Daily story: ಹರಿತಲೇಖನಿ ದಿನಕ್ಕೊಂದು ಕಥೆ: ಅವಿದ್ಯಾವಂತ ಕಾಳಿದಾಸನ ಜೀವನದಲ್ಲಿ ಕಾಶಿ ರಾಜಕನ್ಯೆ

Daily story: ಕಾಳಿದಾಸನು ಶಿವಭಕ್ತನಾಗಿದ್ದನು. ಪ್ರಾರಂಭದಲ್ಲಿ ಕಾಳೀದಾಸನು ಅನಕ್ಷರಸ್ಥ, ಅವಿದ್ಯಾವಂತನಾಗಿದ್ದನು. ಆದ್ದರಿಂದ ಎಲ್ಲರೂ ಅವನ ಚೇಷ್ಟೆ ಮಾಡುತ್ತಿದ್ದರು; ಆದರೆ ಅವನ ಜೀವನದಲ್ಲಿ ಅದ್ಭುತವಾದ ಬದಲಾವಣೆಯು ಕಾಶಿಯ ರಾಜಕನ್ನೆಯಿಂದ ಆಯಿತು. ಅವಳು ವಿಲಕ್ಷಣ ಬುದ್ಧಿವಂತಳು ಹಾಗೂ ಪ್ರತಿಭಾವಂತ ಪಾಂಡಿತ್ಯವುಳ್ಳವಳಾಗಿದ್ದಳು.

ವಾಂಗ್ಮಯ, ಕಲೆ ಮುಂತಾದ ವಿದ್ಯೆಗಳಲ್ಲಿ ಅವಳಿಗೆ ಸರಿಸಮಾನರಿರಲಿಲ್ಲ. ಅವಳೊಂದಿಗೆ ವಿವಾಹ ಮಾಡಲು ಬಂದ ಅನೇಕ ಯುವಕರನ್ನು ಅವಳು ಬುದ್ಧಿಯ ಸಾಮರ್ಥ್ಯದಿಂದ ಪರಾಭವಗೊಳಿಸಿದಳು. ಅವಮಾನ ಹೊಂದಿದ ಎಲ್ಲರೂ ಆಕೆಯ ಸೇಡು ತೀರಿಸಿಕೊಳ್ಳಲು ನಿರ್ಧರಿಸಿದರು. ಅವರು ಒಬ್ಬ ಮಹಾಮೂರ್ಖ ಯುವಕನಿಗೆ ಹತ್ತಿರ ಮಾಡಿದರು.

ಅವನಿಗೆ ಸಾಕಷ್ಟು ಉತ್ತಮ ಅನ್ನ ಹಾಗೂ ಸುಂದರ ವಸ್ತ್ರಗಳನ್ನು ಕೊಡುವ ಆಸೆಯನ್ನು ತೋರಿಸಿದರು. ರಾಜಕುಮಾರಿಯ ಎದುರು ಅವನಿಗೆ ಕೇವಲ ನಿಲ್ಲಬೇಕಾಗಿತ್ತು. ರಾಜಕುಮಾರಿಯು ಕೇಳಿದ ಪ್ರಶ್ನೆಗಳಿಗೆ, ಉತ್ತರಿಸದೇ ಅವನು ಮೌನವಾಗಿರುವುದು, ಸುಮ್ಮನಿರುವುದು ಅಷ್ಟೇ ಮಾಡಿದರೆ ಸಾಕು ಎಂದು ಹೇಳಿಕೊಟ್ಟರು.

ವರು ಆರಿಸಿದ ಯುವಕ ಕಾಳಿದಾಸ. ಒಂದು ದಿನ ಅವನಿಗೆ ಸುಂದರ ವೇಶಭೂಷೆ ಮಾಡಿ ಶೃಂಗರಿಸಲಾಯಿತು. ಅಲಂಕಾರ ಮಾಡಿಸಿ ಅವನೊಬ್ಬ ಅತ್ಯಂತ ಬುದ್ಧಿವಂತ, ಪ್ರತಿಭಾಶಾಲಿ ದಾರ್ಶನಿಕ ಎಂಬುವಂತೆ ಅವನನ್ನು ರಾಜಕುಮಾರಿಯ ಎದುರು ನಿಲ್ಲಿಸಿದರು.

ರಾಜಕುಮಾರಿಯು ಅನೇಕ ತತ್ವಶಾಸ್ತ್ರದ ಪ್ರಶ್ನೆಗಳನ್ನು ಕೇಳಿದಳು, ಆಗ ಕಾಳಿದಾಸನು ತಲೆ ಅಲ್ಲಾಡಿಸುತ್ತಿದ್ದನು ಹಾಗೂ ವಿಲಕ್ಷಣ ದೃಷ್ಟಿಯಿಂದ ರಾಜಕುಮಾರಿಯ ಕಡೆಗೆ ನೋಡುತ್ತಿದ್ದನು.

ಜನರು ‘ಅತ್ಯಂತ ಪ್ರತಿಭಾವಂತ ಹಾಗೂ ಬುದ್ಧಿವಂತಿಕೆಯ ಶಿಖರ’ ವಾಗಿರುವ ಕಾಳಿದಾಸನ ಉತ್ತರಗಳು ಅವನ ಮೌನದೊಳಗಿನಿಂದ ಅಭಿವ್ಯಕ್ತವಾಗುತ್ತಿರುವುದೆಂದು ಹೇಳಿದರು. ಅವನ ದೃಷ್ಟಿಕ್ಷೇಪದ ನಿರ್ವಚನವನ್ನು ಹೀಗೆ ವ್ಯಕ್ತಪಡಿಸಿದ್ದರಿಂದ ಆ ರಾಜಕುಮಾರಿಗೆ ಸಮಾಧಾನವಾಯಿತು. ರಾಜಕುಮಾರಿಯ ವಿವಾಹವು ಅವನ ಜೊತೆ ಜರುಗಿತು.

ನಂತರ ಕೆಲವೇ ದಿನಗಳಲ್ಲಿ ಅವನೊಬ್ಬ ಅವಿದ್ಯಾವಂತ ಎಂದು ಅವಳ ಗಮನಕ್ಕೆ ಬಂತು. ಅತ್ಯಂತ ಕೋಪಗೊಂಡು, ಕಾಳಿದಾಸನನ್ನು ಭಯಂಕರವಾಗಿ ನಿಂದಿಸಿದಳು ಹಾಗೂ ಅವನನ್ನು ಅರಮನೆಯಿಂದ ಹೊರಗೆ ತಳ್ಳಿ, ‘ಎಲ್ಲಿಯವರೆಗೆ ನೀನು ಒಬ್ಬ ಪಂಡಿತನಾಗುವುದಿಲ್ಲವೋ ಅಲ್ಲಿಯವರೆಗೆ ನೀನು ಇಲ್ಲಿ ಬರಕೂಡದು’ ಎಂಬುದಾಗಿ ಅವನಿಗೆ ಹೇಳಿದಳು.

ಆ ಯುವಕನು ಪ್ರಾಮಾಣಿಕ, ನಿಷ್ಕಪಟ ಮನಸ್ಸನ್ನು ಉಳ್ಳವನು. ‘ದುಷ್ಟರು ರಾಜಕುಮಾರಿಯನ್ನು ಮೋಸಗೊಳಿಸಲು ನನ್ನ ಉಪಯೋಗ ಮಾಡಿದರು’ ಎಂಬುದು ಅವನ ಗಮನಕ್ಕೆ ಬಂತು. ಅವನಿಗೆ ತನ್ನ ತಪ್ಪಿನ ಅರಿವಾಗಿ ನೇರವಾಗಿ ಕಾಳಿ ದೇವಿಯ ದೇಗುಲಕ್ಕೆ ಹೋದನು. ರಾತ್ರಿ ದೇಗುಲದಲ್ಲಿಯೇ ಉಳಿದನು.

‘ಏನು, ಏಕೆ’ ಎಂಬುದು ಅವನಿಗೆ ತೋಚುತ್ತಿರಲಿಲ್ಲ. ಪೂಜಾರಿಯು ಅವನಿಗೆ ದೇವಿಯ ಆರಾಧನೆ ಮಾಡಲು ಹೇಳಿದನು. ನಂತರ ಅವನು ಆ ದೇಗುಲದಲ್ಲಿದ್ದು ಮಹಾಕಾಳಿಯ ಉಪಾಸನೆ ಮಾಡಿದನು. ಪೂಜಾರಿಯು ಹೇಳಿದಂತೆ ಕಠಿಣ ವ್ರತ ಮಾಡಿದನು. ಒಂದು ರಾತ್ರಿ ಅವನಿಗೆ ಆಕಸ್ಮಿಕವಾಗಿ ಆ ಮೂರ್ತಿಯಿಂದ ಮಹಾಕಾಳಿಯು ಪ್ರಕಟವಾದದ್ದು ಕಂಡಿತು.

ಆ ದಿವ್ಯ ದೇವಿಯು ಅವನ ಸಮೀಪ ಬಂದಳು. ಅವಳು ಅವನ ನಾಲಿಗೆಯ ಮೇಲೆ ಮೂಲಾಕ್ಷರಗಳನ್ನು ಬರೆದಳು ಹಾಗೂ ‘ನೀನು ಮಹಾಪಂಡಿತ, ಮಹಾಕವಿ ಆಗುವೆ’ ಎಂದು ಆಶಿರ್ವದಿಸಿದಳು. ಅಷ್ಟೇ ಅಲ್ಲದೆ ‘ಕಾಳಿದಾಸ’ನೆಂದು ನಾಮಕರಣ ಮಾಡಿದಳು.

ನಂತರ ಕಾಳೀದಾಸನು ಅರಮನೆಗೆ ಮರಳಿ ಬಂದನು. ರಾಜಕುಮಾರಿಯು ಕೇಳಿದಳು, ‘ಅಸ್ತಿ ಕಶ್ಚಿತ್ ವಾಗ್ವಿಶೇಷಃ |… ನೀನು ಪುನಃ ಏಕೆ ಬಂದೆ ? ಪಾಂಡಿತ್ಯವೇನಾದರೂ ಸಂಪಾದಿಸಿದ್ದಿಯಾ ?’ ಕಾಳೀದಾಸನು ನಾಲ್ಕು ಮಹಾಕಾವ್ಯಗಳಿಂದ ಅವಳ ಪ್ರಶ್ನೆಗಳ ಉತ್ತರ ನೀಡಿದನು.

ಪ್ರತಿಯೊಂದು ಮಹಾಕಾವ್ಯದ ಪ್ರಾರಂಭವು ರಾಜಕುಮಾರಿಯು ಕೇಳಿದ ಪ್ರಶ್ನೆಯ ಒಂದೊಂದು ಶಬ್ದದಿಂದ ಇತ್ತು. ಹಾಗೂ ಅವನು ಆ ನಾಲ್ಕು ಶಬ್ದಗಳಿಂದ ಪ್ರಾರಂಭವಾಗುವ ನಾಲ್ಕು ಮಹಾಕಾವ್ಯಗಳನ್ನು ಪಟಪಟನೆ ಹೇಳಿ ತೋರಿಸಿದನು.

ಕೃಪೆ: ಗುರುದೇವ ಡಾ. ಕಾಟೇಸ್ವಾಮೀಜಿ (ಹಿಂದೂ ಜಾಗೃತಿ)

ರಾಜಕೀಯ

ಕಾಂಗ್ರೆಸ್ ವಿರುದ್ಧ ಗುಡುಗಿದ ಮಾಜಿ ಪ್ರಧಾನಿ ಹೆಚ್‌.ಡಿ.ದೇವೇಗೌಡರು

ಕಾಂಗ್ರೆಸ್ ವಿರುದ್ಧ ಗುಡುಗಿದ ಮಾಜಿ ಪ್ರಧಾನಿ ಹೆಚ್‌.ಡಿ.ದೇವೇಗೌಡರು

ಕರ್ನಾಟಕವನ್ನು ಕಾಂಗ್ರೆಸ್ ಸರಕಾರ ಹಾಳು ಮಾಡುತ್ತಿದೆ. ಅದು ಎಷ್ಟರ ಮಟ್ಟಿಗೆ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದರೆ ಪರಿಶಿಷ್ಟ ಜನರ ಕಲ್ಯಾಣಕ್ಕಾಗಿ ಮೀಸಲಿಟ್ಟಿದ್ದ ಹಣವನ್ನು ಹಣವನ್ನು ಚುನಾವಣೆಗೆ ಬಳಸಿಕೊಂಡಿದೆ. HD Deve Gowda

[ccc_my_favorite_select_button post_id="102362"]
ದೇವನಹಳ್ಳಿ: ದೇವಾಲಯದ ಜೀರ್ಣೋದ್ಧಾರ ಕಾರ್ಯಕ್ರಮದಲ್ಲಿ ನಿಖಿಲ್ ಭಾಗಿ

ದೇವನಹಳ್ಳಿ: ದೇವಾಲಯದ ಜೀರ್ಣೋದ್ಧಾರ ಕಾರ್ಯಕ್ರಮದಲ್ಲಿ ನಿಖಿಲ್ ಭಾಗಿ

ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷ ಬದಲಾವಣೆ ವಿಚಾರಕ್ಕೆ ಪ್ರತಿಕ್ರಿಯೆಸಿದರು. ಭಾರತೀಯ ಜನತಾ ಪಾರ್ಟಿ ರಾಷ್ಟ್ರೀಯ ಪಕ್ಷ. ನಾನು ಮಾಧ್ಯಮಗಳಲ್ಲಿ ಗಮನಿಸಿದ್ದೇನೆ, nikhil kumaraswamy

[ccc_my_favorite_select_button post_id="102348"]
Video: ಸಂಕೋಲೆಗಳಲ್ಲಿ ಕಟ್ಟಿ ಭಾರತೀಯರ ಅವಮಾನಿಸಿದ ಮೋದಿ ಮಿತ್ರ ಟ್ರಂಪ್ ಸರ್ಕಾರ.. ವ್ಯಾಪಕ ಆಕ್ರೋಶ

Video: ಸಂಕೋಲೆಗಳಲ್ಲಿ ಕಟ್ಟಿ ಭಾರತೀಯರ ಅವಮಾನಿಸಿದ ಮೋದಿ ಮಿತ್ರ ಟ್ರಂಪ್ ಸರ್ಕಾರ.. ವ್ಯಾಪಕ

ವೈರಲ್ ವಿಡಿಯೋದಲ್ಲಿ ಅಕ್ರಮ ವಲಸಿಗರ ಕಾಲನ್ನು ಸಂಕೋಲೆಗಳಲ್ಲಿ ಕಟ್ಟಿರುವುದು ಹಾಗೂ ಕೈಗಳನ್ನು ಕೋಳಗಳಿಂದ ಬಂಧಿಸಿರುವುದು ಸ್ಪಷ್ಟವಾಗಿ ಕಂಡುಬಂದಿದೆ. Video

[ccc_my_favorite_select_button post_id="102365"]
los angeles fire| ಅಮೆರಿಕ ಕಾಡ್ಗಿಚ್ಚು: ಸಾವಿನ ಸಂಖ್ಯೆ 11ಕ್ಕೆ| Video

los angeles fire| ಅಮೆರಿಕ ಕಾಡ್ಗಿಚ್ಚು: ಸಾವಿನ ಸಂಖ್ಯೆ 11ಕ್ಕೆ| Video

ಹಾಲಿವುಡ್ ಹಿಲ್ ಹಾಗೂ ಸ್ಟುಡಿಯೋ ಸಿಟಿಗೆ ಹೊತ್ತಿಕೊಂಡಿದ್ದ ಬೆಂಕಿಯನ್ನು ವಿಮಾನ, ಹೆಲಿಕಾಪ್ಟರ್ ಗಳ ಮೂಲಕ ನೀರು ಸಿಂಪಡಿಸಿ ನಂದಿಸಲಾಗಿತ್ತು los Angeles fire

[ccc_my_favorite_select_button post_id="100721"]

ಕ್ರೀಡೆ

ಕ್ರೀಡಾ ಶಾಲೆ/ ವಸತಿ ನಿಲಯ ಪ್ರವೇಶಾತಿಗೆ ಆಯ್ಕೆ ಪ್ರಕ್ರಿಯೆ

ಕ್ರೀಡಾ ಶಾಲೆ/ ವಸತಿ ನಿಲಯ ಪ್ರವೇಶಾತಿಗೆ ಆಯ್ಕೆ ಪ್ರಕ್ರಿಯೆ

ವಿಭಾಗ ಮಟ್ಟಕ್ಕೆ ಆಯ್ಕೆಯಾಗುವ ಕಿರಿಯ ಕ್ರೀಡಾಪಟುಗಳಿಗೆ ವಿಭಾಗ ಮಟ್ಟಕ್ಕೆ ತೆರಳಲು ಇಲಾಖೆಯಿಂದ ಪ್ರಯಾಣಭತ್ಯೆ ನೀಡಲಾಗುವುದು. hostel admission

[ccc_my_favorite_select_button post_id="101814"]

Kho kho world cup ಫೈನಲ್‌ನಲ್ಲಿ ಗೆದ್ದು

[ccc_my_favorite_select_button post_id="101277"]

Khel ratna: ಗುಕೇಶ್ ಸೇರಿ 4 ಕ್ರೀಡಾಪಟುಗಳಿಗೆ

[ccc_my_favorite_select_button post_id="99992"]

Video: ವಿಶ್ವ ಚದುರಂಗ ವೀರನಾದ ಭಾರತದ ಡಿ.ಗುಕೇಶ್..

[ccc_my_favorite_select_button post_id="98503"]
ಮನೆ ಮಾರಿ ಪ್ರೇಮಿಯೊಂದಿಗೆ ಪತ್ನಿ ಪರಾರಿ.. ಗಂಡ ಆತ್ಮಹತ್ಯೆ..!

ಮನೆ ಮಾರಿ ಪ್ರೇಮಿಯೊಂದಿಗೆ ಪತ್ನಿ ಪರಾರಿ.. ಗಂಡ ಆತ್ಮಹತ್ಯೆ..!

ಪ್ರಿಯಕರೊಂದಿಗೆ ಓಡಿ ಹೋಗಿರುವ ವಿವಾಹಿತ ಮಹಿಳೆ ವಿದೇಶದಲ್ಲಿದ್ದ ತನ್ನ ಗಂಡನನ್ನು ಬಿಟ್ಟಿರುವುದಲ್ಲದೆ, ಗಂಡ ತನಗಾಗಿ ಕಟ್ಟಿದ್ದ ಮನೆಯನ್ನು ಮಾರಿದ್ದಾಳೆ. Suicide

[ccc_my_favorite_select_button post_id="102360"]
ಬಸ್ -ಬೈಕ್ ಡಿಕ್ಕಿ: 1 ವರ್ಷದ ಮಗು ಸೇರಿ ಒಂದೇ ಕುಟುಂಬದ ಐವರ ಸಾವು

ಬಸ್ -ಬೈಕ್ ಡಿಕ್ಕಿ: 1 ವರ್ಷದ ಮಗು ಸೇರಿ ಒಂದೇ ಕುಟುಂಬದ ಐವರ

ಹುಲಿಗೆಮ್ಮ ದೇವಿಯ ದೇವರ ಕಾರ್ಯಕ್ರಮಕ್ಕಾಗಿ ಗುರುಗುಂಟಾಗೆ ತೆರಳುತ್ತಿದ್ದಾಗ ತಿಂಥಣಿ ಸಮೀಪ ಮುಂದೆ ಸಾಗುತ್ತಿದ್ದ ಲಾರಿಯನ್ನು ಓವರ್ ಟೇಕ್ ಮಾಡುವಾಗ ಎದುರಿಗೆ ಬಂದ ಬಸ್ಸಿಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಮಕ್ಕಳು ಸೇರಿ ಐವರು ಸ್ಥಳದಲ್ಲೇ

[ccc_my_favorite_select_button post_id="102325"]

ಆರೋಗ್ಯ

ಸಿನಿಮಾ

ಅನಂತ್ ನಾಗ್, ಬಾಲಕೃಷ್ಣ ಸೇರಿ 139 ಮಂದಿಗೆ ಪದ್ಮ ಗೌರವ

ಅನಂತ್ ನಾಗ್, ಬಾಲಕೃಷ್ಣ ಸೇರಿ 139 ಮಂದಿಗೆ ಪದ್ಮ ಗೌರವ

ಕನ್ನಡ ಸಿನಿಮಾ ಇಡೀ ದೇಶದ ಚಿತ್ರರಂದ ಮಂದಿ ಗೌರವಿ ಸುವ ಹೆಸರು ಅನಂತ್ ನಾಗ್ ಅವರದು. ಆದರೆ 140ಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ, ಅಂಕು‌ರ್ ಸೇರಿದಂತೆ 10ಕ್ಕೂ ಹೆಚ್ಚು ಹಿಂದಿ ಚಿತ್ರಗಳಲ್ಲಿ ನಟಿಸಿ, ರಾಷ್ಟ್ರಪ್ರಶಸ್ತಿಗೂ

[ccc_my_favorite_select_button post_id="101669"]
error: Content is protected !!