ಮುಂಬೈ : ಗೇಟ್ವೇ ಆಫ್ ಇಂಡಿಯಾ ಬಳಿ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ದೋಣಿಯೊಂದು ಮುಳುಗಿ ಹದಿಮೂರು ಮಂದಿ ಸಾವನ್ನಪ್ಪಿದ ಘಟನೆ ನಡೆದಿದೆ. (Boat Accident video)
ಘಟನೆಯಲ್ಲಿ ಇತರೆ 101 ಪ್ರಯಾಣಿಕರನ್ನು ರಕ್ಷಿಸಲಾಗಿದೆ ಎಂದು ಹೇಳಲಾಗಿದೆ. ಇನ್ನೂ ಸುಮಾರು ಮಂದಿಗಾಗಿ ಹುಡುಕಾಟ ನಡೆಯುತ್ತಿದೆ.
ವರದಿ ಅನ್ವಯ ದೋಣಿಯಲ್ಲಿ ಸುಮಾರು 110ಕ್ಕೂ ಹೆಚ್ಚು ಪ್ರಯಾಣಿಕರಿದ್ದರು ಎಂದು ಹೇಳಲಾಗುತ್ತಿದ್ದು, ನಿಖರ ಸಂಖ್ಯೆ ದೃಢೀಕರಿಸಲಾಗಿಲ್ಲ.
ಮುಂಬೈನ ಪ್ರಸಿದ್ಧ ಪ್ರವಾಸಿ ತಾಣವಾದ ಎಲಿಫೆಂಟಾ ದ್ವೀಪದತ್ತ ತೆರಳುತ್ತಿದ್ದ ಬೋಟ್ ಸಂಜೆ 4 ಗಂಟೆ ಸುಮಾರಿಗೆ ಚಿಕ್ಕ ದೋಣಿಯೊಂದು ಡಿಕ್ಕಿ ಹೊಡೆದ ಪರಿಣಾಮ ಮಗುಚಿ ಬಿದ್ದಿದೆ. ಘಟನೆಯ ನಂತರ ಬಿಡುಗಡೆಯಾದ ವೀಡಿಯೊದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿರುವುದನ್ನು ಕಾಣಬಹುದಾಗಿದೆ.
ಭಾರತೀಯ ನೌಕಾಪಡೆ, ಕೋಸ್ಟ್ ಗಾರ್ಡ್ ಮತ್ತು ಮೆರೈನ್ ಪೊಲೀಸ್ ತಂಡಗಳು ಕಾರ್ಯಾಚರಣೆಯಲ್ಲಿ ಶೋಧ ಮತ್ತು ರಕ್ಷಣಾ ತೊಡಗಿವೆ. ಪ್ರಸ್ತುತ, 11 ನೌಕಾಪಡೆಯ ಬೋಟ್ಗಳು ಮೂರು ಮೆರೈನ್ ಪೊಲೀಸ್ ಬೋಟ್ಗಳು ಮತ್ತು ಒಂದು ಕೋಸ್ಟ್ ಗಾರ್ಡ್ ಹಡಗುಗಳು ಸ್ಥಳದಲ್ಲಿ ಕಾರ್ಯಾಚರಣೆ ನಡೆಸುತ್ತಿವೆ.
A boat ferrying passengers near Elephanta has capsized. Mumbai Police and the Indian Navy are conducting rescue operations. Further details are awaited. pic.twitter.com/TzHPpL7Fnp
— Richa Pinto (@richapintoi) December 18, 2024
ಇನ್ನೂ ಮುಂಬೈ ದೋಣಿ ಅಪಘಾತದಲ್ಲಿ ಮೃತರ ಸಂಖ್ಯೆ 13 ಕ್ಕೆ ಏರಿದ್ದು, ಮೂವರು ನೌಕಾಪಡೆ ಸಿಬ್ಬಂದಿ ಸಹ ಸೇರಿದ್ದಾರೆ. ಒಟ್ಟು 101 ಮಂದಿಯನ್ನು ರಕ್ಷಿಸಲಾಗಿದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ತಿಳಿಸಿದ್ದಾರೆ.
ಮುಂಬೈ ಕರಾವಳಿಯಲ್ಲಿ ನೌಕಾಪಡೆಯ ಸ್ಪೀಡ್ ಬೋಟ್ ಸಂಜೆ 4 ಗಂಟೆ ಸುಮಾರಿಗೆ ಜನಪ್ರಿಯ ಪ್ರವಾಸಿ ತಾಣವಾದ ಎಲಿಫೆಂಟಾ ಗುಹೆಗಳಿಗೆ ಹೋಗುವ ಮಾರ್ಗದಲ್ಲಿ ನೀಲಕಮಲ್ ದೋಣಿಗೆ ಅಪ್ಪಳಿಸಿದ ನಂತರ ಈ ಅಪಘಾತ ಸಂಭವಿಸಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ವರದಿ ಮಾಡಿದ್ದಾರೆ.
ನೌಕಾಪಡೆಯ ಮಾಹಿತಿಯ ಪ್ರಕಾರ, ರಾತ್ರಿ 7.30 ರವರೆಗೆ ಸಾವಿನ ಸಂಖ್ಯೆ 13 ಆಗಿದೆ ಎಂದು ಫಡ್ನವಿಸ್ ಹೇಳಿದರು.