Daily story| ಹರಿತಲೇಖನಿ ದಿನಕ್ಕೊಂದು ಕಥೆ: ಅವರೆಕಾಳಿಗೆ ಬಿಳಿದಾರ ಏಕೆ..?

Channel Gowda
Hukukudi trust

Daily story: ಒಂದು ಊರಿನಲ್ಲಿ ಒಬ್ಬಳು ಮುದುಕಿ ವಾಸವಾಗಿದ್ದಳು. ಅವಳು ಒಂದು ದಿನ ಅಂಗಡಿಯಿಂದ ಅವರೆಕಾಳನ್ನು ತಂದಳು. ಸಾರು ಮಾಡಲೆಂದು ಬೇಯಿಸಲು ಅದನ್ನು ಒಂದು ಪಾತ್ರೆಗೆ ಸುರಿದಳು. ಆಗ ಒಂದು ಕಾಳು ಪಾತ್ರೆಯಿಂದ ಕೆಳಕ್ಕೆ ಬಿತ್ತು. ಅದು ಪುಟ ಪುಟನೆ ಓಡಿಹೋಯಿತು. ಆಗ ಅದಕ್ಕೆ ಒಂದು ಕೋಲಿನ ತುಂಡು ಸಿಕ್ಕಿತು.

hulukudi maharathotsava
Aravind, BLN Swamy, Lingapura

ಅದು ಹೇಳಿತು, ‘ಅಜ್ಜಿ ಸೌದೆಯನ್ನು ಒಲೆಗೆ ಹಾಕುವಾಗ ನಾನು ತಪ್ಪಿಸಿಕೊಂಡು ಇಲ್ಲಿಗೆ ಬಂದೆ. ನಾವು ಒಟ್ಟಿಗೆ ಸ್ನೇಹಿತರಾಗಿರೋಣ’ ಎಂದಿತು. ಹಾಗೆ ಅವು ಸಾಗುವಾಗ ಒಂದು ಕೆಂಡ ಭೇಟಿಯಾಯಿತು. ‘ನಾನು ಅಜ್ಜಿ ಒಲೆ ಉರಿಸುವಾಗ ತಪ್ಪಿಸಿಕೊಂಡೆ. ಇಲ್ಲದಿದ್ದರೆ ಈಗ ಬೂದಿಯಾಗುತ್ತಿದ್ದೆ. ನಾವು ಮೂವರೂ ಸ್ನೇಹಿತರಾಗಿರೋಣ’ ಎಂದಿತು.

ಮೂವರೂ ಓಡಿದವು. ಅವರ ದಾರಿಯಲ್ಲಿ ಒಂದು ಉದ್ದವಾದ ನೀರಿನ ಕಾಲುವೆ ಇತ್ತು, ಅದನ್ನು ಹೇಗೆ ದಾಟುವುದು ಎಂಬ ಚಿಂತೆಯಾಯಿತು. ಆಗ ಒಂದು ಇದ್ದಿಲು ನುಡಿಯಿತು ‘ಸೌದೆ ತುಂಡು ಕಾಲುವೆಗೆ ಅಡ್ಡವಾಗಿ ಮಲಗಲಿ ನಾವು ಅದರ ಮೇಲೆ ದಾಟಿ ಆ ಕಡೆಗೆ ಸಾಗುವ’.

Hulukudi mahajathre
Aravind, BLN Swamy, Lingapura

ಈ ಉಪಾಯಕ್ಕೆ ಮೂವರೂ ಒಪ್ಪಿದರು. ಹಾಗೆಯೇ ಸೌದೆಯ ತುಂಡು ಕಾಲುವೆಗೆ ಅಡ್ಡವಾಗಿ ಮಲಗಿತು. ಮೊದಲು ಅವರೆಕಾಳು ದಾಟಿತು. ಆ ನಂತರ ಕೆಂಡ ದಾಟಲು ಬಂದಿತು. ನಡೆಯುತ್ತಾ ಕಾಲುವೆಯ ಮಧ್ಯಭಾಗಕ್ಕೆ ಬಂದಾಗ ಭಯವಾಗಿ ಹೆಜ್ಜೆ ಇಡಲು ಅದಕ್ಕೆ ಆಗಲಿಲ್ಲ.

ಆಗ ಸೌದೆಯ ತುಂಡಿಗೆ ಕೆಂಡದ ಬಿಸಿ ಹತ್ತಿತು. ‘ಬೇಗ ದಾಟು ಇಲ್ಲವಾದರೆ ನಾನು ಸುಟ್ಟು ಹೋಗುವೆ’ ಎಂದು ಸೌದೆ ಅರಚಿತು. ಆದರೆ ಕೆಂಡಕ್ಕೆ ನಡೆಯಲು ಆಗಲಿಲ್ಲ. ಇದರಿಂದ ಸೌದಯ ತುಂಡು ಎರಡಾಗಿ ಸೀಳಿ ಸುಟ್ಟಿತು ಎರಡು ತುಂಡುಗಳು ಕಾಲುವೆಗೆ ಬಿದ್ದವು. ಅವುಗಳ ಜೊತೆಗೆ ಕೆಂಡವೂ ನೀರಿಗೆ ಬಿತ್ತು. ಇದರಿಂದಾಗಿ ಎರಡೂ ಸತ್ತು ಹೋದವು.

ಇದನ್ನು ನೋಡಿ ಅವರೆಕಾಳು ನಕ್ಕಿತು. ಗಹಗಹಿಸಿ ನಕ್ಕಾಗ ಅದರ ಹೊಟ್ಟೆ ಬಿರಿಯಿತು. ಅವರೆಕಾಳು ನೋವಿನಿಂದ ಕಿರಿಚಿತು.

ಅಲ್ಲೇ ಹತ್ತಿರ ಇದ್ದ ಮರದಲ್ಲಿದ್ದ ನಿದ್ರಿಸಿದ್ದ ಜೇಡ ಅವರೆಕಾಳಿನ ಕಿರುಚಾಟಕ್ಕೆ ಎಚ್ಚರಗೊಂಡಿತು. ಅವರೆಕಾಳಿನ ಸ್ಥಿತಿ ಕಂಡು ಮರುಕಗೊಂಡಿತು. ದಾರವನ್ನು ಹೆಣೆದು ಅವರೆಕಾಳಿನ ಬಿರಿದ ಹೊಟ್ಟೆಯನ್ನು ಹೊಲಿಯಿತು. ಅವರೆಕಾಳು ಗುಣಮುಖವಾಯಿತು. ಆದರೆ ಅಂದಿನಿಂದ ಇಂದು ಕೂಡಾ ಅವರೇಕಾಳಿನ ಮಧ್ಯೆ ಬಿಳಿದಾರದ ಗುರುತು ಉಳಿದುಕೊಂಡಿತು.

ಕೃಪೆ: ಜಯಲಕ್ಷ್ಮೀ, ವಿಟ್ಲ (ಸಾಮಾಜಿಕ ಜಾಲತಾಣ)

ರಾಜಕೀಯ

BJP ರಾಜ್ಯಾಧ್ಯಕ್ಷ ಸ್ಥಾನದ ಮೇಲೆ ಕಣ್ಣು..‌?; ಆರ್ ಅಶೋಕ್ ಹೇಳಿದ್ ಏನು ನೋಡಿ

BJP ರಾಜ್ಯಾಧ್ಯಕ್ಷ ಸ್ಥಾನದ ಮೇಲೆ ಕಣ್ಣು..‌?; ಆರ್ ಅಶೋಕ್ ಹೇಳಿದ್ ಏನು ನೋಡಿ

ಬಸನಗೌಡ ಪಾಟೀಲ್‌ ಯತ್ನಾಳ್‌ ಅವರ ತಂಡದ ಕುರಿತು ಬಿಜೆಪಿ ಹಿರಿಯ ನಾಯಕರೊಂದಿಗೆ ಚರ್ಚಿಸಿದ್ದೇನೆ. ಪಕ್ಷದಲ್ಲಿ ಎಲ್ಲ ಸಮಸ್ಯೆ ನಿವಾರಣೆಯಾಗಲಿ ಎಂದೇ ನಾನು ಬಯಸುತ್ತೇನೆ. R Ashoka

[ccc_my_favorite_select_button post_id="102295"]
ಇಂದು ಹುಲುಕುಡಿ ಕ್ಷೇತ್ರದಲ್ಲಿ ಬ್ರಹ್ಮ ರಥೋತ್ಸವ.. ವಿಶೇಷ ಬಸ್ ವ್ಯವಸ್ಥೆ

ಇಂದು ಹುಲುಕುಡಿ ಕ್ಷೇತ್ರದಲ್ಲಿ ಬ್ರಹ್ಮ ರಥೋತ್ಸವ.. ವಿಶೇಷ ಬಸ್ ವ್ಯವಸ್ಥೆ

ದಿವ್ಯಸಾನಿಧ್ಯವನ್ನು ರಂಭಾಪುರಿ ಶಾಖಾ ಹಿರೇಮಠದ ಷ.ಬ್ರ.ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ವಹಿಸಲಿದ್ದಾರೆ. Doddaballapura

[ccc_my_favorite_select_button post_id="102267"]
ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಭೇಟಿಯಾದ ನಾ.ರಾ.ಲೋಕೇಶ್

ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಭೇಟಿಯಾದ ನಾ.ರಾ.ಲೋಕೇಶ್

ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು, ಉಕ್ಕು ಖಾತೆ ಸಹಾಯಕ ಸಚಿವ ಭೂಪತಿರಾಜು ಶ್ರೀನಿವಾಸ ವರ್ಮ, ಸಂಸದ ಭರತ್ ಅವರೊಂದಿಗೆ ಉಕ್ಕು ಸಚಿವರನ್ನು ಭೇಟಿಯಾದ ಲೋಕೇಶ್ HD Kumaraswamy

[ccc_my_favorite_select_button post_id="102307"]
los angeles fire| ಅಮೆರಿಕ ಕಾಡ್ಗಿಚ್ಚು: ಸಾವಿನ ಸಂಖ್ಯೆ 11ಕ್ಕೆ| Video

los angeles fire| ಅಮೆರಿಕ ಕಾಡ್ಗಿಚ್ಚು: ಸಾವಿನ ಸಂಖ್ಯೆ 11ಕ್ಕೆ| Video

ಹಾಲಿವುಡ್ ಹಿಲ್ ಹಾಗೂ ಸ್ಟುಡಿಯೋ ಸಿಟಿಗೆ ಹೊತ್ತಿಕೊಂಡಿದ್ದ ಬೆಂಕಿಯನ್ನು ವಿಮಾನ, ಹೆಲಿಕಾಪ್ಟರ್ ಗಳ ಮೂಲಕ ನೀರು ಸಿಂಪಡಿಸಿ ನಂದಿಸಲಾಗಿತ್ತು los Angeles fire

[ccc_my_favorite_select_button post_id="100721"]

ಕ್ರೀಡೆ

ಕ್ರೀಡಾ ಶಾಲೆ/ ವಸತಿ ನಿಲಯ ಪ್ರವೇಶಾತಿಗೆ ಆಯ್ಕೆ ಪ್ರಕ್ರಿಯೆ

ಕ್ರೀಡಾ ಶಾಲೆ/ ವಸತಿ ನಿಲಯ ಪ್ರವೇಶಾತಿಗೆ ಆಯ್ಕೆ ಪ್ರಕ್ರಿಯೆ

ವಿಭಾಗ ಮಟ್ಟಕ್ಕೆ ಆಯ್ಕೆಯಾಗುವ ಕಿರಿಯ ಕ್ರೀಡಾಪಟುಗಳಿಗೆ ವಿಭಾಗ ಮಟ್ಟಕ್ಕೆ ತೆರಳಲು ಇಲಾಖೆಯಿಂದ ಪ್ರಯಾಣಭತ್ಯೆ ನೀಡಲಾಗುವುದು. hostel admission

[ccc_my_favorite_select_button post_id="101814"]

Kho kho world cup ಫೈನಲ್‌ನಲ್ಲಿ ಗೆದ್ದು

[ccc_my_favorite_select_button post_id="101277"]

Khel ratna: ಗುಕೇಶ್ ಸೇರಿ 4 ಕ್ರೀಡಾಪಟುಗಳಿಗೆ

[ccc_my_favorite_select_button post_id="99992"]

Video: ವಿಶ್ವ ಚದುರಂಗ ವೀರನಾದ ಭಾರತದ ಡಿ.ಗುಕೇಶ್..

[ccc_my_favorite_select_button post_id="98503"]
ದೂರಾದ ಪತ್ನಿಯ ನಡು ರಸ್ತೆಯಲ್ಲಿಯೇ ಬರ್ಬರವಾಗಿ ಹತ್ಯೆಗೈದ ಪತಿ..!

ದೂರಾದ ಪತ್ನಿಯ ನಡು ರಸ್ತೆಯಲ್ಲಿಯೇ ಬರ್ಬರವಾಗಿ ಹತ್ಯೆಗೈದ ಪತಿ..!

ಶ್ರೀಗಂಗಾ ಹಾಗೂ ಮೋಹನ್ ರಾಜು ಮದುವೆಯಾಗಿ 7 ವರ್ಷಗಳಾಗಿದ್ದು, 6 ವರ್ಷದ ಮಗನಿದ್ದಾನೆ. Murder

[ccc_my_favorite_select_button post_id="102299"]
Doddaballapura: ಬಸ್ ಅಪಘಾತ News update.. ಚಿಕಿತ್ಸೆ ಫಲಕಾರಿಯಾಗದೆ ಓರ್ವ ಸಾವು

Doddaballapura: ಬಸ್ ಅಪಘಾತ News update.. ಚಿಕಿತ್ಸೆ ಫಲಕಾರಿಯಾಗದೆ ಓರ್ವ ಸಾವು

ಅಪಘಾತ ತಡೆಗೆ ಟೋಲ್ ಸಿಬ್ಬಂದಿಗಳು, ತಾಲೂಕು ಆಡಳಿತ, ಜನಪ್ರತಿನಿದಿಗಳು ಯಾವುದೇ ಕ್ರಮಕೈಗೊಳ್ಳದೆ ಉಳಿದಿದ್ದಾರೆ. ಇದರಿಂದಾಗಿ ಪದೇ ಪದೇ ಸಾವು ನೋವುಗಳು ಸಂಭವಿಸುತ್ತಿವೆ ಎಂದು ಸ್ಥಳೀಯರು ದೂರಿದ್ದಾರೆ. Doddaballapura

[ccc_my_favorite_select_button post_id="102061"]

ಆರೋಗ್ಯ

ಸಿನಿಮಾ

ಅನಂತ್ ನಾಗ್, ಬಾಲಕೃಷ್ಣ ಸೇರಿ 139 ಮಂದಿಗೆ ಪದ್ಮ ಗೌರವ

ಅನಂತ್ ನಾಗ್, ಬಾಲಕೃಷ್ಣ ಸೇರಿ 139 ಮಂದಿಗೆ ಪದ್ಮ ಗೌರವ

ಕನ್ನಡ ಸಿನಿಮಾ ಇಡೀ ದೇಶದ ಚಿತ್ರರಂದ ಮಂದಿ ಗೌರವಿ ಸುವ ಹೆಸರು ಅನಂತ್ ನಾಗ್ ಅವರದು. ಆದರೆ 140ಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ, ಅಂಕು‌ರ್ ಸೇರಿದಂತೆ 10ಕ್ಕೂ ಹೆಚ್ಚು ಹಿಂದಿ ಚಿತ್ರಗಳಲ್ಲಿ ನಟಿಸಿ, ರಾಷ್ಟ್ರಪ್ರಶಸ್ತಿಗೂ

[ccc_my_favorite_select_button post_id="101669"]
error: Content is protected !!