Site icon ಹರಿತಲೇಖನಿ

ಅಮೃತಸರ ಸ್ವರ್ಣ ಮಂದಿರದ ಬಳಿ ಗುಂಡು ಹಾರಿಸಿ ಹತ್ಯೆಗೆ ಯತ್ನ..!| Video ನೋಡಿ

Channel Gowda
Hukukudi trust

ಪಂಜಾಬ್; ಸಿಖ್ ಸಮುದಾಯದ ಪವಿತ್ರ ಯಾತ್ರಾ ಸ್ಥಳವಾದ ಅಮೃತಸರ ಸ್ವರ್ಣ ಮಂದಿರದಲ್ಲಿ ವ್ಯಕ್ತಿಯೋರ್ವ ಗುಂಡು ಹಾರಿಸಿ ಹತ್ಯೆಗೆ ಯತ್ನಿಸಿರುವ ಘಟನೆ ಬುಧವಾರ ಬೆಳಗ್ಗೆ ನಡೆದಿದೆ video ವೈರಲ್ ಆಗಿದೆ.

Aravind, BLN Swamy, Lingapura

ಶಿರೋಮಣಿ ಅಕಾಲಿದಳದ ಮುಖಂಡ ಸುಖವೀರ್ ಸಿಂಗ್ ಬಾದಲ್ ಜೊತೆಗೆ ಹಲವರು ನಿಂತಿರುವಾಗ ಈ ಕೃತ್ಯ ನಡೆದಿದ್ದು ಕೂಡಲೇ ಭದ್ರತಾ ಸಿಬ್ಬಂದಿ ಆತನನ್ನು ಸುತ್ತುವರೆದು ಪಿಸ್ತೂಲನ್ನು ಕಸಿದುಕೊಂಡಿದ್ದಾರೆ.

ಬಂಧಿತನನ್ನು ನಾರಾಯಣ ಸಿಂಗ್ ಚೌರಾ ಎಂದು ಗುರುತಿಸಲಾಗಿದ್ದು, ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Aravind, BLN Swamy, Lingapura

ನಮ್ಮ ಪೊಲೀಸರ ಜಾಗರೂಕತೆ ಮತ್ತು ನಿಯೋಜನೆಯಿಂದಾಗಿ, ಈ ದಾಳಿಯ ಪ್ರಯತ್ನವನ್ನು ವಿಫಲಗೊಳಿಸಲಾಯಿತು. ನಮ್ಮ ಸಿಬ್ಬಂದಿಗಳಾದ ರಿಷ್ಪಾಲ್ ಸಿಂಗ್, ಜಸ್ಬೀರ್ ಮತ್ತು ಪರ್ಮಿಂದರ್ ಎಚ್ಚರಿಕೆಯನ್ನು ಪ್ರದರ್ಶಿಸಿದರು ಮತ್ತು ಪ್ರಯತ್ನಗಳನ್ನು ವಿಫಲಗೊಳಿಸಿದರು.

ನಾರಾಯಣ್ ಸಿಂಗ್ ಚೌರಾ (ದಾಳಿಗಾರ), ಕ್ರಿಮಿನಲ್ ದಾಖಲೆ, ಪ್ರಕರಣವನ್ನು ದಾಖಲಿಸಲಾಗಿದೆ. ಸುಖ್ಬೀರ್ ಸಿಂಗ್ ಬಾದಲ್ ಅವರ ಭದ್ರತೆಗೆ ಸಾಕಷ್ಟು ವ್ಯವಸ್ಥೆಗಳು ಇದ್ದವು ಬೆದರಿಕೆಯ ಹಿನ್ನೆಲೆಯಲ್ಲಿ ಭಾರೀ ನಿಯೋಜನೆ ಮಾಡಲಾಗಿತ್ತು.

ಹತ್ಯೆ ಯತ್ನ ನಡೆಸಿದಾತನ (ಚೌರಾ) ವಿರುದ್ಧ ಹಲವಾರು ಪ್ರಕರಣಗಳು ದಾಖಲಾಗಿವೆ, ಈ ಹಿಂದೆ ಆತನಿಂದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪಂಜಾಬ್ ಎಡಿಸಿಪಿ ಹರ್ಪಾಲ್ ಸಿಂಗ್ ಅವರು ಮಾಧ್ಯಮಗಳಿಗೆ ಹೇಳಿದ್ದಾರೆ.

Exit mobile version