theft: ಬುರ್ಖಾಧಾರಿ ಅಕ್ಕ ತಂಗಿಯರಿಂದ ಬಸ್ ನಲ್ಲಿ ನಗ ನಾಣ್ಯ ಕಳವು: ಮೂವರು ಲೇಡಿ ಕಳ್ಳಿಯರ ಅರೆಸ್ಟ್..!

ಚಿಕ್ಕಬಳ್ಳಾಪುರ: ಬುರ್ಖಾ ಧರಿಸಿಕೊಂಡು ಬಸ್ ಗೆ ಹತ್ತಿದ್ರೆ ಸಾಕು ಆ ಮೂರ್ನಾಲ್ಕು ಮಂದಿ ಮಹಿಳೆಯರು ಬಸ್ ನಲ್ಲಿ ಮಹಿಳೆಯರ ಕತ್ತಲ್ಲಿರೋ ಚಿನ್ನದ ಸರ ಹಾಗೂ ಬ್ಯಾಗ್ ಗಳಲ್ಲಿರೋ ಕ್ಯಾಷ್ ಎಗರಿಸದೆ (theft) ಬಸ್ ನಿಂದ ಕೆಳಗೆ ಇಳಿತಿರಲಿಲ್ಲ.. ಇಂತಹ ಖತರ್ನಾಕ್ ಬುರ್ಖಾಧಾರಿ ಮೂವರು ಕಿಲಾಡಿ ಮಹಿಳಾ ಕಳ್ಳಿಯರನ್ನ ಜಿಲ್ಲೆಯ ಗೌರಿಬಿದನೂರು ಪೊಲೀಸರು ಬಂಧಿಸಿದ್ದಾರೆ.

ಅಂದಹಾಗೆ ಗುಲ್ಬರ್ಗಾ ಮೂಲದ ರೇಖಾ ಬಾಯಿ, ಕರೀನಾ, ರೋಜಾ ಬಂಧಿತರಾಗಿದ್ದು ಪುಷ್ಪ ತಲೆಮರೆಸಿಕೊಂಡಿದ್ದಾಳೆ.

ಅಂದಹಾಗೆ ಈ ನಾಲ್ವರಲ್ಲಿ ಪುಷ್ಪ ಹಾಗೂ ರೇಖಾ ಅಕ್ಕ ತಂಗಿಯರಾಗಿದ್ದು, ರೋಜಾ ಹಾಗೂ ಕರೀನಾ ಸಹ ಸಹೋದರಿಯರಾಗಿದ್ದಾರೆ.

ಈ ನಾಲ್ವರು ಒಂದೇ ಕುಟುಂಬದವರಾಗಿದ್ದು ಬಸ್ ನಿಲ್ದಾಣ ಜನಸಂದಣಿ ಪ್ರದೇಶಗಳಲ್ಲಿ ಕಳವು ಮಾಡೋದೆ ಇವರ ಕಾಯಕ. ಇದೇ ರೀತಿ ನವೆಂಬರ್ 16 ರಂದು ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ಬಸ್ ನಿಲ್ದಾಣದಲ್ಲಿ ಶಾಂತಕುಮಾರಿ ಎಂಬಾಕೆ ಬೆಂಗಳೂರು ಬಸ್ ಹತ್ತುವ ಸಮಯದಲ್ಲಿ ಆಕೆಯ ಕತ್ತಿನಲ್ಲಿದ್ದ 50 ಗ್ರಾಂ ತೂಕದ ಎರಡು ಎಳೆ ಚಿನ್ನದ ಸರ ಕಳವು ಮಾಡಿದ್ರು.

ಅದೇ ದಿನ ರತ್ನಮ್ಮ ಎಂಬಾಕೆಯ ಬ್ಯಾಗ್ ನಲ್ಲಿದ್ದ 1 ಲಕ್ಷ ಹಣ ಸಹ ಎಗರಿಸಿ ಎಸ್ಕೇಪ್ ಆಗಿದ್ರು.

ಈ ಸಂಬಂಧ ಎರಡು ಪ್ರಕರಣಗಳ ದೂರು ಪಡೆದ ಪೊಲೀಸರು ಸಿಸಿಟಿವಿಗಳನ್ನ ಪರಿಶೀಲನೆ ಮಾಡಿದಾಗ ನಾಲ್ವರು ಬುರ್ಖಾಧಾರಿ ಮಹಿಳೆಯರು ಮೇಲೆ ಅನುಮಾನ ಮೂಡಿತ್ತು. ನಂತರ ಇದೇ ಗೌರಿಬಿನದೂರು ಬಸ್ ನಿಲ್ದಾಣದಲ್ಲಿ ಕಳೆದ 3 ದಿನಗಳ ಹಿಂದೆ ಮತ್ತೆ ಅದೇ ನಾಲ್ವರು ಬಂದು ಮರಳಿ ಕಳ್ಳತನಕ್ಕೆ ಯತ್ನಿಸಲು ಹೊಂಚು ಹಾಕುತ್ತಿದ್ದಾಗ ರೆಡ್ ಹ್ಯಾಂಡಾಗಿ ಪೊಲೀಸರು ಮಹಿಳೆಯರನ್ನ ಬಂಧಿಸಿದ್ದಾರೆ.

ಇನ್ನೂ ಸಿಸಿಟಿವಿ ಪರಿಶೀಲನೆ ವೇಳೆ ಮಹಿಳೆ ಬುರ್ಖಾ ಮೇಲೆ ಹಾಕಿದ್ದ ವೇಲ್ ಗಮನಿಸಿದ್ದ ಪೊಲೀಸರು ಮತ್ತೆ ಅದೇ ವೇಲ್ ಧರಿಸಿ ಮಹಿಳೆ ಇರೋದನ್ನ ಕಂಡು ಅನುಮಾನಗೊಂಡು ಮಹಿಳೆಯರನ್ನ ಬಂಧಿಸಿದ್ರು. ಈ ವೇಳೆ ಬಂಧಿತರು ಸತ್ಯ ಬಾಯ್ಬಿಟ್ಟಿದ್ದಾರೆ.

ಇನ್ನೂ ಇವರದ್ದು ಇದೇ ಪ್ರವೃತ್ತಿಯಾಗಿದ್ದು, ರಾಜ್ಯದ ನಾನಾ ಕಡೆ ಹತ್ತು ಹಲವು ಕಳವು ಪ್ರಕರಣಗಳನ್ನ ಮಾಡಿದ್ದಾರೆ. ಇನ್ನೂ ಬಂಧಿತರಿಂದ ಕಳವು ಮಾಡಿದ್ದ ಚಿನ್ನ ಹಾಗೂ ನಗದು ವಶಕ್ಕೆ ಪಡೆಯಲಾಗಿದೆ.

ರಾಜಕೀಯ

LPG ಬೆಲೆ ಏರಿಕೆ ಕರ್ನಾಟಕಕ್ಕೆ ಮಾತ್ರವಲ್ಲ, ಇಡೀ ದೇಶಕ್ಕೆ ಆಗಿದೆ: ಆರ್‌.ಅಶೋಕ ಬೇಕಾಬಿಟ್ಟಿ ಮಾತು

LPG ಬೆಲೆ ಏರಿಕೆ ಕರ್ನಾಟಕಕ್ಕೆ ಮಾತ್ರವಲ್ಲ, ಇಡೀ ದೇಶಕ್ಕೆ ಆಗಿದೆ: ಆರ್‌.ಅಶೋಕ ಬೇಕಾಬಿಟ್ಟಿ

ಬೆಂಗಳೂರು: ಒಂದೆಡೆ ಬೆಲೆ ಏರಿಕೆ ಕುರಿತು ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ, ರಾಜ್ಯ ಬಿಜೆಪಿ (BJP) ಮುಖಂಡರು ಕೇಂದ್ರ ಸರ್ಕಾರದ LPG ಬೆಲೆ ಏರಿಕೆ ಕುರಿತು ಸಮರ್ಥನೆಗಿಳಿದಿರುವ ಇಬ್ಬಗೆಯ ನೀತಿ ಸಾರ್ವಜನಿಕ ವಲಯದಲ್ಲಿ

[ccc_my_favorite_select_button post_id="105087"]
2ನೇ ವಿಮಾನ ನಿಲ್ದಾಣ; ಸ್ಥಳ ಪರಿಶೀಲನೆ ನಡೆಸಿದ ತಂಡ

2ನೇ ವಿಮಾನ ನಿಲ್ದಾಣ; ಸ್ಥಳ ಪರಿಶೀಲನೆ ನಡೆಸಿದ ತಂಡ

ಉದ್ದೇಶಿತ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (2nd Airport) ರಾಜ್ಯ ಸರಕಾರವು ಗುರುತಿಸಿರುವ ಮೂರು ಸ್ಥಳಗಳ ಪೈಕಿ

[ccc_my_favorite_select_button post_id="105102"]
ಪಂಬನ್ ಸೇತುವೆ ಲೋಕಾರ್ಪಣೆ| Video ನೋಡಿ

ಪಂಬನ್ ಸೇತುವೆ ಲೋಕಾರ್ಪಣೆ| Video ನೋಡಿ

ರಾಮೇಶ್ವರಂ: ತಮಿಳುನಾಡಿನ ಪಂಬನ್ ಮತ್ತು ಹಿಂದೂ ಮಹಾಸಾಗರದಲ್ಲಿನ ದ್ವೀಪದ ರಾಮೇಶ್ವರಂ ನಗರವನ್ನು ಸಂಪರ್ಕಿಸುವ ಪಂಬನ್ ವರ್ಟಿಕಲ್ ಲಿಫ್ಟ್ (ಮೇಲ್ಮುಖ ತೆರೆದುಕೊಳ್ಳುವ) ಪಂಬನ್ ಸೇತುವೆಯನ್ನು (Pamban pridge) ಪ್ರಧಾನಿ ನರೇಂದ್ರ ಮೋದಿ ಭಾನುವಾರ ಮಧ್ಯಾಹ್ನ 12.30ರಲ್ಲಿ

[ccc_my_favorite_select_button post_id="105011"]
los angeles fire| ಅಮೆರಿಕ ಕಾಡ್ಗಿಚ್ಚು: ಸಾವಿನ ಸಂಖ್ಯೆ 11ಕ್ಕೆ| Video

los angeles fire| ಅಮೆರಿಕ ಕಾಡ್ಗಿಚ್ಚು: ಸಾವಿನ ಸಂಖ್ಯೆ 11ಕ್ಕೆ| Video

ಹಾಲಿವುಡ್ ಹಿಲ್ ಹಾಗೂ ಸ್ಟುಡಿಯೋ ಸಿಟಿಗೆ ಹೊತ್ತಿಕೊಂಡಿದ್ದ ಬೆಂಕಿಯನ್ನು ವಿಮಾನ, ಹೆಲಿಕಾಪ್ಟರ್ ಗಳ ಮೂಲಕ ನೀರು ಸಿಂಪಡಿಸಿ ನಂದಿಸಲಾಗಿತ್ತು los Angeles fire

[ccc_my_favorite_select_button post_id="100721"]

ಕ್ರೀಡೆ

ಬೆಂ.ಗ್ರಾ.ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗೆ ಚಾಲನೆ

ಬೆಂ.ಗ್ರಾ.ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗೆ ಚಾಲನೆ

ನೌಕರರ ಕ್ಷೇಮಾಭಿವೃದ್ಧಿಗೆ ಎಲ್ಲಾ ಸಹಕಾರ ನೀಡಲಾಗುವುದು, ಜಿಲ್ಲೆಯ ಅಭಿವೃದ್ಧಿಯಲ್ಲಿ ಸರ್ಕಾರಿ ನೌಕರರ ಪಾತ್ರ ಬಹಳ ಮುಖ್ಯ, ಜಿಲ್ಲೆಯ ಎಲ್ಲಾ ಅಭಿವೃದ್ಧಿ ಕೆಲಸಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. Sports Meet

[ccc_my_favorite_select_button post_id="104998"]
Doddaballapura; ಬೀಟ್ ಸಭೆಯಲ್ಲಿ ಇನ್ಸ್ಪೆಕ್ಟರ್ ಅಮರೇಶ್ ಗೌಡ ವಾರ್ನಿಂಗ್..! ಕಾರಣ ಏನ್ ಗೊತ್ತಾ..?

Doddaballapura; ಬೀಟ್ ಸಭೆಯಲ್ಲಿ ಇನ್ಸ್ಪೆಕ್ಟರ್ ಅಮರೇಶ್ ಗೌಡ ವಾರ್ನಿಂಗ್..! ಕಾರಣ ಏನ್ ಗೊತ್ತಾ..?

ಬಸವೇಶ್ವರನಗರ ವಾರ್ಡಿನ ಅಶ್ವತ್ ಕಟ್ಟೆ ಬಳಿ ನಗರ ಪೊಲೀಸ್ ಠಾಣೆಯಿಂದ ಮಂಗಳವಾರ ಸಂಜೆ ಬೀಟ್ ಸಭೆಯನ್ನು ಆಯೋಜಿಸಲಾಗಿತ್ತು. doddaballapura

[ccc_my_favorite_select_button post_id="105111"]
ಸಹೋದರಿಯರ ದಾರುಣ ಸಾವು.. ಮುಗಿಲುಮುಟ್ಟಿದ ತಾಯಿಯ ಅಕ್ರಂದನ

ಸಹೋದರಿಯರ ದಾರುಣ ಸಾವು.. ಮುಗಿಲುಮುಟ್ಟಿದ ತಾಯಿಯ ಅಕ್ರಂದನ

ತಂದೆ ಇಲ್ಲದೆ ಇಬ್ಬರು ಮಕ್ಕಳೇ ಜೀವನಾಧಾರ ಅಂತ ಬದುಕು ಕಟ್ಟಿಕೊಂಡಿದ್ದ ತಾಯಿಯ ಆಕ್ರಂದನ ಮುಗಿಲುಮುಟ್ಟಿದೆ. ಸ್ಥಳಕ್ಕೆ ಪೊಲೀಸರು ಭೇಟಿ krushihonda

[ccc_my_favorite_select_button post_id="105079"]

ಆರೋಗ್ಯ

ಸಿನಿಮಾ

ಕಲಾವಿದರು ಮಾಸಾಶನ ಪಡೆಯಲು ಜೀವಿತಾವಧಿ ಪ್ರಮಾಣ ಪತ್ರ ಸಲ್ಲಿಸಿ

ಕಲಾವಿದರು ಮಾಸಾಶನ ಪಡೆಯಲು ಜೀವಿತಾವಧಿ ಪ್ರಮಾಣ ಪತ್ರ ಸಲ್ಲಿಸಿ

ನಿಗದಿತ ಅರ್ಜಿ ನಮೂನೆಯನ್ನು ಸಹಾಯಕ ನಿರ್ದೇಶಕರ ಕಛೇರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಿಲ್ಲಾಡಳಿತ ಭವನ, ಕೊಠಡಿ ಸಂಖ್ಯೆ:118 Affidavit

[ccc_my_favorite_select_button post_id="104955"]
error: Content is protected !!