ಹರಿತಲೇಖನಿ ದಿನಕ್ಕೊಂದು ಕಥೆ: ಜಾಣ ರಾಜ| Daily story

Channel Gowda
Hukukudi trust

Daily story: ಮರ ಕಡಿದು ಮಾರಾಟ ಮಾಡಿ ಬದುಕನ್ನು ಸಾಗಿಸುತ್ತಿದ್ದ ರಾಮು. ಪ್ರತಿ ದಿನವೂ ಕಾಡಿಗೆ ಹೋಗಿ ಮರ ಕಡಿದು ಎಷ್ಟು ಸಾಧ್ಯವೋ ಅಷ್ಟನ್ನು ಹೊತ್ತು ನಡೆದು ಪೇಟೆಯಲ್ಲೆಲ್ಲ ಮಾರಾಟ ಮಾಡುತ್ತಿದ್ದನು. ಬಂದ ಹಣದಿಂದ ಸುಖವಾದ ಜೀವನ ನಡೆಸುತ್ತಿದ್ದನು.

hulukudi maharathotsava
Aravind, BLN Swamy, Lingapura

ನಿತ್ಯದಂತೆ ಅಂದೂ ಕಾಡಿಗೆ ಹೋಗಿ ಮರ ಕಡಿದು ಕಟ್ಟಿಗೆ ಮಾಡಿ ತಲೆಯಲ್ಲಿ ಹೊತ್ತುಕೊಂಡು ಬೀದಿಬೀದಿಗಳಲ್ಲೂ ಸುತ್ತಾಡಿದ. ಅಂದು ಯಾರೂ ಕಟ್ಟಿಗೆಯನ್ನು ಕೊಳ್ಳಲಿಲ್ಲ. ಹಸಿವಿನಿಂದ ಅವನು ಕಂಗಾಲಾದನು. ನಡೆಯುವುದೇ ಕಷ್ಟವೆಂಬ ಸ್ಥಿತಿ ಬಂದಿತು.

ಈ ಕಟ್ಟಿಗೆ ಮಾರಾಟವಾಗದಿದ್ದರೂ ಚಿಂತೆ ಇಲ್ಲ. ಇವನ್ನು ಅರಸನಿಗೆ ಕಾಣಿಕೆಯಾಗಿ ಒಪ್ಪಿಸಬೇಕು ಎಂದು ವಿಚಾರಿಸಿ ನಿಧಾನವಾಗಿ ಅರಮನೆಯತ್ತ ಹೆಜ್ಜೆ ಹಾಕಿದನು. ಅವನು ಅರಮನೆ ತಲುಪುವಷ್ಟರಲ್ಲಿಯೇ ರಾತ್ರಿಯಾಗಿತ್ತು. ಆದ್ದರಿಂದ ಅರಮನೆಯ ಬಾಗಿಲು ಮುಚ್ಚಿಕೊಂಡಿತ್ತು.

Hulukudi mahajathre
Aravind, BLN Swamy, Lingapura

ಇನ್ನೇನು ಮಾಡುವುದು? ಒಂದಡಿ ಮುಂದಿಡುವುದೂ ಅಸಾಧ್ಯವಾಗಿತ್ತು. ಕಟ್ಟಿಗೆಯನ್ನು ಕೆಳಗಿಳಿಸಿಟ್ಟು ರಾಮು ಅರಮನೆಯ ಬಾಗಿಲು ಬಳಿಯಲ್ಲಿ ಮಲಗಿದನು. ಹಸಿವು, ನೀರಡಿಕೆ, ದಣಿವಿನಿಂದಾಗಿ ಮಲಗಿದ ಕೂಡಲೇ ನಿದ್ದೆ ಆವರಿಸಿತು.

ಆ ರಾಜ್ಯದ ಮಹಾರಾಜನಾದ ಉದಯವರ್ಮ ಮುದುಕನಾಗಿದ್ದನು. ಆತನಿಗೆ ಮಕ್ಕಳೇ ಇರಲಿಲ್ಲ. ತನ್ನ ಕಾಲಾನಂತರ ರಾಜ್ಯಭಾರವನ್ನು ಯಾರ ಕೈಗೆ ಒಪ್ಪಿಸಬೇಕೆಂಬ ಆಲೋಚನೆಯಲ್ಲಿ ಮುಳುಗಿ ಆತ ದಿನೇದಿನೇ ಸೊರಗುತ್ತಿದ್ದನು. ಅಂದು ರಾತ್ರಿ ನಿದ್ರೆಯಲ್ಲಿ ಉದಯವರ್ಮನಿಗೆ ಒಂದು ಶಕ್ತಿ ‘ಉದಯವರ್ಮ. ನಾಳೆ ಬೆಳಿಗ್ಗೆ ಅರಮನೆಯ ಬಾಗಿಲು ತೆರೆಯುವಾಗ ಮೊದಲು ಕಾಣುವ ವ್ಯಕ್ತಿಯನ್ನು ನೀನು ಮುಂದಿನ ಅರಸನನ್ನಾಗಿ ನೇಮಿಸು’ ಎಂದು ಹೇಳಿತು.

ಮಹಾರಾಜನಿಗೆ ಆ ಕ್ಷಣ ಎಚ್ಚರವಾಯಿತು. ಆ ಕೂಡಲೇ ಪ್ರಧಾನಮಂತ್ರಿಯನ್ನು ಕರೆದು ‘ನಾಳೆ ಬೆಳಿಗ್ಗೆ ನನ್ನ ಎದುರಿನಲ್ಲೇ ಅರಮನೆಯ ಬಾಗಿಲು ತೆರೆಯಬೇಕು’ ಎಂದು ಹೇಳಿದನು. ಪ್ರಧಾನಮಂತ್ರಿಗೆ ಅರ್ಥವಾಗಲಿಲ್ಲ. ಆದರೆ ರಾಜಾಜ್ಞೆಯಲ್ಲವೇ? ಹೇಳಿದಂತೆ ಕೇಳದಿರಲು ಸಾಧ್ಯವೇ?

ಹೊತ್ತು ಮೂಡಿತು. ಮಹಾರಾಜ ಹಾಗೂ ಮಂತ್ರಿಗಳ ಸಮ್ಮುಖದಲ್ಲಿ ಅರಮನೆಯ ಬಾಗಿಲನ್ನು ತೆರೆಯಲಾಯಿತು. ರಾಮು ಬಾಗಿಲು ತೆರೆಯುವುದನ್ನೇ ಕಾದು ಅಲ್ಲಿ ನಿಂತಿದ್ದನು. ಅರಸ ಓಡಿ ಹೋಗಿ ಅವನನ್ನು ಹಿಡಿದೆಬ್ಬಿಸಿ ‘ಇಂದಿನಿಂದ ನೀನು ಈ ರಾಜ್ಯದ ಅರಸ. ಇಂದಿನಿಂದ ನೀನು ಕಟ್ಟಿಗೆ ಮಾರುವುದನ್ನು ಬಿಟ್ಟು ಬಿಡು’ ಎಂದು ಹೇಳಿದನು.

ರಾಮುವಿಗೆ ಮೃಷ್ಟಾನ್ನ ಭೋಜನವನ್ನು ನೀಡಲಾಯಿತು. ನಂತರ ಸಿಂಹಾಸನದಲ್ಲಿ ಕೂರಿಸಿ ಬಂಗಾರದ ಕೀರಿಟವನ್ನು ತೊಡಿಸಲಾಯಿತು. ಅರಮನೆಯ ಆಸ್ಥಾನ ಪುರೋಹಿತನು ‘ತಾವೀಗ ಈ ರಾಜ್ಯದ ಮಹಾರಾಜರು, ಮಂತ್ರಿಗಳನ್ನು ಹಾಗೂ ಸಭೆಯ ಇತರರನ್ನು. ಈ ರಾಜ್ಯದ ಜನರನ್ನು ತಾವು ಹರಸಬೇಕು’ ಎಂದನು.

ಹೊಸ ಅರಸನು ಬಲಗೈ ಚಾಚಿ ಪ್ರಧಾನಮಂತ್ರಿಯನ್ನೂ, ಎಡಗೈ ಚಾಚಿ ಸೇನಾನಾಯಕನನ್ನೂ ಕರೆದ. ಅವರು ಬಳಿ ಬಂದು ನಿಂತಾಗ ‘ಈ ಸಿಂಹಾಸನದಿಂದ ಮೇಲೇಳಲು ನನಗೊಮ್ಮೆ ನೆರವಾಗಿರಿ’ ಎಂದನು.

ಅವರಿಬ್ಬರೂ ತಮ್ಮ ಮನದಲ್ಲಿ ನಿನ್ನೆತನಕ ಕಟ್ಟಿಗೆ ಮಾರಾಟ ಮಾಡಿ ಬದುಕು ಸಾಗಿಸುತ್ತಿದ್ದವನು ಇಂದು ಹೇಳುತ್ತಾನೆ. ಕುಳಿತಲ್ಲಿಂದ ಮೇಲೆಳಲು ತನ್ನ ನೆರವಿಗೆ ಬನ್ನಿ ಅಂತ. ಅರಸನಾದ ಕೂಡಲೇ ಆತನಲ್ಲಿ ಹೇಗೆ ಮಾರ್ಪಾಟು ಬಂದುಬಿಟ್ಟಿತು ನೋಡಿ! ಇದೆಂತಹ ಅಹಂಕಾರ? ಎಂದುಕೊಳ್ಳುತ್ತಿದ್ದರು.

ಅವರು ಯೋಚಿಸುತ್ತಿರುವುದೇನೆಂಬುದು ರಾಮುವಿಗೆ ಅರ್ಥವಾಯಿತು. ‘ನೀವು ಮನದಲ್ಲಿ ಅಂದು ಕೊಳ್ಳುತ್ತಿರುವುದೇನೆಂಬುದನ್ನು ನಾನು ಊಹಿಸಿಕೊಳ್ಳಬಲ್ಲೆ. ನಿಮ್ಮ ಊಹೆ ನಿಜವು ಹೌದು. ಕಟ್ಟಿಗೆ ಎಷ್ಟೇ ಭಾರವಿದ್ದರೂ ನನ್ನಿಂದ ಹೊತ್ತು ನಡೆಯುವುದು ಸಾಧ್ಯ. ಆದರೆ ಇದು ರಾಜ್ಯದ ಭಾರ. ಈ ರಾಜ್ಯದ ಜನರ ಭಾರ. ನಿಮ್ಮ ನೆರವಿಲ್ಲದೆ ಈ ಭಾರ ಹೊತ್ತು ನಡೆಯುವುದು ನನ್ನಿಂದ ಸಾಧ್ಯವಿಲ್ಲ’ ಎಂದನು ಹೊಸ ರಾಜ

ಹೊಸ ಅರಸನ ಈ ಮಾತುಗಳನ್ನು ಕೇಳಿ ಎಲ್ಲರೂ ಸಂತೋಷಪಟ್ಟರು. ನಮಗೊಬ್ಬ ಜಾಣರಾಜ ದೊರೆತನೆಂದು ಹಿಗ್ಗಿದರು.

ಕೃಪೆ: ಸಾಮಾಜಿಕ ಜಾಲತಾಣ. (ಲೇಖಕರ ಮಾಹಿತಿ ಲಭ್ಯವಾಗಿಲ್ಲ)

ರಾಜಕೀಯ

BJP ರಾಜ್ಯಾಧ್ಯಕ್ಷ ಸ್ಥಾನದ ಮೇಲೆ ಕಣ್ಣು..‌?; ಆರ್ ಅಶೋಕ್ ಹೇಳಿದ್ ಏನು ನೋಡಿ

BJP ರಾಜ್ಯಾಧ್ಯಕ್ಷ ಸ್ಥಾನದ ಮೇಲೆ ಕಣ್ಣು..‌?; ಆರ್ ಅಶೋಕ್ ಹೇಳಿದ್ ಏನು ನೋಡಿ

ಬಸನಗೌಡ ಪಾಟೀಲ್‌ ಯತ್ನಾಳ್‌ ಅವರ ತಂಡದ ಕುರಿತು ಬಿಜೆಪಿ ಹಿರಿಯ ನಾಯಕರೊಂದಿಗೆ ಚರ್ಚಿಸಿದ್ದೇನೆ. ಪಕ್ಷದಲ್ಲಿ ಎಲ್ಲ ಸಮಸ್ಯೆ ನಿವಾರಣೆಯಾಗಲಿ ಎಂದೇ ನಾನು ಬಯಸುತ್ತೇನೆ. R Ashoka

[ccc_my_favorite_select_button post_id="102295"]
ಇಂದು ಹುಲುಕುಡಿ ಕ್ಷೇತ್ರದಲ್ಲಿ ಬ್ರಹ್ಮ ರಥೋತ್ಸವ.. ವಿಶೇಷ ಬಸ್ ವ್ಯವಸ್ಥೆ

ಇಂದು ಹುಲುಕುಡಿ ಕ್ಷೇತ್ರದಲ್ಲಿ ಬ್ರಹ್ಮ ರಥೋತ್ಸವ.. ವಿಶೇಷ ಬಸ್ ವ್ಯವಸ್ಥೆ

ದಿವ್ಯಸಾನಿಧ್ಯವನ್ನು ರಂಭಾಪುರಿ ಶಾಖಾ ಹಿರೇಮಠದ ಷ.ಬ್ರ.ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ವಹಿಸಲಿದ್ದಾರೆ. Doddaballapura

[ccc_my_favorite_select_button post_id="102267"]
ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಭೇಟಿಯಾದ ನಾ.ರಾ.ಲೋಕೇಶ್

ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಭೇಟಿಯಾದ ನಾ.ರಾ.ಲೋಕೇಶ್

ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು, ಉಕ್ಕು ಖಾತೆ ಸಹಾಯಕ ಸಚಿವ ಭೂಪತಿರಾಜು ಶ್ರೀನಿವಾಸ ವರ್ಮ, ಸಂಸದ ಭರತ್ ಅವರೊಂದಿಗೆ ಉಕ್ಕು ಸಚಿವರನ್ನು ಭೇಟಿಯಾದ ಲೋಕೇಶ್ HD Kumaraswamy

[ccc_my_favorite_select_button post_id="102307"]
los angeles fire| ಅಮೆರಿಕ ಕಾಡ್ಗಿಚ್ಚು: ಸಾವಿನ ಸಂಖ್ಯೆ 11ಕ್ಕೆ| Video

los angeles fire| ಅಮೆರಿಕ ಕಾಡ್ಗಿಚ್ಚು: ಸಾವಿನ ಸಂಖ್ಯೆ 11ಕ್ಕೆ| Video

ಹಾಲಿವುಡ್ ಹಿಲ್ ಹಾಗೂ ಸ್ಟುಡಿಯೋ ಸಿಟಿಗೆ ಹೊತ್ತಿಕೊಂಡಿದ್ದ ಬೆಂಕಿಯನ್ನು ವಿಮಾನ, ಹೆಲಿಕಾಪ್ಟರ್ ಗಳ ಮೂಲಕ ನೀರು ಸಿಂಪಡಿಸಿ ನಂದಿಸಲಾಗಿತ್ತು los Angeles fire

[ccc_my_favorite_select_button post_id="100721"]

ಕ್ರೀಡೆ

ಕ್ರೀಡಾ ಶಾಲೆ/ ವಸತಿ ನಿಲಯ ಪ್ರವೇಶಾತಿಗೆ ಆಯ್ಕೆ ಪ್ರಕ್ರಿಯೆ

ಕ್ರೀಡಾ ಶಾಲೆ/ ವಸತಿ ನಿಲಯ ಪ್ರವೇಶಾತಿಗೆ ಆಯ್ಕೆ ಪ್ರಕ್ರಿಯೆ

ವಿಭಾಗ ಮಟ್ಟಕ್ಕೆ ಆಯ್ಕೆಯಾಗುವ ಕಿರಿಯ ಕ್ರೀಡಾಪಟುಗಳಿಗೆ ವಿಭಾಗ ಮಟ್ಟಕ್ಕೆ ತೆರಳಲು ಇಲಾಖೆಯಿಂದ ಪ್ರಯಾಣಭತ್ಯೆ ನೀಡಲಾಗುವುದು. hostel admission

[ccc_my_favorite_select_button post_id="101814"]

Kho kho world cup ಫೈನಲ್‌ನಲ್ಲಿ ಗೆದ್ದು

[ccc_my_favorite_select_button post_id="101277"]

Khel ratna: ಗುಕೇಶ್ ಸೇರಿ 4 ಕ್ರೀಡಾಪಟುಗಳಿಗೆ

[ccc_my_favorite_select_button post_id="99992"]

Video: ವಿಶ್ವ ಚದುರಂಗ ವೀರನಾದ ಭಾರತದ ಡಿ.ಗುಕೇಶ್..

[ccc_my_favorite_select_button post_id="98503"]
ದೂರಾದ ಪತ್ನಿಯ ನಡು ರಸ್ತೆಯಲ್ಲಿಯೇ ಬರ್ಬರವಾಗಿ ಹತ್ಯೆಗೈದ ಪತಿ..!

ದೂರಾದ ಪತ್ನಿಯ ನಡು ರಸ್ತೆಯಲ್ಲಿಯೇ ಬರ್ಬರವಾಗಿ ಹತ್ಯೆಗೈದ ಪತಿ..!

ಶ್ರೀಗಂಗಾ ಹಾಗೂ ಮೋಹನ್ ರಾಜು ಮದುವೆಯಾಗಿ 7 ವರ್ಷಗಳಾಗಿದ್ದು, 6 ವರ್ಷದ ಮಗನಿದ್ದಾನೆ. Murder

[ccc_my_favorite_select_button post_id="102299"]
Doddaballapura: ಬಸ್ ಅಪಘಾತ News update.. ಚಿಕಿತ್ಸೆ ಫಲಕಾರಿಯಾಗದೆ ಓರ್ವ ಸಾವು

Doddaballapura: ಬಸ್ ಅಪಘಾತ News update.. ಚಿಕಿತ್ಸೆ ಫಲಕಾರಿಯಾಗದೆ ಓರ್ವ ಸಾವು

ಅಪಘಾತ ತಡೆಗೆ ಟೋಲ್ ಸಿಬ್ಬಂದಿಗಳು, ತಾಲೂಕು ಆಡಳಿತ, ಜನಪ್ರತಿನಿದಿಗಳು ಯಾವುದೇ ಕ್ರಮಕೈಗೊಳ್ಳದೆ ಉಳಿದಿದ್ದಾರೆ. ಇದರಿಂದಾಗಿ ಪದೇ ಪದೇ ಸಾವು ನೋವುಗಳು ಸಂಭವಿಸುತ್ತಿವೆ ಎಂದು ಸ್ಥಳೀಯರು ದೂರಿದ್ದಾರೆ. Doddaballapura

[ccc_my_favorite_select_button post_id="102061"]

ಆರೋಗ್ಯ

ಸಿನಿಮಾ

ಅನಂತ್ ನಾಗ್, ಬಾಲಕೃಷ್ಣ ಸೇರಿ 139 ಮಂದಿಗೆ ಪದ್ಮ ಗೌರವ

ಅನಂತ್ ನಾಗ್, ಬಾಲಕೃಷ್ಣ ಸೇರಿ 139 ಮಂದಿಗೆ ಪದ್ಮ ಗೌರವ

ಕನ್ನಡ ಸಿನಿಮಾ ಇಡೀ ದೇಶದ ಚಿತ್ರರಂದ ಮಂದಿ ಗೌರವಿ ಸುವ ಹೆಸರು ಅನಂತ್ ನಾಗ್ ಅವರದು. ಆದರೆ 140ಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ, ಅಂಕು‌ರ್ ಸೇರಿದಂತೆ 10ಕ್ಕೂ ಹೆಚ್ಚು ಹಿಂದಿ ಚಿತ್ರಗಳಲ್ಲಿ ನಟಿಸಿ, ರಾಷ್ಟ್ರಪ್ರಶಸ್ತಿಗೂ

[ccc_my_favorite_select_button post_id="101669"]
error: Content is protected !!