ಶ್ರೀ ಕ್ರೋಧಿನಾಮ ಸಂವತ್ಸರ ಪುಷ್ಯ ಶುಕ್ಲ ಷಷ್ಠಿ ಜ.05,2025 ಭಾನುವಾರ ವಿಶೇಷವಾಗಿ ನವ ನಾಗ ಸ್ತೋತ್ರ ಪಾರಾಯಣವನ್ನು ಮಾಡಿ ನಾಗದೇವನಿಗೆ ಹಾಲಿನಿಂದ ಅಭಿಷೇಕ ಮಾಡಿ ಬಿಳಿಯ ಹೂಗಳಿಂದ ಪೂಜೆಯನ್ನು ಮಾಡಿದರೆ ಈ ದಿನ ಬಹಳ ಶುಭವಾಗುತ್ತದೆ. Astrology
ಮೇಷ ರಾಶಿ: ಈ ದಿನ ದೂರ ಪ್ರಯಾಣ ಬೇಡ, ವಿಶೇಷವಾಗಿ ಸಂತೋಷವನ್ನು ಹೊಂದುವಿರಿ. ಆರೋಗ್ಯ ವಂತರಾಗಿ ದೀರ್ಘಾಯುಷ್ಯವು ಅಭಿವೃದ್ಧಿಯಾಗುತ್ತದೆ, ವಿದ್ಯಾರ್ಥಿಗಳಿಗೆ ಶುಭದಿನ. (ಪರಿಹಾರಕ್ಕಾಗಿ ನವಗ್ರಹ ಸ್ತೋತ್ರವನ್ನು ಕೇಳಿ ನಾಗನ ದೇವಸ್ಥಾನಕ್ಕೆ ಹೋಗಿ ದರ್ಶನ ಮಾಡಿಕೊಂಡು ಬನ್ನಿರಿ)
ವೃಷಭ ರಾಶಿ: ಎಲ್ಲ ವಿಚಾರಗಳಲ್ಲೂ ಭಯ, ಆತಂಕ, ನೇರ ಮಾತುಕತೆ, ದೃಢವಿಲ್ಲದ ನಿರ್ಧಾರ, ಆರೋಗ್ಯದ ಬಗ್ಗೆ ಉತ್ತಮ ಕಾಳಜಿ, ಒಳ್ಳೆಯ ಮಾತುಗಳು ಅನುಕೂಲ ಶುಭವಾಗುತ್ತದೆ. (ಪರಿಹಾರಕ್ಕಾಗಿ ಮಹಾಲಕ್ಷ್ಮಿ ಅಮ್ಮನವರನ್ನು ಜಾಜಿ ಹೂಗಳಿಂದ ಪೂಜೆ ಮಾಡಿ)
ಮಿಥುನ ರಾಶಿ: ವಿದ್ಯಾರ್ಥಿಗಳಿಗೆ ಹಿನ್ನಡೆ, ದೃಢವಿಲ್ಲದ ನಿರ್ಧಾರ, ಆರೋಗ್ಯ ಸಮಸ್ಯೆ, ಬಲವಿಲ್ಲದ ಕಾರ್ಯಗಳಲ್ಲಿ ಮನಸ್ಸನ್ನು ನಿಲ್ಲಿಸುವುದು ಇದರಿಂದ ಸಂಬಂಧಗಳು ಹಾಳಾಗುತ್ತವೆ. (ಪರಿಹಾರಕ್ಕಾಗಿ ಲಕ್ಷ್ಮೀನಾರಾಯಣರ ದೇವಸ್ಥಾನಕ್ಕೆ ಹೋಗಿ ಪಾರಿಜಾತ ಹೂಗಳಿಂದ ಪೂಜೆ ಮಾಡಿಸಿ)
ಕಟಕ ರಾಶಿ: ಅತ್ಯಂತ ದೀರ್ಘವಾದ ಆಲೋಚನೆ ಬೇಡ, ಆಲೋಚನೆಯಿಂದ ಯಾವುದು ಅನುಕೂಲವಾಗುತ್ತದೆ ಅದು ಸಿಗುವುದಿಲ್ಲ. ಅತಿಯಾಗಿ ಬಂದು ಮಿತ್ರರನ್ನು ನಂಬಬೇಡಿ, ಎಚ್ಚರಿಕೆ ಬಹಳ ಅಗತ್ಯ. ವಿದ್ಯಾಭ್ಯಾಸ ಸ್ವಲ್ಪ ಕೊರತೆ ಆದರೂ ಧೈರ್ಯ ಹೆಚ್ಚು. (ಪರಿಹಾರಕ್ಕಾಗಿ ಗಣಪತಿಯ ಪೂಜೆ ಮಾಡಿ)
ಸಿಂಹ ರಾಶಿ: ಆರೋಗ್ಯದಲ್ಲಿ ಸ್ವಲ್ಪಮಟ್ಟಿನ ಪ್ರಗತಿ. ಆದರೆ ಕೆಟ್ಟ ಕೆಟ್ಟ ಆಲೋಚನೆಗಳು ಮನಸ್ಸನ್ನು ಹಿಂಸಿಸುತ್ತವೆ, ದುಃಖ ಪಡಬೇಡಿ ಧೈರ್ಯವಾಗಿ ಎದುರಿಸಿ ಇದರಿಂದ ಕಾರ್ಯಸಾಧನೆಯಾಗುತ್ತದೆ. (ಪರಿಹಾರಕ್ಕಾಗಿ ಭದ್ರಕಾಳಿ ಅಮ್ಮನವರ ದೇವಸ್ಥಾನದಲ್ಲಿ ಕೆಂಪು ಹೂಗಳಿಂದ ಪೂಜೆಯನ್ನು ಮಾಡಿಸಿ)
ಕನ್ಯಾ ರಾಶಿ: ನಂಬಿಕೆ ಇರಬೇಕು ಆದರೆ ವಿಪರೀತ ನಂಬುವುದು ಹಾನಿಕರ. ಮನಸ್ಸನ್ನು ನಿಯಂತ್ರಣದಲ್ಲಿಡಿ, ಅತಿಯಾಗಿ ಧನವನ್ನು ಕಳೆದುಕೊಂಡರೆ ಕಷ್ಟವಾದಿತು ಜೋಕೆ, ಕೆಟ್ಟ ಸಂಘಗಳಿಂದ ದೂರವಿರಿ, ಕೆಟ್ಟ ಅಭ್ಯಾಸಗಳು ಮನುಷ್ಯನನ್ನು ಹಾಳು ಮಾಡುತ್ತವೆ. (ಪರಿಹಾರಕ್ಕಾಗಿ ನರಸಿಂಹನ ದೇವಾಲಯಕ್ಕೆ ಹೋಗಿ ಪೂಜೆ ಮಾಡಿಸಿ)
ತುಲಾ ರಾಶಿ: ಅನಾವಶ್ಯಕ ಕೋಪ, ಅತಿಯಾದ ತಿರುಗಾಟ. ಸರ್ಕಾರಿ ಕಾರ್ಯಗಳು ಯಾವುದು ನಡೆಯುತ್ತಿಲ್ಲ ಎಂಬ ಭಯ, ವಿಪರೀತವಾಗಿ ಆಲೋಚನೆ, ಆಗಬೇಕಾದ ಕಾರ್ಯವು ನಡೆದೆ ತೀರುತ್ತದೆ ಚಿಂತೆ ಬೇಡ. (ಪರಿಹಾರಕ್ಕಾಗಿ ಸೂರ್ಯನ ಪೂಜೆ ಜಪ ಅನುಷ್ಠಾನ ಮಾಡಿ)
ವೃಶ್ಚಿಕ ರಾಶಿ: ದೀರ್ಘವಾದ ಆಲೋಚನೆ, ದೃಢವಾದ ನಿರ್ಧಾರ, ಅತಿಯಾಗಿ ಸಮಾಜ ಸೇವೆ, ಎಲ್ಲವೂ ಒಳ್ಳೆಯದಾಗುತ್ತದೆ. ಧನಾರ್ಜನೆ ಸ್ವಲ್ಪ ಕಡಿಮೆ, ಶ್ರೇಷ್ಠವಾದ ವ್ಯಕ್ತಿತ್ವ ಹಾಗೆ ಉಳಿಯುತ್ತದೆ, ಚಿಂತೆ ಬೇಡ. (ಪರಿಹಾರಕ್ಕಾಗಿ ಲಿಂಗಾಷ್ಟಕವನ್ನು ಪಾರಾಯಣ ಮಾಡಿ)
ಧನಸ್ಸು ರಾಶಿ: ಎಲ್ಲ ಕಾರ್ಯದಲ್ಲೂ ಸಮಗ್ರವಾಗಿ ಬದಲಾವಣೆ. ಚಿಂತೆ ಬೇಡ, ನಿರ್ಧಾರಕ್ಕೆ ಏನು ಕೊರತೆ ಇಲ್ಲ. ಸಮಯವಿದೆ ಯೋಚಿಸಬೇಡಿ ಒಳ್ಳೆಯದಾಗುತ್ತದೆ, ಶಾಂತ ಸ್ವಭಾವ ಎಲ್ಲ ಕಾರ್ಯವನ್ನು ಪೂರ್ಣವಾಗಿಸುತ್ತದೆ. (ಪರಿಹಾರಕ್ಕಾಗಿ ಪಂಚಮುಖ ಆಂಜನೇಯ ಸ್ತೋತ್ರವನ್ನು ಪಾರಾಯಣ ಮಾಡಿ)
ಮಕರ ರಾಶಿ: ಒಳ್ಳೆಯ ಸುದ್ದಿ ಶತ್ರುಗಳು ಸಹ ಮಿತ್ರರಾಗುವ ದಿನ ಬಹಳ ಆಲೋಚನೆಯಿಂದ ಸಂದಾನ ಕಾರ್ಯ ಮುಂದುವರೆಯಲಿ ವಿದ್ಯಾರ್ಜನೆ ಲಾಭ ಏಕಾಗ್ರತೆಯ ಕೊರತೆ ಕಿಂಚಿತ್ ಆರೋಗ್ಯ ಸಮಸ್ಯೆ ಒಳ್ಳೆಯದಾಗುತ್ತದೆ. (ಪರಿಹಾರಕ್ಕಾಗಿ ಧನವಂತರಿ ಪೂಜೆ ಹೋಮ ಮಾಡಿಸಿಕೊಳ್ಳಿ)
ಕುಂಭ ರಾಶಿ: ಯಾರಿಗೂ ಉಪದೇಶ ಕೊಡಲು ಹೋಗಬೇಡಿ, ಕಾಲ ನಿಮಗಿಂತ ಎತ್ತರದಲ್ಲಿದೆ. ಮೊದಲು ನಿಮ್ಮ ಕೈ ಬೆರಳಿನ ಸಮಕ್ಕೆ ಎಲ್ಲರೂ ಬರುತ್ತಾರೆ, ನಂತರ ನೀವು ಮಾತನಾಡಬಹುದು. ಈಗ ಶಾಂತ ರೀತಿಯಿಂದ ವರ್ತಿಸಿ. ಸಂಬಂಧಗಳು ದೃಢವಾಗಲಿ ಒಳ್ಳೆಯದಾಗುತ್ತದೆ. (ಪರಿಹಾರಕ್ಕಾಗಿ ಶಿವನಿಗೆ ರುದ್ರಾಭಿಷೇಕ ಮಾಡಿಸಿ)
ಮೀನ ರಾಶಿ: ಅನಾವಶ್ಯಕ ಚಿಂತೆ, ಅಧಿಕ ತಿರುಗಾಟ, ಶತ್ರು ಕಾಟ, ಮನಸ್ಸಿಗೆ ಸ್ವಲ್ಪ ಕಿರಿಕಿರಿ, ಮಕ್ಕಳ ಆರೋಗ್ಯ ದೃಢ. (ಪರಿಹಾರಕ್ಕಾಗಿ ರಾಮರಕ್ಷಾ ಸ್ತೋತ್ರವನ್ನು ಓದಿಕೊಳ್ಳಿ)
ರಾಹುಕಾಲ: 4-30PM ರಿಂದ 6-00PM
ಗುಳಿಕಕಾಲ: 3-00PM ರಿಂದ 4-30 PM
ಯಮಗಂಡಕಾಲ: 12-00PMರಿಂದ 1-30PM
ಜ್ಯೋತಿಶ್ಯಾಸ್ತ್ರವಿಶಾರದ, ಜ್ಯೋತಿರ್ವಿದ್ಯಾರತ್ನ ಎನ್ಎಸ್ ಶರ್ಮ, ಪ್ರಧಾನ ಪುರೋಹಿತರು ಮತ್ತು ಆಗಮಿಕರು, ಶ್ರೀ ವಾಗ್ವಾದಿನೀ ಜ್ಯೋತಿಷ ಕೇಂದ್ರ, ಇಲ್ತೊರೆ ಗ್ರಾಮ. ದೇವನಹಳ್ಳಿ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ: 562110. ಮೊ-9945170572