Astrology: More likely to be accepted today

Astrology| ಪಂಚಾಂಗ ಮಾಹಿತಿ ಮತ್ತು ದಿನ ಭವಿಷ್ಯ: ಈ ರಾಶಿಯವರು ಸಣ್ಣಪುಟ್ಟ ವಿಚಾರಗಳಿಗೆ ಕೋಪ ಬೇಡ

ಶ್ರೀ ಕ್ರೋಧಿನಾಮ ಸಂವತ್ಸರ ಮಾರ್ಗಶಿರ ಕೃಷ್ಣ ಅಮಾವಾಸ್ಯೆ ಸೋಮವಾರ ಡಿ. 30. 2024: ವಿಶೇಷ ಪ್ರತ್ಯಂಗಿರಾ ಅಮ್ಮನಿಗಾಗಿ ಕೆಂಪು ಹೂಗಳಿಂದ ಅರ್ಚನೆ ಮಾಡಿ ಪಾಯಸವನ್ನು ನೈವೇದ್ಯ ಮಾಡಿದರೆ ಎಲ್ಲರಿಗೂ ಎಲ್ಲ ಕಾರ್ಯದಲ್ಲೂ ಶುಭವಾಗುತ್ತದೆ. Astrology

ಮೇಷ ರಾಶಿ: ಯತ್ನ ಮತ್ತು ಗ್ರಹ ದಶಗಳಿಂದ ಎಲ್ಲಾ ಕಾರ್ಯಗಳು ಜಯ, ಭಗವಂತನ ಅನುಗ್ರಹ ಮಾಡುವ ಕೆಲಸಗಳಿಗೆ ಧನಸಹಾಯ ನಿರೀಕ್ಷೆ, ಉತ್ತಮವಾದ ಸಂಚಲನ, ಆರೋಗ್ಯ ವೃದ್ಧಿ. (ಪರಿಹಾರಕ್ಕಾಗಿ ಹನುಮಂತನ ದೇವಸ್ಥಾನದಲ್ಲಿ ನಮಸ್ಕಾರವನ್ನು ಮಾಡಿ ಕಾರ್ಯವನ್ನು ಮುಂದುವರಿಸಿ)

ವೃಷಭ ರಾಶಿ: ಸಮಸ್ಯೆಗಳಿಂದ ಹೊರಬರುವ ಕಾತರ, ಜೀವನ ಮೌಲ್ಯಗಳು ಬಗ್ಗೆ ಎಚ್ಚರಿಕೆ ಇರಲಿ, ಸತ್ಯ ಧರ್ಮ ನ್ಯಾಯ ನಿಷ್ಠೆಯಿಂದ ಕೆಲಸ ಮಾಡಿದರೆ ಉನ್ನತ ಫಲ. (ಪರಿಹಾರಕ್ಕಾಗಿ ಲಕ್ಷ್ಮೀನಾರಾಯಣನ ದೇವಸ್ಥಾನದಲ್ಲಿ ಪೂಜೆ)

ಮಿಥುನ ರಾಶಿ: ಯತ್ನ ಕಾರ್ಯಾ ಅನುಕೂಲ, ಸಮಯ ಸಾಧನೆ ಮಾಡಬೇಕಾದ ಕೆಲಸಗಳಲ್ಲಿ ಮುನ್ನುಗ್ಗುವ ಸ್ಥಿತಿ, ಧೈರ್ಯದಿಂದ ಎಲ್ಲಾ ಕಾರ್ಯಗಳಲ್ಲೂ ಜಯಪ್ರಾಪ್ತಿ, ಲಕ್ಷ್ಮಿ ಕೃಪೆ. (ಪರಿಹಾರಕ್ಕಾಗಿ ಲಕ್ಷ್ಮಿ ಅಷ್ಟಕ ಪಾರಾಯಣ)

ಕಟಕ ರಾಶಿ: ಸಣ್ಣಪುಟ್ಟ ವಿಚಾರಗಳಿಗೆ ಕೋಪ ಬೇಡ, ಧೈರ್ಯಂ ಸರ್ವತ್ರ ಸಾಧನಂ ಮುಂದುವರೆಯಿರಿ, ಧೈರ್ಯ ಲಕ್ಷ್ಮಿ ನಿಮ್ಮ ಕೈ ಬಿಡುವುದಿಲ್ಲ ಕಾಪಾಡುತ್ತಾಳೆ. (ಪರಿಹಾರಕ್ಕಾಗಿ ಅಮ್ಮನವರಿಗೆ ನಿಂಬೆಹಣ್ಣಿನ ದೀಪವನ್ನು ಹಚ್ಚಿ)

ಸಿಂಹ ರಾಶಿ: ಒಳ್ಳೆಯ ಮಾತುಗಳಿಂದ ಶುಭಾರಂಭ, ದೇಹದ ಆರೋಗ್ಯ ಉತ್ತಮ, ಮಾತುಕತೆ ಆಲಸ್ಯ ನಿವಾರಣೆ ಸರ್ವತ್ರ ಶುಭ. (ಪರಿಹಾರಕ್ಕಾಗಿ ಲಕ್ಷ್ಮೀನಾರಾಯಣ ದೇವಾಲಯದಲ್ಲಿ ತುಳಸಿಯ ಪೂಜೆ)

ಕನ್ಯಾ ರಾಶಿ: ಸಣ್ಣಪುಟ್ಟ ವಿಚಾರಗಳಿಗೆ ಕೋಪಿಸಿಕೊಂಡು ದುಡುಕಿದರೆ ಫಲ ತುಂಬಾ ಕೆಟ್ಟದಾಗಿರುತ್ತದೆ. ಯೋಚಿಸಿ ಹೆಜ್ಜೆಯನ್ನು ಮುಂದಿರಿಸಬೇಕು, ಅತಿಯಾದ ಆಸೆ ಬದುಕಿನ ಮೂಲವನ್ನು ಅಲ್ಲಾಡಿಸುತ್ತದೆ. (ಪರಿಹಾರಕ್ಕಾಗಿ ರಾಮ ಮಂತ್ರ ಜಪ ಮಾಡಿ)

ತುಲಾ ರಾಶಿ: ಒಳ್ಳೆಯ ದಿನ ಉತ್ತಮ ಜ್ಞಾನ, ಆರೋಗ್ಯ, ಮಹಾಲಕ್ಷ್ಮಿ ಅನುಗ್ರಹ, ಎಲ್ಲವೂ ಸಹ ಲಭಿಸುವ ಸುದಿನ ಎಲ್ಲ ಕಾರ್ಯಗಳಲ್ಲೂ ಜಯ ಭಗವಂತನ ಕೃಪಾಕಟಾಕ್ಷ ಒಳ್ಳೆಯದಾಗುತ್ತದೆ. (ಪರಿಹಾರಕ್ಕಾಗಿ ಶಿವನಿಗೆ ಬಿಲ್ವಪತ್ರೆಯನ್ನು ಅರ್ಪಿಸಿ)

ವೃಶ್ಚಿಕ ರಾಶಿ: ವಿಪರೀತವಾದ ಆಲಸ್ಯ, ಎಲ್ಲಾ ಕಾರ್ಯಗಳಲ್ಲೂ ವಿರುದ್ಧವಾದ ನಡೆಯಾದ ನಂಬಿಕೆ ಅಥವಾ ಕೊಟ್ಟ ಹಣ ಕೊಡುವುದಿಲ್ಲ ಎಂಬ ಅಪನಂಬಿಕೆ, ಮನಸ್ಸಿನ ಚಿಂತೆ, ದುಃಖ. (ಪರಿಹಾರಕ್ಕೆ ಆಂಜನೇಯನ ದೇವಸ್ಥಾನದಲ್ಲಿ ನಮಸ್ಕರಿಸಿ ಬನ್ನಿ)

ಧನಸ್ಸು ರಾಶಿ: ಎಲ್ಲಾ ಕಾರ್ಯಗಳಲ್ಲೂ ಜಯ. ಆದರೆ ಮನಸ್ಸಿನಲ್ಲಿ ಏನೋ ತೊಂದರೆ ಚಿಂತೆ. ಹೊರ ಬರುವ ಸ್ಥಿತಿ ತೀರ ಗಂಭೀರ ಎಂದು ಯೋಚನೆ ಆಗುತ್ತದೆ. (ಪರಿಹಾರಕ್ಕಾಗಿ ಮನೆಗೆ ದೃಷ್ಟಿಸಿ, ನೀವಾಡಿಸಿ ಬೂದುಗುಂಬಳಕಾಯಿ ಹೊಡೆಯಿರಿ)

ಮಕರ ರಾಶಿ: ಅತಿಯಾದ ಆಲಸ್ಯ, ದುಃಖ ಮನಸ್ಸಿನಲ್ಲಿ ದುಗುಡ, ಒಳ್ಳೆಯ ಧನಾಗಮನ, ಪುತ್ರ ಮಿತ್ರರೊಂದಿಗೆ ಸಂತೋಷದಿಂದ ಕಾಲ ಕಳೆಯುವ ಸುದಿನ. (ಪರಿಹಾರಕ್ಕಾಗಿ ಶಿವನ ದೇವಾಲಯದಲ್ಲಿ ಅರ್ಚನೆ ಮಾಡಿಸಿ)

ಕುಂಭ ರಾಶಿ: ಸಂಪೂರ್ಣ ಲಕ್ಷ್ಮಿಯ ಕೃಪಾಕಟಾಕ್ಷ, ಪೂರ್ವ ಪುಣ್ಯದಿಂದ ದೇವಸ್ಥಾನದಲ್ಲಿ ಅರ್ಚನೆ ಪೂಜೆ ಮಾಡಿಸುವ ಸುದಿನ, ಧನ ಲಾಭ, ಒಳ್ಳೆಯದಾಗುತ್ತದೆ. (ಪರಿಹಾರಕ್ಕಾಗಿ ಸೋಮೇಶ್ವರನ ಪೂಜೆಯನ್ನು ಮಾಡಿಸಿ)

ಮೀನ ರಾಶಿ: ಎಲ್ಲ ಕಾರ್ಯಗಳಲ್ಲಿ ಜಯ. ಶುಭಫಲ, ಅತ್ಯಂತ ಶ್ರೇಷ್ಠವಾದ ಆನಂದ. ಧರ್ಮಕಾರ್ಯಗಳಲ್ಲಿ ಆಸಕ್ತಿ, ಕಾರ್ಯಸಿದ್ಧಿ, ಜಯ ನಿಮ್ಮದಾಗಿರುತ್ತದೆ. (ಪರಿಹಾರಕ್ಕಾಗಿ ಭಗವಂತ ಶ್ರೀ ಕೃಷ್ಣನ ಸ್ಮರಣೆಯನ್ನು ಮಾಡಿ)

ರಾಹುಕಾಲ: 7-30AM ರಿಂದ 9-00AM
ಗುಳಿಕಕಾಲ: 1-30PM ರಿಂದ 3-00PM
ಯಮಗಂಡಕಾಲ: 10-30AMರಿಂದ 12-00PM

ಜ್ಯೋತಿಶ್ಯಾಸ್ತ್ರವಿಶಾರದ, ಜ್ಯೋತಿರ್ವಿದ್ಯಾರತ್ನ ಎನ್ ಎಸ್ ಶರ್ಮರು, ಪ್ರಧಾನ ಪುರೋಹಿತರು ಮತ್ತು ಆಗಮಿಕರು, ಶ್ರೀ ವಾಗ್ವಾದಿನೀ ಜ್ಯೋತಿಷ ಕೇಂದ್ರ, ಇಲ್ತೊರೆ ಗ್ರಾಮ. ದೇವನಹಳ್ಳಿ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ: 562110. ಮೊ-9945170572

ರಾಜಕೀಯ

ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್‌ನಿಂದ ಸಾಕಪ್ಪ ಸಾಕು ಕಾಂಗ್ರೆಸ್ ಸರ್ಕಾರ ಅಭಿಯಾನ

ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್‌ನಿಂದ ಸಾಕಪ್ಪ ಸಾಕು ಕಾಂಗ್ರೆಸ್ ಸರ್ಕಾರ ಅಭಿಯಾನ

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರಕಾರದ ದರ ಏರಿಕೆ, ಭ್ರಷ್ಟಾಚಾರದ ವಿರುದ್ಧ ಸಿಡಿದೆದ್ದಿರುವ ಜೆಡಿಎಸ್ (JDS) ಪಕ್ಷವು, ಸರಕಾರದ ವಿರುದ್ಧ ವಿನೂತನ ಅಭಿಯಾನ ಆರಂಭಿಸಿದೆ. ಯುವ ಜನತಾದಳ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ‘ಸಾಕಪ್ಪಾ

[ccc_my_favorite_select_button post_id="105115"]
2ನೇ ವಿಮಾನ ನಿಲ್ದಾಣ; ಸ್ಥಳ ಪರಿಶೀಲನೆ ನಡೆಸಿದ ತಂಡ

2ನೇ ವಿಮಾನ ನಿಲ್ದಾಣ; ಸ್ಥಳ ಪರಿಶೀಲನೆ ನಡೆಸಿದ ತಂಡ

ಉದ್ದೇಶಿತ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (2nd Airport) ರಾಜ್ಯ ಸರಕಾರವು ಗುರುತಿಸಿರುವ ಮೂರು ಸ್ಥಳಗಳ ಪೈಕಿ

[ccc_my_favorite_select_button post_id="105102"]
ಪಂಬನ್ ಸೇತುವೆ ಲೋಕಾರ್ಪಣೆ| Video ನೋಡಿ

ಪಂಬನ್ ಸೇತುವೆ ಲೋಕಾರ್ಪಣೆ| Video ನೋಡಿ

ರಾಮೇಶ್ವರಂ: ತಮಿಳುನಾಡಿನ ಪಂಬನ್ ಮತ್ತು ಹಿಂದೂ ಮಹಾಸಾಗರದಲ್ಲಿನ ದ್ವೀಪದ ರಾಮೇಶ್ವರಂ ನಗರವನ್ನು ಸಂಪರ್ಕಿಸುವ ಪಂಬನ್ ವರ್ಟಿಕಲ್ ಲಿಫ್ಟ್ (ಮೇಲ್ಮುಖ ತೆರೆದುಕೊಳ್ಳುವ) ಪಂಬನ್ ಸೇತುವೆಯನ್ನು (Pamban pridge) ಪ್ರಧಾನಿ ನರೇಂದ್ರ ಮೋದಿ ಭಾನುವಾರ ಮಧ್ಯಾಹ್ನ 12.30ರಲ್ಲಿ

[ccc_my_favorite_select_button post_id="105011"]
los angeles fire| ಅಮೆರಿಕ ಕಾಡ್ಗಿಚ್ಚು: ಸಾವಿನ ಸಂಖ್ಯೆ 11ಕ್ಕೆ| Video

los angeles fire| ಅಮೆರಿಕ ಕಾಡ್ಗಿಚ್ಚು: ಸಾವಿನ ಸಂಖ್ಯೆ 11ಕ್ಕೆ| Video

ಹಾಲಿವುಡ್ ಹಿಲ್ ಹಾಗೂ ಸ್ಟುಡಿಯೋ ಸಿಟಿಗೆ ಹೊತ್ತಿಕೊಂಡಿದ್ದ ಬೆಂಕಿಯನ್ನು ವಿಮಾನ, ಹೆಲಿಕಾಪ್ಟರ್ ಗಳ ಮೂಲಕ ನೀರು ಸಿಂಪಡಿಸಿ ನಂದಿಸಲಾಗಿತ್ತು los Angeles fire

[ccc_my_favorite_select_button post_id="100721"]

ಕ್ರೀಡೆ

ಬೆಂ.ಗ್ರಾ.ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗೆ ಚಾಲನೆ

ಬೆಂ.ಗ್ರಾ.ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗೆ ಚಾಲನೆ

ನೌಕರರ ಕ್ಷೇಮಾಭಿವೃದ್ಧಿಗೆ ಎಲ್ಲಾ ಸಹಕಾರ ನೀಡಲಾಗುವುದು, ಜಿಲ್ಲೆಯ ಅಭಿವೃದ್ಧಿಯಲ್ಲಿ ಸರ್ಕಾರಿ ನೌಕರರ ಪಾತ್ರ ಬಹಳ ಮುಖ್ಯ, ಜಿಲ್ಲೆಯ ಎಲ್ಲಾ ಅಭಿವೃದ್ಧಿ ಕೆಲಸಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. Sports Meet

[ccc_my_favorite_select_button post_id="104998"]
MBBS ವಿದ್ಯಾರ್ಥಿ ಆತ್ಮಹತ್ಯೆಗೆ ಶರಣು..!

MBBS ವಿದ್ಯಾರ್ಥಿ ಆತ್ಮಹತ್ಯೆಗೆ ಶರಣು..!

ಎಂಬಿಬಿಎಸ್ (MBBS) ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ (Suicide) ಮಾಡಿಕೊಂಡಿರುವ ಘಟನೆ ತಾಲೂಕಿನ

[ccc_my_favorite_select_button post_id="105122"]
ಸಹೋದರಿಯರ ದಾರುಣ ಸಾವು.. ಮುಗಿಲುಮುಟ್ಟಿದ ತಾಯಿಯ ಅಕ್ರಂದನ

ಸಹೋದರಿಯರ ದಾರುಣ ಸಾವು.. ಮುಗಿಲುಮುಟ್ಟಿದ ತಾಯಿಯ ಅಕ್ರಂದನ

ತಂದೆ ಇಲ್ಲದೆ ಇಬ್ಬರು ಮಕ್ಕಳೇ ಜೀವನಾಧಾರ ಅಂತ ಬದುಕು ಕಟ್ಟಿಕೊಂಡಿದ್ದ ತಾಯಿಯ ಆಕ್ರಂದನ ಮುಗಿಲುಮುಟ್ಟಿದೆ. ಸ್ಥಳಕ್ಕೆ ಪೊಲೀಸರು ಭೇಟಿ krushihonda

[ccc_my_favorite_select_button post_id="105079"]

ಆರೋಗ್ಯ

ಸಿನಿಮಾ

ಕಲಾವಿದರು ಮಾಸಾಶನ ಪಡೆಯಲು ಜೀವಿತಾವಧಿ ಪ್ರಮಾಣ ಪತ್ರ ಸಲ್ಲಿಸಿ

ಕಲಾವಿದರು ಮಾಸಾಶನ ಪಡೆಯಲು ಜೀವಿತಾವಧಿ ಪ್ರಮಾಣ ಪತ್ರ ಸಲ್ಲಿಸಿ

ನಿಗದಿತ ಅರ್ಜಿ ನಮೂನೆಯನ್ನು ಸಹಾಯಕ ನಿರ್ದೇಶಕರ ಕಛೇರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಿಲ್ಲಾಡಳಿತ ಭವನ, ಕೊಠಡಿ ಸಂಖ್ಯೆ:118 Affidavit

[ccc_my_favorite_select_button post_id="104955"]
error: Content is protected !!