ಹಳೆ ಮೈಸೂರು ಭಾಗದಲ್ಲಿ ತಂಬಾಕು ಬೆಳೆಗಾರರು ಸೂಕ್ತ ಬೆಲೆ ಇಲ್ಲದೆ ರೈತರು ಸಂಕಷ್ಟಕ್ಕೆ ಒಳಗಾಗಿದ್ದರು ಆಗ ಕುಮಾರಣ್ಣ ದೆಹಲಿಯಲ್ಲಿ ಕೃಷಿ ಮಂತ್ರಿಗಳ ಜೊತೆ ಸಭೆ ನಡೆಸಿ ಪರಿಹಾರ ಅದಕ್ಕೆ ಬೇಕಾದ ಕ್ರಮಗಳನ್ನ ಕೈಗೊಳ್ಳುತ್ತೇವೆ ಎಂದು ಆತ್ಮವಿಶ್ವಾಸ ತುಂಬಿದರು.
ನಾನು ಪಕ್ಷದ ಶಿಸ್ತಿನ ಕಾರ್ಯಕರ್ತ
ಇನ್ನು ಜೆಡಿಎಸ್ ರಾಜ್ಯಾಧ್ಯಕ್ಷರ ಬದಲಾವಣೆ ಸುದ್ದಿ ಅಪ್ರಸುತ, ಪಕ್ಷದ ಚೌಕಟ್ಟಿನಲ್ಲಿ ಇದು ಯಾವುದು ಚರ್ಚೆ ಆಗಿಲ್ಲ ನಾನು ಪಕ್ಷದ ಶಿಸ್ತಿನ ಕಾರ್ಯಕರ್ತ ಎಂದು ತಿಳಿಸಿದರು.
ಇದೇ ವೇಳೆ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು, ಮಾಜಿ ಸಚಿವ ಸಾರಾ ಮಹೇಶ್, ಸಿ. ಎಸ್ ಪುಟ್ಟರಾಜು, ವೆಂಕಟರಾವ್ ನಾಡಗೌಡ, ವಿಧಾನ ಪರಿಷತ್ ಸದಸ್ಯರಾದ ಹೆಚ್.ವಿಶ್ವನಾಥ್, ಶಾಸಕ ಜಿ.ಡಿ ಹರೀಶ್ ಗೌಡ, ಮಾಜಿ ಶಾಸಕ ಅಶ್ವಿನ್ ಕುಮಾರ್, ವಿಧಾನ ಪರಿಷತ್ ಸದಸ್ಯ ಮಂಜೇಗೌಡ, ವಿವೇಕಾನಂದ, ಮಾಜಿ ವಿಧಾನ ಪರಿಷತ್ ಸದಸ್ಯ ಶ್ರೀಕಂಠೆಗೌಡ ಸೇರಿದಂತೆ ಪಕ್ಷದ ಪ್ರಮುಖ ಮುಖಂಡರು ಭಾಗಿಯಾಗಿದ್ದರು.