Site icon ಹರಿತಲೇಖನಿ

ಪತ್ನಿಗೆ ಮುತ್ತಿಟ್ಟು ಪೊಲೀಸರ ಜೊತೆ ಹೊರಟ ಅಲ್ಲು ಅರ್ಜುನ್..!; ಬೆಡ್ ರೂಂಗೆ ಬಂದು ಬಂಧಿಸೋದ್ ಸರಿಯಲ್ಲವೆಂದು ಆಕ್ಷೇಪ..Video| Pushpa 2

ಹೈದರಾಬಾದ್: ಪುಷ್ಪ 2 (Pushpa 2) ಸಿನಿಮಾ ಪ್ರಿಮಿಯರ್ ಶೋ ವೇಳೆ ಕಾಲ್ತುಳಿತಕ್ಕೆ ಒಳಗಾಗಿ ಮಹಿಳೆ ಸಾವನಪ್ಪಿರುವ ಕುರಿತು ದಾಖಲಾಗಿದ್ದ ಪ್ರಕರಣದ ಹಿನ್ನೆಲೆಯಲ್ಲಿ ತೆಲುಗು ಚಿತ್ರರಂಗದ ಖ್ಯಾತ ನಟ ಅಲ್ಲು ಅರ್ಜುನ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಈ ವೇಳೆ ಕನಿಷ್ಠ ಬಟ್ಟೆ ಬದಲಾಯಿಸಲು ಸಮಯ ನೀಡಿ. ನನ್ನನ್ನು ಬಂಧಿಸಿ ಕರೆದೊಯ್ದರೂ ತಪ್ಪಿಲ್ಲ ಆದರೆ ಮಲಗುವ ಕೋಣೆಗೆ ಬಂದು ಈ ರೀತಿ ಬಂಧಿಸುವುದು ಒಳ್ಳೆಯದಲ್ಲ ಎಂದಿದ್ದಾರೆ.

ಚಿಕ್ಕಡಪಲ್ಲಿ ಸಂಧ್ಯಾ ಥಿಯೇಟರ್ ಕಾಲ್ತುಳಿತ ಪ್ರಕರಣದಲ್ಲಿ ಅಲ್ಲು ಅರ್ಜುನ್ ಬಂಧನ ಮಾಡಲಾಗಿದೆ. ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಹೈದರಾಬಾದ್ ಸಿಪಿ ಸಿವಿ ಆನಂದ್ ಮಾಧ್ಯಮಗಳಿಗೆ ಹೇಳಿದ್ದಾರೆ.

ಅಲ್ಲು ಅರ್ಜುನ್‌ನನ್ನು ಬಂಧಿಸಿ ಚಿಕ್ಕಡಪಲ್ಲಿ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು, ಈ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆಯ ಬಳಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.

https://www.harithalekhani.com/wp-content/uploads/2024/12/1000720414.mp4

ಮನೆಯಿಂದ ಹೊರಡುವ ಮುನ್ನ ಮಡದಿ ಮುತ್ತಿಟ್ಟಿದ್ದಷ್ಟೇ ಅಲ್ಲದೆ ಕೈಲಿ ಕಾಫಿ ಕಪ್ ಹಿಡಿದು ಅಲ್ಲು ಅರ್ಜುನ್ ಪೊಲೀಸರೊಂದಿಗೆ ಹೊರಟಿರುವ ವಿಡಿಯೋ ವೈರಲ್ ಆಗಿದೆ.

Exit mobile version