ದೆಹಲಿ: ಉದ್ಯಮಿ, 40 ವರ್ಷ ವಯಸ್ಸಿನ ಪುನೀತ್ ಖುರಾನಾ ಅವರು ಇಲ್ಲಿನ ಕಲ್ಯಾಣ ವಿಹಾರ್ನ ನಿವಾಸದಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ (Suicide) ಮಾಡಿಕೊಂಡಿದ್ದಾರೆ.
ಉದ್ಯಮಿಯ ಪತ್ನಿ ಮತ್ತು ಆಕೆಯ ಸೋದರರು ನೀಡುತ್ತಿದ್ದ ಕಿರುಕುಳವೇ ಆತ್ಮಹತ್ಯೆಗೆ ಕಾರಣ ಎಂದು ಉದ್ಯಮಿಯ ತಂದೆ ಹಾಗೂ ಸಹೋದರಿ ಆರೋಪಿಸಿದ್ದಾರೆ.
ಖುರಾನಾ ಅವರ ತಂದೆ ತ್ರಿಲೋಕ್ ಅವರು ಉದ್ಯಮಿಯ ಮೊಬೈಲ್ ಫೋನ್ ಮತ್ತು ಇತರೆ ಪರಿಕರಗಳನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.
ಮರಣೋತ್ತರ ಪರೀಕ್ಷೆ ಬಳಿಕ ಶವವನ್ನು ಕುಟುಂಬ ಸದಸ್ಯರಿಗೆ ಒಪ್ಪಿಸಲಾಗುತ್ತದೆ ಎಂದು ಡಿಸಿಪಿ ಬ್ರಿಶಂ ಸಿಂಗ್ ತಿಳಿಸಿದ್ದಾರೆ.
ಮೃತನ ತಂದೆ ಸುದ್ದಿಗಾರರ ಜೊತೆಗೆ ಮಾತನಾಡಿದ್ದು, ಮಗನಿಗೆ ಆತನ ಪತ್ನಿ ಮತ್ತು ಆಕೆಯ ಸೋದರರು ಕಿರುಕುಳ ನೀಡುತ್ತಿದ್ದರು. ಹಣಕಾಸು ಮತ್ತು ಆಸ್ತಿಯ ವಿಚಾರವಾಗಿ ಪ್ರತಿನಿತ್ಯವೂ ಜಗಳವಾಡುತ್ತಿದ್ದರು ಎಂದು ಆರೋಪಿಸಿದರು.
ಪತ್ನಿ ಮತ್ತು ಆಕೆಯ ತಂದೆ-ತಾಯಿ ನೀಡುತ್ತಿದ್ದ ಕಿರುಕುಳದಿಂದಲೇ ನನ್ನ ಸಹೋದರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಖುರಾನಾ ಅವರ ಸಹೋದರಿ ಆರೋಪಿಸಿದರು.
#PuneetKhurana did not commit suicide just because being humiliated on a late night phone call by his wife. This harassment and extortion was going on since long. Suicide is never easy. Suicide is never a choice for anyone. Its the extreme helplessness which turns people… pic.twitter.com/ip69yCS4Bd
— NCMIndia Council For Men Affairs (@NCMIndiaa) January 1, 2025
ಸಹೋದರನ ಆತ್ಮಹತ್ಯೆ ವಿಷಯ ಮಂಗಳವಾರ ಮಧ್ಯಾಹ್ನ 3 ಗಂಟೆಗೆ ತಿಳಿಯಿತು. ಕುಟುಂಬಕ್ಕೆ ನ್ಯಾಯ ಒದಗಿಸಬೇಕು.
ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು. 2016 ಡಿಸೆಂಬರ್ನಲ್ಲಿ ಮದುವೆಯಾಗಿದ್ದು, ದಂಪತಿ 2 ವರ್ಷದಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರು ಎಂದರು.
तलाक़ के नाम पर उगायी वसूली का धंधा….
— Mamta Painuly Kale (@mamta_kale) January 1, 2025
After Atul it’s Puneet..
Is it going to be just another number?
In the name of divorce, extortion racket is being run….
अब कोई ये बोल देना कि ये पुनीत कमज़ोर था तो
ख़ुद को मार दिया….
#PuneetKhurana #ManikaPahwa pic.twitter.com/yGlw1ZyAht
ಪುನೀತ್ ಖುರಾನಾ ಅವರು ವುಡ್ಬಾಕ್ಸ್ ಕೆಫೆ ಸಹ ಮಾಲೀಕರಾಗಿದ್ದಾರೆ. ವ್ಯವಹಾರದ ವಿಚಾರವಾಗಿ ಖುರಾನಾ ದಂಪತಿ ನಡುವೆ ವೈಮನಸ್ಸು ಉಂಟಾಗಿ, ಅದು ವಿಚ್ಛೇದನದವರೆಗೂ ಹೋಗಿತ್ತು ಎನ್ನಲಾಗಿದೆ.